ಮೈಸೂರು: ಮೈಸೂರಿನ ನಜರ್ಬಾದ್ನಲ್ಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣದ ಮುಂಭಾಗದ ರಸ್ತೆಯಲ್ಲಿ ಒಳಚರಂಡಿಯ ಮ್ಯಾನ್ಹೋಲ್ ವೊಂದು ಕುಸಿದಿದ್ದು ಅಮಾಯಕರ ಬಲಿಗಾಗಿ ಕಾಯುತ್ತಿದೆ. ಭಾನುವಾರ ಸಂಜೆಯೇ ಮ್ಯಾನ್ಹೋಲ್ ಕುಸಿದಿದ್ದರೂ ಇದುವರೆಗೂ ಪಾಲಿಕೆಯ ಸಿಬ್ಬಂದಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ. ನಜರ್ಬಾದ್ ವೃತ್ತದಿಂದ ಪೊಲೀಸ್ ವರಿಷ್ಠಾಧಿ ಕಾರಿಗಳ ಕಚೇರಿಯ ಮೂಲಕ ಹಾದು ಹೋಗುವ ಹೈದರಾಲಿ ರಸ್ತೆಯಲ್ಲಿ ಚಾಮುಂಡಿ ವಿಹಾರ ಕ್ರೀಡಾಂ ಗಣದ ಮುಂದೆಯೇ ಮ್ಯಾನ್ಹೋಲ್ ಕುಸಿದಿದೆ. ಆ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಮಾತ್ರ ವಲ್ಲದೆ…
ನೀರು ಕೇಳುವ ನೆಪದಲ್ಲಿ ಮಹಿಳೆ ಸರ ಎಗರಿಸಿ ಪರಾರಿ
September 26, 2018ಇಬ್ಬರು ಅಪರಿಚಿತರಿಂದ ನಜರ್ಬಾದ್ನಲ್ಲಿ ಮುಂಜಾನೆ ಘಟನೆ ಮೈಸೂರು: ಬಾಟಲಿ ಹಿಡಿದು ನೀರು ಕೇಳಲು ಬಂದು ಮಹಿಳೆಯ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿರುವ ಘಟನೆ ಮೈಸೂರಿನ ನಜರ್ಬಾದ್ನಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಮೈಸೂರಿನ ನಜರ್ಬಾದ್ನ ಕಾಮಟಗೇರಿಯ ಮರುಗಾದೇವಿ ದೇವಸ್ಥಾನದ ನಿವಾಸಿ ಶ್ರೀಮತಿ ಪಾಪಮ್ಮ (ಪಾಪಚಿ) ಎಂಬ 45 ವರ್ಷ ಮಹಿಳೆ ಸರ ಕಳೆದು ಕೊಂಡವರು. ಮನೆ ಮುಂದಿನ ನಲ್ಲಿಯಲ್ಲಿ ನೀರು ಹಿಡಿಯುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಅಪರಿಚಿತರಿಬ್ಬರ ಪೈಕಿ ಓರ್ವ ಬಾಟಲಿ ಹಿಡಿದು ನೀರು ತೆಗೆದುಕೊಳ್ಳು ತ್ತೇನೆಂದು ಕೇಳಿದ….
ಅಪಾಯಕಾರಿ ಕೊಂಬೆ ಹೆಸರಲ್ಲಿ ಬೃಹತ್ ಮರಗಳ ಹನನ ಆರೋಪ
September 19, 2018ಮೈಸೂರು: ಮೈಸೂರಿನ ನಜರ್ಬಾದ್ನಲ್ಲಿ ಅಪಾಯಕಾರಿ ಕೊಂಬೆಗಳನ್ನು ಕತ್ತರಿಸುವ ನೆಪದಲ್ಲಿ ಗಟ್ಟಿಮುಟ್ಟಾದ ದೊಡ್ಡ ಮರಗಳನ್ನೇ ಕಡಿದುರುಳಿಸಿದ್ದಾರೆಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಜರ್ಬಾದ್ ಶ್ರೀವಾಣಿವಿಲಾಸ ಅರಸು ಮಹಿಳಾ ಪ್ರಥಮ ದರ್ಜೆ ಕಾಲೇಜು ಸಮೀಪ ವಿರುವ ದೊಡ್ಡ ಮರಗಳನ್ನು ಕತ್ತರಿಸಿದ್ದು, ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪರಿಸರವಾದಿಗಳು, ಅರಣ್ಯ ಇಲಾಖೆ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಕಾಲೇಜು ಸಮೀಪವಿರುವ ಮರಗಳ ಅಪಾಯ ಸ್ಥಿತಿಯಲ್ಲಿರುವ 5 ಕೊಂಬೆಗಳನ್ನು ಕತ್ತರಿಸಲು ಅರಣ್ಯ ಇಲಾಖೆ ಅನುಮತಿ ನೀಡಿದ್ದು, ಹರಾಜು ಪಡೆದಿರುವ ವ್ಯಕ್ತಿ ಇಂದು ಕೊಂಬೆಗಳನ್ನು ಕತ್ತರಿಸುವುದರ…