ಮೈಸೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೆರೆದ ಬಸ್ (ಓಪನ್ ಟಾಪ್ ಬಸ್)ನಲ್ಲಿ ಮೈಸೂರು ಸುತ್ತು ಹಾಕಿ, ದೀಪಾಲಂಕಾರವನ್ನು ಕಣ್ತುಂಬಿ ಕೊಂಡರಲ್ಲದೆ, ಮಹಾರಾಜ ಮೈದಾನದವರೆಗೂ ಅದೇ ಬಸ್ನಲ್ಲಿ ತೆರಳಿ, ಯುವ ದಸರಾ ಉದ್ಘಾಟಿಸಿದರು. ಸರ್ಕಾರಿ ಅತಿಥಿ ಗೃಹದಿಂದ ಇರ್ವಿನ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಕೆ.ಆರ್.ವೃತ್ತ, ಚಾಮರಾಜ ಒಡೆಯರ್ ವೃತ್ತ, ಜಯ ಚಾಮರಾಜ ಒಡೆಯರ್ ವೃತ್ತ, ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಕಾಲೇಜುವೃತ್ತ(ಗನ್ಹೌಸ್), ಚಾಮರಾಜ ನೂರಡಿ ಜೋಡಿ ರಸ್ತೆ, ರಾಮ ಸ್ವಾಮಿ ವೃತ್ತದ ಮೂಲಕ ಮಹಾರಾಜ ಕಾಲೇಜು ಮೈದಾನಕ್ಕೆ ತೆರೆದ ಬಸ್ನಲ್ಲಿ…