ಮೈಸೂರು: ವಿಜ್ಞಾನ ಹಾಗೂ ತಂತ್ರಜ್ಞಾನದ ನೆರಳಿನಲ್ಲೇ ಇಡೀ ಜಗತ್ತು ಇಂದು ಅಪನಂಬಿಕೆಯತ್ತ ಸಾಗುತ್ತಿದ್ದು, ಕುಟುಂಬ, ಸಂಘ-ಸಂಸ್ಥೆಗಳಲ್ಲಿ ಪರಸ್ಪರ ನಂಬಿಕೆ ಎಂಬ ಮೌಲ್ಯ ಮರೆಯಾಗುತ್ತಿದೆ ಎಂದು ಮೈಸೂರು ವಿವಿ ಕುಲ ಸಚಿವ ಪ್ರೊ.ಆರ್.ಶಿವಪ್ಪ ವಿಷಾದಿಸಿದರು. ಮೈಸೂರಿನ ಮಾನಸಗಂಗೋತ್ರಿಯ ಇಎಂಎಂ ಆರ್ಸಿ ಸಭಾಂಗಣದಲ್ಲಿ ಯುವ ಪ್ರಗತಿಪರ ಚಿಂತಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭ ದಲ್ಲಿ `ಅರುಣೋದಯ ಎಜುಕೇಷನಲ್ ಅಂಡ್ ಸೋಷಿ ಯಲ್ ಟ್ರಸ್ಟ್’ ಉದ್ಘಾಟಿಸಿ ಅವರು ಮಾತನಾಡಿದರು. ಕಚೇರಿ, ಕಾರ್ಖಾನೆಗಳಲ್ಲಿ ಮೌಲ್ಯಗಳು ಇಲ್ಲದಿ ದ್ದರೂ ಸಿಸಿಟಿವಿ ಕ್ಯಾಮರಾಗಳಿಗೆ ಕೊರತೆ ಇಲ್ಲ…
ಮೈಸೂರು
ವಿಜ್ಞಾನಕ್ಕೆ ಪ್ರಯೋಗಗಳು ಮುಖ್ಯವೇ ಹೊರತು ಮೂಢನಂಬಿಕೆಗಳಲ್ಲ
May 26, 2019ಮೈಸೂರು: ವಿಜ್ಞಾನಕ್ಕೆ ಪ್ರಯೋಗಗಳ ಅಗತ್ಯವಿದೆಯೇ ಹೊರತು ಮೂಢನಂಬಿಕೆಗಳಲ್ಲ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರ ಜ್ಞಾನ ಪ್ರೋತ್ಸಾಹ ಸೊಸೈಟಿ ನಿರ್ದೇಶಕ ಡಾ.ಹೆಚ್.ಹೊನ್ನೇಗೌಡ ಹೇಳಿದರು. ಮಾನಸಗಂಗೋತ್ರಿ ವಿಜ್ಞಾನಭವನದಲ್ಲಿ ಶಾಲೆಗಳಲ್ಲಿ ವಿಜ್ಞಾನಾಭಿವೃದ್ಧಿ ಸಮಿತಿ (ಸಿಡಿ ಎಸ್ಎಸ್) ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ವಾರದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಮೂಢನಂಬಿಕೆಗಳಿಂದ ದೂರ ಸರಿಯಬೇಕಾಗಿದೆ. ವಿಜ್ಞಾನವನ್ನು ಕಲಿಯಬೇಕಾದರೆ ಪ್ರಯೋಗಗಳನ್ನು ಮಾಡುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಒಂದೇ ರೀತಿಯಲ್ಲಿ ಅಧ್ಯಯನ ಮಾಡಬೇಕು. ದೇಶಕ್ಕೆ ಇಂದು ಉತ್ತಮ…