ಮೈಸೂರು: ಅಂಗವಿಕಲತೆ ಆವರಿಸಿದೆ ಎಂದು ಕೈಕಟ್ಟಿ ಕುಳಿತುಕೊಳ್ಳದೇ ಬದುಕಿನ ಉತ್ಸಾಹದೊಂದಿಗೆ ಸಾಧಿಸುವ ಛಲದಿಂದ ಮುನ್ನಡೆಯಬೇಕು ಎಂದು ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಹೇಳಿದರು. ಮೈಸೂರಿನ ಹಳ್ಳದಕೇರಿಯ ಮಹಾವೀರನಗರದ ಶ್ರೀ ಸ್ಥಾನಿಕವಾಸೀ ಜೈನ್ ಸಂಘದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಕಲಚೇತನರಿಗೆ ಉಚಿತ ಕೃತಕ ಕಾಲು ಜೋಡಣೆ ಮತ್ತು ಪರಿಕರಗಳ ವಿತರಣಾ ಶಿಬಿರದಲ್ಲಿ ಫಲಾನುಭವಿಗಳಿಗೆ ಕೃತಕ ಕಾಲು ಮತ್ತು ಪರಿಕರಗಳನ್ನು ವಿತರಣೆ ಮಾಡಿ ಮಾತನಾಡಿದರು. ಅಪಘಾತದಿಂದ ಎದುರಾಗುವ ಅಂಗವಿಕಲತೆ ತಡೆಯಲಾಗದು. ಆದರೆ ಮಧುಮೇಹ ಸೇರಿದಂತೆ ಇನ್ನಿತರ ಕಾಯಿಲೆಗಳಿಂದ ಅಂಗಾಂಗಗಳನ್ನು…
ಗೀತಾ ಮಂದಿರದ ರಸ್ತೆಯ ಸರ್ಕಾರಿ ಶಾಲೆ ಮಕ್ಕಳಿಗೆ ಬೆಳಗಿನ ಉಪಹಾರ ಆರಂಭ
June 8, 2018ಮೈಸೂರು: ಮೈಸೂರಿನ ಸ್ಥಾನಿಕವಾಸಿ ಜೈನ್ ಯುವ ಸಂಘಟನೆಯು ತಾನು ದತ್ತು ತೆಗೆದುಕೊಂಡಿರುವ ಗೀತಾ ಮಂದಿರ ರಸ್ತೆಯಲ್ಲಿರುವ ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೆ ಎರಡು ವರ್ಷಗಳ ಕಾಲ ಪ್ರತಿದಿನ ಉಪಹಾರ ವಿತರಿಸುವ ಕಾರ್ಯಕ್ರಮ ಆರಂಭಿಸಿದೆ. ಸಂಘಟನೆ ಅಧ್ಯಕ್ಷ ರಾಜನ್ ಬಾಗ್ಬಾರ್ ಸ್ವಾಗತಿಸಿದರು. ಈ ವೇಳೆ ಸಂಘಟನೆ ಕಾರ್ಯದರ್ಶಿ ರಾಕೇಶ್ ಬಾಂಟಿಯಾ ಬೆಳಗಿನ ಉಪಹಾರದ ಮಹತ್ವದ ಬಗ್ಗೆ ವಿವರಿಸಿದರು. ಮೊದಲನೇ ತಿಂಗಳ ಉಪಹಾರದ ಪ್ರಾಯೋಜಕತ್ವವನ್ನು ಮೋಹನ್ಲಾಲ್ಜೀ ಸುರೇಶ್ ಕುಮಾರ್ಜೀ ಬೋಹ್ರಾ ಕುಟುಂಬದವರು ವಹಿಸಿಕೊಂಡಿದ್ದಾರೆ ಎಂದರು. ಜಂಟಿ ಕಾರ್ಯದರ್ಶಿ ರಾಜೇಂದ್ರ ದೇಶರಾಲಾ,…
ನಿವೃತ್ತ ಮುಖ್ಯ ಶಿಕ್ಷಕ ದೊಡ್ಡಯ್ಯ ಅವರಿಗೆ ಸನ್ಮಾನ
June 2, 2018ಮೈಸೂರು: ಮೈಸೂರಿನ ಶ್ರೀ ಸ್ಥಾನಿಕವಾಸಿ ಜೈನ್ ಯುವ ಸಂಘಟನೆಯು ದತ್ತು ತೆಗೆದುಕೊಂಡು ನಡೆಸುತ್ತಿರುವ ಗೀತಾ ಮಂದಿರದ ರಸ್ತೆಯಲ್ಲಿರುವ ಸರ್ಕಾರಿ ಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ದೊಡ್ಡಯ್ಯ ಅವರನ್ನು ಸನ್ಮಾನಿಸಲಾಯಿತು. ಸಂಘಟನೆ ಅಧ್ಯಕ್ಷ ರಾಜನ್ ಬಾಗ್ಮಾರ್ ಸ್ವಾಗತಿಸಿದರು. ದೀಪಕ್ ಬೋಹ್ರಾ ಅವರು ದೊಡ್ಡಯ್ಯ ಅವರ 35 ವರ್ಷಗಳ ಸುದೀರ್ಘ ಶಿಕ್ಷಕ ವೃತ್ತಿಯನ್ನು ಕುರಿತು ಮಾತನಾಡಿದರು. ಯುವ ಸಂಘಟನೆಯ ಪರವಾಗಿ ಉಪಾಧ್ಯಕ್ಷ ಮನೋಹರ್ ಸಂಕ್ಲಾ ಅವರು ಮುಖ್ಯ ಶಿಕ್ಷಕ ದೊಡ್ಡಯ್ಯ ಅವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ…