ಮೈಸೂರು: ಎಂ.ಕರುಣಾನಿಧಿ ಅವರ ನಿಧನದ ಹಿನ್ನೆಲೆ ಮೈಸೂರಿಂದ ತಮಿಳುನಾಡಿಗೆ ತೆರಳುತ್ತಿದ್ದ ಸುಮಾರು 70 ಬಸ್ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್ಆರ್ಟಿಸಿ ಮೈಸೂರು ಗ್ರಾಮಾಂತರ ವಿಭಾಗೀಯ ಅಧಿಕಾರಿ ಎಂ.ವಾಸು ತಿಳಿಸಿದ್ದಾರೆ. ತಮಿಳುನಾಡು ಸಾರಿಗೆ ಇಲಾಖೆ ಮಾಹಿತಿ ಮೇರೆಗೆ ಇಂದು ಸಂಜೆ 6.30 ರಿಂದಲೇ ಬಸ್ ಸಂಚಾರ ಬಂದ್ ಮಾಡಲಾಗಿದ್ದು, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ, ಸಂಚಾರವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು. ಕರ್ನಾಟಕದ ವಿವಿಧ ಭಾಗಗಳಿಂದ ತಮಿಳುನಾಡಿಗೆ ಸಂಚರಿಸುವ ಎಲ್ಲಾ ಕೆಎಸ್ಆರ್ಟಿಸಿ ಬಸ್ಗಳ ಸಂಚಾರವನ್ನು ಇಂದು ಸಂಜೆಯಿಂದ ರದ್ದುಗೊಳಿಸ ಲಾಗಿದೆ….
ಮೈಸೂರು
ಬಸ್ಸಿಗೆ ಕಾಯುತ್ತಿದ್ದ ಮಹಿಳೆ ಬ್ಯಾಗ್ನಿಂದ ಚಿನ್ನಾಭರಣ ಕಳವು
July 7, 2018ಮೈಸೂರು: ಮಂಡ್ಯದಿಂದ ಬಂದು ಮನೆಗೆ ಹೋಗಲು ಸಿಟಿ ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆ ವ್ಯಾನಿಟಿ ಬ್ಯಾಗಿನಲ್ಲಿದ್ದ 2 ಲಕ್ಷ ರೂ. ಬೆಲೆ ಬಾಳುವ 66 ಗ್ರಾಂ ಚಿನ್ನದ ಆಭರಣಗಳನ್ನು ಖದೀಮರು ಎಗರಿಸಿರುವ ಘಟನೆ ಹಾಡಹಗಲೇ ಮೈಸೂರಿನ ಸಬರ್ಬನ್ ಬಸ್ ಸ್ಟ್ಯಾಂಡ್ ಎದುರು ಬಿಎನ್ ರಸ್ತೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಮೈಸೂರಿನ ಮಂಚೇಗೌಡನಕೊಪ್ಪಲು ನಿವಾಸಿ ಜಯಂತ್ ಎಂಬುವರ ಪತ್ನಿ ಶ್ರೀಮತಿ ಹೆಚ್.ಎಲ್.ರಕ್ಷಿತಾ ಆಭರಣ ಕಳೆದುಕೊಂಡವರು. ಸಂಬಂಧಿಕರ ಮದುವೆಗೆಂದು ಬುಧವಾರ ಸಂಜೆ ಮಂಡ್ಯಕ್ಕೆ ಮಗುವಿನೊಂದಿಗೆ ಹೋಗಿದ್ದ ರಕ್ಷಿತಾ, ತಾಯಿಯೊಂದಿಗೆ ಮಂಡ್ಯದಿಂದ ಒಂದೇ…