ಮೈಸೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಸಹೋದರನ ಮಾವನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದು ಅವರ ಪತ್ನಿ ಹಾಗೂ ಪುತ್ರಿಯನ್ನು ತೀವ್ರವಾಗಿ ಗಾಯಗೊಳಿಸಿರುವ ಘಟನೆ ಮೈಸೂರಿನ ಶಾಂತಿನಗರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಶಾಂತಿನಗರ 4ನೇ ಕ್ರಾಸ್ ನಿವಾಸಿ ಅಸ್ಲಂ ಪಾಷ(54) ಹತ್ಯೆಯಾದವರು. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಪತ್ನಿ ದಿಲ್ಶಾನ್ ಬಾನು ಹಾಗೂ ಪುತ್ರಿ ನಫೀಜಾರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉದಯಗಿರಿಯ ಶಾಂತಿನಗರ 6ನೇ ಕ್ರಾಸ್ ನಿವಾಸಿ ಸೈಯದ್ ಇರ್ಫಾನ್ ಮಚ್ಚಿನಿಂದ ಹಲ್ಲೆ ನಡೆಸಿ ಅಸ್ಲಂ ಪಾಷರನ್ನು ಹತ್ಯೆಗೈದು…
ಮೈಸೂರು
ಇಂದಿರಾ ಕ್ಯಾಂಟೀನ್ನಲ್ಲಿ ಕಳವು ಇಬ್ಬರು ಖದೀಮರ ಬಂಧನ
June 25, 2018ಮೈಸೂರು: ಇಂದಿರಾ ಕ್ಯಾಂಟೀನ್ ಗಾಜಿನ ಬಾಗಿಲು ಒಡೆದು ಬೆಲೆ ಬಾಳುವ ಸಾಮಗ್ರಿಗಳನ್ನು ಕದ್ದು ಪರಾರಿಯಾಗಿದ್ದ ಇಬ್ಬರು ಖದೀಮರನ್ನು ಉದಯಗಿರಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಗೌಸಿಯಾ ನಗರದ ಸದ್ದಾಂ(25), ಕೆ.ಎನ್.ಪುರದ ನಿವಾಸಿ ಮಹಮ್ಮದ್ ಸಾದಿಕ್ (28) ಬಂಧಿತರಾಗಿದ್ದು, ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜೂ.4 ರಂದು ರಾತ್ರಿ ಕ್ಯಾಂಟೀನ್ನ ಗಾಜಿನ ಬಾಗಿಲು ಒಡೆದು ಒಳ ನುಗ್ಗಿರುವ ಈ ಖದೀಮರು 8 ಸ್ಟೀಲ್ ನಲ್ಲಿ, 8 ಸ್ಟೀಲ್ ಸೌಟು, 4 ಸ್ಟೀಲ್ ಪಾತ್ರೆ ಹಾಗೂ 80 ಪ್ಲಾಸ್ಟಿಕ್ ತಟ್ಟೆಗಳನ್ನು ಕಳವು…