ಬಳ್ಳಾರಿ: ಮೈಸೂರಿನ ಟಿಪ್ಪು ಸುಲ್ತಾನ್ನ ಮುಂಚಿನ ಹೆಸರು ತಿಪ್ಪೇಸ್ವಾಮಿ ಎಂದಾಗಿತ್ತು! ಹೀಗೊಂದು ಆಶ್ಚರ್ಯಕರವಾದ ಮಾತು ಹೇಳಿದ್ದು ಬೇರಾರೂ ಅಲ್ಲ, ಬಳ್ಳಾರಿಯಲ್ಲಿ ಇತ್ತೀಚೆಗಷ್ಟೇ ನಡೆದ ಉಪ ಚುನಾವಣೆಯಲ್ಲಿ ಲೋಕಸಭೆಗೆ ಆಯ್ಕೆಯಾದ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ. ಟಿಪ್ಪು ಸುಲ್ತಾನ್ ನಾಯಕನಹಟ್ಟಿಯ ತಿಪ್ಪೇಸ್ವಾಮಿ ವರಪ್ರಸಾದ ದಿಂದ ಹುಟ್ಟಿದವರು. ಅದಕ್ಕೇ ಅವರಿಗೆ ತಿಪ್ಪೇಸ್ವಾಮಿ ಅಂತಾ ಮೊದಲು ಹೆಸರಿಟ್ಟಿದ್ದರು. ಇದನ್ನು ಅಲ್ಲಿನ ಜನರೇ ಹೇಳುತ್ತಾರೆ. ಬಳಿಕ ಅವರ ಹೆಸರು ಟಿಪ್ಪು ಎಂದು ಪರಿವರ್ತನೆಯಾಗಿದೆ ಎಂದು ನೂತನ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು. ಜಿಲ್ಲಾಡಳಿತ, ಜಿ.ಪಂ, ಕನ್ನಡ…
ಮೈಸೂರು
ಪ್ರತ್ಯೇಕ ರಾಜ್ಯ ದನಿ ಅಕ್ಷಮ್ಯ ಅಪರಾಧ: ವಿ.ಎಸ್.ಉಗ್ರಪ್ಪ
August 2, 2018ಮೈಸೂರು: ಅಖಂಡ ಕರ್ನಾಟಕದ ಅರಿವಿಲ್ಲದ ಕೆಲವರು ರಾಜಕೀಯ ಕ್ಕೋಸ್ಕರ ಪ್ರತ್ಯೇಕ ರಾಜ್ಯಕ್ಕಾಗಿ ದನಿ ಎತ್ತುತ್ತಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧ. ರಾಜಕಾರಣಕ್ಕಾಗಿ ರಾಜ್ಯ ವನ್ನು ಇಬ್ಭಾಗಿಸುವ ಕೆಲಸ ಮಾಡಬಾರದು ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ಅಖಂಡ ಕರ್ನಾಟಕ ನಮ್ಮೆಲ್ಲರ ಜನ್ಮಸಿದ್ಧ ಹಕ್ಕು. ಅದನ್ನು ಕಟ್ಟುವಲ್ಲಿ ಅನೇಕರ ಪರಿಶ್ರಮ, ತ್ಯಾಗ ಬಲಿದಾನಗಳಿವೆ. ಅಖಂಡ ಕರ್ನಾಟಕದ ಅರಿವಿಲ್ಲದ ಕೆಲವರು ರಾಜಕಾರಣಕ್ಕೋಸ್ಕರ ಪ್ರತ್ಯೇಕ ರಾಜ್ಯಕ್ಕಾಗಿ ಕೂಗು ಎತ್ತುತ್ತಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧ. ಹೀಗಾಗಿ ಯಾರೂ…