ಮಂಡ್ಯ: ಯಾವುದೇ ಕೆಲಸ ವನ್ನೂ ಒಂದೇ ಮನಸ್ಸಿನಿಂದ ಮಾಡಲು ಯೋಗ ಸಹಕಾರಿಯಾಗುತ್ತದೆ. ಯೋಗ ದಿಂದ ಮನಸ್ಸು ಉಲ್ಲಾಸವಾಗುತ್ತದೆ. ದೇಹದ ಆರೋಗ್ಯ ಮತ್ತು ಚೇತೋಹಾರಿ ಯಾಗಿರುತ್ತದೆ ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷೆ ಮೀರಾಶಿವಲಿಂಗಯ್ಯ ತಿಳಿಸಿದರು. ನಗರದ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ಭಾರತ ಸರ್ಕಾರ, ಆಯುಷ್ ಸಚಿವಾಲಯ, ಜಿಲ್ಲಾಡಳಿತ, ಜಿಪಂ, ನೆಹರು ಯುವ ಕೇಂದ್ರ, ಆಯುಷ್ ಇಲಾಖೆ, ಮಂಡ್ಯ ಜಿಲ್ಲಾ ವ್ಯಾಪ್ತಿಯ ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಸರ್ಕಾರಿ ಮಹಾವಿದ್ಯಾಲಯ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಜಾಗೃತಿ…
ಯೋಗಿಕ್ ಪ್ರೋಗ್ರಾಮ್ ಕ್ಯಾಂಪ್
June 18, 2018ಮೈಸೂರು: ವಿರ್ವಿಧ ಅಕಾಡೆಮಿ, ಶ್ರೀಪರಮಹಂಸ ಮಹಾ ವಿದ್ಯಾಲಯ ಟ್ರಸ್ಟ್ ಹಾಗೂ ಸ್ವಾಮಿ ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ ಸಂಯುಕ್ತಾಶ್ರಯದಲ್ಲಿ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಉಚಿತ 10 ದಿನಗಳ ಫಿಟ್ ಅಂಡ್ಸ್ಲಿಮ್ ಸ್ವಿಚುಯಲ್ ಯೋಗಿಕ್ ಪ್ರೋಗ್ರಾಮ್ ಕ್ಯಾಂಪ್ ಆಯೋಜಿಸಲಾಗಿದೆ. ಜೂ. 21ರಿಂದ 30ರವರೆಗೆ ಪ್ರತಿ ದಿನ ಬೆಳಿಗ್ಗೆ 6.30ರಿಂದ 7.30ರವರೆಗೆ ಹಾಗೂ ಸಂಜೆ 7ರಿಂದ 8ಗಂಟೆ ವರೆಗೆ ಸರಸ್ವತಿಪುರಂನ ಎಸ್ಬಿಐ ಮುಂಭಾಗದಲ್ಲಿರುವ ವಿರ್ವಿಧ ಅಕಾಡೆಮಿಯಲ್ಲಿ ನಡೆಯಲಿದೆ. ಮಾಹಿತಿಗಾಗಿ ಮೊ. 9035506790, 8618126067 ಸಂಪರ್ಕಿಸಿ.
ವಿಶ್ವ ಯೋಗದ ದಿನದ ತಾಲೀಮಿನಲ್ಲಿ 2500ಕ್ಕೂ ಹೆಚ್ಚು ಯೋಗಪಟುಗಳು ಭಾಗಿ
June 11, 2018ಜೂ.17ರಂದು ಮತ್ತೊಂದು ತಾಲೀಮು ಜೂ.21ರಂದು ಒಂದು ಲಕ್ಷ ಯೋಗಪಟುಗಳಿಂದ ಬೃಹತ್ ಯೋಗ ಪ್ರದರ್ಶನ ಲಕ್ಕಿ ಡಿಪ್ನಲ್ಲಿ 10 ಮಂದಿಗೆ ಲಭಿಸಲಿದೆ ಪ್ರಶಸ್ತಿ ಮೈಸೂರು: ಈ ಬಾರಿಯೂ ವಿಶ್ವಯೋಗ ದಿನದಂದು ಬೃಹತ್ ಪ್ರದರ್ಶನ ನೀಡಿ ಕಳೆದ ವರ್ಷ ಮಾಡಿರುವ ಗಿನ್ನಿಸ್ ದಾಖಲೆಯನ್ನು ಉಳಿಸಿಕೊಳ್ಳಬೇಕೆಂದು ನಿರ್ಧರಿಸಿರುವ ಜಿಲ್ಲಾಡಳಿತ ಜೂ.21ರಂದು ಮೈಸೂರಿನ ರೇಸ್ಕೋರ್ಸ್ ಆವರಣದಲ್ಲಿ ಒಂದು ಲಕ್ಷ ಯೋಗಪಟುಗಳಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಸಲು ನಿರ್ಧರಿಸಿದ್ದು, ಭಾನುವಾರ ಅರಮನೆಯ ಆವರಣದಲ್ಲಿ ನಡೆದ ತಾಲೀಮಿನಲ್ಲಿ 2500ಕ್ಕೂ ಹೆಚ್ಚು ಯೋಗಪಟುಗಳು ಪಾಲ್ಗೊಂಡು ಗಮನ ಸೆಳೆದರು….