ಹಾಸನ: ಅರಸೀಕೆರೆ ನಗರದಲ್ಲಿ ಮಾವಿನಕಾಯಿಗಳನ್ನು ಕೃತಕ ಹಣ್ಣು ಮಾಡುವಿಕೆ ವಿಧಾನದ ಅನುಮಾನದ ಮೇರೆಗೆ ಮೇ 13ರಂದು ತಹಸೀಲ್ದಾರ್ ಸಂತೋಷ ಕುಮಾರ್ ಮತ್ತು ತಾಲೂಕು ಆಹಾರ ಸುರಕ್ಷಾತಾಧಿಕಾರಿ ಡಾ.ಜಿ.ಎಸ್. ನಾಗಪ್ಪ ಜಂಟಿಯಾಗಿ ಸಿಬ್ಬಂದಿಯೊಡನೆ ಮಾವಿನಕಾಯಿ ಮಾರಾಟ ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾವಿನ ಹಣ್ಣುಗಳಿಗೆ ವಿಷಕಾರಿ ರಾಸಾಯನಿಕ ವಸ್ತುಗಳನ್ನು ಸಿಂಪಡಿಸಿ ಅವುಗಳನ್ನು ಕೃತಕ ರೀತಿಯಲ್ಲಿ ಹಣ್ಣು ಮಾಡದಂತೆ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಈ ರೀತಿಯ ಪ್ರಕರಣಗಳಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಬೀರುವ ಪರಿಣಾಮಗಳನ್ನು ತಿಳಿಸಲಾಯಿತು. ಕೊಳೆತ…
ಸ್ಥಳೀಯ ಸಂಸ್ಥೆ ಚುನಾವಣೆಗೆ ಅಧಿಸೂಚನೆ: ಮೇ 16ರವರೆಗೆ ನಾಮಪತ್ರ ಸಲ್ಲಿಕೆ, 29ಕ್ಕೆ ಮತದಾನ 30ಕ್ಕೆ ಮತ ಎಣಿಕೆ
May 10, 2019ಹಾಸನ: ನಗರದ ಸ್ಥಳೀಯ ಸಾರ್ವತ್ರಿಕ ಚುನಾವಣೆ-2019ನ್ನು ರಾಜ್ಯ ಚುನಾವಣಾ ಆಯೋಗವು ಮೇ 2ರಂದು ಘೋಷಿಸಿದ್ದು, ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಚುನಾವಣಾ ಅಧಿಸೂಚನೆಯನ್ನು ಪ್ರಪತ್ರ-1ರಲ್ಲಿ ಹೊರಡಿಸಿದ್ದಾರೆ. ಮೇ 16ರವರೆಗೆ ಪಟ್ಟಣ ಪಂಚಾಯಿತಿ ಗಳ ವಾರ್ಡ್ಗಳಿಗೆ ನಿಗದಿಪಡಿಸಲಾದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆ ಯವರೆಗೆ ನಾಮಪತ್ರಗಳನ್ನು ಸಲ್ಲಿಸಬಹು ದಾಗಿದ್ದು, ರಾಜ್ಯ ಚುನಾವಣಾ ಆಯೋಗದ ಪತ್ರ ಸಂಖ್ಯೆ: ರಾಚುಲಿ 76ಇಯುಬಿ 2018, ಮೇ 6ರಂತೆ ಮೇ 11ರ ಎರಡನೇ ಶನಿವಾರ ದಂದು Negotiable…
ಮೇ 23, ಮತ ಎಣಿಕೆ: ನಿಷೇಧಾಜ್ಞೆ ಜಾರಿ
May 10, 2019ಹಾಸನ: ಲೋಕಸಭಾ ಸಾರ್ವತ್ರಿಕ ಚುನಾ ವಣೆ ಮತ ಎಣಿಕೆ ಕಾರ್ಯವು ಮೇ 23ರಂದು ಹಾಸನ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 6ರಿಂದ ಮೇ 24ರ ಮಧ್ಯರಾತ್ರಿ 12ಗಂಟೆವರೆಗೆ 2 ದಿನಗಳು ಮುಂಜಾಗ್ರತೆಗಾಗಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಯಾವುದೇ ರೀತಿಯ ಮೆರವಣಿಗೆ, ವಿಜಯೋತ್ಸವ ಮತ್ತು ಕರಾಳ ದಿನಾ ಚರಣೆ ನಡೆಸುವುದು ನಿಷೇಧಿಸಿದೆ. ಯಾವುದೇ ಕ್ಷಾರಕ ಪದಾರ್ಥ ಅಥವಾ ಸ್ಫೋಟಕಗಳ ಸಾಗಾಣಿಕೆ, ವಿಜಯೋತ್ಸವದ…
ಶ್ರೀಮಲ್ಲೇಶ್ವರ ಸ್ವಾಮಿ ದೇವಸ್ಥಾನ ಲೋಕಾರ್ಪಣೆ
May 10, 2019ಅರೇಹಳ್ಳಿ: ಹೋಬಳಿಯ ಕಣಗುಪ್ಪೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಳಿ ನೂತನವಾಗಿ ನಿರ್ಮಿಸಿರುವ ಶ್ರೀಮಲ್ಲೇಶ್ವರ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನ ಹಾಗೂ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮ ಶ್ರೀಮಲ್ಲೇಶ್ವರ ಸ್ವಾಮಿ ಸೇವಾ ಸಮಿತಿಯಿಂದ ನಡೆಯಿತು. ವಿರೂಪಾಕ್ಷ ಲಿಂಗ ಶಿವಚಾರ್ಯ ಸ್ವಾಮೀಜಿ, ಚನ್ನಮಲ್ಲಿಕಾರ್ಜುನ ಶಿವಚಾರ್ಯ ಸ್ವಾಮೀಜಿ, ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವವಹಿಸಿದ್ದರು. ಬೆಳಿಗ್ಗೆ ಕಳಸ ಪೂಜಾ ಕಾರ್ಯಗಳು, ಗಣಪತಿ ಪೂಜೆ, ನಂದಿ, ಪಂಚ ಕಳಸ, ನವಗ್ರಹ, ಮೃತ್ಯುಂಜಯ, ಸಪ್ತ ಸಭಾ ಅಷ್ಟದಿಕ್ಪಾಲಕರು, ದಶದಿಕ್ಪಾಲಕರು, ವಾಸ್ತು, ಅಘೋರ, ನವದುರ್ಗಾ, ಉಮಾ ಮಹೇಶ್ವರ,…
ಅಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಎಸಿ ಸೂಚನೆ
May 10, 2019ಅರಸೀಕೆರೆ: ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಓಗಳು ಆಯಾ ಗ್ರಾಮಗಳಲ್ಲೇ ವಾಸ್ತವ್ಯ ಹೂಡುವುದರ ಮೂಲಕ ಬರಪೀಡಿತ ಪ್ರದೇಶಗಳ ಕುಡಿಯುವ ನೀರು ಮತ್ತು ಇನ್ನಿತರೇ ಸಮಸ್ಯೆಗಳ ಮಾಹಿತಿಯನ್ನು ಮೇಲಧಿಕಾರಿಗಳಿಗೆ ರವಾನಿಬೇಕು ಎಂದು ಹಾಸನ ಜಿಲ್ಲಾ ಉಪ ವಿಭಾಗಾಧಿಕಾರಿ ಡಾ.ನಾಗರಾಜು ಸೂಚನೆ ನೀಡಿದರು. ನಗರದ ತಾಲೂಕು ಕಚೇರಿಯಲ್ಲಿ ಗುರುವಾರ ನಡೆದ ತಾಲೂಕಿನ 5 ಹೋಬಳಿಗಳ ಶಿರಸ್ತೆದಾರ್, ರಾಜಸ್ವ, ಪಿಡಿಓ ಸೇರಿದಂತೆ ವಿವಿಧ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕುಡಿಯುವ ನೀರು ಸಮಸ್ಯೆ ಇಲ್ಲದಿದ್ದರೂ ಸದಾ ಜಾಗೃತರಾಗಿರು ವಂತೆ ನಗರಸಭೆ…
3 ವರ್ಷವಾದರೂ ಉದ್ಘಾಟನೆಯಾಗದ ಯಾತ್ರಿ ನಿವಾಸ
May 10, 2019ಅರಸೀಕೆರೆ- ದಕ್ಷಿಣ ಕರ್ನಾ ಟಕದಲ್ಲಿ ಚಿಕ್ಕ ತಿರುಪತಿ ಎಂದು ಪ್ರಸಿದ್ಧ ವಾದ ತಾಲೂಕಿನ ಅಮರಗಿರಿ ಮಲೇ ಕಲ್ ತಿರುಪತಿ ಶ್ರೀಲಕ್ಷ್ಮೀವೆಂಕಟೇಶ್ವರ ಸ್ವಾಮಿ ಕ್ಷೇತ್ರದಲ್ಲಿ ನಿರ್ಮಾಣಗೊಂಡಿ ರುವ ನೂತನ ಯಾತ್ರಿ ನಿವಾಸ ಹಾಗೂ ರಾಜಗೋಪುರ ಲೋಕಾರ್ಪಣೆಗೊಳ್ಳದೆ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಶ್ರೀಕ್ಷೇತ್ರದ ದೇವಾಲಯದ ರಾಜ ಗೋಪುರ ಉದ್ಯಮಿ ಅರುಣ್ಕುಮಾರ್ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡು 3 ವರ್ಷ ಕಳೆದಿದೆ. ಜೊತೆಗೆ, 2012ರ ಮೇ 12ರಂದು ದೇವಾಲಯದ ಸಮೀಪ ದಲ್ಲಿ ಯಾತ್ರಿ ನಿವಾಸ ಕಟ್ಟಡ ನಿರ್ಮಾ ಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾ ಯಿತು….
‘ಹಾಸನದಲ್ಲಿ ಗೋಲಿಬಾರ್ ಆದ್ರೆ ಅದಕ್ಕೆ ಡಿಸಿ ಹೊಣೆ’
May 9, 2019ಹಾಸನ: ಆಲೂಗಡ್ಡೆ ಬಿತ್ತನೆ ಬೀಜ ವಿತರಣಾ ವ್ಯವಸ್ಥೆ ಯಲ್ಲಿ ಲೋಪ ಉಂಟಾಗಿ, ಗೋಲಿಬಾರ್ ಏನಾದರೂ ಆದರೆ, ಅದಕ್ಕೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರೇ ನೇರ ಹೊಣೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಚುನಾ ವಣೆ ಮುಗಿದು ಹಲವು ದಿನ ಕಳೆದರೂ ರೈತರ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗೆ ಸಮಯ ಇಲ್ಲ. ಬರ ಪರಿಹಾರ ಕಾಮಗಾರಿ ಗಾಗಿ ಸರ್ಕಾರ ಜಿಲ್ಲೆಗೆ 8 ಕೋಟಿ ಬಿಡು ಗಡೆ ಮಾಡಿದೆ….
ನಾಗರಿಕರ ಅನಾಗರಿಕತೆಯಿಂದ ಸ್ವಚ್ಛತೆ ಅಸಾಧ್ಯಪ್ರಗತಿಪರ ಚಿಂತಕ ಆರ್.ಪಿ.ವೆಂಕಟೇಶ್ಮೂರ್ತಿ ಅಭಿಪ್ರಾಯ
May 8, 2019ಹಾಸನ: ಮನುಷ್ಯನ ಅನಾಗ ರಿಕ ಮನಸ್ಸು ಹೋಗಲಾಡಿಸುವವರೆಗೂ ಸ್ವಚ್ಛತೆಯಲ್ಲಿ ಯಶಸ್ಸು ಕಾಣಲು ಸಾಧ್ಯ ವಿಲ್ಲ ಎಂದು ಪ್ರಗತಿಪರ ಚಿಂತಕ ಆರ್.ಪಿ. ವೆಂಕಟೇಶ್ಮೂರ್ತಿ ಹೇಳಿದರು. ನಗರದ ನಗರಸಭೆ ಕುವೆಂಪು ಸಭಾಂ ಗಣದಲ್ಲಿ ಬುಧವಾರ ಪೌರ ಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ), ನಗರ ಸಭೆಯಿಂದ ನಡೆದ ಡಾ.ಬಿ.ಆರ್.ಅಂಬೇ ಡ್ಕರ್, ಬಾಬು ಜಗಜೀವನ್ರಾಮ್ ಜಯಂತಿ ಹಾಗೂ ಕಾರ್ಮಿಕರ ದಿನಾಚರಣೆಯಲ್ಲಿ ಪೌರ ಕಾರ್ಮಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಪೌರ ಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು….
ಶ್ರೀರಾಮೇಶ್ವರಸ್ವಾಮಿ ದೇವಸ್ಥಾನದ ಅಭಿವೃದ್ಧಿಗೆ 4.80ಕೋಟಿ
May 8, 2019ರಾಮನಾಥಪುರ: ಇಲ್ಲಿಯ ಚತುರ್ಯುಗಮೂರ್ತಿ ಶ್ರೀರಾಮೇಶ್ವರಸ್ವಾಮಿ ದೇವಸ್ಥಾನವು ಶಿಥಿಲವಾಗಿದ್ದು, ದೇವಸ್ಥಾ ನದ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ 4.80 ಕೋಟಿ ರೂ. ಅನುದಾನ ಬಿಡುಗಡೆ ಯಾಗಿದೆ ಎಂದು ಶಾಸಕ ಡಾ.ಎ.ಟಿ. ರಾಮಸ್ವಾಮಿ ಹೇಳಿದರು. ಇಲ್ಲಿಯ ಕಾವೇರಿ ನದಿ ದಂಡೆಯಲ್ಲಿ ರುವ ರಾಮೇಶ್ವರಸ್ವಾಮಿ ಮಹಾ ದಿವ್ಯ ರಥೋತ್ಸವದ ಪ್ರಯುಕ್ತ ವಿಶೇಷ ಪೂಜೆಯ ಅಂಗವಾಗಿ ಶಿವಲಿಂಗಕ್ಕೆ ರುದ್ರಾಭಿಷೇಕ, ಅಗಮಿಕ ಪೂಜೆ, ಶಾಂತೋತ್ಸವ, ಗಣ ಪತಿ ಪೂಜೆಯ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಂತಹ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಮಾಡಿ ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು…
ಕಾಯಕಯೋಗಿಯ ಜನ್ಮದಿನದ ಸಂಭ್ರಮ
May 8, 2019ಅರಸೀಕೆರೆ: ಮಹಾನ್ ಪುರು ಷರ ಸಾಲಿನಲ್ಲಿ ಬಸವಣ್ಣ ಅವರನ್ನು ಗೌರವಿ ಸುವುದರ ಮೂಲಕ ವಿಶ್ವದ ಅನೇಕ ದೇಶ ಗಳು ಅವರ ವಚನ ಸಾಹಿತ್ಯಗಳನ್ನು ಒಪ್ಪಿ ಕೊಂಡಿದೆ. ಇದರಿಂದ ಭಾರತಕ್ಕೆ ವಿಶೇಷ ಸ್ಥಾನಗಳನ್ನು ನೀಡುತ್ತಿರುವುದು ಬಸ ವಣ್ಣನವರ ವಿಶ್ವ ಮಾನ್ಯತೆ ತೋರಿಸುತ್ತದೆ ಎಂದು ತಹಶೀಲ್ದಾರ್ ಸಂತೋಷ್ ಕುಮಾರ್ ಹೇಳಿದರು. ನಗರದ ತಾಲೂಕು ಕಚೇರಿಯಲ್ಲಿ ಹಮ್ಮಿ ಕೊಂಡಿದ್ದ ಕಾಯಕಯೋಗಿ ಜಯಂತಿ ಮಹೋತ್ಸವದಲ್ಲಿ ಬಸವಣ್ಣನವರ ಭಾವ ಚಿತ್ರಕ್ಕೆ ಪುಷ್ಪ್ಪನಮನ ಸಲ್ಲಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲೇ ಬಸವಣ್ಣ ನವರು ಜಾತಿ, ಮತ…