ಮೈಸೂರು,ಜ.17-ಯೂತ್ ಹಾಸ್ಟೆಲ್ ಗಂಗೋತ್ರಿ ಘಟಕದ 30ನೇ ವಾರ್ಷಿಕೋ ತ್ಸವ ಸಮಾರಂಭ ಜ.19ರಂದು ಕೃಷ್ಣ ಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಏರ್ಪಡಿಸಲಾಗಿದೆ. ಅಂದು ಸಂಜೆ ಏರ್ಪಡಿಸಲಾಗಿರುವ ವಿಶೇಷ ಛಾಯಾ ಚಿತ್ರ ಪ್ರದರ್ಶನವನ್ನು `ಮೈಸೂರು ಮಿತ್ರ’ ಮತ್ತು `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಉದ್ಘಾಟಿಸಲಿದ್ದಾರೆ. ಸಂಜೆ 5 ಗಂಟೆಗೆ ಆರಂಭವಾಗುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಬಂಡೀಪುರ ಹುಲಿ ಸಂರಕ್ಷಣಾ ಯೋಜನೆ ನಿರ್ದೇಶಕ ಹೆಚ್.ಸಿ. ಕಾಂತಾರಾಂ ಭಾಗವಹಿಸುವರು. ಅತಿಥಿಗಳಾಗಿ ಮೈಸೂರು…
ಇಂದು ಜನಪದ ಮಹಾಕಾವ್ಯ ‘ಧರೆಗೆ ದೊಡ್ಡೋರು ಮಂಟೇಸ್ವಾಮಿ’ ಕೃತಿ ಬಿಡುಗಡೆ
January 18, 2020ಮೈಸೂರು,ಜ.17(ಎಂಟಿವೈ)- ಮೈಸೂರು ಕಲಾಮಂದಿರದಲ್ಲಿ ನಾಳೆ (ಜ. 18) ಮಧ್ಯಾಹ್ನ 3.30ಕ್ಕೆ ಬೆಟ್ಟದ ಬೀಡು ಸಿದ್ಧಶೆಟ್ಟರು ಹಾಡಿ ರುವ ಡಾ.ಪಿ.ಕೆ.ರಾಜಶೇಖರ ಅವರು ಸಂಪಾದಿಸಿರುವ ಜನಪದ ಮಹಾಕಾವ್ಯ ಧರೆಗೆ ದೊಡ್ಡೋರು ಮಂಟೇಸ್ವಾಮಿ ಕೃತಿ ಬಿಡುಗಡೆ ಸಮಾರಂಭÀ ಜರುಗಲಿದೆ ಎಂದು ಆಕಾಶವಾಣಿ ಉದ್ಘೋಷಕ ಮೈಸೂರು ಉಮೇಶ್ ತಿಳಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾರು ಜನಪದ ಗಾಯಕರು ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕೃತಿ ಬಿಡುಗಡೆ…
ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದ ಮೈಸೂರು
January 17, 2020* ನಗರದ ಎಲ್ಲಾ ದೇವಾಲಯಗಳಲ್ಲೂ ಇಡೀ ದಿನ ಭಕ್ತರ ದಂಡು, ವಿಶೇಷ ಪೂಜೆ * ಮನೆಯೆದುರು ಬಣ್ಣ ಬಣ್ಣದ ರಂಗೋಲಿ, ಗೋವುಗಳಿಗೆ ಬಗೆ ಬಗೆ ಅಲಂಕಾರ * ಸಿದ್ದಲಿಂಗಪುರದಲ್ಲಿ ಕಿಚ್ಚು ಹಾಯಿಸುವ ಸಡಗರ ವೀಕ್ಷಣೆಗೆ ಜನಜಾತ್ರೆ * ಕೋಟೆ ಆಂಜನೇಯಸ್ವಾಮಿ ದೇಗುಲ ಅಂಗಳದಲ್ಲಿ ಸುಗ್ಗಿ ಸಂಭ್ರಮ, ಧಾನ್ಯದ ರಾಶಿಗೆ ವಿದೇಶಿಗರಿಂದ ಪೂಜೆ ಮೈಸೂರು,ಜ.16(ಎಂಟಿವೈ)- ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯನ್ನು ಬುಧವಾರ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಸಡಗರ, ಸಂಭ್ರÀಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಹೊಸ ವರ್ಷದ ಮೊದಲ ಹಬ್ಬವಾದ…
ಮುಂದಿನ ಹಣಕಾಸು ಸಚಿವರಾಗಿ ಕೆ.ವಿ.ಕಾಮತ್ ಆಯ್ಕೆ ಸಾಧ್ಯತೆ
January 17, 2020ನವದೆಹಲಿ, ಜ.16- ದೇಶ ಆರ್ಥಿಕ ಬೆಳವಣಿಗೆ ಯಲ್ಲಿ ಮಂದಗತಿಯನ್ನು ಎದುರಿಸುತ್ತಿರುವ ಸನ್ನಿ ವೇಶದಲ್ಲಿ ತ್ವರಿತ, ಪರಿಣಾಮಕಾರಿ ಪರಿಹಾರವನ್ನು ಕಂಡುಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ಕಾರ್ಪೊರೇಟ್ ವಲಯದ ದಿಗ್ಗಜರು, ಆರ್ಥಿಕ ತಜ್ಞರ ಜತೆಯಲ್ಲಿ ಹಲವಾರು ಸುತ್ತಿನ ಸುದೀರ್ಘ ಮಾತುಕತೆ ಗಳನ್ನು ಇತ್ತೀಚೆಗೆ ನಡೆಸಿದ್ದಾರೆ. ಇದರ ಬೆನ್ನಲ್ಲೇ, ಫೆಬ್ರವರಿ 1ರ ಕೇಂದ್ರ ಬಜೆಟ್ ನಂತರ ಹಣಕಾಸು ಸಚಿವ ಸ್ಥಾನದಿಂದ ನಿರ್ಮಲಾ ಸೀತಾರಾಮನ್ ಕೈಬಿಡಲಿದ್ದಾರೆ. ನೂತನ ಹಣಕಾಸು ಸಚಿವರಾಗಿ ಐಸಿಐಸಿಐ ಬ್ಯಾಂಕ್ನ ಮಾಜಿ ಅಧ್ಯಕ್ಷ ಕೆ.ವಿ. ಕಾಮತ್ (ಕುಂದಾಪುರ ವಾಮನ ಕಾಮತ್)…
ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲೂ ಸಮಸ್ಯೆ, ಸವಾಲುಗಳೆದುರಾಗಿವೆ
January 17, 2020ಮೈಸೂರು,ಜ.16(ಎಂಟಿವೈ)- ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಮಸ್ಯೆ ಹಾಗೂ ಸವಾಲುಗಳು ಸೃಷ್ಟಿಯಾಗಿವೆ ಎಂದು ದಕ್ಷಿಣ ಕೊರಿಯಾದ ಜಿಯೋನ್ ಬಕ್ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಉಪಾಧ್ಯಕ್ಷ ಪ್ರೋ. ಜೂಂಗ್ ಹೀ ಲೀ ಅಭಿಪ್ರಾಯಿಸಿದರು. ಮೈಸೂರು ಶ್ರೀ ಜಯಚಾಮ ರಾಜೇಂದ್ರ ಇಂಜಿನಿಯರಿಂಗ್ ಕಾಲೇಜು, ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ ಹಾಗೂ ಟೆಕ್ಯುಪ್ ಸಂಸ್ಥೆ ಸಹಯೋಗದಲ್ಲಿ ಎಸ್ಜೆಸಿಇ ಸೆಮಿ ನಾರ್ ಹಾಲ್ನಲ್ಲಿ ಗುರುವಾರ ಆಯೋಜಿ ಸಿದ್ದ `ಸುಧಾರಿತ ವಸ್ತುಗಳು ಮತ್ತು ತಂತ್ರ ಜ್ಞಾನ’ ಕುರಿತ ಎರಡನೇ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ…
ಯುವಕನ ಮೇಲೆ ಹಲ್ಲೆ, ಅಪಹರಣ, ಸುಲಿಗೆ: 7 ಮಂದಿ ಬಂಧನ
January 17, 2020ಮೈಸೂರು, ಜ.16(ಎಂಕೆ)- ಕ್ಷುಲ್ಲಕ ಕಾರಣಕ್ಕೆ ಸ್ಕೂಟರ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಕಾರಿನಿಂದ ಡಿಕ್ಕಿ ಹೊಡೆಸಿ, ನಂತರ ಅಪಹರಿಸಿ, ಒತ್ತೆಯಾಗಿರಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ದಂತೆ ರೌಡಿಶೀಟರ್ ಸೇರಿ 7 ಮಂದಿ ಆರೋಪಿ ಗಳನ್ನು ಕೆ.ಆರ್.ಠಾಣೆ ಪೊಲೀಸರು ಬಂಧಿಸಿ, ಕಾರು, 4 ಬೈಕ್, 6 ಮೊಬೈಲ್ ಮತ್ತು 4 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ಇಟ್ಟಿಗೆಗೂಡಿನ ನಿವಾಸಿ ರೌಡಿಶೀಟರ್ ಆಕರ್ಷ್ ಅಲಿಯಾಸ್ ಆಕಾಶ್(25), ಕೃಷ್ಣಮೂರ್ತಿಪುರಂ ನಿವಾಸಿಗಳಾದ ನಿತಿನ್ (27), ಜಯಂತ್ (22), ಸರಸ್ವತಿಪುರಂನ ಮಂಜುನಾಥ್(20), ಚಂದ್ರು, ಕೊಡಗು ಜಿಲ್ಲೆಯ ಸೋಮವಾರಪೇಟೆ…
ರಾಜ್ಯದ ಗ್ರಾಪಂ ವ್ಯಾಪ್ತಿ ಮೀನುಗಾರಿಕೆಗೆ ಆದ್ಯತೆ
January 17, 2020ಬೆಂಗಳೂರು, ಜ.16(ಕೆಎಂಶಿ)-ರಾಜ್ಯದ ಎಲ್ಲ ಗ್ರಾಮ ಪಂಚಾ ಯ್ತಿಗಳ ವ್ಯಾಪ್ತಿಯಲ್ಲಿ ಮೀನುಗಾರಿಕೆಯನ್ನು ಆರಂಭಿಸಿ ಮತ್ಸ್ಯ ಕ್ರಾಂತಿ ನಡೆಸಲು ನಿರ್ಧರಿಸಿರುವ ಸರ್ಕಾರ ಆ ಮೂಲಕ 50 ಸಾವಿರಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳಿಗೆ ಉದ್ಯೋ ಗಾವಕಾಶ ಕಲ್ಪಿಸಿಕೊಡಲು ತೀರ್ಮಾನಿಸಿದೆ. ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತ ನಾಡಿದ ಮೀನುಗಾರಿಕೆ ಹಾಗೂ ಬಂದರು ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ವಿಷಯ ತಿಳಿಸಿದರಲ್ಲದೆ, ನಿರುದ್ಯೋಗಿ ಯುವಕರಿಗೆ ಮೀನುಗಾರಿಕೆಯಲ್ಲಿ ತರಬೇತಿ ನೀಡಿ ಸಾಲ ಸೌಲಭ್ಯ ದೊರಕಿಸಿ ಕೊಡಲು ಸರ್ಕಾರ ನಿರ್ಧಾರ ಮಾಡಿದೆ ಎಂದರು. ಮುಂದಿನ…
ನಳಿನಿ ಪರ ವಕಾಲತ್ತು ವಹಿಸಲು ಮುಂದಾದ ದಾವಣಗೆರೆ ವಕೀಲ
January 17, 2020ಮೈಸೂರು, ಜ.16-ಜೆಎನ್ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಮೈಸೂರು ವಿವಿಯ ಮಾನಸಗಂಗೋತ್ರಿಯಲ್ಲಿ ನಡೆದ ಪ್ರತಿಭಟನೆ ವೇಳೆ `ಫ್ರಿ ಕಾಶ್ಮೀರ್’ ಫಲಕ ಪ್ರದರ್ಶಿಸಿದ ನಳಿನಿ ಬಾಲಕುಮಾರ್ ಪರ ವಕಾಲತ್ತು ವಹಿಸಲು ದಾವಣಗೆರೆಯ ವಕೀಲರೊಬ್ಬರು ಮುಂದೆ ಬಂದಿದ್ದಾರೆ. ಮೈಸೂರು ವಕೀಲರ ಸಂಘವು ನಳಿನಿ ಬಾಲಕುಮಾರ್ ಪರ ಯಾವುದೇ ವಕೀಲರು ವಕಾಲತ್ತು ವಹಿಸಬಾರದು ಎಂದು ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಮೈಸೂರಿನ ವಕೀಲರು ಆಕೆಯ ಪರವಾಗಿ ವಕಾಲತ್ತು ವಹಿಸುತ್ತಿಲ್ಲ. ಈ ಮಧ್ಯೆ ದಾವಣಗೆರೆಯ ಪೀಪಲ್ಸ್ ಲಾಯರ್ಸ್ ಗಿಲ್ಡ್ ಅಧ್ಯಕ್ಷ ಅನೀಸ್ ಪಾಷಾ ಅವರು…
ಇಂದಿನಿಂದ ಮೈಸೂರು-ಬೆಳಗಾವಿ ವಿಮಾನ ಹಾರಾಟ
January 17, 2020ಮೈಸೂರು, ಜ.16(ಆರ್ಕೆ)- ಮೈಸೂರು-ಬೆಳಗಾವಿ ನಡುವೆ ವಿಮಾನ ಹಾರಾಟ ನಾಳೆ (ಜ.17)ಯಿಂದ ಆರಂಭ ವಾಗಲಿದೆ. ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬೆಳಗಾವಿಗೆ ಪ್ರಯಾಣ ಆರಂಭಿಸುವ ಟ್ರೂಜೆಟ್ ವಿಮಾನಕ್ಕೆ ಹಸಿರು ನಿಶಾನೆ ತೋರ ಲಾಗುವುದು ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜು ನಾಥ್ ತಿಳಿಸಿದ್ದಾರೆ. ಬೆಳಗಾವಿಯಿಂದ ಮೈಸೂರಿಗೆ 35 ಮಂದಿ ಹಾಗೂ ಮೈಸೂರಿ ನಿಂದ ಬೆಳಗಾವಿಗೆ 35 ಮಂದಿ ಪ್ರಯಾಣಿಕರು ಈವರೆಗೆ ಟಿಕೆಟ್ ಬುಕ್ ಮಾಡಿದ್ದಾರೆ. ಈ ವಿಮಾನಕ್ಕೂ ಉತ್ತಮ ಪ್ರತಿಕ್ರಿಯೆ ಬರಲಾರಂಭಿಸಿದೆ ಎಂದು…
ಜ.19ರಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯವರ `ಭಾವ ಪುಷ್ಪಾಂಜಲಿ’ ಬೃಹತ್ ಕಾರ್ಯಕ್ರಮ
January 17, 2020ಮೈಸೂರು, ಜ.16(ಪಿಎಂ)-ಇತ್ತೀಚೆಗಷ್ಟೆ ಕೃಷ್ಣೈಕ್ಯ ರಾದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಪುಣ್ಯಸ್ಮರಣೆ ಅಂಗವಾಗಿ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯರ ಸ್ಮರಣಾ ಕಾರ್ಯ ಕ್ರಮ ಏರ್ಪಡಿಸಿದ್ದು, `ಪೇಜಾವರಶ್ರೀ ಭಾವ ಪುಷ್ಪಾಂ ಜಲಿ’ ಶೀರ್ಷಿಕೆಯಡಿ ಜ.19ರಂದು ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು. ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಡೆ ದಾಡುವ ಕೃಷ್ಣರಂತಿದ್ದ ವಿಶ್ವೇಶತೀರ್ಥರು ನಾಡಿನಲ್ಲಿ ಮಾತ್ರವಲ್ಲದೆ, ದೇಶ-ವಿದೇಶದಲ್ಲಿ ಭಕ್ತ ವೃಂದ…










