ಮೈಸೂರು,ಡಿ.22-ಗ್ರಾಮ ಪಂಚಾಯಿತಿ ಚುನಾ ವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಮೈಸೂರು ಜಿಲ್ಲೆಯ 5 ತಾಲೂಕುಗಳಲ್ಲಿ ಮಂಗಳ ವಾರ ಬೆಳಗ್ಗೆಯಿಂದ ಸಂಜೆವರೆಗೂ ನಡೆಯಿತು.
ಬಹುತೇಕ ಮತಗಟ್ಟೆಗಳಿಗೆ ಮತದಾನ ಮಾಡಲು ಬಂದಿದ್ದ ಬಹಳಷ್ಟು ಮತದಾರರು ಕೊರೊನಾ ಮಾರ್ಗ ಸೂಚಿಗಳನ್ನೇ ಪಾಲಿಸಲಿಲ್ಲ. ಬಹಳಷ್ಟು ಮಂದಿ ಮಾಸ್ಕ್ ಧರಿಸಿರಲಿಲ್ಲ, ಸಾಮಾಜಿಕ ಅಂತರ ಅನುಸರಿಸುತ್ತಿರ ಲಿಲ್ಲ. ಮತಗಟ್ಟೆ ಮುಂಭಾಗ ನೂರಾರು ಮಂದಿ ಗುಂಪಾಗಿ ಸೇರಿದ್ದರು. ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ ಎಂಬ ಪೆÇಲೀಸರ ಮನವಿಗೂ ಜನತೆ ಸ್ಪಂದಿಸ ಲಿಲ್ಲ. ಚುನಾವಣಾ ನಿಯಮ ಪಾಲಿಸದಿದ್ದರೆ ಕೇಸ್ ಹಾಕುವ ಎಚ್ಚರಿಕೆ ನೀಡಿದರೂ ಕೂಡ ಬಹಳಷ್ಟು ಜನರು ಮಾರ್ಗಸೂಚಿ ಪಾಲಿಸಲೇ ಇಲ್ಲ. ಕೆ.ಆರ್.ನಗರ ತಾಲೂಕಿನ ಚೀರನಹಳ್ಳಿಗೆ ಎಸ್ಪಿ ರಿಷ್ಯಂತ್ ಭೇಟಿ ನೀಡಿ ಮತಗಟ್ಟೆ ಪರಿಶೀಲನೆ ನಡೆಸಿದರು. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೆÇಲೀ ಸರನ್ನು ನಿಯೋಜನೆ ಮಾಡಲಾಗಿತ್ತು.