ಮೈಸೂರು, ಫೆ.13(ಆರ್ಕೆಬಿ)- ಮೈಸೂರಿನ ಸಿದ್ದಾರ್ಥ ಲೇಔಟ್ನ ಬನ್ನೂರು ರಸ್ತೆಯಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಭವ್ಯವಾದ ಹೆರಿಟೇಜ್ ಶೈಲಿಯ ಬಹು ಕೋಟಿ ವೆಚ್ಚದ ನೂತನ ಜಿಲ್ಲಾಧಿಕಾರಿಗಳ ಕಚೇರಿಗಳ ಸಂಕೀರ್ಣಕ್ಕೆ ಮೈಸೂರು ಜಿಲ್ಲಾಧಿಕಾರಿ ಕಚೇರಿ ಶೀಘ್ರದಲ್ಲೇ ಸ್ಥಳಾಂತರ ಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಇಂದಿಲ್ಲಿ ತಿಳಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೋವಿಡ್-19 ಕಾರಣದಿಂದಾಗಿ ಜಿಲ್ಲಾಧಿಕಾರಿ ಕಚೇರಿಗಳನ್ನು ಅಲ್ಲಿಗೆ ಸ್ಥಳಾಂ ತರಿಸಲು ಸಾಧ್ಯವಾಗಿರಲಿಲ್ಲ. ಈಗ ಕೋವಿಡ್-19 ಗಣನೀಯ ವಾಗಿ…
ನ್ಯಾಯಾಲಯ ಜಪ್ತಿ ಆದೇಶ ಹಿಂಪಡೆದ ಹಿನ್ನೆಲೆ: ಜಿಲ್ಲಾಧಿಕಾರಿ ಕಚೇರಿ ವಸ್ತುಗಳು ವಾಪಸ್
January 28, 2020ಮೈಸೂರು: ಮೈಸೂರು ಜಿಲ್ಲಾಧಿಕಾರಿ ಕಚೇರಿ ಜಪ್ತಿಗೆ ಮುಂದಾದ ಕಂಪನಿಯೊಂದರ ಪ್ರತಿನಿಧಿ ಗಳು, ನ್ಯಾಯಾಲಯ ಆದೇಶ ಹಿಂಪಡೆದ ಹಿನ್ನೆಲೆಯಲ್ಲಿ ಬರಿಗೈಲಿ ವಾಪಸ್ಸಾದ ಘಟನೆ ಸೋಮವಾರ ನಡೆದಿದೆ. 2013ರಲ್ಲಿ ಅಟಲ್ಜೀ ಜನಸ್ನೇಹಿ ಯೋಜನೆಯಡಿ ಯುಪಿಎಸ್ಗಳನ್ನು ಪೂರೈಸಿದ್ದ ಕಂಪನಿಗೆ 3.98 ಲಕ್ಷ ರೂ. ಬಾಕಿ ಹಣ ನೀಡಿರಲಿಲ್ಲ. ಹಾಗಾಗಿ ಕಂಪನಿಯು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಲೋಕ್ ಅದಾಲತ್ನಲ್ಲಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಕೂಡಲೇ ಹಣ ಪಾವತಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಆದರೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ವಸ್ತುಗಳನ್ನು ಜಪ್ತಿ…
ರಾಜಪಥ ರಸ್ತೆ ಬ್ಯಾರಿಕೇಡ್ಗೆ ಕಳಪೆ ಕಲ್ಲು ಬಳಕೆ ಆರೋಪ: ಡಿಸಿ ಆಫೀಸ್ ಬಳಿ ಏಕಾಂಗಿ ಪ್ರತಿಭಟನೆ
June 23, 2018ಮೈಸೂರು: ರಾಜಪಥದ ರಸ್ತೆಯ ಇಕ್ಕೆಲಗಳ ಬ್ಯಾರಿಕೇಡ್ಗೆ ಕಳಪೆ ಕಲ್ಲು ಬಳಸಲಾಗಿದೆ ಎಂದು ಆರೋಪಿಸಿ ಎಲೆಕ್ಟ್ರಿಕಲ್ ನಾಗರಾಜು ಎಂಬುವರು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಇಂದು ಏಕಾಂಗಿ ಪ್ರತಿಭಟನೆ ನಡೆಸಿದರು. ರಾಜಪಥದ ಹೆಸರಲ್ಲಿ ಕಳಪೆ ಕಲ್ಲಿನಿಂದ ತಡೆಗೋಡೆ ನಿರ್ಮಿಸಿರುವುದಲ್ಲದೆ, ಫುಟ್ಪಾತ್ಗೆ ಕಡಿಮೆ ಗುಣಮಟ್ಟದ ಟೈಲ್ಸ್ಗಳನ್ನು ಹಾಕಿರುವುದರಿಂದ ಮೂರೇ ವರ್ಷಕ್ಕೆ ಅಲ್ಲಲ್ಲಿ ಕಲ್ಲಿನ ಬ್ಯಾರಿಕೇಡ್ಗಳು ಮುರಿದು ಬಿದ್ದಿದ್ದು, ಪಾದಚಾರಿ ರಸ್ತೆಯಲ್ಲಿ ಗುಂಡಿಗಳು ಬಿದ್ದು ಓಡಾಡಲು ತೊಂದರೆಯಾಗುತ್ತಿದೆ ಎಂದು ನಾಗರಾಜು ಆರೋ ಪಿಸಿದರು. ಕಾಮಗಾರಿ ಹೆಸರಲ್ಲಿ ಸಾರ್ವಜನಿಕ ತೆರಿಗೆ ಹಣ ದುರುಪಯೋಗವಾಗಿದೆ….