ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನುಡಿ ಬೆಂಗಳೂರು, ಆ. 2(ಕೆಎಂಶಿ)- ಜೆಡಿಎಸ್-ಕಾಂಗ್ರೆಸ್ ಸರ್ಕಾರವೇ ಬಿದ್ದು ಹೋಗಿದೆ. ಬಿಜೆಪಿಯವರು ಇನ್ನೆಷ್ಟು ಶಾಸಕರನ್ನು ಸೆಳೆದರೂ ಆಗುವು ದೇನಿದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಪ್ರಶ್ನಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರವೇ ಬಿದ್ದು ಹೋಗಿದೆ. ಬಿಜೆಪಿ ಯವರು ಇನ್ನೂ ಹಲವು ಶಾಸಕರನ್ನು ಸೆಳೆಯಲು ಯತ್ನಿಸು ತ್ತಿದ್ದಾರೆ ಎಂಬ ಮಾತಿಗೆ ಈ ರೀತಿ ಪ್ರತಿಕ್ರಿಯಿಸಿದರು. ಬಿಜೆಪಿಯವರು ಮತ್ತೆ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆಂದರೆ ಏನು ಮಾಡಲು ಸಾಧ್ಯ…
ಮೈಸೂರು
ಭಗವಂತನ ಕೃಪೆಯಿದ್ದರೆ ಮುಖ್ಯಮಂತ್ರಿಯಾಗುತ್ತೇನೆ
September 17, 2018ಕಲಬುರಗಿ, ಸೆ.16-: ಭಗವಂತನ ಕೃಪೆ ಇದ್ದರೆ ಮುಖ್ಯ ಮಂತ್ರಿ ಆಗ್ತೀನಿ, ಅದಕ್ಕೆ ಅವಸರ ಇಲ್ಲ. ನಮ್ಮ ಸರ ಕಾರದ ಬಗ್ಗೆ ಆತಂಕಪಡುವ ಅವ ಶ್ಯಕತೆ ಇಲ್ಲ. ಅರ್ಜೆಂಟ್ನಲ್ಲಿ ಹೋದರೆ ಅಪಘಾತ ಜಾಸ್ತಿ ಆಗುತ್ತದೆ. ಹಾಗಾಗಿ ನಿಧಾನವಾಗಿ ನಮ್ಮ ಸರಕಾರ ಹೋಗು ತ್ತಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಗಾಣಗಾಪುರದ ದತ್ತಾ ತ್ರೇಯ ದೇವರಿಗೆ ಪೂಜೆಯ ಬಳಿಕ ಮಾತನಾಡಿದ ಅವರು, ಆಪರೇಷನ್ ಕಮಲದ ಹೆಸರಲ್ಲಿ 15ರಿಂದ 16 ಜನ ಶಾಸಕರು, ಮಾಜಿ ಶಾಸಕರಿಗೆ ಸಂಪರ್ಕ ಮಾಡ್ತಿದ್ದಾರೆ. ಬಿ.ಸಿ.ಪಾಟೀಲ್, ರಹೀಮ್…
ಮೈಸೂರು
ಜಾರಕಿಹೊಳಿ ಸಹೋದರರೊಂದಿಗೆ 78 ಶಾಸಕರಿದ್ದೇವೆ: ಡಿಕೆಶಿ
September 13, 2018ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಬರೀ 10-12 ಶಾಸಕರಿಲ್ಲ. 78 ಶಾಸಕರಿದ್ದೇವೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಸಹೋ ದರರೊಂದಿಗೆ ಬೆರಳೆಣಿಕೆಯಷ್ಟು ಶಾಸಕರಿಲ್ಲ. ಬದಲಾಗಿದೆ 78 ಶಾಸಕರಿದ್ದು, ಅದರಲ್ಲಿ ನಾನೂ ಒಬ್ಬ ಎಂದು ಡಿಕೆಶಿ ತಿಳಿಸಿದ್ದಾರೆ.