ಹೆಚ್.ಡಿ.ಕೋಟೆ: ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿ ಇಂದು ಮುಂಜಾ ನೆಯೇ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿ ಗ್ರಾಮದ ಬೀದಿ ಬೀದಿಗಳಲ್ಲಿ ರಂಪಾಟ ಮಾಡಿತು. ಎಂದಿನಂತೆ ಜನರು ಮನೆಯಿಂದ ಹೊರಬರುತ್ತಿದ್ದಂತೆ ಒಂಟಿ ಸಲಗ ಪ್ರತ್ಯಕ್ಷವಾಯಿತು. ಗ್ರಾಮಸ್ಥರು ತಲ್ಲಣಗೊಂಡರು. ಗ್ರಾಮದ ನಿವಾಸಿ ಲಕ್ಷ್ಮಮ್ಮ ಎಂಬುವರು ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದ ಸಂದರ್ಭ ಈ ಸಲಗವನ್ನು ನೋಡಿ ಗಾಬರಿ ಗೊಂಡು ಓಡುವಾಗ ಕೆಳಗೆ ಬಿದ್ದಿದ್ದಾರೆ. ತಲೆಗೆ ಪೆಟ್ಟಾದ ಕಾರಣ ಲಕ್ಷ್ಮಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀಚನಹಳ್ಳಿ ಗ್ರಾಮಸ್ಥರೆಲ್ಲ ಸೇರಿ ಒಂಟಿ ಸಲಗವನ್ನು ಓಡಿ ಸಲು ಪ್ರಯತ್ನಿಸುವ…
ಆನೆ ದಾಳಿ: ಮಾನಸಿಕ ಅಸ್ವಸ್ಥ ಸಾವು
May 18, 2019ಪಿರಿಯಾಪಟ್ಟಣ: ಆನೆ ದಾಳಿಯಿಂದ ಅಪರಿಚಿತ ಮಾನಸಿಕ ಅಸ್ವಸ್ಥನೋರ್ವ ಮೃತಪಟ್ಟಿರುವ ಘಟನೆ ಗುರು ವಾರ ರಾತ್ರಿ ಜರುಗಿದೆ. ತಾಲೂಕಿನ ಅಳ್ಳೂರು ಗೇಟ್ನ ಹುಣಸೂರು ಮತ್ತು ಗೋಣಿಕೊಪ್ಪ ರಸ್ತೆಯ ಪಕ್ಕದ ಅರಣ್ಯದ ಪೊದೆಯಲ್ಲಿ ಮೃತ ದೇಹ ದೊರೆತಿದೆ. ಬೆಳಗಿನ ಜಾವ ದಾರಿಹೋಕರು ಈ ಮೃತದೇಹವನ್ನು ಕಂಡು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಲಾಗಿ, ಸ್ಥಳಕ್ಕೆ ಪಿರಿಯಾ ಪಟ್ಟಣ ವಲಯ ಅರಣ್ಯಾಧಿಕಾರಿ ರತನ್ ಕಮಾರ್ ಭೇಟಿ ನೀಡಿ, ಪರಿಶೀಲಿಸಿದರು. ಕಳೆದ ಐದಾರು ದಿನಗಳಿಂದ ಮಾನಸಿಕ ಅಸ್ವಸ್ಥ ಗೇಟ್ ಬಳಿ ಓಡಾಡುತ್ತಿದ್ದು, ಆತನೇ ಆನೆ…
ಕಾಡಾನೆ ದಾಳಿ ತಡೆಯದ ಅರಣ್ಯಾಧಿಕಾರಿಗಳ ವಿರುದ್ಧ ಉತ್ತೇನಹಳ್ಳಿ ಗ್ರಾಮಸ್ಥರ ಆಕ್ರೋಶ
October 30, 2018ಪಿರಿಯಾಪಟ್ಟಣ: ಕಾಡಾನೆಗಳ ದಾಳಿ ನಿಯಂತ್ರಿಸದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾಲೂಕಿನ ಉತ್ತೇನಹಳ್ಳಿ ಗ್ರಾಮದಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಳೆದ 10 ವರ್ಷಗಳಿಂದ ಈ ಕಾಡುಪ್ರಾಣಿಗಳ ಹಾವಳಿಯಿಂದ ಜಮೀನಿನಲ್ಲಿ ಬೆಳೆದ ಬೆಳೆ ಕೈ ಸೇರದೆ ಇದ್ದರೂ ಕೇಳುವವರೇ ಇಲ್ಲವಾಗಿದ್ದಾರೆ. 75ಕ್ಕೂ ಹೆಚ್ಚು ಕುಟುಂಬಗಳನ್ನು ಹೊಂದಿ ರುವ ಉತ್ತೇನಹಳ್ಳಿ ಗ್ರಾಮದಲ್ಲಿ 180ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಕೃಷಿಯನ್ನೇ ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಅರಣ್ಯದ ಅಂಚಿನಲ್ಲಿರುವ ಈ ಗ್ರಾಮದ ರೈತರಿಗೆ ಕಂದಕದ ಪಕ್ಕದಲ್ಲಿ ಹೆಚ್ಚು ಜಮೀನಿದ್ದು,…