ಮೈಸೂರು: ಭಾರತದ ಪ್ರಮುಖ ಟೈರ್ ತಯಾರಕ ಸಂಸ್ಥೆ ಜೆಕೆ ಟೈರ್ ಮತ್ತು ಇಂಡಸ್ಟ್ರೀಸ್ ಲಿಮಿಟೆಡ್ 31 ಮಾರ್ಚ್ 2019ಕ್ಕೆ ಅಂತ್ಯಗೊಂಡಂತೆ ಈ ಆರ್ಥಿಕ ವರ್ಷದ ಫಲಿತಾಂಶ ಗಳನ್ನು ಪ್ರಕಟಿಸಿದೆ. ಈ ವರ್ಷ ಮಾರಾಟವು ರೂ. 10,370 ಕೋಟಿಗಳಿದ್ದು, 24% ಹೆಚ್ಚಳ ಕಂಡಿದೆ. ಈ ವರ್ಷದ ಕಾರ್ಯಾಚರಣೆ ಲಾಭ ರೂ. 1,196 ಕೋಟಿ ಗಳಲ್ಲಿ 35% ಹೆಚ್ಚಳ ಕಂಡಿದೆ. ಸಂಚಿತ ಆಧಾರದ ಮೇಲೆ ವರ್ಷದ ತೆರಿಗೆಗೆ ಮುನ್ನ ಲಾಭ ರೂ. 270 ಕೋಟಿಗಳಿದ್ದು ಕಳೆದ ವರ್ಷದ ತತ್ಸಮಾನ ಅವಧಿಗೆ…
ಹೈಕೋರ್ಟ್ ತೀರ್ಪಿಗೆ ಜೆ.ಕೆ.ಟೈರ್ಸ್ ಕಾರ್ಮಿಕರ ಸ್ವಾಗತ
July 1, 2018ಮೈಸೂರು: ಕಾರ್ಮಿಕರ ನಿವೃತ್ತಿ ವಯಸ್ಸನ್ನು 58ರಿಂದ 60 ವರ್ಷಕ್ಕೆ ಹೆಚ್ಚಿಸಿ ನೀಡಿರುವ ಹೈಕೋರ್ಟ್ ತೀರ್ಪನ್ನು ಮೈಸೂರಿನ ಜೆ.ಕೆ. ಟೈರ್ಸ್ ಕಾರ್ಮಿಕರು ಸ್ವಾಗತಿಸಿದ್ದಾರೆ. ಕೆಆರ್ಎಸ್ ರಸ್ತೆಯಲ್ಲಿರುವ ಜೆ.ಕೆ.ಟೈರ್ಸ್ ಕಾರ್ಖಾನೆ ಎದುರು ಇಂದು ಮಧ್ಯಾಹ್ನ ಸಂಭ್ರಮಾಚರಣೆ ನಡೆಸಿರುವ ಅವರು ನ್ಯಾಯಾಲಯದ ತೀರ್ಪಿನಿಂದ ರಾಜ್ಯದಾದ್ಯಂತ ಲಕ್ಷಾಂತರ ಕಾರ್ಮಿಕರಿಗೆ ಮತ್ತು ಅವರ ಕುಟುಂಬದ ಅವಲಂಭಿತ ಸದಸ್ಯರಿಗೆ ಅನುಕೂಲವಾಗಿದೆ ಎಂದು ವಿಟಿಇಯು ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್ ತಿಳಿಸಿದರು. ಸಿಐಟಿಯು ಪ್ರಧಾನ ಕಾರ್ಯದರ್ಶಿ ವಿಜಿ ಕೆ.ನಾಯಕ್, ಕಾರ್ಮಿಕ ಸಂಘದ ಅಧ್ಯಕ್ಷ ಭರತ್ ರಾಜ್, ಪದಾಧಿಕಾರಿಗಳಾದ…
ಸಂಸ್ಥಾಪಕ ದಿ.ಹರಿಶಂಕರ್ ಸಿಂಘಾನೀಯ ಜನ್ಮ ದಿನ ಪ್ರಯುಕ್ತ ಜೆ.ಕೆ. ಟೈರ್ಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ
June 21, 2018ಮೈಸೂರು : ಜೆ.ಕೆ.ಸಮೂಹ ಸಂಸ್ಥೆಯ ಸಂಸ್ಥಾಪಕ ದಿ.ಹರಿಶಂಕರ್ ಸಿಂಘಾನೀಯ ಅವರ 85ನೇ ಜನ್ಮ ದಿನಾಚರಣೆ ಪ್ರಯುಕ್ತ ನಗರದ ಹೊರವಲಯದಲ್ಲಿರುವ ಜೆ.ಕೆ.ಟೈರ್ಸ್ ಕಾರ್ಖಾನೆ ವ್ಯಾಪ್ತಿಯ ಸುಮಾರು 5 ಕಡೆ ಏರ್ಪಡಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಸಾವಿರಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ಮೈಸೂರಿನ ಜೀವಧಾರ ಬ್ಲಡ್ಬ್ಯಾಂಕ್, ಲಯನ್ಸ್ ಬ್ಲಡ್ಬ್ಯಾಂಕ್, ಸ್ವಾಮಿ ವಿವೇಕಾನಂದ ಬ್ಲಡ್ಬ್ಯಾಂಕ್, ಜೀವ ರಕ್ಷಾ ಬ್ಲಡ್ಬ್ಯಾಂಕ್ ಸಹಯೋಗದಲ್ಲಿ ಬುದವಾರ ಮುಂಜಾನೆ 6 ಗಂಟೆಗೆ ಪ್ರಾರಂಭವಾದ ರಕ್ತದಾನ ಶಿಬಿರದಲ್ಲಿ ಕಾರ್ಖಾನೆ ಅಧಿಕಾರಿಗಳು, ಕಾರ್ಮಿಕರು, ಪತ್ರಕರ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ…