ಮೈಸೂರು: ಕರ್ನಾಟಕ ಸಂಗೀತ ವಿವಿಯಲ್ಲಿ 2010-11ನೇ ಸಾಲಿನಲ್ಲಿ ಪಿಹೆಚ್ಡಿಗೆ ದಾಖಲು ಮಾಡಿಕೊಂಡಿದ್ದರೂ ಈವರೆಗೂ ಮಾರ್ಗದರ್ಶಕರನ್ನು ನೇಮಕ ಮಾಡದೇ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿವಿಯಲ್ಲಿ ಪಿಹೆಚ್ಡಿಗೆ ದಾಖಲಾಗಿರುವ ಅಭ್ಯರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ವಿವಿಯ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಕೆಎಸ್ಜಿಹೆಚ್ ಸಂಗೀತ ವಿವಿಯಲ್ಲಿ 2010-11ರ ಸಾಲಿನಲ್ಲಿ ನಮ್ಮನ್ನು ಪಿಹೆಚ್ಡಿಗೆ ದಾಖಲು ಮಾಡಿಕೊಳ್ಳಲಾಗಿದೆ. ನಿಯಮದಂತೆ ದಾಖಲಾತಿಗೆ ಶುಲ್ಕ ಕಟ್ಟಿಸಿಕೊಂಡು ಪ್ರವೇಶ ಪರೀಕ್ಷೆ ಸಹ ನಡೆಸಲಾಯಿತು. ಆದರೆ ವರ್ಷಗಳು ಕಳೆಯುತ್ತಿದ್ದರೂ ಈವರೆಗೂ ಮಾರ್ಗದರ್ಶಕರನ್ನು ನೇಮಕ ಮಾಡಿಲ್ಲ ಎಂದು…
ಡಾ. ನಾಗೇಶ್ ವಿ.ಬೆಟಕೋಟೆ ಅವರಿಗೆ ಸಂಗೀತ ವಿವಿ ಹಂಗಾಮಿ ಕುಲಪತಿ ಮಾಡದಿರುವುದಕ್ಕೆ ಆಕ್ಷೇಪ
June 8, 2018ಮೈಸೂರು: ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾನಿಲಯಕ್ಕೆ ಹಂಗಾಮಿ ಕುಲಪತಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದ ಡಾ.ನಾಗೇಶ್ ವಿ.ಬೆಟಕೋಟೆ ಅವರನ್ನು ಅಸ್ಪøಶ್ಯ ಸಮುದಾಯದವರು ಎಂಬ ಕಾರಣಕ್ಕೆ ಅಕ್ರಮವಾಗಿ ಡಾ.ಆರ್.ರಾಜೇಶ್ ಅವರಿಗೆ ಹಂಗಾಮಿ ಕುಲಪತಿ ಸ್ಥಾನ ನೀಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಆರ್.ರಾಜೇಶ್ ಅವರು ಸಮಾಜಶಾಸ್ತ್ರ ಉಪನ್ಯಾಸಕರಾಗಿ ಕೇವಲ ಎರಡು ವರ್ಷ ಪಾಠ ಮಾಡಿದವರಾಗಿದ್ದು, ಸಂಗೀತ, ನೃತ್ಯ ಮತ್ತು…
ನೇಮಕಾತಿ ಆದೇಶ, ಪರಿಷ್ಕೃತ ವೇತನಕ್ಕಾಗಿ ಸಂಗೀತ ವಿವಿ ಬೋಧಕೇತರ ಸಿಬ್ಬಂದಿ ಪ್ರತಿಭಟನೆ
June 5, 2018ಮೈಸೂರು: ವರ್ಷದ ಅವಧಿಗೆ ನೇಮಕಾತಿ ಆದೇಶ ಹಾಗೂ 6ನೇ ಪರಿಷ್ಕೃತ ವೇತನ ನೀಡಲು ಸರ್ಕಾರದ ಆದೇಶವಿದ್ದರೂ ಕುಲಸಚಿವ ಪ್ರೊ.ಆರ್.ರಾಜೇಶ್ ಅದಕ್ಕೆ ಅವಕಾಶ ನೀಡದೇ ನಮಗೆ ಉದ್ಯೋಗ ಅಭದ್ರತೆ ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಬೋಧಕೇತರ ಸಿಬ್ಬಂದಿ ಸೋಮವಾರ ಪ್ರತಿಭಟನೆ ನಡೆಸಿದರು. ವಿಶ್ವವಿದ್ಯಾನಿಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದ ಬೋಧಕೇತರ ಸಿಬ್ಬಂದಿ, 2017ರ ನ.1ರ ಸರ್ಕಾರದ ಆದೇಶದಂತೆ ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕೇತರ ಸಿಬ್ಬಂದಿಗೆ ಸರ್ಕಾರವು ಕಾಲಕಾಲಕ್ಕೆ ಪರಿಷ್ಕರಿಸಿರುವ ವೇತನವನ್ನು…