ಮೈಸೂರು: ಕಡಕೊಳ ಗ್ರಾಮದಲ್ಲಿ ಕಲುಷಿತ ನೀರಿನಿಂದ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಪ್ರಕರಣದ ಬಳಿಕ ಎಚ್ಚೆತ್ತಿರುವ ತಾಲೂಕು ಪಂಚಾಯಿತಿ ಆಡಳಿತ ಮೈಸೂರು ತಾಲೂಕಿನ ಎಲ್ಲಾ ಗ್ರಾಮಗಳ ನೀರಿನ ಟ್ಯಾಂಕ್ ಮತ್ತು ಕಿರು ನೀರು ಸರಬರಾಜು ಟ್ಯಾಂಕ್ಗಳ ಸ್ವಚ್ಛತಾ ಅಭಿಯಾನಕ್ಕೆ ಮುಂದಾಗಿದೆ. ಫೆ.1ರಿಂದ 10ರವರೆಗೆ ತಾಲೂಕಿನ 37 ಗ್ರಾಮ ಪಂಚಾ ಯಿತಿಗಳ ವ್ಯಾಪ್ತಿಯ 186 ಗ್ರಾಮಗಳ ಎಲ್ಲಾ ನೀರಿನ ಟ್ಯಾಂಕ್ಗಳು ಹಾಗೂ ಕಿರು ನೀರು ಸರಬರಾಜು ವ್ಯವ ಸ್ಥೆಯ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಲು ಗ್ರಾಮ ಪಂಚಾ ಯಿತಿಗಳಿಗೆ ಸೂಚನೆ ನೀಡಲಾಗಿದೆ…
ಕೊಳವೆ ಬಾವಿ ಕೊರೆಸುವ ಅನುಷ್ಠಾನ ವಿಳಂಬ ಕೆಡಿಪಿ ಸಭೆಯಲ್ಲಿ ಸಿಇಓ ಅಸಮಾಧಾನ
July 12, 2018ಚಾಮರಾಜನಗರ: ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ವೈಯಕ್ತಿಕ ಕೊಳವೆ ಬಾವಿ ಕೊರೆಸುವ ಅನುಷ್ಠಾನ ವಿಳಂಬ ಆಗುತ್ತಿದೆ ಎಂದು ಜಿಪಂ ಉಪಾಧ್ಯಕ್ಷ ಜೆ.ಯೋಗೇಶ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅಸ ಮಾಧಾನ ವ್ಯಕ್ತಪಡಿಸಿದರು. ನಗರದ ಜಿಲ್ಲಾಡಳಿತ ಭವನದ ಆವ ಣದಲ್ಲಿ ಇರುವ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಜಿಲ್ಲಾ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರಿ ಬ್ಬರು ಅಸಮಾಧಾನ ತೋರ್ಪಡಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಡಿ.ದೇವರಾಜು ಅರಸು ಅಭಿವೃದ್ಧಿ ನಿಗಮ,…
ಕೇವಲ ಅಧಿಕಾರಿಗಳ ವರದಿ ಮಂಡನೆಗೆ ಸೀಮಿತವಾದ ತಾಪಂ ಕೆಡಿಪಿ ಸಭೆ
June 19, 2018ಮೈಸೂರು: ಮೈಸೂರಿನ ಮಿನಿ ವಿಧಾನಸೌಧದ ತಾ.ಪಂ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಪಂಚಾಯಿತಿ ಕೆಡಿಪಿ ಸಭೆ ಕೇವಲ ಅನುಪಾಲನಾ ವರದಿ ಮಂಡನೆಗೆ ಮಾತ್ರ ಸೀಮಿತವಾಯಿತು. ಬಹು ದಿನಗಳ ನಂತರ ಸಭೆಯಲ್ಲಿ ತಾಲೂಕಿನ ಯಾವುದೇ ಪ್ರಮುಖ ಸಮಸ್ಯೆಗಳ ಚರ್ಚೆಗೆ ಸದಸ್ಯರು ಮೌನಕ್ಕೆ ಶರಣಾಗುವ ಮೂಲಕ ನಿರು ತ್ಸಾಹ ಪ್ರದರ್ಶಿಸಿದರು. ಮೈಸೂರು ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮಾತ್ರ ತಮ್ಮ ಇಲಾಖೆಯ ಅನುಪಾಲನಾ ವರದಿಯನ್ನು ಓದಿ ಕೈತೊಳೆದುಕೊಂಡು ಸುಮ್ಮನಾದರು. ಯಾವುದೇ…