ಮೈಸೂರು,ಜು.7(ಎಂಟಿವೈ)- ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಭಾನುವಾರ ವೈಲ್ಡ್ ಮೈಸೂರು ಸಂಸ್ಥೆ ಆಯೋಜಿಸಿದ್ದ ಪರಿಸರ ನಡಿಗೆಯಲ್ಲಿ ಹಲವಾರು ಪರಿಸರ ಪ್ರೇಮಿಗಳು ಪಾಲ್ಗೊಂಡು ಕೆರೆ ಪರಿಸರದಲ್ಲಿರುವ ಜೀವ ವೈವಿಧ್ಯತೆ ಬಗ್ಗೆ ಮಾಹಿತಿ ಪಡೆದರು. ಮೈಸೂರಿನ ಪರಿಸರ ಪ್ರೇಮಿಗಳು, ವೈಲ್ಡ್ ಮೈಸೂರು ಹಾಗೂ ಸಮಾನ ಮನಸ್ಕರ ತಂಡದ ಸದಸ್ಯರು ಪರಿಸರ ನಡಿಗೆ ಹಾಗೂ ಕುಕ್ಕರಹಳ್ಳಿ ಕೆರೆ ಮತ್ತು ಅಲ್ಲಿನ ಜೀವಜಗತ್ತಿನ ಪರಿಚಯ ಕಾರ್ಯಕ್ರಮ ಪಾಲ್ಗೊಂಡಿದ್ದರು. ಕುಕ್ಕರಹಳ್ಳಿ ಮುಖ್ಯ ದ್ವಾರದಿಂದ ಆರಂಭವಾದ ¥ರಿಸರ ನಡಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಪರಿ ಸರ ತಜ್ಞ ಮೋಹನ್…
ಡಾ.ವಿ.ರಂಗನಾಥ್ ಅವರ ‘ಸಿಂದೂ ದರ್ಶನ’ ಕೃತಿ ಬಿಡುಗಡೆ
July 8, 2019ಮೈಸೂರು,ಜು.7-ಮೈಸೂರಿನ ಜೆಎಲ್ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ವಿಜಯ ಪೌಂಡೇಷನ್ ಆಯೋಜಿಸಿದ್ದ ಕೃತಿ ಬಿಡುಗಡೆ ಕಾರ್ಯ ಕ್ರಮದಲ್ಲಿ ಸ್ವಾಮಿ ದಯಾನಂದ ಸರಸ್ವತಿ ಯವರ ಕುರಿತಾದ ಲೇಖಕ ಅವಿನಾಶ ಲಿಂಗಮ್ ಅವರ ‘ಲೈಟ್ ಆನ್ ವೇದಾಂತ’ ಹಾಗೂ ‘ಮೈಸೂರು ಮಿತ್ರ’ ಪತ್ರಿಕೆ ಅಂಕಣ ಕಾರ ಡಾ.ವಿ.ರಂಗನಾಥ್ ಅವರ ‘ಸಿಂದೂ ದರ್ಶನ’ ಕೃತಿಗಳನ್ನು ಆರ್ಷ ವಿದ್ಯಾ ಪೀಠದ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಸ್ವಾಮಿ ದಯಾನಂದ ಸರಸ್ವತಿಯವರ ಸಂಕ್ಷಿಪ್ತ ಜೀವನ ಚರಿತ್ರೆ ಹಾಗೂ ವೇದಾಂತ ಸಾಗರವೆಂದೇ…
ದೇಶದ ಶೇ.40ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ
July 8, 2019ಮೈಸೂರು,ಜು.7(ಪಿಎಂ)- ದೇಶದ ಮಕ್ಕಳಲ್ಲಿ ಶೇ.40ರಷ್ಟು ಮಂದಿ ಅಪೌಷ್ಟಿಕತೆ ಯಿಂದ ಬಳಲುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಮೈಸೂರು ವಿವಿ ಆಡಳಿ ತಾಂಗ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಅಲ್ಲಿಗೆ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆಯೇ? ಎಂದು ಅವಲೋಕಿಸಿ ಕೊಳ್ಳಬೇಕಿದೆ ಎಂದು ಹೇಳಿದರು. ಮೈಸೂರಿನ ಮಾನಸಗಂಗೋತ್ರಿಯ ಮೈಸೂರು ವಿವಿ ರಾಣಿಬಹದ್ದೂರ್ ಸಭಾಂ ಗಣದಲ್ಲಿ ಮೈಸೂರು ವಿವಿ ಯುವ ಪ್ರಗತಿ ಪರ ಚಿಂತಕರ ಸಂಘ, ಬದುಕು ಟ್ರಸ್ಟ್ ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿ ಕೊಂಡಿದ್ದ ಈ.ಧನಂಜಯ ಎಲಿಯೂರು ಅವರ `ಸಮಾಜಮುಖಿ’ ಮತ್ತು `ಮಕ್ಕ ಳೊಂದಿಗೆ…
ಮೆರಿಟ್ ಆಧಾರದಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ಆಯ್ಕೆಗೆ ವಕೀಲ ಓ.ಶ್ಯಾಂ ಭಟ್ ಸಲಹೆ
July 8, 2019ಮೈಸೂರು, ಜು.7(ಆರ್ಕೆಬಿ)- ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಿದರೆ ಮಾತ್ರ ಮಕ್ಕಳ ಶೈಕ್ಷಣಿಕ ಉನ್ನತಿ ಸಾಧ್ಯ ಎಂದು ಹಿರಿಯ ವಕೀಲ ಓ.ಶ್ಯಾಂ ಭಟ್ ಅಭಿಪ್ರಾಯಪಟ್ಟರು. ಮೈಸೂರಿನ ಪುರಭವನದಲ್ಲಿ ಚಾಮುಂ ಡೇಶ್ವರಿ ಗೆಳೆಯರ ಪ್ರಗತಿಪರ ಸೇವಾ ಪ್ರತಿ ಷ್ಠಾನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಅನೇಕ ಶಿಕ್ಷಕರಿಗೆ `ಅ’ ಕಾರ `ಹ’ ಕಾರ ತಿಳಿಯದ ಶಿಕ್ಷಕರೂ ಇದ್ದು, ಅವರಿಂದ ಸಮಾಜದಲ್ಲಿ ಶಿಕ್ಷಣ ಸಾಧನೆ ಸಾಧ್ಯವೇ? ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಏರಿಸಬಾರದೇಕೆ? ಎಂದು…
ಸೇವಾದಳ ಕಾರ್ಯಕರ್ತರನ್ನು ಕಡೆಗಣಿಸಿದರೆ ಕಾಂಗ್ರೆಸ್ಗೆ ಹಿನ್ನಡೆ
July 8, 2019ಮೈಸೂರು,ಜು.7(ಎಂಟಿವೈ)- ಕಾಂಗ್ರೆಸ್ ಪಕ್ಷದ ಬೆನ್ನೆಲುಬಿನಂತಿರುವ ಸೇವಾದಳದ ಕಾರ್ಯಕರ್ತ ರನ್ನು ಕಡೆಗಣಿಸಿದರೆ, ಪಕ್ಷಕ್ಕೆ ಮತ್ತಷ್ಟು ಹಿನ್ನಡೆಯಾಗು ತ್ತದೆ ಎಂದು ಕಾಂಗ್ರೆಸ್ ಸೇವಾದಳದ ರಾಜ್ಯಾಧ್ಯಕ್ಷೆ ಎಸ್.ಪ್ಯಾರಿ ಜಾನ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಸೇವಾ ದಳದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿಯೂ ಸೇವಾದಳ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಸೇವಾದಳ ಈ ಹಿಂದೆ ಸುಭದ್ರವಾಗಿ ನೆಲೆಯೂರಿತ್ತು. ಹಿಂದೂಸ್ತಾನ ಸೇವಾದಳ ಹೆಸರಿನಿಂದಾಗಿ ಪ್ರಸಿದ್ಧಿ ಯಾಗಿತ್ತು. ಸ್ವಾತಂತ್ರ್ಯ ಹೋರಾಟಗಳಲ್ಲಿ ಸೇವಾದಳದ ಕಾರ್ಯ ವೈಖರಿ ಗಮನಿಸಿ…
ರಾಜ್ಯದಲ್ಲಿ ರಾಜಕೀಯ ಬದಲಾವಣೆ ಸನ್ನಿಹಿತ
July 8, 2019ಮೈಸೂರು, ಜು.7(ಆರ್ಕೆಬಿ)- ರಾಜ್ಯದ ಪ್ರಸ್ತುತ ಪರಿಸ್ಥಿತಿ ನೋಡಿದರೆ ಆದಷ್ಟು ಬೇಗ ರಾಜಕೀಯ ಬದಲಾವಣೆ ಆಗುವುದು ಒಳ್ಳೆಯದು ಎಂದು ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಅಭಿಪ್ರಾಯಪಟ್ಟರು. ಮೈಸೂರಿನ ಕಲಾಮಂದಿರ ಬಳಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ಒಂದು ವರ್ಷದಿಂದ ಶಾಸಕರಿಗೆ ಉಸಿರುಗÀಟ್ಟಿಸುವ ವಾತಾವರಣ ನಿರ್ಮಾಣವಾಗಿತ್ತು. ಸರ್ಕಾರ ಸಂಪೂರ್ಣ ವಿಫಲವಾಗಿರುವುದರಿಂದ ಶಾಸಕರು ತಮ್ಮ ಭವಿಷ್ಯ ವೇನು? ಎಂದು ಯೋಚಿಸುವಂತಹ ಸ್ಥಿತಿ ಕಾಂಗ್ರೆಸ್ ಮತ್ತು ಜೆಡಿಎಸ್ನಲ್ಲಿ ಶುರುವಾಗಿದೆ. ಸರ್ಕಾರದ ಆಡಳಿತ ವೈಫಲ್ಯದಿಂದ ಶಾಸಕರು ತಮ್ಮ ಕ್ಷೇತ್ರದಲ್ಲಿ ಮುಖ ತೋರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ…
ಚುನಾವಣೆ ಬಂದರೆ ನಮ್ಮಂತವರಿಗೆ ಅವಕಾಶ: ಮಾಜಿ ಶಾಸಕ ವಾಸು
July 8, 2019ಮೈಸೂರು, ಜು.7(ಆರ್ಕೆಬಿ)- ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಯಾರಿಗೂ ಇಷ್ಟವಿಲ್ಲ. ಒಂದು ವೇಳೆ ಚುನಾವಣೆ ಬಂದರೂ ನಮ್ಮಂಥವರಿಗೆ ಅವಕಾಶ ದೊರೆಯಲಿದೆ ಎಂದು ಮಾಜಿ ಶಾಸಕ ವಾಸು ತಿಳಿಸಿದರು. ಪ್ರಸ್ತುತ ರಾಜ್ಯ ರಾಜಕಾರಣ ಕುರಿತು ಮೈಸೂರಿನಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವ ಪಕ್ಷವೂ ಮಧ್ಯಂತರ ಚುನಾವಣೆ ಬಯಸುತ್ತಿಲ್ಲ. ಒಂದು ವೇಳೆ ಚುನಾವಣೆ ಬಂದಿದ್ದೇ ಆದರೆ ಸೋತು ಮನೆಯಲ್ಲಿರುವವರಿಗೆ ನಾಲ್ಕು ವರ್ಷ ಕಾಯುವ ಬದಲು ಎರಡೇ ವರ್ಷದಲ್ಲಿ ಮತ್ತೊಂದು ಅವಕಾಶ ಸಿಗಲಿದೆ ಎಂದು ಹೇಳಿದರು. ಹುಣಸೂರು ಶಾಸಕ ಹೆಚ್.ವಿಶ್ವನಾಥ್…
ಬಿರುಕು ಬಿಟ್ಟ ಚಾ.ಬೆಟ್ಟದ ನಂದಿ ಮೂರ್ತಿಗೆ ಗೋಂದು, ಕಲ್ಲಿನ ಪುಡಿ ಮಿಶ್ರಣ ಲೇಪನ
July 8, 2019ಮೈಸೂರು,ಜು.7-ಚಾಮುಂಡಿಬೆಟ್ಟದ ಏಕಶಿಲಾ ನಂದಿ ವಿಗ್ರಹದ ಬಿರುಕು ಬಿಟ್ಟ ಭಾಗಕ್ಕೆ ಕಲ್ಲಿನ ಪುಡಿ ಮಿಶ್ರಣದೊಂದಿಗೆ ಗೋಂದು ಬಳಸಿ ಹೆಚ್ಚಿನ ಹಾನಿ ಆಗುವು ದನ್ನು ತಡೆಗಟ್ಟಲಾಗಿದೆ. ಏಕಶಿಲಾ ನಂದಿ ವಿಗ್ರಹದ ತುಟಿಯ ಭಾಗ, ಬಲ ಬದಿಯ ಪಕ್ಕೆಯ ಬಳಿ ಹಾಗೂ ಬೆನ್ನಿನ ಮೇಲೆ ಸಣ್ಣ ಪ್ರಮಾಣದ ಬಿರುಕು ಕಾಣಿಸಿಕೊಂಡಿತ್ತು. ಇದು ಆತಂಕವನ್ನುಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಪುರಾತತ್ವ ಮತ್ತು ಪಾರಂಪರಿಕ ಇಲಾಖೆ ನಂದಿ ವಿಗ್ರಹಕ್ಕೆ ಉಂಟಾಗಬಹುದಾದ ದೊಡ್ಡ ಪ್ರಮಾಣದ ಹಾನಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಂಡು ಏಕ ಶಿಲಾ…
ತ್ಯಾಗಿ ನಿವಾಸಕ್ಕೆ ಶಾಸಕರ ನಿಧಿಯಿಂದ 5 ಲಕ್ಷ
July 8, 2019ಮೈಸೂರು,ಜು.7(ಪಿಎಂ)- ಮೈಸೂರಿನ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಭಗ ವಾನ್ ಶ್ರೀ ಶಾಂತಿನಾಥಸ್ವಾಮಿ ಜೈನ ಬಸದಿಯ (ಕೋಟೆ ಬಸದಿ) ಶ್ರೀ ಶಾಂತಿನಾಥ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ತ್ಯಾಗಿ ನಿವಾಸಕ್ಕೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಮೊದಲ ಹಂತದಲ್ಲಿ ಶೀಘ್ರವೇ 5 ಲಕ್ಷ ರೂ. ನೀಡುವುದಾಗಿ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಭರವಸೆ ನೀಡಿದರು. ಭಗವಾನ್ ಶ್ರೀ ಶಾಂತಿನಾಥಸ್ವಾಮಿ ಜೈನ ಬಸದಿಯಲ್ಲಿ 1008 ಭಗವಾನ್ ಶ್ರೀ ಶಾಂತಿ ನಾಥ ತೀರ್ಥಂಕರರ 123ನೇ ವಾರ್ಷಿಕ ಪೂಜಾ…
ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ಭೂ ಸ್ವಾಧೀನ ಪ್ರಕ್ರಿಯೆ
July 8, 2019ಮೈಸೂರು,ಜು.7(ಎಸ್ಪಿಎನ್)-ಮಂಡಕಳ್ಳಿ ವಿಮಾನ ನಿಲ್ದಾಣ ವಿಸ್ತರಣೆಗೆ ಭೂ ಸ್ವಾಧೀನ ಪ್ರಕ್ರಿಯೆ ಪ್ರಮುಖ ಘಟ್ಟವಾಗಿ ಜಿಲ್ಲಾಡಳಿತ ಹಾಗೂ ಭೂ ಮಾಲೀಕ ರೊಂದಿಗೆ ಶನಿವಾರ ನಡೆದ ಭೂಮಿ ದರ ನಿಗದಿ ಸಭೆ ಯಾವುದೇ ಒಪ್ಪಂದಕ್ಕೆ ಬರಲಾಗಲಿಲ್ಲ. ಮೈಸೂರು-ಹುಣಸೂರು ರಸ್ತೆಯಲ್ಲಿ ರುವ ತೋಟಗಾರಿಕೆ ಇಲಾಖೆ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮಧ್ಯಸ್ಥಿಕೆಯಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣ ವಿಸ್ತರಣೆ ಸಂಬಂಧ ಭೂ ಮಾಲೀಕರೊಂದಿಗೆ ನಡೆಸಿದ ಮಾತು ಕತೆಯಲ್ಲಿ ಯಾವುದೇ ನಿರ್ಧಾರವಾಗಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ…










