Tag: Mysore

ಜು.13ರಿಂದ ‘ಮೈಸೂರು ಸಾಹಿತ್ಯ ಸಂಭ್ರಮ’ 3ನೇ ಆವೃತ್ತಿ
ಮೈಸೂರು

ಜು.13ರಿಂದ ‘ಮೈಸೂರು ಸಾಹಿತ್ಯ ಸಂಭ್ರಮ’ 3ನೇ ಆವೃತ್ತಿ

July 9, 2019

ಮೈಸೂರು,ಜು.8(ಎಂಟಿವೈ)- ‘ಮೈಸೂರು ಸಾಹಿತ್ಯ ಸಂಭ್ರಮ’ದ ಮೂರನೇ ಆವೃತ್ತಿ ಕಾರ್ಯಕ್ರಮ ಜು.13 ಮತ್ತು 14ರಂದು ಹೋಟೆಲ್ ಸದರ್ನ್ ಸ್ಟಾರ್ ಸಭಾಂಗಣ ದಲ್ಲಿ ಜರುಗಲಿದ್ದು, ಒಂದೇ ಸಮಯದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರತ್ಯೇಕ ವೇದಿಕೆಯಲ್ಲಿ ವಿವಿಧ ಗೋಷ್ಠಿ ಜರುಗಲಿವೆ ಎಂದು ಮೈಸೂರು ಲಿಟರರಿ ಫೋರಮ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಶುಭಾ ಸಂಜಯ್ ಅರಸ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಲಿಟರರಿ ಫೋರಮ್ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರು ಬುಕ್…

ಸರ್ಕಾರಗಳು ಕೃಷಿ ಭೂಮಿಯನ್ನು ಇತರ ಉದ್ದೇಶಗಳಿಗೆ ನೀಡಿ ದೇಶ ನಾಶ ಮಾಡಲು ಮುಂದಾಗಿವೆ
ಮೈಸೂರು

ಸರ್ಕಾರಗಳು ಕೃಷಿ ಭೂಮಿಯನ್ನು ಇತರ ಉದ್ದೇಶಗಳಿಗೆ ನೀಡಿ ದೇಶ ನಾಶ ಮಾಡಲು ಮುಂದಾಗಿವೆ

July 9, 2019

ಮೈಸೂರು,ಜು.8(ಎಂಟಿವೈ)-ಕೇಂದ್ರ ಹಾಗೂ ರಾಜ್ಯವಾಳುತ್ತಿರುವ ಸರ್ಕಾರಗಳು ಇತರ ಉದ್ದೇಶಗಳಿಗೆ ಕೃಷಿ ಭೂಮಿಯನ್ನು ನೀಡಿ ದೇಶ ನಾಶ ಮಾಡಲು ಮುಂದಾ ಗಿವೆ ಎಂದು ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಆರೋಪಿಸಿದ್ದಾರೆ. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಕರ್ನಾಟಕ ರೈತ ಸಂಘ ಜಿಲ್ಲಾ ಸಮಿತಿ ಸೋಮವಾರ ಆಯೋಜಿಸಿದ್ದ `ದೇಶದ ಕೃಷಿ ಬಿಕ್ಕಟ್ಟಿಗೆ ಕಾರಣಗಳು ಮತ್ತು ಪರಿಹಾರಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತ ನಾಡಿ ಅವರು, ಬಂಡವಾಳ ಹಂಚಿಕೆ ಯಾದರೆ ಎಲ್ಲರೂ ಸಮಾನರಾಗುತ್ತಾರೆ ಎಂಬ ಹಿಡನ್ ಅಜೆಂಡಾದಿಂದ ಕೃಷಿ ಭೂಮಿ ಎಂಬ…

ವಿದ್ಯಾರ್ಥಿಗಳು ರಚಿಸಿದ ವಿವಿಧ ಮಾದರಿ ಚಿತ್ರಕಲೆಗಳ ಪ್ರದರ್ಶನ
ಮೈಸೂರು

ವಿದ್ಯಾರ್ಥಿಗಳು ರಚಿಸಿದ ವಿವಿಧ ಮಾದರಿ ಚಿತ್ರಕಲೆಗಳ ಪ್ರದರ್ಶನ

July 9, 2019

ಮೈಸೂರು,ಜು.8(ಆರ್‍ಕೆಬಿ)- ಮೈಸೂ ರಿನ ರವಿವರ್ಮ ಚಿತ್ರಕಲಾ ಶಾಲೆಯಲ್ಲಿ ಆರು ದಿನಗಳ ರೇಖಾಚಿತ್ರ ಕಾರ್ಯಾಗಾರ ಹಾಗೂ ಚಿತ್ರಕಲಾ ಪ್ರದರ್ಶನಕ್ಕೆ ಮೈಸೂರು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂ ಧಕ ಡಾ.ಜಿ.ಉಮೇಶ್ ಸೋಮವಾರ ಚಾಲನೆ ನೀಡಿದರು. ಶಾಲೆಯ ವಿದ್ಯಾರ್ಥಿಗಳೇ ರಚಿಸಿದ ರೇಖಾಚಿತ್ರ, ಸಮಕಾಲೀನ ಚಿತ್ರಗಳು, ವರ್ಣ ಕಲೆ, ಪ್ರಿಂಟಿಂಗ್ ಮಾದರಿಯ 60ಕ್ಕೂ ಹೆಚ್ಚು ಚಿತ್ರಕಲೆಗಳು ಪ್ರದರ್ಶನ ದಲ್ಲಿದ್ದು, ಆಧುನಿಕ ಮತ್ತು ಹಳ್ಳಿಯ ಜೀವನ ಕ್ರಮಕ್ಕೆ ಕನ್ನಡಿ ಹಿಡಿದಂತಿದೆ. ಪ್ರಸ್ತುತ ಜಗತ್ತಿನ ಸ್ಥಿರ ಚಿತ್ರಣ, ಜೀವನ ಶೈಲಿ, ಗ್ರಾಮ ಜೀವನ, ಪ್ರಕೃತಿಯ…

ಜು.20, 21ರಂದು ರಾಜ್ಯ ಮಟ್ಟದ ಸಮ್ಮೇಳನ
ಮೈಸೂರು

ಜು.20, 21ರಂದು ರಾಜ್ಯ ಮಟ್ಟದ ಸಮ್ಮೇಳನ

July 9, 2019

ಮೈಸೂರು,ಜು.8(ಆರ್‍ಕೆಬಿ)- ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ (ವೈಹೆಚ್‍ಎಐ) ಕರ್ನಾಟಕ ರಾಜ್ಯ ಘಟಕ ಮತ್ತು ಮೈಸೂರು ಘಟಕದ ವತಿಯಿಂದ ಜು.20ರಿಂದ 2 ದಿನಗಳ ರಾಜ್ಯ ಮಟ್ಟದ ಸಮ್ಮೇಳನವನ್ನು ಮೈಸೂರಿನ ಗೋಕುಲಂನ 2ನೇ ಹಂತದಲ್ಲಿರುವ ಅಂತಾರಾಷ್ಟ್ರೀಯ ಯೂತ್ ಹಾಸ್ಟೆಲ್‍ನಲ್ಲಿ ಆಯೋಜಿಸಿದೆ. ಸಮ್ಮೇಳನದ ಅಂಗವಾಗಿ ವಿಚಾರ ಗೋಷ್ಠಿ, ವಿವಿಧ ಸ್ಪರ್ಧೆಗಳು, ಪರಸ್ಪರ ಪರಿ ಚಯ, ಚಾರಣ ಹಾಗೂ ಸಾಹಸ ಕ್ರೀಡಾ ಚಟುವಟಿಕೆಗಳ ಕುರಿತ ಪ್ರಾತ್ಯಕ್ಷಿಕೆ, ಯುವ ಬಿಡಾರ ಪದ್ಧತಿಯನ್ನು ಜನಪ್ರಿಯಗೊಳಿ ಸುವ ಮತ್ತು ಯುವ ಜನತೆಯನ್ನು ಸಾಹಸ ಕ್ರೀಡೆಗಳತ್ತ ಸೆಳೆಯುವ,…

ಯೂತ್ ಹಾಸ್ಟೆಲ್ ಜನ್ಮ ತಾಳಿದ್ದೇ ಮೈಸೂರಲ್ಲಿ!
ಮೈಸೂರು

ಯೂತ್ ಹಾಸ್ಟೆಲ್ ಜನ್ಮ ತಾಳಿದ್ದೇ ಮೈಸೂರಲ್ಲಿ!

July 9, 2019

ಮೈಸೂರು, ಜು.8(ಆರ್‍ಕೆಬಿ)-ಜರ್ಮ ನಿಯ ರಿಚರ್ಸ್ ಷರ್ಮನ್ ಎಂಬ ಶಿಕ್ಷಕ ರೊಬ್ಬರ ಕನಸಿನ ಕೂಸಾಗಿ 1909ರಲ್ಲಿ ಆರಂಭಗೊಂಡ ಯೂತ್ ಹಾಸ್ಟೆಲ್ ಎಂಬ ಪರಿಕಲ್ಪನೆ, ಶಾಲಾ ಮಕ್ಕಳಲ್ಲಿ ಓದಿನ ಜೊತೆಗೆ ಪ್ರಾಕೃತಿಕ ತಾಣಗಳಲ್ಲಿ ತಿರು ಗಾಡುವ, ಸ್ವಯಂ ಆಸಕ್ತಿಯ ವಿಷಯಗಳನ್ನು ಸಂಚಾರದ ಮೂಲಕವೇ ಅರಿಯುವ ವಾಸ್ತವಿಕ ತಿಳಿವಳಿಕೆಯನ್ನು ಅನುಭವಿಸಿ ಕಲಿಯುವ ವಿಧಾನ ಇದಾಗಿತ್ತು. ಭಾರತದಲ್ಲಿ ಈ ವ್ಯವಸ್ಥೆ ಅರಂಭ ಗೊಂಡಿದ್ದೇ ಮೈಸೂರಿನಲ್ಲಿ ಎನ್ನುವುದು ಮಹತ್ವದ ಸಂಗತಿ. ಇಂದು ಮೈಸೂರು ಘಟಕದಲ್ಲಿ 2 ದಿನಗಳ ಸಮ್ಮೇಳನ ನಡೆಸು ವುದಕ್ಕೆ ಪೂರಕ ಸಂಗತಿ,…

ನಿಷ್ಕ ಕಂಪನಿ ವಂಚನೆ ವಿರುದ್ಧ ದಲಿತ ವೇದಿಕೆ ಸದಸ್ಯರ ಪ್ರತಿಭಟನೆ
ಮೈಸೂರು

ನಿಷ್ಕ ಕಂಪನಿ ವಂಚನೆ ವಿರುದ್ಧ ದಲಿತ ವೇದಿಕೆ ಸದಸ್ಯರ ಪ್ರತಿಭಟನೆ

July 9, 2019

ಮೈಸೂರು, ಜು. 8(ಆರ್‍ಕೆ)- ರಾಜ್ಯಾದ್ಯಂತ 4 ಲಕ್ಷಕ್ಕೂ ಹೆಚ್ಚು ಗ್ರಾಹಕರಿಂದ 100 ಕೋಟಿ ರೂ.ಗಳನ್ನು ಸಂಗ್ರಹಿಸಿ ವಂಚಿಸಿರುವ ನಿಷ್ಕ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ದಲಿತ ವೇದಿಕೆ ಸದಸ್ಯರು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಇಂದು ಪ್ರತಿಭಟನೆ ನಡೆಸಿದರು. ಎ.ಎಂ.ಫಣಿರಾಜ್‍ಗೌಡ ಎಂಬ ವ್ಯಕ್ತಿ ನಿಷ್ಕ ಎಂಬ ಹೆಸರಿನಲ್ಲಿ ಕಂಪನಿಗಳನ್ನು ತೆರೆದು 13 ಸಾವಿರ ಏಜೆಂಟರುಗಳ ಮೂಲಕ ಮೈಸೂರು ಸೇರಿದಂತೆ ರಾಜ್ಯಾದ್ಯಂತ 4 ಲಕ್ಷ ಗ್ರಾಹಕರಿಂದ 100 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿ ಮರು…

ನಮ್ಮ ಮೈಸೂರು ಫೌಂಡೇಷನ್‍ನಿಂದ ಚಾಮುಂಡಿಬೆಟ್ಟದಲ್ಲಿ ಸ್ವಚ್ಛತಾ ಕಾರ್ಯ
ಮೈಸೂರು

ನಮ್ಮ ಮೈಸೂರು ಫೌಂಡೇಷನ್‍ನಿಂದ ಚಾಮುಂಡಿಬೆಟ್ಟದಲ್ಲಿ ಸ್ವಚ್ಛತಾ ಕಾರ್ಯ

July 9, 2019

ಮೈಸೂರು, ಜು.8(ಎಂಟಿವೈ)- ಆಷಾಢ ಮಾಸದ ಮೊದಲ ಶುಕ್ರವಾರದಂದು ಜರುಗಿದ ವಿಶೇಷ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂ ಡಿದ್ದ ಅಪಾರ ಸಂಖ್ಯೆಯ ಭಕ್ತರು ಎಸೆದು ಹೋಗಿದ್ದ ಪ್ಲಾಸ್ಟಿಕ್ ಸೇರಿದಂತೆ ಅನು ಪಯುಕ್ತ ವಸ್ತುಗಳನ್ನು ಸಂಗ್ರ ಹಿಸಲು ಭಾನುವಾರ ನಮ್ಮ ಮೈಸೂರು ಫೌಂಡೇಷನ್ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ವಿವಿಧ ಸಂಘ -ಸಂಸ್ಥೆಗಳ ಕಾರ್ಯಕರ್ತರು, ವಿವಿಧ ಕಂಪನಿಗಳ ನೂರಾರು ಉದ್ಯೋಗಿಗಳು ಪಾಲ್ಗೊಂಡು ಗಮನ ಸೆಳೆದರು. ಏಕಕಾಲಕ್ಕೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಸುತ್ತಮುತ್ತ, ಮಹಿಷಾಸುರ ಪ್ರತಿಮೆ ಬಳಿ, ಬಸ್ ನಿಲ್ದಾಣ, ಭಕ್ತರು ಪ್ರಸಾದ ವಿತರಿಸಿ…

ಮೈಸೂರಲ್ಲಿ ನಮೋ ಯೋಗ ಭವನ ಆರಂಭ
ಮೈಸೂರು

ಮೈಸೂರಲ್ಲಿ ನಮೋ ಯೋಗ ಭವನ ಆರಂಭ

July 8, 2019

ಮೈಸೂರು,ಜು.7-ಹತ್ತು ಹಲವು ವೈಶಿಷ್ಟ್ಯಗಳ ತಾಣ `ಮೈಸೂರು ನಗರ’ ಯೋಗ ಪರಂಪರೆಗೂ ಹೆಸರಾಗಿದ್ದು, ಇದೀಗ ಮೈಸೂರು ನಗರದಲ್ಲಿ ಮಹಾ ನಗರ ಪಾಲಿಕೆ ವತಿಯಿಂದ ನಿರ್ಮಾಣ ವಾಗಿರುವ ಮೊಟ್ಟ ಮೊದಲ ಯೋಗಾ ಭ್ಯಾಸ ಕೇಂದ್ರವಾದ `ನಮೋ ಯೋಗ ಭವನ’ದಲ್ಲಿ 50ಕ್ಕೂ ಹೆಚ್ಚು ಮಂದಿ ಯೋಗಾಭ್ಯಾಸದಲ್ಲಿ ತೊಡಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ನಮೋ ಯೋಗ ಭವನ ಹಲವು ವಿಶೇಷತೆಗಳನ್ನು ಮೈದಳೆಯಲಿದೆ. ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿಯ 25 ಲಕ್ಷ ರೂ. ವೆಚ್ಚದಲ್ಲಿ 51ನೇ ವಾರ್ಡಿನ ರಾಮಾನುಜ ರಸ್ತೆಯಲ್ಲಿ `ನಮೋ ಯೋಗ ಭವನ’…

ಬುದ್ಧಿಶಕ್ತಿಯಲ್ಲಿ ಹೆಣ್ಣು ಮಕ್ಕಳೇ ಮುಂದು: ಶಾಸಕ ಎಸ್.ಎ.ರಾಮದಾಸ್
ಮೈಸೂರು

ಬುದ್ಧಿಶಕ್ತಿಯಲ್ಲಿ ಹೆಣ್ಣು ಮಕ್ಕಳೇ ಮುಂದು: ಶಾಸಕ ಎಸ್.ಎ.ರಾಮದಾಸ್

July 8, 2019

ಮೈಸೂರು,ಜು.7(ಎಂಕೆ)- ಬುದ್ಧಿಶಕ್ತಿಯಲ್ಲಿ ಹೆಣ್ಣು ಮಕ್ಕಳೇ ಮುಂದಿದ್ದು, ಉತ್ತಮ ಶಿಕ್ಷಣ ನೀಡುವುದರಿಂದ ದೇಶದ ಪ್ರಗತಿಗೆ ಕೊಡುಗೆ ನೀಡುತ್ತಾರೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು. ಮೈಸೂರಿನ ಗೌರಿಶಂಕರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ವತಿಯಿಂದ ಅಖಿಲ ಭಾರತ ಸಾರ್ವಜನಿಕ ಸಂಪರ್ಕ ಮಹಾ ಸಂಘ(ಪಿಆರ್‍ಸಿಐ), ಯುವ ಸಂವಾಹಕರ ಒಕ್ಕೂಟ(ವೈಸಿಸಿ), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜನ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಹಮ್ಮಿ ಕೊಳ್ಳಲಾಗಿದ್ದ ‘ಹೆಣ್ಣುಮಗು ರಕ್ಷಿಸಿ: ಶಿಕ್ಷಣ ಕೊಡಿಸಿ’ ವಿಶೇಷ ಜಾಗೃತಿ ಕಾರ್ಯಕ್ರಮ…

ವಿದೇಶಕ್ಕಿಂತ ಭಾರತದಲ್ಲಿ ಹೃದ್ರೋಗ ಚಿಕಿತ್ಸೆಗೆ ಉತ್ತಮ ವ್ಯವಸ್ಥೆ
ಮೈಸೂರು

ವಿದೇಶಕ್ಕಿಂತ ಭಾರತದಲ್ಲಿ ಹೃದ್ರೋಗ ಚಿಕಿತ್ಸೆಗೆ ಉತ್ತಮ ವ್ಯವಸ್ಥೆ

July 8, 2019

ಮೈಸೂರು,ಜು.7(ವೈಡಿಎಸ್)-ವಿದೇಶ ಕ್ಕಿಂತ ಭಾರತದಲ್ಲಿ ಹೃದ್ರೋಗ ಚಿಕಿತ್ಸಾ ವ್ಯವಸ್ಥೆ ಚೆನ್ನಾಗಿದ್ದು, ಗುಣಮಟ್ಟದ ಚಿಕಿತ್ಸೆ ಯನ್ನು ತ್ವರಿತವಾಗಿ ನೀಡುವುದರಲ್ಲಿ ಭಾರತ ಪ್ರಪಂಚದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು. ಮೈಸೂರಿನ ಜಯದೇವ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ, ಪರಿಶೀಲಿಸಿದ ನಂತರ ಮಾತನಾಡಿದ ಅವರು, ಅಮೆರಿಕಾ, ಇಂಗ್ಲೆಂಡ್‍ಗಳಲ್ಲಿ ಎಕೋ ಆಂಜಿಯೋಟೆಸ್ಟ್ ಮಾಡಲು 2-3 ವಾರ ಬೇಕಾಗುತ್ತದೆ. ವಿದೇಶದಲ್ಲಿ ಇನ್ಸೂರೆನ್ಸ್ ಇಲ್ಲದೆ ಆಪರೇಷನ್ ಮಾಡುವುದಿಲ್ಲ. ಫಿಜಿಷಿಯನ್ ಶಿಫಾರಸು ಮಾಡಬೇಕು. ಆದರೆ ಜಯದೇವದಲ್ಲಿ 1-2 ದಿನದಲ್ಲಿ ಆಪರೇಷನ್ ಮಾಡುತ್ತೇವೆ….

1 242 243 244 245 246 330
Translate »