ವಿದೇಶಕ್ಕಿಂತ ಭಾರತದಲ್ಲಿ ಹೃದ್ರೋಗ ಚಿಕಿತ್ಸೆಗೆ ಉತ್ತಮ ವ್ಯವಸ್ಥೆ
ಮೈಸೂರು

ವಿದೇಶಕ್ಕಿಂತ ಭಾರತದಲ್ಲಿ ಹೃದ್ರೋಗ ಚಿಕಿತ್ಸೆಗೆ ಉತ್ತಮ ವ್ಯವಸ್ಥೆ

July 8, 2019

ಮೈಸೂರು,ಜು.7(ವೈಡಿಎಸ್)-ವಿದೇಶ ಕ್ಕಿಂತ ಭಾರತದಲ್ಲಿ ಹೃದ್ರೋಗ ಚಿಕಿತ್ಸಾ ವ್ಯವಸ್ಥೆ ಚೆನ್ನಾಗಿದ್ದು, ಗುಣಮಟ್ಟದ ಚಿಕಿತ್ಸೆ ಯನ್ನು ತ್ವರಿತವಾಗಿ ನೀಡುವುದರಲ್ಲಿ ಭಾರತ ಪ್ರಪಂಚದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ಮೈಸೂರಿನ ಜಯದೇವ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ, ಪರಿಶೀಲಿಸಿದ ನಂತರ ಮಾತನಾಡಿದ ಅವರು, ಅಮೆರಿಕಾ, ಇಂಗ್ಲೆಂಡ್‍ಗಳಲ್ಲಿ ಎಕೋ ಆಂಜಿಯೋಟೆಸ್ಟ್ ಮಾಡಲು 2-3 ವಾರ ಬೇಕಾಗುತ್ತದೆ. ವಿದೇಶದಲ್ಲಿ ಇನ್ಸೂರೆನ್ಸ್ ಇಲ್ಲದೆ ಆಪರೇಷನ್ ಮಾಡುವುದಿಲ್ಲ. ಫಿಜಿಷಿಯನ್ ಶಿಫಾರಸು ಮಾಡಬೇಕು. ಆದರೆ ಜಯದೇವದಲ್ಲಿ 1-2 ದಿನದಲ್ಲಿ ಆಪರೇಷನ್ ಮಾಡುತ್ತೇವೆ. ಭಾರತದ ವೈದ್ಯರು 5-6 ಗಂಟೆ ಹೆಚ್ಚು ಕೆಲಸ ಮಾಡುತ್ತಾರೆ. ಯಾವುದೇ ರೋಗಿ ಯನ್ನು ಬೆಡ್ ಇಲ್ಲವೆಂದು ವಾಪಸ್ ಕಳುಹಿಸುವುದಿಲ್ಲ. ಏನಾದರೂ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಭಾರತದಲ್ಲಿನ ಜನರ ಜೀವನ ಶೈಲಿ ಬದಲಾಗುತ್ತಿದ್ದು, ಸೋಮಾರಿತನ, ವಾಯುಮಾಲಿನ್ಯದಿಂದ ಹೃದಯರೋಗ, ಸಕ್ಕರೆ ಕಾಯಿಲೆಗಳು ಹೆಚ್ಚಾಗುತ್ತಿದ್ದು, ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ತುರ್ತು ಚಿಕಿತ್ಸೆಗಾಗಿ ರೋಗಿಗಳು ಬಂದಾಗ ಸಾರ್ವಜನಿಕರು ವೈದ್ಯರಿಗೆ ಸಹಕಾರ ನೀಡಬೇಕು. ತಾಳ್ಮೆ ಕಳೆದುಕೊಂಡು ಹಲ್ಲೆ ಮಾಡಬಾರದು. ಜಯದೇವ ಆಸ್ಪತ್ರೆಯಲ್ಲಿ ಮಾನವೀಯತೆಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಮೊದಲು ಚಿಕಿತ್ಸೆ ನಂತರ ಪೇಮೆಂಟ್ ಎಂಬ ಧ್ಯೇಯವನ್ನಿಟ್ಟು ಕೆಲಸ ಮಾಡು ತ್ತಿದ್ದೇವೆ ಎಂದರು.

ಡಾ.ರವೀಂದ್ರನಾಥ್, ಡಾ.ಸದಾನಂದ್, ಡಾ.ಪಾಂಡುರಂಗಯ್ಯ, ಡಾ.ಸಂತೋಷ್, ಡಾ.ವೀಣಾನಂಜಪ್ಪ, ಡಾ.ನರೇಂದ್ರ, ಡಾ.ದೇವರಾಜ್, ಡಾ.ಭಾರತಿ, ಡಾ.ಜಯ ಪ್ರಕಾಶ್, ನರ್ಸಿಂಗ್ ಅಧೀಕ್ಷಕ ಹರೀಶ್ ಕುಮಾರ್, ಪಿಆರ್‍ಒ ವಾಣಿ ಮೋಹನ್ ಎ.ಕೆ.ಡೇ ಉಪಸ್ಥಿತರಿದ್ದರು.

Translate »