ಮೈಸೂರು, ಜೂ.28(ಆರ್ಕೆಬಿ)- ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಮೈಸೂರಿನ ಪರಿ ವರ್ತನಂ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕ ರಿಗೆ ಕೆಂಪೇಗೌಡ ಸೇವಾ ಭೀಷ್ಮ ಪ್ರಶಸ್ತಿ ಪ್ರದಾನ ಮಾಡ ಲಾಯಿತು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯ ಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಸಾಮಾಜಿಕ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸಿದ ಸಿ.ಜಿ.ಗಂಗಾಧರ್, ಎ.ಎನ್.ರಾಮು, ವಿಜಯಕುಮಾರ್, ಆರ್.ರವಿ ಕುಮಾರ್, ಪ್ರಸನ್ನ ಲಕ್ಷಣ್, ಬಿ.ಇ.ಗಿರೀಶ್ಗೌಡ, ರವಿ, ಎ.ಸತೀಶ್ಗೌಡ, ಹಾಗೂ ಚರಣ್ರಾಜ್ ಅವರಿಗೆ ಮೇಯರ್ ಪುಷ್ಪಲತಾ…
`ಕಾನೂನು ಸಾಕ್ಷರತಾ ರಥ’ಕ್ಕೆ ಜಿಲ್ಲಾ ನ್ಯಾಯಾಧೀಶರಿಂದ ಚಾಲನೆ
June 29, 2019ಮೈಸೂರು, ಜೂ.28 (ಆರ್ಕೆಬಿ)- ಕಾನೂನು ಸಾಕ್ಷರಥಾ ಕಾರ್ಯಕ್ರಮ ಗಳಲ್ಲಿ ಜನಸಾಮಾನ್ಯರಿಗೆ ಕಾನೂನು ಸೇವಾ ಪ್ರಾಧಿಕಾರದ ಧ್ಯೇಯೋದ್ದೇಶ ಗಳು, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯ ಗಳ ಬಗ್ಗೆ ಹಾಗೂ ಮೋಟಾರು ವಾಹನ ಕಾಯ್ದೆ ಸೇರಿದಂತೆ ಇನ್ನಿತರ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಲು ಆಯೋಜಿಸಲಾಗಿರುವ `ಕಾನೂನು ಸಾಕ್ಷರತಾ ರಥ’ಕ್ಕೆ ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಕೆ.ವಂಟಿಗೋಡಿ ಶುಕ್ರವಾರ ಮೈಸೂರು ನ್ಯಾಯಾಲಯದ ಆವರಣ ದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಕಾನೂನು ಸಾಕ್ಷರತಾ ರಥವು ಜು.3ರವ…
ಇಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಣೆ
June 29, 2019ಮೈಸೂರು, ಜೂ.28- ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರ, ವಕೀಲರ ಸಂಘ(ರಿ.) ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸೊಸೈಟಿ ಹಾಗೂ ಸ್ವಯಂ ಸೇವಾ ಸಂಸ್ಥೆ ಗಳ ಸಂಯುಕ್ತಾಶ್ರಯದಲ್ಲಿ ಜೂ.29ರಂದು ಬೆಳಿಗ್ಗೆ 10 ಗಂಟೆಗೆ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಣೆಯನ್ನು ಜೆ.ಎಲ್.ಬಿ ರಸ್ತೆಯ ಮುಡಾ ಕಚೇರಿ ಪಕ್ಕ ಇರುವ ಇನ್ಸ್ಟಿಟ್ಯೂಟ್ ಆಫ್ ಇಂಜಿನಿ ಯರ್ಸ್ನಲ್ಲಿ ಆಯೋಜಿಸಲಾಗಿದೆ. ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಅಧ್ಯಕ್ಷ ಎಸ್.ಕೆ.ಒಂಟಿಗೋಡಿ…
ಈ ಆಸ್ಪತ್ರೆ ಕಟ್ಟಡಕ್ಕೇ ತುರ್ತು ಚಿಕಿತ್ಸೆಯ ಅಗತ್ಯವಿದೆ…!?
June 28, 2019ಮೈಸೂರು, ಜೂ.27(ಪಿಎಂ)- ಅದೊಂದು ಆಸ್ಪತ್ರೆ ಕಟ್ಟಡ. ಅನಾ ರೋಗ್ಯವೆಂದು ಇಲ್ಲಿಗೆ ಬಂದವರು ನಿಜಕ್ಕೂ ಒಂದು ಕ್ಷಣ ಗಾಬರಿ ಆಗಲೇಬೇಕು. ಏಕೆಂದರೆ ಆ ಆಸ್ಪತ್ರೆ ಕಟ್ಟಡ ನೋಡಿದರೆ, ಎಲ್ಲಿ ಕುಸಿದು ಬೀಳುತ್ತದೋ ಎಂಬ ಆತಂಕ ಮೂಡುತ್ತದೆ. ಹೌದು, ಅಷ್ಟರ ಮಟ್ಟಿಗೆ ಶಿಥಿಲಾವಸ್ಥೆಗೆ ತಲುಪಿದೆ. ಕೆ.ಜಿ.ಕೊಪ್ಪಲಿನ ನ್ಯೂ ಕಾಂತ ರಾಜ ಅರಸು ರಸ್ತೆಯಲ್ಲಿರುವ `ಸರ್ಕಾರಿ ಪ್ರಕೃತಿ ಚಿಕಿತ್ಸೆ ಆಸ್ಪತ್ರೆ’ ದುಸ್ಥಿತಿ ಇದು. ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಜೀವ ಕೈಯಲ್ಲಿಡಿದು ಕಾರ್ಯನಿರ್ವಹಿಸುವಂತಾ ಗಿದ್ದರೆ, ಚಿಕಿತ್ಸೆಗೆ ಬಂದವರೂ ಬೇಗ ಜಾಗ ಖಾಲಿ…
ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಹೆಚ್ಚಿಸುವತ್ತ ಪುಸ್ತಕ ಪ್ರಾಧಿಕಾರ ಪ್ರಯತ್ನಿಸಬೇಕಿದೆ
June 28, 2019ಮೈಸೂರು, ಜೂ.27(ಎಸ್ಬಿಡಿ)- ಓದುಗರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಗಂಭೀರ ಚಿಂತನೆ ನಡೆಸಬೇಕೆಂದು ಹಿರಿಯ ಶಾಸಕ, ಸಾಹಿತಿ ಅಡಗೂರು ಹೆಚ್.ವಿಶ್ವನಾಥ್ ಸಲಹೆ ನೀಡಿದರು. ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರು ರಂಗ ಮಂದಿರದಲ್ಲಿ ಗುರುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಹಿಮಾ ಪ್ರಕಾಶನದ ಸಹ ಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಕøತಿ ಚಿಂತಕ, ಅಂಕಣಕಾರ ಗುಬ್ಬಿಗೂಡು ರಮೇಶ್ ಅವರ `ಮೈಸೂರು ಮಿತ್ರ’ದಲ್ಲಿ ಪ್ರಕಟಗೊಂಡ ಅಂಕಣಗಳ ಸಂಕಲನ `ಸಾಮಾನ್ಯನೊಬ್ಬನ ಸ್ವಗತ’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು….
ಥೈಲ್ಯಾಂಡ್ ಕರಾಟೆ ಚಾಂಪಿಯನ್ ಶಿಪ್ಗೆ ಮೈಸೂರು ಯುವಕ ಆಯ್ಕೆ
June 28, 2019ಮೈಸೂರು,ಜೂ.27(ವೈಡಿಎಸ್)- ಮೈಸೂರಿನ ಯುವಕರೊಬ್ಬರು ಜುಲೈ10 ರಂದು ಥೈಲ್ಯಾಂಡ್ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿ ಯನ್ ಶಿಪ್ಗೆ ಆಯ್ಕೆಯಾಗಿದ್ದಾರೆ. ರಾಘ ವೇಂದ್ರನಗರ ನಿವಾಸಿ ರಮೇಶ್ ಮತ್ತು ಅನಿತಾ ದಂಪತಿ ಪುತ್ರ ಆರ್.ರೋಹಿತ್, ಕರಾಟೆ ಚಾಂಪಿಯನ್ಶಿಪ್ಗೆ ಆಯ್ಕೆ ಯಾಗಿದ್ದಾರೆ. ಸದ್ಯ ಮೈಸೆಮ್ ಕಾಲೇಜಿ ನಲ್ಲಿ ದ್ವಿತೀಯ ವರ್ಷದ ಇಂಜಿನಿಯ ರಿಂಗ್ ವ್ಯಾಸಂಗ ಮಾಡುತ್ತಿದ್ದು, ಓದಿನ ಜತೆಗೆ ಕರಾಟೆಯಲ್ಲೂ ಸಾಧನೆಗೈಯ್ಯು ತ್ತಿದ್ದಾರೆ. ಪೋಷಕರು ಅವರ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇವರು 10 ವರ್ಷದಿಂದ ಕರಾಟೆ ಅಭ್ಯಾಸ ಮಾಡುತ್ತಿದ್ದು, ಇದುವರೆಗೆ ರಾಜ್ಯ,…
ಮೈಸೂರು ಮೃಗಾಲಯಕ್ಕೆ ಹೆಣ್ಣು ಚಿಂಪಾಂಜಿ, ಜೋಡಿ ಸಿಂಹಗಳ ಸೇರ್ಪಡೆ
June 28, 2019ಮೈಸೂರು, ಜೂ.27(ಆರ್ಕೆಬಿ)- ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಇದೀಗ ಸಿಂಗಾಪುರದಿಂದ ಒಂದು ಹೆಣ್ಣು ಚಿಂಪಾಂಜಿ ಮತ್ತು ಒಂದು ಜೊತೆ ಭಾರತೀಯ ಸಿಂಹಗಳು ಸೇರ್ಪಡೆ ಯಾಗಿವೆ. ಜೂ.26ರಂದು ಸಿಂಗಾಪುರದಿಂದ 14 ವರ್ಷ ವಯಸ್ಸಿನ `ರ್ಹಾ’ ಎಂಬ ಹೆಸರಿನ ಹೆಣ್ಣು ಚಿಂಪಾಂಜಿ ಬಂದಿದ್ದರೆ, ಗುಜರಾತಿನ ಸಕ್ಕರ್ಬಾಗ್ ಮೃಗಾಲಯದಿಂದ ಬಂದಿದ್ದ 2 ಜೊತೆ ಭಾರತೀಯ ಸಿಂಹಗಳ ಪೈಕಿ ಒಂದು ಜೊತೆ ಸಿಂಹಗಳನ್ನು ಬೆಂಗಳೂರಿನ ಬನ್ನೇರುಘಟ್ಟ ಜೈವಿನ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ. ಮೃಗಾಲಯದಲ್ಲಿರುವ ಒಂಟಿ ಪ್ರಾಣಿಗಳ ಜೊತೆಗೂಡಿಸುವಿಕೆ ಹಾಗೂ ಅನುಮೋದಿತ ಪ್ರಾಣಿ ಸಂಗ್ರಹಣಾ ಯೋಜನೆಯನ್ನು ಉತ್ಕøಷ್ಟಗೊಳಿ…
ಹತ್ತಾರು ಸಮಸ್ಯೆಗಳ ಸಂಬಂಧ ಹರಿದು ಬಂದ ದೂರುಗಳು
June 28, 2019ಮೈಸೂರು, ಜೂ.27(ಆರ್ಕೆಬಿ)- ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ಗುರುವಾರ 59ನೇ ವಾರ್ಡ್ ವ್ಯಾಪ್ತಿಯ ವಿವೇಕಾನಂದನಗರದಲ್ಲಿ ಕೈಗೊಂಡ ಜನ ಸ್ಪಂದನಾ ಯಾತ್ರೆ ಸಂದರ್ಭದಲ್ಲಿ ಮನೆ ಮುಂದೆ ನಿಲ್ಲಿ ಸುವ ವಾಹನಗಳ ಪೆಟ್ರೋಲ್, ಬ್ಯಾಟರಿ, ಸೈಕಲ್ ಕಳವು, ಯುಜಿಡಿ ಸಮಸ್ಯೆ, ಸ್ವಚ್ಛತೆಯ ಕೊರತೆ, ಪಾರ್ಕಿಂಗ್ ಅವ್ಯವಸ್ಥೆ, ಬಸ್ ಸೌಲಭ್ಯವಿಲ್ಲ. ವೈನ್ಷಾಪ್ಗಳಲ್ಲಿ ಚಿಲ್ಲರೆ ಮದ್ಯ ಮಾರಾಟ, ಇಂತಹ ಹತ್ತಾರು ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದವು. ಶಾಸಕ ರಾಮದಾಸ್ ಅವರು ಎಂ.ಬ್ಲಾಕ್ ಗಣಪತಿ ದೇವಸ್ಥಾನ, ಐಶ್ವರ್ಯನಗರ, ಬನಶಂಕರಿ ದೇವಸ್ಥಾನ, ಎಂ.ಬ್ಲಾಕ್…
ನಿವೃತ್ತ ಕಾರ್ಮಿಕರ ಪಿಂಚಣಿ ಕನಿಷ್ಠ 7,500 ರೂ.ಗೆ ಹೆಚ್ಚಿಸಲು ಆಗ್ರಹ
June 28, 2019ಜೂ.29ಕ್ಕೆ ಸಂಸದರಿಗೆ ಮನವಿ ಸಲ್ಲಿಸಲು ನಿರ್ಧಾರ ಮೈಸೂರು,ಜೂ.27(ಪಿಎಂ)-ಕಾರ್ಖಾನೆ ಗಳ ನಿವೃತ್ತ ಕಾರ್ಮಿಕರ ಪಿಂಚಣಿಯನ್ನು ಕನಿಷ್ಠ 7,500 ರೂ.ಗೆ ಹೆಚ್ಚಳ ಮಾಡ ಬೇಕೆಂದು ಒತ್ತಾಯಿಸಿರುವ ಕರ್ನಾಟಕ ರಾಜ್ಯ ಇಪಿಎಫ್ ನಿವೃತ್ತ ನೌಕರರ ಒಕ್ಕೂಟ, ಈ ಸಂಬಂಧ ಜೂ.29ರಂದು ಹಮ್ಮಿಕೊಂಡಿ ರುವ ಒಕ್ಕೂಟದ ಮಹಾಸಭೆಯಲ್ಲಿ ಸಂಸದ ರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಒಕ್ಕೂಟದ ಅಧ್ಯಕ್ಷ ಎಸ್.ಪಿ.ನಿಂಗೇ ಗೌಡ, ಅಂದು ಬೆಳಿಗ್ಗೆ 10.30ಕ್ಕೆ ಮೈಸೂ ರಿನ ಪುರಭವನದಲ್ಲಿ ಮಹಾಸಭೆ…
ಇಂದು ಸಾಂಪ್ರದಾಯಿಕ ತಳಿಗಳ ಬೀಜ ಮೇಳಕ್ಕೆ ಚಾಲನೆ
June 28, 2019ಮೈಸೂರು, ಜೂ.27(ಪಿಎಂ)- ಹೈಬ್ರಿಡ್ ಮತ್ತು ಕುಲಾಂತರಿ ಬೀಜಗಳಿಗೆ ಬದಲಾಗಿ ನಾಡಿನ ಸಾಂಪ್ರದಾಯಿಕ ತಳಿಗಳಿಗೆ ಉತ್ತೇಜನ ನೀಡುವ ನಿಟ್ಟಿ ನಲ್ಲಿ ಸಹಜ ಸಮೃದ್ಧ ಬಳಗ, ನಬಾರ್ಡ್, ಕೃಷಿ ಇಲಾಖೆ ಸಂಯುಕ್ತಾಶ್ರ ಯದಲ್ಲಿ ಜೂ.28 ರಿಂದ 30ರವರೆಗೆ ಮೂರು ದಿನಗಳ `ಮುಂಗಾರು ಬೀಜ ಮೇಳ’ ಆಯೋಜಿಸಲಾಗಿದೆ. ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಈ ಬೀಜ ಮೇಳ ನಡೆಯಲಿದ್ದು, ರಾಜ್ಯದ 30ಕ್ಕೂ ಹೆಚ್ಚು ಬೀಜ ಸಂರಕ್ಷಕರ ಗುಂಪುಗಳು ಇದರಲ್ಲಿ ಪಾಲ್ಗೊ ಳ್ಳಲಿವೆ. ದೇಸಿ ಭತ್ತದ 600ಕ್ಕೂ ಹೆಚ್ಚ್ಚಿನ ತಳಿಗಳ ಪ್ರದರ್ಶನ ದೊಂದಿಗೆ…










