ಮೈಸೂರು, ಜೂ.30(ಪಿಎಂ)- ಅಪಾಯಕಾರಿ ತಾಪಮಾನದಿಂದ ಮೈಸೂರು ನಗರವನ್ನು ದೂರವಿಡುವ ಹಾಗೂ ಪರಿ ಸರ ಸಂರಕ್ಷಿಸುವ ಸದುದ್ದೇಶದೊಂದಿಗೆ ಲಲಿತ ಮಹಲ್ ಅರಮನೆ ಹೋಟೆಲ್ ಬಳಿಯ ಹೆಲಿಪ್ಯಾಡ್ ಸುತ್ತಮುತ್ತ ಗಿಡ ನೆಡುವ ಬೃಹತ್ ಕಾರ್ಯಕ್ರಮಕ್ಕೆ ಭಾನು ವಾರ ಬೆಳಿಗ್ಗೆ ಚಾಲನೆ ನೀಡಲಾಯಿತು. ಅರಣ್ಯ ಇಲಾಖೆ ಸಹಯೋಗದಲ್ಲಿ ರಘುಲಾಲ್ ಅಂಡ್ ಕಂಪನಿ ಮಾಲೀಕ ರಾದ ರಾಘವನ್ ಹಾಗೂ ಮೈಸೂರು ಸ್ಪೋಟ್ರ್ಸ್ ಕ್ಲಬ್ ಕಾರ್ಯದರ್ಶಿ ಎಂ. ತಿರುಮಲ ಬಾಬು ಅವರ ವತಿಯಿಂದ ಈ ಬೃಹತ್ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಾರದ ಕಾಲ…
ಕೇರಳದ ಪುಲ್ಪಳ್ಳಿ ಬಳಿ ಬೈಕ್ ಸವಾರರ ಬೆನ್ನತ್ತಿದ ಹುಲಿರಾಯ
July 1, 2019ಕೂದಲೆಳೆ ಅಂತರದಲ್ಲಿ ಪಾರಾದ ಇಬ್ಬರು ಸವಾರರು ಹುಲಿ ಬೆನ್ನತ್ತಿದ್ದ ವೀಡಿಯೊ ವೈರಲ್ ಮೈಸೂರು, ಜೂ.30(ಎಂಟಿವೈ)-ಕೇರಳದ ವೈನಾಡು ಅರಣ್ಯ ಪದೇಶದ ರಸ್ತೆಯಲ್ಲಿ ಸುಲ್ತಾನ್ ಬತೇರಿಯಿಂದ ಪುಲ್ಪಳ್ಳಿಗೆ ಬೈಕೊಂದರಲ್ಲಿ ಇಬ್ಬರು ಸವಾರರು ತೆರಳುತ್ತಿದ್ದಾಗ ಹುಲಿ ಯೊಂದು ಬೈಕ್ ಅನ್ನು ಬೆನ್ನತ್ತಿದ ಘಟನೆ ಶನಿವಾರ ಸಂಜೆ ನಡೆದಿದೆ. ವೈನಾಡು ನಿವಾಸಿ ವಿಮಲ್ ಎಂಬಾತ ತನ್ನ ಸ್ನೇಹಿತನೊಂದಿಗೆ ಶನಿವಾರ ಸಂಜೆ 4.30ರಲ್ಲಿ ಬೈಕ್ನಲ್ಲಿ ತೆರಳುತ್ತಿದ್ದಾಗ ಅರಣ್ಯ ಪ್ರದೇಶದ ರಸ್ತೆ ಬದಿಯಲ್ಲಿದ್ದ ಹುಲಿ ಹಠಾತ್ತನೆ ಬೈಕ್ ಅನ್ನು ಬೆನ್ನತ್ತಿದೆ. ಹುಲಿ ಬರುತ್ತಿರುವುದನ್ನು ಗಮನಿಸಿದ ಸವಾರ,…
ಪಂಜಾಬ್ ಕೃಷಿ ದುಸ್ಥಿತಿ ತಲುಪಲು ಕೃಷಿ ವಿಜ್ಞಾನಿಗಳೇ ಕಾರಣ
July 1, 2019ಮೈಸೂರು,ಜೂ.30(ಪಿಎಂ)- ಜಗತ್ತಿನ ಅತಿ ಹೆಚ್ಚು ನೀರಾವರಿ ಪ್ರದೇಶವಾದ ಪಂಜಾಬ್ ಧಾನ್ಯಗಳ ಕಣಜ ಎಂದೇ ಹೆಸರಾಗಿತ್ತು. ಆದರೆ ಅಲ್ಲಿ ಇಂದಿನ ಕೃಷಿ ದುಸ್ಥಿತಿಗೆ ತಲುಪಿದ್ದು, ಇದಕ್ಕೆ ಕೃಷಿ ವಿಜ್ಞಾನಿ ಗಳೇ ಕಾರಣ ಎಂದು ವಿಜ್ಞಾನ ಲೇಖಕ ನಾಗೇಶ್ ಹೆಗಡೆ ವಿಷಾದಿಸಿದರು. ಮೈಸೂರಿನ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಅಭಿರುಚಿ ಪ್ರಕಾಶನ, ಚಿಂತನ ಚಿತ್ತಾರ ಪ್ರಕಾಶನದ ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚಿನ್ನಸ್ವಾಮಿ ವಡ್ಡಗೆರೆ ಅವರ `ಬಂಗಾರದ ಮನುಷ್ಯರು-ಬೆಳಕಿನ ಬೇಸಾಯದ ಕಥಾನಕ’ ಹಾಗೂ `ಕೃಷಿ ಸಂಸ್ಕøತಿ ಕಥನ’ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ…
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚೆನ್ನಪ್ಪಗೆ ಅಭಿನಂದನೆ
July 1, 2019ಮೈಸೂರು,ಜೂ.30(ಎಸ್ಪಿಎನ್)-ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೈಸೂರು ಘಟಕದ ಸಹಾಯಕ ನಿರ್ದೇಶಕ ಹನೂರು ಚೆನ್ನಪ್ಪ ಮತ್ತು ಪತ್ನಿ ಆರ್.ಮಂಗಳ ಅವರನ್ನು ಲಕ್ಷ ರೂ.ಮೊತ್ತದ ಚೆಕ್, ಅಭಿನಂದನಾ ಫಲಕ ನೀಡಿ ಹಿರಿಯ ಸಾಹಿತಿ ಡಾ.ಮಳಲಿ ವಸಂತಕುಮಾರ್ ಅಭಿನಂದಿಸಿದರು. ಮೈಸೂರು ವಿಜಯನಗರದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಕಸಾಪ ಮತ್ತು ಕರ್ನಾಟಕ ರಾಜ್ಯ ಕನ್ನಡಿ ಗರ ಆಸರೆ ಮಂಟಪ, ಶ್ರೀ ಜಗಜ್ಯೋತಿ ಬಸವೇಶ್ವರ ಅಕ್ಕ ಮಹಾದೇವಿ ಸೇವಾ ಪ್ರತಿಷ್ಠಾನ ಹಾಗೂ ಭಾರತೀಯ ಸಾಂಸ್ಕø ತಿಕ…
ದೇಶದ ಆಡಳಿತ ಚುಕ್ಕಾಣಿ ದ್ರಾವಿಡರ ಕೈಯಲ್ಲಿರಬೇಕು: ಆದಿದ್ರಾವಿಡ ಮುಖಂಡ ವಿ.ಎನ್.ಸುಬ್ರಹ್ಮಣ್ಯ
July 1, 2019ಮೈಸೂರು,ಜೂ.30(ಎಸ್ಪಿಎನ್)- ಭಾರತದಲ್ಲಿ ದ್ರಾವಿಡರು ಅತೀ ಹೆಚ್ಚು ಜನಸಂಖ್ಯೆಯಿದ್ದು, ದೇಶದ ಆಡಳಿತ ಚುಕ್ಕಾಣಿ ನಮ್ಮ ಕೈಯಲ್ಲಿರಬೇಕಿತ್ತು ಎಂದು ಆದಿದ್ರಾವಿಡ ಸಮಾಜದ ಹಿರಿಯ ಮುಖಂಡ ಬಿ.ಎಸ್.ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು. ನಗರದ ಎಂಜಿನಿಯರ್ಗಳ ಸಂಸ್ಥೆ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಮೈಸೂರು ನಗರ ಶಾಖೆ ವತಿಯಿಂದ ಆಯೋಜಿಸಿದ್ದ ‘ದಲಿತರ ಸ್ಥಿತಿಗತಿಗಳ ಚಿಂತನಾ ಸಭೆ ಮತ್ತು ಅಭಿನಂದನಾ ಕಾರ್ಯಕ್ರಮ ಹಾಗೂ ಮೈಸೂರು ನಗರ ಸಮಿತಿ ಸರ್ವ ಸದಸ್ಯರ ಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆದರೆ, ನಮ್ಮಲ್ಲಿನ ಸಂಘಟನಾ ಕೊರತೆಯಿಂದ ಅದು…
ಆಷಾಢ ಶುಕ್ರವಾರಗಳಂದು ಪೊಲೀಸ್ ಸೇರಿದಂತೆ ಎಲ್ಲಾ ಸರ್ಕಾರಿ ವಾಹನಗಳಿಗೂ ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿರ್ಬಂಧಕ್ಕೆ ಚಿಂತನೆ
July 1, 2019ಮೈಸೂರು, ಜೂ.30(ಆರ್ಕೆ)- ಭಕ್ತಾದಿ ಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ದಿಂದ ಆಷಾಢ ಶುಕ್ರವಾರಗಳಂದು ಪೊಲೀಸ್ ಸೇರಿದಂತೆ ಎಲ್ಲಾ ಸರ್ಕಾರಿ ವಾಹನಗಳಿಗೂ ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಸಹಸ್ರಾರು ಮಂದಿ ಭಕ್ತರು ದೇವರ ದರ್ಶನಕ್ಕೆ ಬರು ವುದರಿಂದ ಚಾಮುಂಡಿಬೆಟ್ಟದಲ್ಲಿ ಉಂಟಾ ಗುವ ನೂಕು-ನುಗ್ಗಲು, ಸಂಚಾರ ದಟ್ಟಣೆ ನಿಭಾಯಿಸಲು ಪ್ರತೀ ವರ್ಷದಂತೆ ಈ ಬಾರಿಯೂ ಸಾರ್ವಜನಿಕರ ವಾಹನ ಪ್ರವೇಶ ನಿಷೇಧಿಸಲಾಗಿದ್ದು, ಲಲಿತ ಮಹಲ್ ಹೆಲಿ ಪ್ಯಾಡ್ನಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಅಲ್ಲಿಂದ ನಗರ ಸಾರಿಗೆ ಬಸ್ಸುಗಳಲ್ಲಿ ಬೆಟ್ಟಕ್ಕೆ…
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ
July 1, 2019ಮೈಸೂರು,ಜೂ.30(ವೈಡಿಎಸ್)-ಸರಸ್ವತಿಪುರಂನ ಶ್ರೀಕೃಷ್ಣಧಾಮದ ಶ್ರೀಕೃಷ್ಣ ಸಭಾಭವನದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಭಾನುವಾರ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶ್ರೀಕೃಷ್ಣ ಮಿತ್ರ ಮಂಡಳಿ, ಶ್ರೀಕೃಷ್ಣ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ಎಸ್ ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಹೆಚ್.ಕೆ. ತೇಜಸ್, ವಿ.ಹಿಮಾನಿ, ಎಂ.ಎನ್. ಅನಘ, ಎನ್.ಶ್ರೀಹರಿ, ಜಿ.ಸಾಧನಾ, ಎಸ್.ಕೀರ್ತನಾ, ಟಿ.ಆದಿತ್ಯ, ಮಾನ್ಯ ಎಸ್.ರಾವ್, ಜಿ.ಧೃತಿ, ಬಿ.ಚೇತನ, ಎಂ.ಅನಘ, ಎಸ್.ಕಾವ್ಯ, ಆರ್.ರಾಮಂತ್, ಎಸ್.ಸೊರಭ್, ಹೆಚ್.ವಿ.ಸಾಗರ್, ವಿ.ಅನನ್ಯ ಸೇರಿದಂತೆ 48 ಮಂದಿ. ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಕೆ.ಸ್ನೇಹ, ಜಿ.ಅಜಿತ್ಕುಮಾರ್,…
ಮಲೇರಿಯಾ ನಿಯಂತ್ರಣಕ್ಕೆ ಗಮನಹರಿಸಿ ಆರೋಗ್ಯ ಸಿಬ್ಬಂದಿಗೆ ಶಾಸಕ ಕೆ.ಮಹದೇವ್ ಸಲಹೆ
July 1, 2019ಸರಗೂರು, ಜೂ.30(ನಾಗೇಶ್)- ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ಹೆಚ್.ಡಿ.ಕೋಟೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಸಂಸದ ವಿ.ಶ್ರೀನಿವಾಸ್ಪ್ರಸಾದ್ ಭರವಸೆ ನೀಡಿದರು. ಪಟ್ಟಣದ ಅಖಿಲ ನಾಮಧಾರಿಗೌಡ ಸಮುದಾಯ ಭವನದಲ್ಲಿ ನಡೆದ ಅಖಿಲ ಕರ್ನಾಟಕ ನಾಮಧಾರಿಗೌಡ ಸಂಘದ ನೂತನ ಕಟ್ಟಡ, ವಾರ್ಷಿಕ ಮಹಾಸಭೆ ಸಮಾರಂಭ ಉದ್ಘಾಟಿಸಿ ಅವರು ಮಾತ ನಾಡಿದರು. ಗಡಿನಾಡು ಎಂದು ಬಿಂಬಿ ಸಲ್ಪಡುವ ಕೋಟೆಯಲ್ಲಿ ವನಸಿರಿ ಸಂಪತ್ತು ಅಪಾರ ಪ್ರಮಾಣದಲ್ಲಿದೆ. ಇಂಥ ತಾಲೂ ಕಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನನ್ನ ಅನು ಭವವನ್ನು ಅಭಿವೃದ್ಧಿಗಾಗಿ ಮೀಸಲಿಟ್ಟು, ಮತದಾರರು ನೀಡಿರುವ…
ಮಲೇರಿಯಾ ನಿಯಂತ್ರಣಕ್ಕೆ ಗಮನಹರಿಸಿ
July 1, 2019ಪಿರಿಯಾಪಟ್ಟಣ, ಜೂ.30(ರಮೇಶ್)- ಮಲೇರಿಯಾ ರೋಗ ನಿಯಂತ್ರಣಕ್ಕೆ ತಂದಂತೆ ಡೆಂಗ್ಯೂ, ಚಿಕುನ್ ಗುನ್ಯಾ ರೋಗ ತಡೆಗೂ ಆರೋಗ್ಯ ಇಲಾಖೆ ಸಿಬ್ಬಂದಿ ಗಮನಹರಿಸಬೇಕು ಎಂದು ಶಾಸಕ ಕೆ. ಮಹದೇವ್ ಸಲಹೆ ನೀಡಿದರು. ಪಿರಿಯಾಪಟ್ಟಣ ತಾಲೂಕು ಆಸ್ಪತ್ರೆ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಒಂದೂ ಮಲೇರಿಯಾ ಪ್ರಕರಣ ಪತ್ತೆಯಾಗದಿರುವುದರ ಹಿಂದೆ ಆರೋಗ್ಯ ಇಲಾಖೆಯ ಶ್ರಮವಿದೆ. ಜನರಲ್ಲಿ ಜಾಗೃತಿ ಮೂಡಿಸಿ ಖಾಯಿಲೆ ಬಾರದಂತೆ ಕ್ರಮವಹಿಸಿರುವುದು ಶ್ಲಾಘನೀಯ. ಈ ಹಿಂದೆ ತಿಗಣೆ…
ತ್ರಿವೇಣಿ ಸಂಗಮದಲ್ಲಿ ಸ್ವಚ್ಛತಾ ಕಾರ್ಯ
July 1, 2019ತಿ.ನರಸೀಪುರ, ಜೂ. 30-ವಿವಿಧ ಸಂಘಟನೆಗಳಿಂದ ಪಟ್ಟಣದ ತ್ರಿವೇಣಿ ಸಂಗಮ ದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಪಟ್ಟಣದಲ್ಲಿನ ಶ್ರೀ ಗುಂಜಾ ನರಸಿಂಹಸ್ವಾಮಿ ಮತ್ತು ಅಗಸ್ತ್ಯೇಶ್ವರ ದೇವಾಲಯ ಗಳ ಮಧ್ಯೆಭಾಗದಲ್ಲಿ ಹರಿ ಯುವ ಕಾವೇರಿ, ಕಬಿನಿ ಹಾಗೂ ಸ್ಪಟಿಕ ಸರೋವರದ ಸಂಗಮದ ಸ್ಥಳದಲ್ಲಿ ಬೆಂಗಳೂರಿನ ಪೂರ್ಣ ಪ್ರಮತಿ ಶಾಲೆ, ತಿ.ನರಸೀಪುರ ಪುರಸಭೆ, ಯುವ ಬಿಗ್ರೇಡ್, ಶ್ರೀವೀರಾಂಜನೇಯ ಧರ್ಮ ಜಾಗೃತಿ ಬಳಗ ಹಾಗೂ ಜ್ವಾಲಾಮುಖಿ ಗ್ರೂಪ್ ಸದಸ್ಯರು ಒಟ್ಟಾಗಿ ನದಿ ಪಾತ್ರ ಸ್ವಚ್ಛಗೊಳಿಸಿದರು. ಈ ವೇಳೆ ಪೂರ್ಣ ಪ್ರಮತಿ ಶಾಲೆ ಪ್ರಾಂಶುಪಾಲೆ…










