ಮೈಸೂರು,ಜೂ.29(ಎಸ್ಪಿಎನ್)-ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾದರೆ, ಪ್ರತಿಯೊಬ್ಬ ರಲ್ಲೂ ಕಲೆ, ಸಾಹಿತ್ಯದ ಅಭಿರುಚಿ ಬೆಳೆಸ ಬೇಕು ಎಂದು ಸಾಹಿತ್ಯ ಅಭಿಮಾನಿಯೂ ಆದ ಖ್ಯಾತ ವೈದ್ಯ ಡಾ.ಎಚ್.ಬಿ. ರಾಜ ಶೇಖರ್ ಅಭಿಪ್ರಾಯಪಟ್ಟರು. ಮೈಸೂರು ಜೆಎಲ್ಬಿ ರಸ್ತೆಯ ನಾದಬ್ರಹ್ಮ ಸಭಾಂಗಣದಲ್ಲಿ ಹೊಯ್ಸಳ ಕನ್ನಡ ಸಂಘ ವತಿಯಿಂದ ಆಯೋಜಿಸಿದ್ದ ಪುಸ್ತಕ ಬಿಡುಗಡೆ, ಪೆÇ್ರ.ಕೆ. ಭೈರವಮೂರ್ತಿ ಯವರಿಗೆ ಜನ್ಮದಿನದ ಶುಭ ಹಾರೈಕೆ ಮತ್ತು ಅಂಬಿ ಕಾವ್ಯನಮನ ಕವಿಗೋಷ್ಠಿ ಉದ್ಘಾ ಟಿಸಿ ಅವರು ಮಾತನಾಡಿದರು. ಕಲೆ, ಸಾಹಿತ್ಯದ ಅಭಿರುಚಿ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿದರೆ…
ಡಮ್ಮಿ ಕೌನ್ಸಿಲಿಂಗ್ಗೆ ಬೆಚ್ಚಿದ ಶಿಕ್ಷಕರು ಪ್ರತಿಭಟನೆ ಕೈ ಬಿಟ್ಟು ಕೌನ್ಸಿಲಿಂಗ್ಗೆ ಓಡೋಡಿ ಬಂದರು!
June 30, 2019ಮೈಸೂರು,ಜೂ.29(ಎಸ್ಪಿಎನ್)-`ಅಂತರ ಘಟಕ ವರ್ಗಾವಣೆ’ ರದ್ದುಗೊಳಿಸುವಂತೆ ಒತ್ತಾಯಿಸಿ ಕೌನ್ಸಿಲಿಂಗ್ ಹಾಜರಾಗದೇ ಪ್ರತಿಭಟನೆ ನಡೆಸುತ್ತಿದ್ದ ಹೆಚ್ಚುವರಿ ಪ್ರೌಢ ಶಾಲಾ ಶಿಕ್ಷಕರು `ಡಮ್ಮಿ ಕೌನ್ಸಿಲಿಂಗ್’ ಹೆದರಿ ಪ್ರತಿಭಟನೆ ಕೈಬಿಟ್ಟು ಶನಿವಾರ ಸಂಜೆ ಕೌನ್ಸಿಲಿಂಗ್ಗೆ ಹಾಜರಾದರು. ಪದನಿಮಿತ್ತ ಸಹ ಉಪನಿರ್ದೇಶಕರ ಕಚೇರಿ ಬಳಿ ಪ್ರೌಢಶಾಲಾ ಸಹಶಿಕ್ಷಕರ ಸಂಘ ಹಾಗೂ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಬೆಂಬಲದೊಂದಿಗೆ ಹೆಚ್ಚು ವರಿ ಪ್ರೌಢಶಾಲಾ ಶಿಕ್ಷಕರು ಇಂದು ಬೆಳಗಿನಿಂದಲೂ ಪ್ರತಿಭಟನೆ ನಡೆಸುತ್ತಿದ್ದರು. ಇದರಿಂದ ತಾಳ್ಮೆ ಕಳೆದುಕೊಂಡ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರತಿಭಟನೆ ನಡೆಸುತ್ತಿದ್ದ ಹೆಚ್ಚುವರಿ ಶಿಕ್ಷಕರನ್ನು…
ಕಾಯ್ದೆಗಳಿಂದಷ್ಟೇ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಸಾಧ್ಯವಾಗದು, ಸಾರ್ವಜನಿಕ ಸ್ಪಂದನೆಯೂ ಮುಖ್ಯ
June 30, 2019ಮೈಸೂರು,ಜೂ.29(ಪಿಎಂ)- ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕಾಯ್ದೆ ಗಳಿದ್ದರಷ್ಟೇ ಸಾಲದು. ಸಾರ್ವಜನಿಕ ಸ್ಪಂದ ನೆಯೂ ಅಷ್ಟೇ ಮುಖ್ಯ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು. ಮೈಸೂರಿನ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸೊಸೈಟಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲಾ…
ಸಂಗೀತ ಪ್ರಿಯರ ಮನತಣಿಸಿದ ಕರ್ನಾಟಿಕ್ ಸಂಗೀತ ಗಾಯನ
June 30, 2019ಮೈಸೂರು,ಜೂ.29(ಎಂಕೆ)- ನಗರದ ಕುವೆಂಪುನಗರದಲ್ಲಿರುವ ಗಾನ ಭಾರತಿ ವೀಣೆ ಶೇಷಣ್ಣ ಭವನದಲ್ಲಿ ರಾಗ ಮ್ಯೂಸಿಕ್ ಅಕಾಡೆಮಿ ವತಿಯಿಂದ ವಿದ್ವಾನ್ ಹೆಮ್ಮಿಗೆ ಪ್ರಶಾಂತ್ ನೇತೃತ್ವದಲ್ಲಿ ಆಯೋಜಿಸಿದ್ದ ಕರ್ನಾಟಿಕ್ ಸಂಗೀತ ಗಾಯನ ಸಂಗೀತ ಪ್ರಿಯರ ಮನತಣಿಸಿತು. ವಿದ್ವಾನ್ ಹೆಮ್ಮಿಗೆ ಪ್ರಶಾಂತ್, ತ್ಯಾಗ ರಾಜರ ‘ನಿನ್ನುವಿನ ಸುಖಮಯಿ ಗಾನ’, ‘ಎಂಥಾ ವೆದುಕೊಂಡು’, ‘ಕರಹಪ್ರಿಯ’ ಕಿರ್ತನೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ‘ಸಮರ ಜಾನಕಿ ಶುಭ ಚೈತ್ರ’, ಮಂಕುತಿಮ್ಮ ಕಗ್ಗದ ‘ದೀನಾ ನಾನು ಸಮಸ್ತ ಲೋಕಕ್ಕೆ ದಾನಿ ನೀನು’, ‘ಸಾಗರ ಸಯನ’…
ಮೈಸೂರಿನ 4 ಮುಖ್ಯ ರಸ್ತೆಗಳಲ್ಲಿ ಸ್ವಾಗತ ಕಮಾನು ನಿರ್ಮಿಸಲು ಪಾಲಿಕೆ ಚಿಂತನೆ
June 30, 2019ಮೈಸೂರು,ಜೂ.29(ಆರ್ಕೆ)-ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ 4 ಮುಖ್ಯ ರಸ್ತೆಗಳಲ್ಲಿ ಸುಂದರ ಸ್ವಾಗತ ಕಮಾನುಗಳನ್ನು ಅಳವಡಿಸಲು ಮೈಸೂರು ಮಹಾನಗರಪಾಲಿಕೆ ಚಿಂತನೆ ನಡೆಸಿದೆ. ಮೈಸೂರು-ಬೆಂಗಳೂರು ಹೆದ್ದಾರಿಯ ಕೆ.ಆರ್. ಮಿಲ್ ಸಮೀಪ, ಹುಣಸೂರು ರಸ್ತೆಯ ಹೂಟ ಗಳ್ಳಿ ಬಳಿ, ನಂಜನಗೂಡು ರಸ್ತೆಯ ರಿಂಗ್ ರೋಡ್ ಜಂಕ್ಷನ್ ಸಮೀಪ ಹಾಗೂ ಬನ್ನೂರು ರಸ್ತೆಯ ದೇವೇಗೌಡ ಸರ್ಕಲ್ ಸಮೀಪ ಭವ್ಯ ಸ್ವಾಗತ ಕಮಾನುಗಳನ್ನು ಅಳವಡಿಸಿ, ಮೈಸೂರು ನಗರಕ್ಕೆ ಆಗಮಿಸುವವರಿಗೆ ಸ್ವಾಗತ ಕೋರುವ ಹಾಗೂ ಪ್ರಮುಖ ಪ್ರವಾಸಿ ತಾಣಗಳ ಹೆಸರು ಮತ್ತು ಮಾರ್ಗಸೂಚಿಯನ್ನು ಬಿಂಬಿಸಲು ಮುಂದಾಗಿದೆ….
ರೋಟರಿ 3181 ಜಿಲ್ಲಾ ಗೌರ್ನರ್ ಪದಾಧಿಕಾರಿಗಳ ಪದಗ್ರಹಣ
June 30, 2019ಮೈಸೂರು, ಜೂ.29(ಎಂಕೆ)- ಮೈಸೂ ರಿನ ರಿಯೋ ಮೆರಿಡಿಯನ್ ಹೋಟೆಲ್ ನಲ್ಲಿ 11ನೇ ರೋಟರಿ 3181 ಜಿಲ್ಲಾ ಗೌರ್ನರ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಏರ್ಪಡಿಸಲಾಗಿತ್ತು. 2019-20ನೇ ಸಾಲಿನ ಜಿಲ್ಲಾ ಗೌರ್ನರ್ ಸ್ಥಾನಕ್ಕೆ ಆಯ್ಕೆಯಾಗಿರುವ ಕೆ.ಜೋಸೆಫ್ ಮ್ಯಾಥ್ಯೂ ಅವರಿಗೆ ರೋಟರಿ ಅಂತರ ರಾಷ್ಟ್ರೀಯ ನಿರ್ದೇಶಕ ಡಾ.ಭರತ್ ಎಸ್. ಪಾಂಡ್ಯ ಸಮ್ಮುಖದಲ್ಲಿ ಹಾಲಿ ಜಿಲ್ಲಾ ಗೌರ್ನರ್ ಪಿ.ರೋಹಿನಾಥ್ ಅಧಿಕಾರ ಹಸ್ತಾಂತರಿಸಿ ದರು. ಇದೇ ವೇಳೆ 2019-20ನೇ ಸಾಲಿನ ಪದಾಧಿಕಾರಿಗಳಾದ ಹೆಚ್.ಎಸ್.ಶಿವಣ್ಣ, ಎಂ.ಲಕ್ಷ್ಮಿನಾರಾಯಣ್, ವಿವೇಕ್ ಅತ್ತರ್, ಎಂ. ರತ್ನರಾಜ್, ರವಿಚಂದ್ರ, ಶ್ರೀನಿವಾಶ್…
ಆಗಸ್ಟ್ 6ರಂದು `ಮತ್ತೆ ಕಲ್ಯಾಣ’
June 30, 2019ಮೈಸೂರು, ಜೂ. 29(ಎಸ್ಪಿಎನ್)-ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ನಡೆಸಿದ್ದ ಕಲ್ಯಾಣ ಕ್ರಾಂತಿಯನ್ನು 21ನೇ ಶತಮಾನದಲ್ಲೂ `ಮತ್ತೆ ಕಲ್ಯಾಣ’ ಶೀರ್ಷಿಕೆಯಡಿ ಮೈಸೂರಿನಲ್ಲಿ ಆ.6ರಂದು ನಡೆಸುವ ಬಗ್ಗೆ ಶನಿವಾರ ಬಸವಾದಿ ಚಿಂತಕರು ಪೂರ್ವಭಾವಿ ಸಭೆ ನಡೆಸಿದರು. ಮೈಸೂರು ರಂಗಾಯಣ ಆವ ರಣದ ಶ್ರೀರಂಗ ವೇದಿಕೆಯಲ್ಲಿ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಮಠದ ವತಿ ಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಿರುವ `ಮತ್ತೆ ಕಲ್ಯಾಣ’ ಕಾರ್ಯಾಗಾರವನ್ನು ಮೈಸೂರಿನಲ್ಲಿ ಆಯೋಜಿಸುವ ಕುರಿತು ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಕಾರ್ಯಕ್ರಮದ ವಿವರಗಳನ್ನು ತಿಳಿಸಿದ ಸಾಣೇಹಳ್ಳಿ ಮಠದ ಧ್ಯಾನೇಶ್,…
ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಎಸ್ಎಸ್ಎಲ್ಸಿ,ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ
June 30, 2019ಮೈಸೂರು,ಜೂ.29(ಎಸ್ಪಿಎನ್)- ಭಗವಂತ ಕರುಣಿಸಿರುವ ಜ್ಞಾಪಕ ಶಕ್ತಿ ಯನ್ನು ದೇಶದ ಪ್ರಗತಿಗೆ ಬಳಸಿಕೊಳ್ಳಬೇಕು. ಈ ಅಂಶವನ್ನು ಯುವಕರಿಗೆ ಮನವರಿಕೆ ಮಾಡಿಕೊಡುವ ಕೆಲಸ ಹಿರಿಯರದ್ದು ಎಂದು ಶಾಸಕ ಎಸ್.ಎ.ರಾಮದಾಸ್ ಇಂದಿಲ್ಲಿ ಅಭಿಪ್ರಾಯಪಟ್ಟರು. ಕುವೆಂಪುನಗರದ ಗಾನಭಾರತೀ ಸಭಾಂ ಗಣದಲ್ಲಿ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಮಾತನಾಡಿದರು. ವಿಶ್ವಸಂಸ್ಥೆ ಅಂಕಿ-ಅಂಶಗಳ ಪ್ರಕಾರ ಪ್ರಪಂಚದ ಬುದ್ಧಿ ವಂತ ಮಕ್ಕಳಿಗೆ ಅತೀ ಹೆಚ್ಚು ಜ್ಞಾಪಕಶಕ್ತಿ ಇರುವುದು ವಿಪ್ರರ ಮಕ್ಕಳಲ್ಲಿ ಎಂಬುದು…
ಪೊಲೀಸ್ ಭದ್ರತೆಯಲ್ಲಿ ವಿಷ್ಣು ಸ್ಮಾರಕ ನಿರ್ಮಾಣ
June 29, 2019ಮೈಸೂರು, ಜೂ.28(ಆರ್ಕೆ)- ರಾಜ್ಯ ಹೈಕೋರ್ಟ್ನಿಂದ ಹಸಿರು ನಿಶಾನೆ ದೊರೆತಿರುವುದರಿಂದ ಮೈಸೂ ರಿನಲ್ಲಿ ಕನ್ನಡದ ಖ್ಯಾತ ನಾಯಕ ನಟರಾಗಿದ್ದ ‘ಸಾಹಸಸಿಂಹ’ ದಿವಂಗತ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ವಾಗುವುದು ಖಚಿತವಾಗಿದೆ. ಪೊಲೀಸ್ ಬಂದೋಬಸ್ತ್ನಲ್ಲಿ ಡಾ.ವಿಷ್ಣು ಸ್ಮಾರಕ ನಿರ್ಮಾಣ ಕಾಮಗಾರಿ ಆರಂಭಿಸಲು ಜಿಲ್ಲಾಡಳಿತ ಹಾಗೂ ಡಾ.ವಿಷ್ಣುವರ್ಧನ್ ಪ್ರತಿಷ್ಠಾನ ಟ್ರಸ್ಟ್ ಸಿದ್ಧತೆ ನಡೆಸುತ್ತಿವೆ. ಈ ಸಂಬಂಧ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಮೈಸೂರು ತಾಲೂಕು ತಹಶೀಲ್ದಾರ್ ಟಿ. ರಮೇಶ್ಬಾಬು, ಮೈಸೂರು ಸಿವಿಲ್ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ರಾಜ್ಯ ಹೈಕೋರ್ಟ್ ತೆರವುಗೊಳಿಸಿದ್ದು,…
ಮೈಸೂರು ನಗರಪಾಲಿಕೆಯಿಂದ `ಯೋಗಲಕ್ಷ್ಮೀ’ ಯೋಜನೆ ಜಾರಿ
June 29, 2019ಮೈಸೂರು, ಜೂ.28(ಎಂಟಿವೈ)- ಮೈಸೂರು ನಗರಪಾಲಿಕೆಯು ತನ್ನ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಯೋಗಲಕ್ಷ್ಮೀ ಯೋಜನೆಯನ್ನು ಶುಕ್ರವಾರದಿಂದ ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳು ಪಾಲಿಕೆಯ ಈ ಯೋಜನೆ ಪಡೆಯಲು ಕೋರಿದೆ. ಮೈಸೂರು ನಗರ ಪಾಲಿಕೆಯ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಈ ಯೋಜನೆಯ ಪೆÇೀಸ್ಟರ್ ಬಿಡುಗಡೆಗೊಳಿಸಿ ಮಾತ ನಾಡಿದ ಮೇಯರ್ ಪುಷ್ಪಲತಾ ಜಗನ್ನಾಥ್, ಮೈಸೂರು ನಗರದ ನಿವಾಸಿಗಳಿಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ. ಬಿಪಿಎಲ್ ಕಾರ್ಡ್ ಹೊಂದಿದ, ಸರ್ಕಾರಿ ಆಸ್ಪತ್ರೆ ಯಲ್ಲಿ 2019 ಏಪ್ರಿಲ್ 1ರ ನಂತರ ಜನಿಸಿದ…










