ಬೆಳಗಾವಿ: ಮೈಸೂರು ಜಿಲ್ಲೆಯಲ್ಲಿ 21995, ಚಾಮರಾಜನಗರ ಜಿಲ್ಲೆಯಲ್ಲಿ 832 ಮತ್ತು ಕೊಡಗು ಜಿಲ್ಲೆಯಲ್ಲಿ 12191 ಆದಿವಾಸಿ ಜೇನು ಕುರುಬ ಜನಾಂಗದವರಿದ್ದಾರೆ. ರಾಜ್ಯದ ಮೂಲ ನಿವಾಸಿ ಬುಡಕಟ್ಟು ಸಮುದಾಯಗಳಾದ ಜೇನುಕುರುಬ ಮತ್ತು ಕೊರಗ ಸಮು ದಾಯಗಳ ಬೇಸ್ಲೈನ್ ಸರ್ವೇ ಕಾರ್ಯ ಕೈಗೊಳ್ಳಲಾಗುತ್ತಿದೆ. ಸದ್ಯಕ್ಕೆ ಕ್ಷೇತ್ರಕಾರ್ಯ ಪೂರ್ಣಗೊಂಡಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಇಂದು ವಿಧಾನ ಪರಿಷತ್ತಿಗೆ ತಿಳಿಸಿದರು. ಮೈಸೂರು ಚಾಮರಾಜನಗರ ಜಿಲ್ಲೆಗಳಲ್ಲಿರುವ ಆದಿವಾಸಿ ಜೇನುಕುರುಬರ ಬಗ್ಗೆ ಸರ್ವೇ ನಡೆಸಿ, ಅವರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ…
ಶ್ರೀರಾಂಪುರ 2ನೇ ಹಂತ, ಮೈಸೂರು ಬ್ಯಾಂಕ್ ಕಾಲೋನಿಯಲ್ಲಿ ಮಳೆ ನೀರು ಚರಂಡಿ ಅಭಿವೃದ್ಧಿ ಕಾಮಗಾರಿ
December 17, 2018ಬೆಳಗಾವಿ: ಶ್ರೀರಾಂಪುರ ಎರಡನೇ ಹಂತದ 4ನೇ ಎ.ಸಿ.ಬಿ. ಕ್ರಾಸ್, 3ನೇ ಹಂತ, ಸೂರ್ಯ ಬಡಾವಣೆ, ದೇವಯ್ಯನ ಹುಂಡಿ ಕ್ರಾಸ್ನಲ್ಲಿ ಕಳೆದ ವರ್ಷ ಮಳೆ ಬಂದ ಸಂದರ್ಭದಲ್ಲಿ, ಮನೆಗಳಿಗೆ ಮಳೆ ನೀರು ನುಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ, ಮಳೆ ನೀರು ಚರಂಡಿಯಲ್ಲಿ ಡಿಸಿಲ್ಟಿಂಗ್ ಮಾಡಿ ಸುರಕ್ಷಾ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಸದ್ಯಕ್ಕೆ ಯಾವುದೇ ಘಟನೆ ಸಂಭವಿಸಿಲ್ಲ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ವಿಧಾನ ಪರಿಷತ್ತಿಗೆ ತಿಳಿಸಿದರು. ಶ್ರೀರಾಂಪುರ 2ನೇ ಹಂತದ, ಮೈಸೂರು ಬ್ಯಾಂಕ್ ಕಾಲೋನಿಯ 29, 30 ಮತ್ತು 31ನೇ…
ಬಂಡೀಪುರ, ನಾಗರಹೊಳೆ, ಮಲೆಮಹದೇಶ್ವರ ಬೆಟ್ಟ ಅಭಯಾರಣ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ವನ್ಯಜೀವಿಗಳ ಸಾವು
December 13, 2018ಬೆಳಗಾವಿ: ಬಂಡೀಪುರ, ನಾಗರಹೊಳೆ ಮತ್ತು ಮಲೆಮಹದೇಶ್ವರ ಅಭಯಾರಣ್ಯ ಗಳಲ್ಲಿ 2017-18ನೇ ಸಾಲಿನಲ್ಲಿ 65 ಆನೆ, 8 ಹುಲಿ, 14 ಚಿರತೆ, 3 ಕರಡಿ, 19 ಕಾಡು ಕೋಣ, 30 ಜಿಂಕೆ-ಕಡವೆಗಳು ಸ್ವಾಭಾವಿಕವಾಗಿ ಮರಣವನ್ನಪ್ಪಿದ್ದರೆ, 11 ಆನೆ, 4 ಚಿರತೆ, 2 ಕರಡಿ, 3 ಕಾಡುಕೋಣ, 3 ಜಿಂಕೆ ಕಡವೆಗಳು ಅಸ್ವಾಭಾ ವಿಕವಾಗಿ ಮರಣ ಹೊಂದಿವೆ ಎಂದು ಅರಣ್ಯ ಸಚಿವ ಆರ್.ಶಂಕರ್ ತಿಳಿಸಿದ್ದಾರೆ. ಅದೇ ರೀತಿ 2018-19ನೇ ಸಾಲಿನಲ್ಲಿ ಇದುವರೆಗೆ 39 ಆನೆ, 4 ಹುಲಿ, 2 ಚಿರತೆ,…
ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಾ.ರಾ.ಮಹೇಶ್-ಸಂದೇಶ್ ನಾಗರಾಜ್ ಮಾತಿನ ಚಕಮಕಿ
July 13, 2018ಬೆಂಗಳೂರು: ವಿಧಾನಸೌಧದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರ ಹಾಜರಾತಿಯನ್ನು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ಮೂಲಗಳು ತಿಳಿಸಿವೆ. ಶಾಸಕಾಂಗ ಪಕ್ಷದ ಅಂತಿಮ ಕ್ಷಣದಲ್ಲಿ ಸಾ.ರಾ. ಮಹೇಶ್ ಮಾತನಾಡುತ್ತಾ, ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಸಂದೇಶ್ ನಾಗರಾಜ್ ಅವರನ್ನು ಸಭೆಯಿಂದ ಹೊರ ಹಾಕುವಂತೆ ಹೇಳಿದರು. ಅವರಿಗೆ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಅವರು ಬೆಂಬಲಿಸಿದರು. ಈ…
ಹನೂರು-ಕೊಳ್ಳೇಗಾಲ ರಸ್ತೆಯ ದುರಸ್ತಿಗೆ ಕ್ರಮ ಸಂದೇಶ್ ಪ್ರಸ್ತಾಪಕ್ಕೆ” ಸಚಿವ ರೇವಣ್ಣ ಭರವಸೆ
July 11, 2018ಬೆಂಗಳೂರು: ಕೊಳ್ಳೇಗಾಲ ದಿಂದ ಹನೂರುವರೆಗಿನ ರಾಜ್ಯ ಹೆದ್ದಾರಿಯು 24.10 ಕಿ.ಮೀ. ಉದ್ದ ಇದ್ದು, ಇತ್ತೀಚಿನ ಸತತ ಮಳೆಯಿಂದಾಗಿ ರಸ್ತೆಗಳಲ್ಲಿ ಗುಂಡಿಗಳು ಉಂಟಾಗಿದೆ. ಈ ಗುಂಡಿಗಳನ್ನು ಮುಚ್ಚುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಇಂದು ವಿಧಾನ ಪರಿಷತ್ತಿಗೆ ತಿಳಿಸಿದರು. ಕೊಳ್ಳೇಗಾಲ-ಹನೂರು-ಮಲೆಮಹ ದೇಶ್ವರನ ಬೆಟ್ಟ ರಸ್ತೆಯು ಗುಂಡಿಬಿದ್ದು ಸಾರ್ವಜನಿಕ ಹಾಗೂ ಪ್ರವಾಸಿಗರ ವಾಹನ ಗಳ ಸಂಚಾರಕ್ಕೆ ತೊಂದರೆ ಆಗಿರುವುದರ ಬಗ್ಗೆ ಸಂದೇಶ್ ನಾಗರಾಜ್ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು. 2017-18 ನೇ ಸಾಲಿನಲ್ಲಿ ಕೊಳ್ಳೇಗಾಲ-…