ಮೈಸೂರು, ಡಿ.8(ಎಂಟಿವೈ)- ಮೈಸೂರಿನ ವಿವಿಧ ರಸ್ತೆಗಳ ಬದಿಯಲ್ಲಿ ಮಲಗುವ ವಸತಿಹೀನರಿಗೆ ಹಾಗೂ ಮುಂಜಾನೆ ರಸ್ತೆಬದಿ ವ್ಯಾಪಾರಿಗಳಿಗೆ ಕೆಎಂಪಿಕೆ ಚಾರಿ ಟಬಲ್ ಟ್ರಸ್ಟ್ನಿಂದ ಆರಂಭಿಸಿದ `ಹೊದಿಕೆ ವಿತರಣಾ ಅಭಿಯಾನ’ಕ್ಕೆ ಮಂಗಳವಾರ ರಾಜ್ಯ ಮಹಿಳಾ ಅಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು ಪೌರಕಾರ್ಮಿಕರಿಗೆ ಹೊದಿಕೆ ನೀಡುವ ಮೂಲಕ ಚಾಲನೆ ನೀಡಿದರು. ಚಾಮುಂಡಿಬೆಟ್ಟದಲ್ಲಿ ಮಂಗಳವಾರ ಬೆಳಿಗ್ಗೆ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಹೊದಿಕೆ ವಿತರಿಸಿ ಬಳಿಕ ಮಾತನಾಡಿದರು. ಕೊರೊನಾ ಲಾಕ್ಡೌನ್ ವೇಳೆ ನಾವೆಲ್ಲರೂ ಮನೆ ಯೊಳಗೆ ಸುರಕ್ಷಿತವಾಗಿದ್ದರೆ, ವಸತಿಹೀನರು…
ಮೀಟರ್ ಬಡ್ಡಿ ದಂಧೆಯಿಂದ ಬೀದಿಬದಿ ವ್ಯಾಪಾರಿಗಳ ರಕ್ಷಣೆಗೆ `ಬಡವರ ಬಂಧು’
November 23, 2018ಬೆಂಗಳೂರು: ಲೇವಾ ದೇವಿದಾರರ ಕಿರುಕುಳದಿಂದ ಬೀದಿಬದಿ ವ್ಯಾಪಾರಿಗಳನ್ನು ವಿಮುಕ್ತಗೊಳಿಸುವ ಮಹತ್ವಾ ಕಾಂಕ್ಷೆಯ `ಬಡವರ ಬಂಧು’ ಯೋಜನೆಗೆ ಇಂದಿಲ್ಲಿ ಚಾಲನೆ ನೀಡಲಾಯಿತು. ನಗರದ ಯಶವಂತಪುರದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ನೂತನ ಯೋಜನೆಗೆ ಚಾಲನೆ ನೀಡಿ, ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬೀದಿಬದಿ ವ್ಯಾಪಾರಿಗಳಿಗೆ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ತೊಂದರೆ ಕೊಡುವುದನ್ನು ನಿಲ್ಲಿಸಬೇಕು ಎಂದರು. ಅಂಗಡಿಗಳನ್ನು ತೆರವುಗೊಳಿಸದೆ ವ್ಯಾಪಾರ ಮಾಡಿ ಅವರಿಗೂ ಬದುಕಲು ಅವಕಾಶ ನೀಡಿ, ಸಣ್ಣಪುಟ್ಟ ವ್ಯಾಪಾರಿಗಳಿಗೆ ಜಾಗ ಗುರುತಿಸಿಕೊಡಿ, ಅಕ್ರಮವಾಗಿ ಹಣ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಿ….
ಬೀದಿ ಬದಿ ವ್ಯಾಪಾರಿಗಳಿಗೆ ಮೊಬೈಲ್ ಬ್ಯಾಂಕಿಂಗ್
August 26, 2018ಬೆಂಗಳೂರು: ಮೀಟರ್ ಬಡ್ಡಿಗೆ ಕಡಿವಾಣ ಹಾಕಿರುವ ಬೆನ್ನಲ್ಲೇ ದೈನಂದಿನ ಬದುಕಿಗೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಅನು ಕೂಲ ಮಾಡಿ ಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮೊಬೈಲ್ ಬ್ಯಾಂಕಿಂಗ್ ಆರಂಭಿಸುತ್ತಿದೆ. ಎಟಿಎಂಗಳಿಗೆ ಹಣ ತುಂಬುವ ವಾಹನಗಳ ಮಾದರಿಯಲ್ಲೇ ಅತೀ ಭದ್ರತೆಯಿಂದ ಕೂಡಿದ ವಾಹನಗಳ ಮೂಲಕ ದಿನನಿತ್ಯ ನಿಗದಿತ ಸ್ಥಳಗಳಲ್ಲಿ ಸಣ್ಣ ಹಾಗೂ ಅತಿಸಣ್ಣ ವ್ಯಾಪಾರಿಗಳಿಗೆ ಹಣಕಾಸಿನ ನೆರವು ಒದಗಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕರ್ನಾಟಕ ಋಣಮುಕ್ತ ಅಧಿನಿಯಮ 2018 ಅನ್ನು ಜಾರಿಗೆ ತರುವುದರಿಂದ ವಾರ್ಷಿಕ 1,20,000 ರೂ….



