75 ಕೋಟಿ ವೆಚ್ಚದಲ್ಲಿ 3 ಪ್ಯಾಕೇಜ್ಗಳಲ್ಲಿ ಕಾಮಗಾರಿ ಮೈಸೂರು: ಮೈಸೂರಿನ ನಾಲ್ಕು ಹಾಗೂ ಮಂಡ್ಯದ ಒಂದು ತಾಲೂಕು ಸೇರಿ ಐದು ತಾಲೂಕುಗಳ ಕೃಷಿಭೂಮಿಗೆ ನೀರುಣಿಸುತ್ತಿರುವ ವರುಣಾ ನಾಲೆಯ ನವೀಕರಣ ಕಾಮಗಾರಿ ಆರಂಭಗೊಂಡಿದ್ದು, ಕೃಷಿ ಭೂಮಿಗೆ ಸಮರ್ಪಕ ನೀರು ದೊರೆಯುವ ವಿಶ್ವಾಸ ಮೂಡಿದೆ. ವರುಣಾ ನಾಲೆಯು 82 ಗ್ರಾಮಗಳ ಕೃಷಿ ಭೂಮಿಗೆ ಜೀವಸೆಲೆಯಾಗಿದೆ. ಇದರ ನಿರ್ಮಾಣಕ್ಕೆ 1979ರಲ್ಲಿ ಚಾಲನೆ ನೀಡಲಾಗಿತ್ತು. ನಿರ್ಮಾಣಗೊಂಡ ಬಳಿಕ ರೈತರ ನೀರಾವರಿ ಕೃಷಿ ಚಟುವಟಿಕೆಗಳಿಗೆ ಆಸರೆಯಾಗಿ ಹೊಸ ಭರವಸೆ ಮೂಡಿಸಿದ್ದ ವರುಣಾ ನಾಲೆ ಕಾಲ…
ಆಯತಪ್ಪಿ ಖಾಸಗಿ ಬಸ್ಸಿನಿಂದ ಬಿದ್ದು ವ್ಯಕ್ತಿ ಸಾವು 2 ವರ್ಷದ ಮಗುವಿಗೆ ಗಾಯ, ವರುಣಾ ಗ್ರಾಮದ ಬಳಿ ಘಟನೆ
June 23, 2018ಮೈಸೂರು: ಆಯತಪ್ಪಿ ಖಾಸಗಿ ಬಸ್ಸಿನಿಂದ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಆತನ ಎರಡು ವರ್ಷದ ಮಗು ಗಾಯಗೊಂಡಿರುವ ಘಟನೆ ಮೈಸೂರು ತಾಲೂಕು ವರುಣಾ ಗ್ರಾಮದ ಬಳಿ ಗುರುವಾರ ಸಂಜೆ ಸಂಭವಿಸಿದೆ. ಮೈಸೂರು ತಾಲೂಕು ದಂಡಿಕೆರೆ ಗ್ರಾಮದ ನಿವಾಸಿ ಚಿಕ್ಕಮಾದಯ್ಯ ಅವರ ಮಗ ಚಿಕ್ಕಣ್ಣ(30) ಸಾವನ್ನಪ್ಪಿದವರು ಘಟನೆಯಿಂದ ಅವರ ಪುತ್ರ, ಎರಡು ವರ್ಷದ ಮಹದೇವ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಹಬ್ಬಕ್ಕೆಂದು ಅತ್ತೆಮನೆ ಭುಗತಗಳ್ಳಿಗೆ ಹೋಗಿದ್ದ ಚಿಕ್ಕಣ್ಣ ಗುರುವಾರ ಪುತ್ರ ಮಹದೇವನೊಂದಿಗೆ ಖಾಸಗಿ ಬಸ್ಸಿನಲ್ಲಿ ಭುಗತಗಳ್ಳಿಗೆ ಹೊರಟ್ಟಿದ್ದರು….
ನಿವೇಶನ ನೀಡುವುದಾಗಿ ವಂಚನೆ ಆರೋಪ: ಮಹದೇಶ್ವರಸ್ವಾಮಿ ಇನ್ಫ್ರಾಟೆಕ್ ಅಂಡ್ ಹೌಸಿಂಗ್ ಡೆವಲಪರ್ಸ್ ಕಂಪನಿ ವಿರುದ್ಧ ಕೇಸ್ ದಾಖಲು
May 1, 2018ಮೈಸೂರು: ಹೌಸಿಂಗ್ ಡೆವಲಪರ್ಸ್ ಕಂಪನಿಯೊಂದು ನಿವೇಶನ ಅಭಿ ವೃದ್ಧಿಪಡಿಸಿ ಗೃಹನಿರ್ಮಾಣ ಸಹಕಾರ ಸಂಘಕ್ಕೆ ನೀಡುವುದಾಗಿ ಮುಂಗಡ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಕೆ.ಆರ್.ಮೊಹಲ್ಲಾದ ತ್ಯಾಗ ರಾಜ ರಸ್ತೆಯಲ್ಲಿರುವ ಮಹದೇಶ್ವರ ಸ್ವಾಮಿ ಇನ್ಫ್ರಾಟೆಕ್ ಮತ್ತು ಹೌಸಿಂಗ್ ಡೆವಲ ಪರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪಾಲುದಾರರಾದ ಎನ್.ಎಸ್.ನಂಜುಂಡ ಸ್ವಾಮಿ ಹಾಗೂ ಎಂ.ಎಸ್.ನಟರಾಜು ಹಾಗೂ ಗೃಹ ನಿರ್ಮಾಣ ಸಂಘದ ಮಾಜಿ ಅಧ್ಯಕ್ಷ ಎಂ.ಎಸ್.ಮಹದೇವ ಸ್ವಾಮಿ ವಂಚಿಸಿದವರು. ಸದರಿ ಕಂಪನಿ ನಿವೇಶನ ಅಭಿವೃದ್ಧಿ ಕರಾರು ಮಾಡಿಕೊಂಡು ಮುಂಗಡ ಹಣ ಪಡೆದು…