ಬೇಲೂರು: ಸಮಾಜದಲ್ಲಿ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಹಾಗೂ ಸಾಮಾಜಿಕ ಪರಿವರ್ತನೆಗೆ ನಿವೃತ್ತರ ಸೇವೆ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಉದಯರವಿ ಹೇಳಿದರು. ಪಟ್ಟಣದ ನಿವೃತ್ತ ಭವನದಲ್ಲಿ ಕಸಾಪ ಮಾಜಿ ಅಧ್ಯಕ್ಷ ಉದಯರವಿ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದ ಹಿನೆÀ್ನಲೆಯಲ್ಲಿ ತಾಲೂಕು ನಿವೃತ್ತನೌಕರರ ಸಂಘದಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹಿರಿಯ ನೌಕರರು ನಿವೃತ್ತಿಗೊಂಡ ನಂತರದಲ್ಲಿ ಅವರನ್ನು ನಿರ್ಲಕ್ಷ್ಯಿಸಬಾರದು. ಅದರ ಬದಲು ಅವರ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಮುಂದಾಗಬೇಕು. ಹಳೆಯ ತಲೆಮಾರು ಹೊಸ ಚಿಗುರಿನೊಂದಿಗೆ ಬೆರೆತು…
ಸಮರ್ಪಕ ಕುಡಿಯುವ ನೀರು ಪೂರೈಸಲು ಸೂಚನೆ
May 4, 2019ಅರಸೀಕೆರೆ: ತಾಲೂಕಿನಲ್ಲಿ ಮಳೆ ಕೊರತೆಯಿಂದ ಕುಡಿಯುವ ನೀರಿನ ಬವಣೆ ಉಂಟಾಗಿದ್ದು, ಪ್ರತಿ ಗ್ರಾಮಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚನೆ ನೀಡಿದರು. ಏ. 29ರಂದು ‘ಮೈಸೂರುಮಿತ್ರ’ ಪತ್ರಿಕೆ ಯಲ್ಲಿ ‘ಅರಸೀಕೆರೆಯಲ್ಲಿ ನೀರಿಲ್ಲ’ ಶಿರ್ಷಿಕೆಯಡಿ ಪ್ರಕಟ ವಾಗಿದ್ದ ವರದಿಗೆ ಜಿಲ್ಲಾಡ ಳಿತ ಎಚ್ಚೆತ್ತಿದೆ. ಬುಧವಾರ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಯನ್ನು ಅವಲೋಕಿಸಿ ನೀರಿನ ಬವಣೆ ನೀಗಿಸುವಂತೆ ಅಧಿಕಾರಿಗಳಿಗೆ…
ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮೇಸ್ತ್ರಿ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಪಾಲುದಾರನ ಬಂಧನ
May 4, 2019ಹೊಳೆನರಸೀಪುರ: ಕೂಲಿ ಬಾಕಿ ಹಣ ವಸೂಲಾತಿಗೆ ತೆರಳಿ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಕೂಲಿ ಕಾರ್ಮಿಕರ ಮೇಸ್ತ್ರಿ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನ ಪಾಲುದಾರನನ್ನು ಪೊಲೀಸರು ಕೊಲೆ ಆರೋಪದ ಮೇರೆಗೆ ಬಂಧಿಸಿದ್ದಾರೆ. ಕಾಮೇನಹಳ್ಳಿ ಗ್ರಾಮದ ಕೂಲಿ ಕಾರ್ಮಿಕ ಮೇಸ್ತ್ರಿ ಮಂಜೇಗೌಡ(28) ಹತ್ಯೆಯಾದವರಾಗಿದ್ದು, ಇವರ ಮೃತದೇಹ ತಾಲೂಕಿನ ಹರಿಹರಪುರ ಸಮೀಪದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಮಂಜೇಗೌಡ ಕಬ್ಬು ಕಟಾವು ಮಾಡುವ ಕೂಲಿ ಕಾರ್ಮಿಕರ ಮೇಸ್ತ್ರಿಯಾಗಿ ಕೆಲಸ ಮಾಡಿಕೊಂಡಿದ್ದ. ಮಾ.28ರಂದು ಕಬ್ಬು ಕಡಿಯುತ್ತಿದ್ದ ಜಮೀನಿಗೆ, ಕೂಲಿ ಬಾಕಿ ಹಣ…
ಚಾರುಕೀರ್ತಿ ಶ್ರೀಗೆ ರಜತ ಮಾನಸ್ಥಂಭ, ಸ್ಪಟಿಕ ರತ್ನಬಿಂಬ ಸಮರ್ಪಣೆ
May 3, 201970ರ ವರ್ಧಂತಿ ಸಂಭ್ರಮದಲ್ಲಿ ಚಾರುಶ್ರೀ ಗ್ರಂಥ ಲೋಕಾರ್ಪಣೆ ಜೈನ ಭಕ್ತರು, ಗಣ್ಯರಿಂದ ಗುರುವಂದನೆ ಹಾಸನ: ಜೈನಕಾಶಿ ಎಂದೇ ಹೆಸರಾದ ಶ್ರವಣಬೆಳಗೊಳದಲ್ಲಿ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ 70ನೇ ಜನ್ಮದಿನ ಪ್ರಯುಕ್ತ ಶ್ರವಣಬೆಳಗೊಳದ ಚಾವುಂಡರಾಯ ಸಭಾಭವನದಲ್ಲಿ ಗುರುವಾರ ಗುರು ವಂದನೆ-ವರ್ಧಂತಿ ಕಾರ್ಯಕ್ರಮ ಅದ್ಧೂರಿ ಯಾಗಿ ಜರುಗಿತು. 50 ವರ್ಷಗಳ ಸಾರ್ಥಕ ಸೇವೆ ಮತ್ತು 4 ಮಹಾ ಮಸ್ತಕಾಭಿಷೇಕ ಗಳನ್ನು ಬಹಳ ಯಶಸ್ವಿಯಾಗಿ ನೆರವೇರಿಸಿದ ಸ್ವಾಮೀಜಿಗೆ ಹಾಸನ ಜಿಲ್ಲೆಯ ಜೈನ ಸಮಾಜ ದವರು ಗೌರವ ವಂದನೆ…
ಅರಸೀಕೆರೆಯಲ್ಲಿ ಅಂತರ್ಜಲ ರಕ್ಷಣೆಗೆ ಆದ್ಯತೆ: ಡಿಸಿ
May 3, 2019ಹಾಸನ: ಕುಡಿಯುವ ನೀರಿಗೆ ತೀವ್ರ ತೊಂದರೆ ಅನುಭವಿಸುತ್ತಿರುವ ಅರಸೀ ಕೆರೆ ತಾಲೂಕಿನಲ್ಲಿ ಅಂತರ್ಜಲ ಸಂರಕ್ಷಣೆಗೆ ಪರಿಣಾಮಕಾರಿ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಗಮನ ಸೆಳೆದರು. ಡಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಅಂತರ್ಜಲ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಅರಸೀಕೆರೆ ತಾಲೂಕಿ ನಲ್ಲಿ ಜಲ ಮರುಪೂರಣ ಕಾರ್ಯಕ್ಕೆ ಹೆಚ್ಚು ಗಮನ ಹರಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಂತರ್ಜಲ ವೃದ್ಧಿ ಮತ್ತು ನಿರ್ವಹಣೆ, ನಿಯಂತ್ರಣದ ವರದಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಂತರ್ಜಲ…
ಚನ್ನರಾಯಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ತಡೆಗೆ 15 ಅಧಿಕಾರಿಗಳ ತಂಡ
May 3, 2019ಚನ್ನರಾಯಪಟ್ಟಣ: ಪಟ್ಟಣ ದಲ್ಲಿ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವ ಸಲುವಾಗಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ವಿರುದ್ಧ ಕಾರ್ಯಾಚರಣೆಗೆ 15 ಅಧಿಕಾರಿಗಳ ತಂಡ ರಚಿಸಲು ಪುರಸಭೆ ಮುಂದಾಗಿದೆ. ಪ್ಲಾಸ್ಟಿಕ್ ನಿಷೇಧ ಕುರಿತು ಪಟ್ಟಣದ ಪುರಸಭೆ ಏರ್ಪಡಿಸಿದ್ದ ಸಭೆಯಲ್ಲಿ ಮಾತ ನಾಡಿದ ಪುರಸಭೆ ಆಡಳಿತಾಧಿಕಾರಿ ಹೆಚ್.ಎಲ್. ನಾಗರಾಜ್, ಪಟ್ಟಣದಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾರಾಟದ ಅಂಗಡಿ, ಬಳಸುವ ಸ್ಥಳಗಳಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಿದೆ ಎಂದರು. ತಾಲೂಕಿನಲ್ಲಿರುವ ಬಹುತೇಕ ಸಮು ದಾಯ ಭವನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಬಗ್ಗೆ…
ಬಿರುಗಾಳಿ ಸಹಿತ ಆಲಿಕಲ್ಲು ಮಳೆ; ಹಾರಿದ ಛಾವಣಿ, ನೆಲಕಚ್ಚಿದ ಬಾಳೆರಾಮನಾಥಪುರ ಹೋಬಳಿಯಲ್ಲಿ ಭಾರೀ ಹಾನಿ
May 3, 2019ರಾಮನಾಥಪುರ: ಬುಧವಾರ ರಾತ್ರಿ ರಾಮನಾಥಪುರ ಹೋಬಳಿಯ ಹಲವು ಗ್ರಾಮಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಬಿರುಗಾಳಿ, ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದೆ. ಪರಿಣಾಮ ಹೋಬಳಿಯ ಹಲವು ಗ್ರಾಮಗಳಲ್ಲಿ ಭಾರೀ ಹಾನಿ ಸಂಭವಿಸಿದೆ. ಹೋಬಳಿಯ ರಾಮನಕೊಪ್ಪಲು, ಹಂಡ್ರಂಗಿ, ತರಿಗಳಲೆ, ಕೂಡಲೂರು, ಬಿಳಗುಲಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿರುಗಾಳಿ, ಆಲಿಕಲ್ಲು ಸಮೇತ ಧಾರಾಕಾರ ಸುರಿದ ಮಳೆ ಅಪಾರ ಹಾನಿ ಉಂಟು ಮಾಡಿದೆ. ಹೋಬಳಿಯ ಕೆಲವು ಗ್ರಾಮ ಗಳಲ್ಲಿ ಬಿರು ಗಾಳಿಯ ರಭಸಕ್ಕೆ ಹಲವು ಮನೆಗಳ ಶೀಟ್ ಛಾವಣಿ, ಹೆಂಚುಗಳು…
ಜಿಲ್ಲೆಯಲ್ಲಿ ಮನೆಗಳವು, ವರ್ತಕರ ಲೂಟಿ
May 3, 2019ಹಾಸನ: ರಾಜ್ಯದಲ್ಲಿ ಈಗ ಎಲ್ಲೆಲ್ಲೂ ಸರಗಳವು, ಮನೆಗಳವು ಸುದ್ದಿಗಳೇ ಕೇಳಿಬರುತ್ತಿವೆ. ಮೊನ್ನೆ ಗುರು ವಾರ ಮೈಸೂರಿನಲ್ಲಿ ಮುಂಜಾನೆ ಕೇವಲ ಒಂದೂವರೆ ಗಂಟೆ ಅವಧಿಯಲ್ಲೇ ಪಲ್ಸರ್ ಬೈಕ್ನಲ್ಲಿ ಬಂದ ಖದೀಮ ರಿಬ್ಬರು ನಗರದ 5 ಕಡೆ ಸರಗಳವು ನಡೆಸಿ ಪರಾರಿಯಾಗಿದ್ದಾರೆ. ಹಾಸನ ಜಿಲ್ಲೆಯಲ್ಲಿಯೂ ಮನೆಗಳವು, ಸರಗಳವು ಪ್ರಕರಣಗಳು ನಿರಂತರ ನಡೆ ಯುತ್ತಲೇ ಇವೆ. ಅರಸೀಕೆರೆ, ಚನ್ನರಾಯ ಪಟ್ಟಣದಲ್ಲಿ ಈ ವಾರದಲ್ಲಿ 2 ಮನೆಗಳವು ನಡೆದಿದ್ದರೆ, ಮತ್ತೊಂದೆಡೆ ಹಗಲಲ್ಲೇ ಚಿನ್ನ ವರ್ತಕನಿಂದ ಕಳ್ಳರು 15 ಲಕ್ಷ ರೂ. ದೋಚಿದ್ದಾರೆ. ಚ.ಪಟ್ಟಣ:…
ಮನೆ ಬೀಗ ಮುರಿದು 1.22 ಲಕ್ಷ ರೂ. ಕಳವು
May 3, 2019ಅರಸೀಕೆರೆ : ತಾಲೂಕಿನ ಬಾಣಾವರ ಪಟ್ಟಣದ ಕೋಟೆ ಬ್ರಾಹ್ಮಣರ ಬೀದಿಯಲ್ಲಿನ ಶ್ರೀಸಾಯಿಕೃಪ ಮನೆಯ ಬೀಗ ಮುರಿದಿರುವ ಕಳ್ಳರು, ಚಿನ್ನಾಭರಣ, ನಗದು ದೋಚಿಕೊಂಡು ಹೋಗಿದ್ದಾರೆ. ಕೋಟೆ ಬ್ರಾಹ್ಮಣರ ಬೀದಿಯ ಆನಂದ ಅವರ ಪತ್ನಿ ಮಾಧವಿ ಅವರು ಏ.26ರಂದು ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ಹೋಗಿದ್ದರು. ಪಕ್ಕದ ಮನೆಯ ಆಶಾ ಅವರು ಮಾಧವಿ ಅವರ ಮನೆಯ ಬಾಗಿಲಿಗೆ ಹೂ ಇಡಲು ಮೇ 1ರಂದು ಹೋದಾಗ ಬಾಗಿಲ ಬೀಗ ಮುರಿದಿರುವುದು ಕಂಡಿದೆ. ಅವರು ತಕ್ಷಣವೇ ಮಾಧವಿ ಅವರಿಗೆ ಫೋನ್ ಮಾಡಿ…
ಟಾಟಾ ಏಸ್ ಡಿಕ್ಕಿ; ಬೈಕ್ ಸವಾರ ಸಾವು
May 3, 2019ಅರಕಲಗೂಡು: ಅರಕಲಗೂಡು ತಾಲ್ಲೂಕಿನಲ್ಲಿ ಹೊಳೆನರಸೀಪುರ ಅರಕಲಗೂಡು ರಸ್ತೆ ಐಟಿಐ ಕಾಲೇಜು ರಸ್ತೆ ಹತ್ತಿರ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಮಲ್ಲಿತಮ್ಮನಹಳ್ಳಿಯ ಸುಬ್ಬೇಗೌಡ(24) ಮೃತರು. ಸುಬ್ಬೇಗೌಡ ಮೇ 1ರಂದು ತಮ್ಮ ಬೈಕ್ನಲ್ಲಿ ನಾಗಲಾಪುರದ ರಂಜಿತ್ ಅವರ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ (ಕೆ-55, 4295) ಟಾಟಾ ಏಸ್ ವಾಹನದ ಚಾಲಕ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಸುಬ್ಬೇಗೌಡ ಅವರು…