ಟಾಟಾ ಏಸ್ ಡಿಕ್ಕಿ; ಬೈಕ್ ಸವಾರ ಸಾವು
ಹಾಸನ

ಟಾಟಾ ಏಸ್ ಡಿಕ್ಕಿ; ಬೈಕ್ ಸವಾರ ಸಾವು

May 3, 2019

ಅರಕಲಗೂಡು: ಅರಕಲಗೂಡು ತಾಲ್ಲೂಕಿನಲ್ಲಿ ಹೊಳೆನರಸೀಪುರ ಅರಕಲಗೂಡು ರಸ್ತೆ ಐಟಿಐ ಕಾಲೇಜು ರಸ್ತೆ ಹತ್ತಿರ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಮಲ್ಲಿತಮ್ಮನಹಳ್ಳಿಯ ಸುಬ್ಬೇಗೌಡ(24) ಮೃತರು. ಸುಬ್ಬೇಗೌಡ ಮೇ 1ರಂದು ತಮ್ಮ ಬೈಕ್‍ನಲ್ಲಿ ನಾಗಲಾಪುರದ ರಂಜಿತ್ ಅವರ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ (ಕೆ-55, 4295) ಟಾಟಾ ಏಸ್ ವಾಹನದ ಚಾಲಕ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿಕೊಂಡು ಬಂದು ಬೈಕ್‍ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಸುಬ್ಬೇಗೌಡ ಅವರು ಹಾಸನದ ಸ್ಪರ್ಶ ಆಸ್ಪತ್ರೆಯಲ್ಲಿ ಗುರುವಾರ ಕೊನೆಯುಸಿರೆಳೆದರು. ಮೊದಲಿಗೆ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಮೃತರ ಸಂಬಂಧಿ ಕೋಡಿಗೌಡರ ದೂರಿನ ಮೇರೆಗೆ ಹೊಳೆನರಸೀ ಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Translate »