ಮೈಸೂರು

ರಾಮದಾಸ್‍ಗೆ ಕೆ.ಆರ್. ಕ್ಷೇತ್ರದ ಬಿಜೆಪಿ ಟಿಕೆಟ್?: ಚಿತ್ರನಟಿ ಮಾಳವಿಕ ಭಾರೀ ಲಾಭಿ
ಮೈಸೂರು

ರಾಮದಾಸ್‍ಗೆ ಕೆ.ಆರ್. ಕ್ಷೇತ್ರದ ಬಿಜೆಪಿ ಟಿಕೆಟ್?: ಚಿತ್ರನಟಿ ಮಾಳವಿಕ ಭಾರೀ ಲಾಭಿ

April 19, 2018

ಮೈಸೂರು: ಮೈಸೂರು ಕೆ.ಆರ್. ಕ್ಷೇತ್ರದಲ್ಲಿ ಮಾಜಿ ಸಚಿವ ರಾಮದಾಸ್ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭರವಸೆ ನೀಡಿದ್ದು, ನಾಳೆ ಸಂಜೆ ವೇಳೆಗೆ ಬಿಡುಗಡೆಯಾಗುವ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ರಾಮದಾಸ್ ಹೆಸರು ಇರುವುದು ಖಚಿತ ಎಂದು ಬಲ್ಲ ಮೂಲಗಳು ತಿಳಿಸಿವೆ. ಈ ಮಧ್ಯೆ ಕೆಲ ರಾಜ್ಯ ಮುಖಂಡರ ಮೂಲಕ ಚಿತ್ರ ನಟಿ ಮಾಳವಿಕ ಅವಿನಾಶ್ ಲಾಭಿ ನಡೆಸಿದ್ದು, ತಮಗೆ ಕೆ.ಆರ್. ಕ್ಷೇತ್ರದ ಟಿಕೆಟ್ ಲಭಿಸುವುದು ಖಾತರಿ ಎಂದು ಅವರು ಹೇಳಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ…

ಬಹಿರಂಗ ಹರಾಜು
ಮೈಸೂರು

ಬಹಿರಂಗ ಹರಾಜು

April 19, 2018

ಮೈಸೂರು: ಹೆಬ್ಬಾಳು(ಕುಂಬಾರಕೊಪ್ಪಲು)ನಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಳೆಯ ಮರದ ವಸ್ತುಗಳು, ಕಿಟಕಿ–ಬಾಗಿಲುಗಳು ಹಾಗೂ ಹೆಂಚುಗಳನ್ನು ಏ.24ರಂದು ಬೆಳಿಗ್ಗೆ 9.30ಗಂಟೆಗೆ ಬಹಿರಂಗ ಹರಾಜು ಮಾಡಲಾಗುವುದು. ಹರಾಜಿನಲ್ಲಿ ಭಾಗವಹಿಸುವ ಆಸಕ್ತರು ಸದರಿ ದಿನದಂದು ಹಾಜರಿದ್ದು, ಹರಾಜಿನಲ್ಲಿ ಭಾಗವಹಿಸಿ ಹರಾಜಾದ ನಂತರ ಹರಾಜು ಮೊಬಲಗನ್ನು ಸ್ಥಳದಲ್ಲಿಯೇ ಪಾವತಿಸಿ ವಸ್ತುಗಳನ್ನು ಕೊಂಡೊಯ್ಯಬಹುದು. ಹೆಚ್ಚಿನ ಮಾಹಿತಿಗೆ ದೂ.9060680062, 9141507471 (ನಾಗಣ್ಣ ಮುಖ್ಯ ಶಿಕ್ಷಕರು) ಇವರನ್ನು ಸಂಪರ್ಕಿಸುವುದು.

ಮಾಸಾಂತ್ಯಕ್ಕೆ ಬೆಂಗಳೂರಲ್ಲಿ ವಿಶ್ವಕರ್ಮ ಬೃಹತ್ ಸಮ್ಮೇಳನ: ಜೆಡಿಎಸ್‍ಗೆ ಬೆಂಬಲ ಘೋಷಣೆ
ಮೈಸೂರು

ಮಾಸಾಂತ್ಯಕ್ಕೆ ಬೆಂಗಳೂರಲ್ಲಿ ವಿಶ್ವಕರ್ಮ ಬೃಹತ್ ಸಮ್ಮೇಳನ: ಜೆಡಿಎಸ್‍ಗೆ ಬೆಂಬಲ ಘೋಷಣೆ

April 19, 2018

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ `ವಿಶ್ವಕರ್ಮರ ನಡೆ ಜೆಡಿಎಸ್ ಕಡೆ’ ಶೀರ್ಷಿಕೆಯಡಿ ನಡೆದ ಸಮಾವೇಶ ಯಶಸ್ವಿಯಾಗಿದ್ದು, ಕ್ಷೇತ್ರದ ಪಕ್ಷದ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರಿಗೆ ಸಮುದಾಯದಿಂದ ಬೆಂಬಲ ಘೋಷಣೆ ಮಾಡಲಾಗಿದೆ. ಅದೇ ರೀತಿ ರಾಜ್ಯ ಮಟ್ಟದಲ್ಲಿ ಸಮುದಾಯದ ಬೆಂಬಲವನ್ನು ಜೆಡಿಎಸ್‍ಗೆ ನೀಡುವುದಾಗಿ ಘೋಷಣೆ ಮಾಡಲು ಈ ತಿಂಗಳ ಕೊನೆ ವಾರದಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ ತಿಳಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆ…

ಸಮಾಜ ಸುಧಾರಣೆಗೆ ವಚನಗಳ ಮೂಲಕ ಮುನ್ನುಡಿ ಬರೆದ ಬಸವಣ್ಣ
ಮೈಸೂರು

ಸಮಾಜ ಸುಧಾರಣೆಗೆ ವಚನಗಳ ಮೂಲಕ ಮುನ್ನುಡಿ ಬರೆದ ಬಸವಣ್ಣ

April 19, 2018

ತಿ.ನರಸೀಪುರ:  ಸಾಮಾಜಿಕ ಅಸಮಾನತೆಯನ್ನು ನಿವಾರಣೆ ಮಾಡಲು ಹಾಗೂ ಅಹಿಂಸಾ ಮಾರ್ಗ ವನ್ನು ಪ್ರಸ್ತುತಪಡಿಸುವ ಬಸವಣ್ಣನವರ ತತ್ವ ಹಾಗೂ ಸಂದೇಶಗಳು ಎಲ್ಲಾ ಕಾಲಕ್ಕೂ ಸಾರ್ವಕಾಲಿಕವಾಗಿವೆ ಎಂದು ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಹೇಳಿದರು. ವರುಣ ವಿಧಾನಸಭಾ ಕ್ಷೇತ್ರದ ವರುಣಾ ಗ್ರಾಮದಲ್ಲಿರುವ ಬಿಜೆಪಿ ಕಛೇರಿಯಲ್ಲಿ ಬುಧವಾರ ನಡೆದ ಬಸವ ಜಯಂತಿ ಕಾರ್ಯ ಕ್ರಮದಲ್ಲಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿಯೇ ಸಾಮಾ ಜಿಕ ಅಂಧಕಾರವನ್ನು ಅಳಿಸಲು ಜ್ಞಾನದ ಜ್ಯೋತಿಯಾಗಿ ಬಸವೇಶ್ವರರು ವಚನಗಳ ಮೂಲಕ ಸಮಾಜ…

ನಂಜನಗೂಡಿನಲ್ಲಿ ಬಸವ ಬಳಗ ಒಕ್ಕೂಟದಿಂದ ಜಗಜ್ಯೋತಿ ಬಸವ ಜಯಂತಿ ಆಚರಣೆ
ಮೈಸೂರು

ನಂಜನಗೂಡಿನಲ್ಲಿ ಬಸವ ಬಳಗ ಒಕ್ಕೂಟದಿಂದ ಜಗಜ್ಯೋತಿ ಬಸವ ಜಯಂತಿ ಆಚರಣೆ

April 19, 2018

ನಂಜನಗೂಡು:  ತಾಲೂಕಿನ ಬಸವ ಬಳಗ ಒಕ್ಕೂಟದ ವತಿಯಿಂದ ಇಂದು ಬೆಳಿಗ್ಗೆ ವಿಶ್ವಗುರು ಬಸವಣ್ಣನವರ 885ನೇ ಜಯಂತಿಯ ಪ್ರಯುಕ್ತ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಹಾಗೂ ಕಾಲ್ನಡಿಗೆ ಜಾಥಾ ನಡೆಯಿತು. ನಂತರ ಪ್ರಮುಖರು ಮಾತನಾಡಿ, 12ನೇ ಶತಮಾನದಲ್ಲಿ ಸಾಮಾನ್ಯರಾಗಿ ಹುಟ್ಟಿ, ಅಸಾಮಾನ್ಯರಾಗಿ ಬೆಳೆದು, ಕ್ರಾಂತಿ ಪುರುಷನಾಗಿ ಕಂಗೊಳಿಸಿ ಸಮಾಜದ ಅಂಕು ಡೊಂಕುಗಳನ್ನು ಸರಿಪಡಿಸಲು ತತ್ವಜ್ಞಾನಿಯಾಗಿ ಬೆಳೆದ ಮಹಾ ಚೇತನ ಬಸವಣ್ಣನವರು ಕಂಡ ವರ್ಗ ರಹಿತ, ವರ್ಣ ರಹಿತ, ಜಾತಿ ರಹಿತ, ಧಾರ್ಮಿಕ ಸಮಾನತೆಯ ಸಮಾಜ ನಮ್ಮೆಲ್ಲರ ಇಂದಿನ ಆಶಯವಾಗಿದೆ ಎಂದರು. ಮೆರವಣಿಗೆ…

ನೀತಿ ಸಂಹಿತೆ ನಡುವೆಯೂ ಕಾಮಗಾರಿ ಆರಂಭ
ಮೈಸೂರು

ನೀತಿ ಸಂಹಿತೆ ನಡುವೆಯೂ ಕಾಮಗಾರಿ ಆರಂಭ

April 19, 2018

ಹುಣಸೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಸರ್ಕಾರಿ ಕಾಮಗಾರಿ ಆರಂಭಿಸಲಾಗಿದೆ. ಪಟ್ಟಣದ ಎಪಿಎಂಸಿ ಯಾರ್ಡ್‍ನ ಜಿ–ಬ್ಲಾಕ್‍ನಲ್ಲಿ ಪ್ರಾಂಗಣ ವಿಸ್ತರಣಾ ಕಾಮಗಾರಿಗೆ ಮಂಡ್ಯದ ಮುರಳೀಧರ್ ಎಂಬುವವರಿಗೆ 2017-18ನೇ ಸಾಲಿನಲ್ಲಿ ಟೆಂಡರ್ ನೀಡಲಾಗಿತ್ತು. ಆದರೆ ಕಾಮಗಾರಿ ಯನ್ನು ಏ.16ರಂದು ಆರಂ ಭಿಸಿದ್ದಾರೆ. ಅಧಿಕಾರಿಗಳು ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋ ಪಿಸಿದ್ದಾರೆ. ಮಾ.27 ರಿಂದಲೇ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿ ಯಲ್ಲಿದ್ದರೂ ಸಹ ಕಾರ್ಮಿಕರು ಕೆಲಸದಲ್ಲಿ ಕಾರ್ಯನಿರತರಾಗಿದ್ದು, ಸ್ಥಳದಲ್ಲಿ ಕಬ್ಬಿಣ,…

ವಿದ್ಯುತ್ ಪ್ರವಹಿಸಿ ಎಲೆಕ್ಟ್ರೀಷಿಯನ್ ಸಾವು
ಮೈಸೂರು

ವಿದ್ಯುತ್ ಪ್ರವಹಿಸಿ ಎಲೆಕ್ಟ್ರೀಷಿಯನ್ ಸಾವು

April 19, 2018

ಹೆಚ್.ಡಿ.ಕೋಟೆ:  ಕೊಳವೆ ಬಾವಿಯ ಕಬ್ಬಿಣ ಪೈಪ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಎಲೆಕ್ಟ್ರೀಷಿಯನ್  ಮೃತಪಟ್ಟಿರುವ ಘಟನೆ ಸಂಭವಿಸಿದೆ. ತಾಲೂಕಿನ ಜಿಯಾರ ಗ್ರಾಮದ ಸೋಮಶೆಟ್ಟಿ ಪುತ್ರ ಸತೀಶ್(37) ಮೃತಪಟ್ಟವರು. ಗ್ರಾಮದಲ್ಲಿ ಶುಂಠಿ ಜಮೀನೊದರಲ್ಲಿ ಕೊಳವೆ ಬಾವಿ ಮೋಟಾರು ಕೆಟ್ಟು ಹೋಗಿತ್ತು. ಇದನ್ನು ಸರಿಪಡಿಸಲು ಪೈಪ್‍ಗಳನ್ನು ಹೊರ ತೆಗೆಯುವಾಗ ಸಮೀಪದಲ್ಲಿಯೇ ಇದ್ದ 11 ಕೆವಿ ವಿದ್ಯುತ್‍ಗೆ ಆಕಸ್ಮಿಕವಾಗಿ ತಗುಲಿದ ಪರಿಣಾಮ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾನೆ. ಮೃತನಿಗೆ ಪತ್ನಿ ಗಾಯತ್ರಿ, ಓರ್ವ ಪುತ್ರಿ, ಇಬ್ಬರು ಪುತ್ರರು ಇದ್ದಾರೆ. ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು…

ಎಲೈಟ್ ಮಿಸೆಸ್ ಇಂಡಿಯಾ 2018 ಸ್ಪರ್ಧೆ
ಮೈಸೂರು

ಎಲೈಟ್ ಮಿಸೆಸ್ ಇಂಡಿಯಾ 2018 ಸ್ಪರ್ಧೆ

April 19, 2018

ಮೈಸೂರು: ಮಿಸೆಸ್ ಯೂನಿವರ್ಸಿಟಿ ಪ್ರೈ.ಲಿ. ವತಿಯಿಂದ ಏಪ್ರಿಲ್ 22 ರಂದು ಎಲೈಟ್ ಮಿಸೆಸ್ ಇಂಡಿಯಾ2018 ಸ್ಪರ್ಧೆಗೆ ಆಡಿಷನ್ ಹಮ್ಮಿ ಕೊಳ್ಳಲಾಗಿದೆ. 21ರಿಂದ 49 ವರ್ಷದ ವಿವಾಹಿತ ಮಹಿಳೆಯರು ಭಾಗವಹಿಸ ಬಹುದಾಗಿದೆ. ಹೋಟೆಲ್ ಫಾರ್ಚೂನ್ ಜೆ.ಪಿ.ಪ್ಯಾಲೇಸ್, ನಜರ್‍ಬಾದ್ ಮೈಸೂರು ಇಲ್ಲಿ 9.30ರಿಂದ 12.30ರವರೆಗೆ ಆಡಿಷನ್ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ (ಖುಷಿ) 990108855, 9945002300 ಸಂಪರ್ಕಿಸಬಹುದು.  

ಬೇಸಿಗೆ ಶಿಬಿರ
ಮೈಸೂರು

ಬೇಸಿಗೆ ಶಿಬಿರ

April 19, 2018

ಮೈಸೂರು: ಮೈಸೂರಿನ ಸಿಎಸ್‍ಐ ಹಾಡ್ರ್ವಿಕ್ ಎಜುಕೇಷನಲ್ ವಿದ್ಯಾಸಂಸ್ಥೆ ಮತ್ತು ಅರೋರ ಎಜುಕೇಷನಲ್ ಟ್ರಸ್ಟ್ ಸಹಯೋಗದೊಂದಿಗೆ ಏ. 20 ರಿಂದ ಮೇ 20 ರವರೆಗೆ ಮಕ್ಕಳಿಗಾಗಿ ಒಂದು ತಿಂಗಳ ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ. ಶಿಬಿರದಲ್ಲಿ ಚಿತ್ರಕಲೆ, ಪೇಯಿಂಟಿಂಗ್, ಸಂಗೀತ, ಕ್ಲೇವರ್ಕ್, ಯೋಗಾಸನ, ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡಲಾಗು ವುದು. ಮಾಹಿತಿಗೆ ಮೊ. 9449680130, 9886896300 ಸಂಪರ್ಕಿಸಬಹುದು.

ಮಹಿಳೆಯರಿಗೆ ಉದ್ಯೋಗವಕಾಶ: ಬಿಜೆಪಿ ಅಭ್ಯರ್ಥಿ ಎಸ್. ಶಂಕರ್
ಮೈಸೂರು

ಮಹಿಳೆಯರಿಗೆ ಉದ್ಯೋಗವಕಾಶ: ಬಿಜೆಪಿ ಅಭ್ಯರ್ಥಿ ಎಸ್. ಶಂಕರ್

April 19, 2018

ತಿ.ನರಸೀಪುರ: ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ಬನ್ನೂರು ಪಟ್ಟಣದಲ್ಲಿ ಗಾರ್ಮೆಂಟ್ಸ್ ಆರಂಭಿಸಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಹೇಳಿದರು. ತಾಲ್ಲೂಕಿನ ಬನ್ನೂರು ಪಟ್ಟಣದ ಶ್ರೀ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಮಾತ ನಾಡಿ, ಸ್ವ ಸಹಾಯ ಸಂಘಗಳ ಮೂಲಕ ಸಂಘಟಿತರಾಗಿ ಆರ್ಥಿಕ ಸದೃಢತೆಯನ್ನು ಸಾಧಿಸುತ್ತಿರುವ ಮಹಿಳೆಯರು ಮತ್ತಷ್ಟು ಸಬಲತೆಯನ್ನು ಸಾಧಿಸಲು ಪೂರಕವಾಗಿ ಬನ್ನೂರು ಪಟ್ಟಣದಲ್ಲಿ ಗಾರ್ಮೇಂಟ್ಸ್ ಆರಂಭಿಸ ಬೇಕೆಂಬ ಚಿಂತನೆಯನ್ನು ನಡೆಸ ಲಾಗಿದೆ ಎಂದರು. ಕಳೆದೊಂದು ದಶಕ ದಿಂದಲೂ ಕ್ಷೇತ್ರದ ಶಾಸಕರಾಗಿದ್ದ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಬನ್ನೂರು…

1 1,608 1,609 1,610 1,611
Translate »