ಮೈಸೂರು

ದೇಶ ಮತ್ತೆ ಜಾತಿ ಪ್ರಾಬಲ್ಯದ ಕಡೆಗೆ 
ಮೈಸೂರು

ದೇಶ ಮತ್ತೆ ಜಾತಿ ಪ್ರಾಬಲ್ಯದ ಕಡೆಗೆ 

June 7, 2019

ಮೈಸೂರು: ಇಂದು ದೇಶವನ್ನು ಮತ್ತೆ ಜಾತಿ ರಾಜ ಕಾರಣದ ಪ್ರಾಬಲ್ಯದ ಕಡೆಗೆ ತಂದು ನಿಲ್ಲಿಸ ಲಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದ ರಾಮಯ್ಯ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆ ಇಂಜಿನಿ ಯರುಗಳ ಸಂಸ್ಥೆ ಸಭಾಂಗಣದಲ್ಲಿ ಗುರು ವಾರ ಅರಸು ಜಾಗೃತಿ ಸಮಿತಿ, ಅರಸು ಪತ್ರಿಕೆ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿ.ಡಿ. ದೇವರಾಜ ಅರಸು ಅವರ 37ನೇ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದು ಜಾತಿ ರಾಜಕಾರಣದ ಪ್ರಾಬಲ್ಯ ಹೆಚ್ಚುತ್ತಿರುವುದರ…

ಮೈಸೂರು ಅರಮನೆಯಲ್ಲಿ ಇಂಗ್ಲಿಷ್ ಅವತರಣಿಕೆ ಧ್ವನಿ, ಬೆಳಕು ಕಾರ್ಯಕ್ರಮ
ಮೈಸೂರು

ಮೈಸೂರು ಅರಮನೆಯಲ್ಲಿ ಇಂಗ್ಲಿಷ್ ಅವತರಣಿಕೆ ಧ್ವನಿ, ಬೆಳಕು ಕಾರ್ಯಕ್ರಮ

June 7, 2019

ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ಕನ್ನಡ ಅವತರಣಿಕೆಯ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಇಂದಿನಿಂದ ಇಂಗ್ಲೀಷ್ ಅವತರಣಿಕೆಯ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಪ್ರತಿ ಸೋಮವಾರದಿಂದ ಬುಧವಾರದವರೆಗೆ ರಾತ್ರಿ 7ರಿಂದ 8ರವರೆಗೆ ಕನ್ನಡ ಅವತರಣಿಕೆಯ ಧ್ವನಿ ಮತ್ತು ಬೆಳಕು ಕಾರ್ಯಕ್ರಮ, ಪ್ರತಿ ಗುರುವಾರ ಮತ್ತು ಶುಕ್ರ ವಾರ ರಾತ್ರಿ 7ರಿಂದ 8 ರವರೆಗೆ ಇಂಗ್ಲೀಷ್ ಅವತರಣಿಕೆಯ ಧ್ವನಿ ಮತ್ತು ಬೆಳಕು ಕಾರ್ಯಕ್ರಮ, ಪ್ರತಿ ಶನಿವಾರ ರಾತ್ರಿ 7 ರಿಂದ 8 ರವರೆಗೆ…

ಮೈಸೂರಲ್ಲಿ ಬೃಹತ್ ಪ್ರಮಾಣದ ಹಸಿ ಕಸ ಉತ್ಪತ್ತಿ ಬಗ್ಗೆ ಸರ್ವೆ ಆರಂಭ
ಮೈಸೂರು

ಮೈಸೂರಲ್ಲಿ ಬೃಹತ್ ಪ್ರಮಾಣದ ಹಸಿ ಕಸ ಉತ್ಪತ್ತಿ ಬಗ್ಗೆ ಸರ್ವೆ ಆರಂಭ

June 7, 2019

ಮೈಸೂರು: ಬೃಹತ್ ಪ್ರಮಾಣದಲ್ಲಿ ಹಸಿ ಕಸ ಉತ್ಪತ್ತಿಯಾಗುವ ಮೂಲಗಳನ್ನು ಗುರುತಿಸಲು ಮೈಸೂರು ಮಹಾನಗರ ಪಾಲಿಕೆಯು ಸರ್ವೆ ಕಾರ್ಯ ಆರಂಭಿಸಿದೆ. ಘನ ತ್ಯಾಜ್ಯ ನಿರ್ವಹಣಾ ನಿಯಮ-2016ರ ಪ್ರಕಾರ 100 ಕೆ.ಜಿ.ಗಿಂತ ಹೆಚ್ಚು ಹಸಿ ಕಸ ಉತ್ಪತ್ತಿ ಮಾಡುವ ಹೋಟೆಲ್, ಮಾಲ್, ಅಪಾರ್ಟ್‍ಮೆಂಟ್, ಕಲ್ಯಾಣ ಮಂಟಪ, ಸಮುದಾಯ ಭವನಗಳು ಹಾಗೂ ಇನ್ನಿತರ ಅಂಗಡಿಗಳವರು ವೈಜ್ಞಾನಿಕ ವಾಗಿ ತಂತ್ರಜ್ಞಾನ ಬಳಸಿ ಕಸ ವಿಲೇವಾರಿ ಮಾಡಬೇಕು. ಆದರೆ ಅವರು ಉತ್ಪತ್ತಿ ಮಾಡುವ ಹಸಿ ಕಸವನ್ನು ಪಾಲಿಕೆಯೇ ವಿಲೇವಾರಿ ಮಾಡುತ್ತಿರುವುದರಿಂದ ನಿರ್ವಹಣಾ ವೆಚ್ಚ ಅಧಿಕವಾಗಲಿದ್ದು,…

ಭೂ ವಂಚನೆ ಖಂಡಿಸಿ ಪ್ರತಿಭಟನೆ
ಮೈಸೂರು

ಭೂ ವಂಚನೆ ಖಂಡಿಸಿ ಪ್ರತಿಭಟನೆ

June 7, 2019

ಮೈಸೂರು: ದಲಿತರಿಗೆ ಸೇರಿದ ಭೂಮಿಯನ್ನು ಸ್ಕಿಲ್‍ಟೆಕ್ ಸಂಸ್ಥೆ ಹಾಗೂ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಜಂಟಿಯಾಗಿ ವಶಪಡಿಸಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರೊಡಗೂಡಿ ಪುಟ್ಟಯ್ಯ ಗುರುವಾರ ಬನ್ನೂರು ರಿಂಗ್ ರಸ್ತೆಯ ಮಾನಸಿನಗರದ ಮಾದೇಗೌಡ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಸರ್ವೆ ನಂ.174, 176/1ಬಿ, 176/2ಬಿ ಹಂಚ್ಯಾ ಗ್ರಾಮ ಪಂಚಾಯಿತಿಯ ಭೂಮಿಯನ್ನು ಸ್ಕಿಲ್‍ಟೆಕ್ ಸಂಸ್ಥೆಯವರು ಮತ್ತು ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದವರು ಜಂಟಿಯಾಗಿ ಸುಳ್ಳು ದಾಖಲೆ ಸೃಷ್ಟಿಸಿ ದಲಿತನಾದ ನನಗೆ ವಂಚಿಸಿದ್ದಾರೆ ಎಂದು ಆರೋಪಿಸಿದರು….

ಜಾಗತೀಕರಣದ ಸಮಸ್ಯೆಗಳಿಗೆ ಪರಿಸರ ಸಂರಕ್ಷಣೆ ಮದ್ದು
ಮೈಸೂರು

ಜಾಗತೀಕರಣದ ಸಮಸ್ಯೆಗಳಿಗೆ ಪರಿಸರ ಸಂರಕ್ಷಣೆ ಮದ್ದು

June 7, 2019

ಮೈಸೂರು: ಜಾಗತೀಕರಣದಿಂ ದಾಗಿ ತಲೆದೂರಿರುವ ಹಲವು ಸಮಸ್ಯೆಗಳ ಪರಿಹಾರಕ್ಕೆ ಪರಿಸರ ಸಂರಕ್ಷಣೆಯೊಂದೇ ದಾರಿ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಶ್ರೀರಾಂಪುರದಲ್ಲಿರುವ ಮಹಾವೀರ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ನಡೆದ ವಿಶ್ವ ಪರಿಸರ ದಿನಾ ಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರಿಸರ ಮಾನವ ಜೀವಿಸಲು ಬೇಕಾದ ವಾತಾ ವರಣವನ್ನು ಕೊಡುಗೆಯಾಗಿ ನೀಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಸೇರಿದಂತೆ ವಿವಿಧ ಕಾರಣಗಳಿಂದ ಪರಿಸರದ ಮೇಲೆ ದೌರ್ಜನ್ಯ ನಡೆಯುತ್ತಿದೆ. ಮಿತಿ ಮೀರಿದ ಪ್ರಮಾಣದಲ್ಲಿ ಗಿಡ, ಮರಗಳ ಹನನ…

ಹವಾಮಾನ ಬದಲಾವಣೆಯಿಂದ ಕೃಷಿ ಕ್ಷೇತ್ರದ ಮೇಲೆ ಕರಾಳ ಛಾಯೆ
ಮೈಸೂರು

ಹವಾಮಾನ ಬದಲಾವಣೆಯಿಂದ ಕೃಷಿ ಕ್ಷೇತ್ರದ ಮೇಲೆ ಕರಾಳ ಛಾಯೆ

June 7, 2019

ಮೈಸೂರು: ಕಳೆದ 30 ವರ್ಷಗಳಲ್ಲಿ ಹವಾಮಾನ ಬದ ಲಾವಣೆ ತೀವ್ರಗತಿಯಲ್ಲಿ ಸಾಗುತ್ತಿದೆ. ಇದ ರಿಂದ ವಾತಾವರಣದ ಉಷ್ಣಾಂಶದಲ್ಲಿ ಏರಿಕೆ, ಮಳೆ ಪ್ರಮಾಣದಲ್ಲಿ ಬದಲಾವಣೆ ಯಾಗುತ್ತಿದೆ ಎಂದು ಬೆಂಗಳೂರು ಮುಂದು ವರಿದ ಅಧ್ಯಯನಗಳ ರಾಷ್ಟ್ರೀಯ ಸಂಸ್ಥೆಯ ಪ್ರಾಧ್ಯಾಪಕಿ ಪ್ರೊ.ಸಿಂಧು ರಾಧಾಕೃಷ್ಣನ್ ಅಭಿಪ್ರಾಯಪಟ್ಟರು. ಮೈಸೂರು ವಿದ್ಯಾರಣ್ಯಪುರಂನಲ್ಲಿರುವ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕ ಹಾಗೂ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಹಯೋಗ ದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗ ವಾಗಿ ಆಯೋಜಿಸಿದ್ದ `ವಾತಾವರಣದಲ್ಲಾ ಗುತ್ತಿರುವ ಬದಲಾವಣೆ’ ಕುರಿತು ವಿಶೇಷ…

ನಾಳೆ ಗುತ್ತಿಗೆದಾರರ ಸಂಘದಿಂದ ಪ್ರತಿಭಾ ಪುರಸ್ಕಾರ
ಮೈಸೂರು

ನಾಳೆ ಗುತ್ತಿಗೆದಾರರ ಸಂಘದಿಂದ ಪ್ರತಿಭಾ ಪುರಸ್ಕಾರ

June 7, 2019

ಮೈಸೂರು: ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಜೂ.8ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಜೆ.ಕೆ. ಮೈದಾನದ ಅಮೃತ ಭವನದಲ್ಲಿ ಮೈಸೂರು ವಿಭಾಗ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಉಪಾಧ್ಯಕ್ಷ ಸಿ.ರಮೇಶ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಚಿವ ಸಾ.ರಾ.ಮಹೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಚೆಸ್ಕಾಂ ವ್ಯವ ಸ್ಥಾಪಕ ನಿರ್ದೇಶಕ ಡಾ.ಎಚ್.ಎನ್.ಗೋಪಾಲಕೃಷ್ಣ, ಬೆಂಗಳೂರಿನ ಕೆಇಐ ಇಂಡಸ್ಟ್ರೀಸ್ ಜೆ.ಕೆ.ಅನಿಲ್‍ಕುಮಾರ್…

ನಾಳೆ `ರಾಜ ಸಂಭ್ರಮ’ ಡಾ.ರಾಜ್ ರಸಮಂಜರಿ
ಮೈಸೂರು

ನಾಳೆ `ರಾಜ ಸಂಭ್ರಮ’ ಡಾ.ರಾಜ್ ರಸಮಂಜರಿ

June 7, 2019

ಮೈಸೂರು: ಡಾ.ರಾಜ್‍ಕುಮಾರ್ ಅವರ 90ನೇ ಹುಟ್ಟುಹಬ್ಬದ ಅಂಗವಾಗಿ ಡಾ.ರಾಜ್ ಮ್ಯೂಸಿಕಲ್ ಗ್ರೂಪ್ ವತಿಯಿಂದ ಜೂ.8ರಂದು ಸಂಜೆ 5.30 ಗಂಟೆಗೆ ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ `ರಾಜ ಸಂಭ್ರಮ- ಕನ್ನಡದ ಹಬ್ಬ’ ಡಾ.ರಾಜ್ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಚಾರಕ ಮೈಕ್ ಚಂದ್ರು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇ ಶಕ ಹನೂರು ಚನ್ನಪ್ಪ ಉದ್ಘಾಟಿಸುವರು. ನಟ…

ಮೈಸೂರಲ್ಲಿ ಮಂಡ್ಯ ಒಕ್ಕೂಟ ಅಸ್ತಿತ್ವಕ್ಕೆ
ಮೈಸೂರು

ಮೈಸೂರಲ್ಲಿ ಮಂಡ್ಯ ಒಕ್ಕೂಟ ಅಸ್ತಿತ್ವಕ್ಕೆ

June 7, 2019

ಮೈಸೂರು: ಮೈಸೂರಿನಲ್ಲಿ `ಮಂಡ್ಯ ಒಕ್ಕೂಟ’ ಸ್ಥಾಪಿಸಲಾಗಿದೆ.ಮಂಡ್ಯ ಒಕ್ಕೂಟವನ್ನು ಜಿಲ್ಲಾ ನೋಂದಣಾಧಿಕಾರಿಗಳಲ್ಲಿ ನೋಂದಾಯಿಸಲಾಗಿದ್ದು, ಅಸ್ತಿತ್ವಕ್ಕೆ ಬಂದಿರುವ ಅಡ್ಯಾಕ್ ಕಮಿಟಿಯಲ್ಲಿ ಎಸ್.ಎ.ನರಸಿಂಹೇಗೌಡ ಗೌರವಾಧ್ಯಕ್ಷ ರಾಗಿ, ಸಿ.ಎನ್.ಕೃಷ್ಣೇಗೌಡ ಅಧ್ಯಕ್ಷರಾಗಿ, ಆರ್.ಜೆ.ಗುರುದೇವ್ ಉಪಾಧ್ಯಕ್ಷರಾಗಿ, ಸಿ.ಎ.ದೇವರಾಜು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಹೆಚ್.ಎಂ. ಸಿದ್ದಯ್ಯ ಖಜಾಂಚಿ ಯಾಗಿ ನಿಯೋಜಿತಗೊಂಡಿದ್ದಾರೆ. ಪ್ರಕಾಶ ಚಿಕ್ಕಪಾಳ್ಯ, ಎಂ.ರಮೇಶ, ಎಸ್.ಟಿ.ರವಿ ಕುಮಾರ್, ಎನ್.ಎಂ.ಶಿವಪ್ರಕಾಶ್, ಪಿ.ಎಸ್.ವಿಶ್ವನಾಥ, ಎ.ಎಲ್.ಉಮೇಶ, ಎಂ.ಎನ್. ಶಿವಕುಮಾರ್, ಮಹದೇವು ಹಾಗೂ ಲೋಕೇಶ ಮಂಡ್ಯ ಒಕ್ಕೂಟದ ನಿರ್ದೇಶಕರಾಗಿದ್ದಾರೆ. ಬುಧವಾರ ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಒಕ್ಕೂಟದ ಮೊದಲ ಕಾರ್ಯಕಾರಿ ಸಮಿತಿ ಸಭೆ ನಡೆಯಿತು….

ಮೈಸೂರು ಜಿಲ್ಲೆಯಲ್ಲಿ ಸಿಎಂ ಮಾತೃಶ್ರೀಯಲ್ಲಿ 4726, ಪಿಎಂ ಮಾತೃವಂದನಾದಲ್ಲಿ 22,726 ಫಲಾನುಭವಿಗಳು
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಸಿಎಂ ಮಾತೃಶ್ರೀಯಲ್ಲಿ 4726, ಪಿಎಂ ಮಾತೃವಂದನಾದಲ್ಲಿ 22,726 ಫಲಾನುಭವಿಗಳು

June 7, 2019

ಮೈಸೂರು: ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವ ಮುಖ್ಯ ಮಂತ್ರಿಗಳ ಮಾತೃಶ್ರೀ ಯೋಜನೆ ಮತ್ತು ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಗಳನ್ನು ಮೈಸೂರು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸ ಲಾಗುತ್ತಿದೆ. ಮಾತೃಶ್ರೀ ರಾಜ್ಯ ಸರ್ಕಾರ ಜಾರಿಗೆ ತಂದಿ ದ್ದರೆ ಮಾತೃವಂದನಾ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಎರಡೂ ಮಹತ್ವದ ಯೋಜನೆ ಗಳನ್ನು ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅನುಷ್ಠಾನಗೊಳಿಸುತ್ತಿದೆ. ಮೈಸೂರು ಜಿಲ್ಲೆಯಲ್ಲಿ 4726 ಗರ್ಭಿಣಿಯರಿಗೆ ಮುಖ್ಯಮಂತ್ರಿಗಳು ಮಾತೃಶ್ರೀ ಯೋಜನೆಯಡಿ ಪ್ರೋತ್ಸಾಹ…

1 955 956 957 958 959 1,611
Translate »