ಮೈಸೂರು: ಇಂದು ಹೆಸರಾಂತ ಕವಿಗಳ ಪದ್ಯಗಳನ್ನು ಸಿನಿಮಾಗಳಲ್ಲಿ ಅರ್ಥಹೀನವಾಗಿ ಕೆಟ್ಟದಾಗಿ ಬಳಸಿಕೊಳ್ಳಲಾಗುತ್ತಿರುವ ಬಗ್ಗೆ ಸಂಸ್ಕøತಿ ಚಿಂತಕ ಡಾ.ಗುಬ್ಬಿಗೂಡು ರಮೇಶ್ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ವಿಜಯ ವಿಠಲ ಕಾಲೇಜು ಸಭಾಂಗಣದಲ್ಲಿ ಸೋಮವಾರ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಯೋಜಿಸಿದ್ದ ಕವಿ ಜಿ.ಪಿ.ರಾಜರತ್ನಂ ಕವಿ ಕಾವ್ಯ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಾತನಾಡಿದರು. ಜಿ.ಪಿ.ರಾಜರತ್ನಂ ಅವರು ತೀರಿಕೊಂಡ ತಮ್ಮ ಪತ್ನಿಯನ್ನು ಕುರಿತು `ನೀ ನಂಗೆ ಬೆಳಕಾಗಿದ್ದೆ ನಂಜಿ…’ ಎಂಬ ಪದ್ಯ ಮತ್ತು ಡಾ.ದ.ರಾ.ಬೇಂದ್ರೆಯವರು ತಮ್ಮ ತೊಡೆಯ ಮೇಲೆ ಪುತ್ರನ…
ಕಾಫಿ ಲೋಟದ ಹುಡುಗ ಐ ಲವ್ ಯು
June 12, 2018ಬದುಕಿನ ತಿರುವಿನಲ್ಲಿ ಏನೆಲ್ಲಾ ನೆನಪುಗಳು ಅವಿತು ಕುಳಿತು ಮತ್ತೆ ಮತ್ತೆ ಮುತ್ತಿಕೊಳ್ಳುತ್ತವೆ ಎಂದರೆ ಕೆಲವೊಂದು ನೆನಪುಗಳು ನಮ್ಮನ್ನು ಎಚ್ಚರಿಸಿ ಪಾಠ ಹೇಳಿ ಹೋಗಿರುತ್ತವೆ. ಮತ್ತಷ್ಟು ನೆನಪುಗಳು ನಮ್ಮನ್ನು ಮೂಕ ವಿಸ್ಮಿತರನ್ನಾಗಿಸುತ್ತವೆ. ಇನ್ನೊಂದಿಷ್ಟು ನೆನಪುಗಳು ನಮ್ಮನ್ನು ಹೊಟ್ಟೆ ಹುಣ್ಣಾ ಗಿಸುವಂತೆ ನಗಿಸಿ ತಳದಲ್ಲೆಲ್ಲೋ ಒಂದು ಮೆಸೇಜು ಕೊಟ್ಟು ಹೋಗಿರುತ್ತವೆ. ಸಾಮಾನ್ಯವಾಗಿ ಎಲ್ಲರ ಬದುಕಿನಲ್ಲೂ ಒಂದಲ್ಲ ಒಂದು ನಗೆ ದೀಪದ ಬೆಳಕು ಹೀಗೆ ಹಾದು ಹೋಗಿರುತ್ತದೆ. ಸರಳತೆ, ಸಜ್ಜನಿಕೆ, ಪ್ರಮಾಣಿಕತೆ, ದಕ್ಷತೆ, ಪ್ರೀತಿ, ಅಭಿಮಾನ ಮುಂತಾದ ಸಾಮಾಜಿಕ ಸೌಂದರ್ಯಗಳನ್ನು ನೆನಪಿಸುವ…
ಮಕ್ಕಳ ಕಳ್ಳರೆಂಬ ಸಮೂಹ ಸನ್ನಿ
June 12, 2018ಇದೊಂದು ಘಟನೆಯನ್ನು ನಿಮಗೆ ಹೇಳಲೇಬೇಕು. ನಾವೆಲ್ಲ ಪ್ರೈಮರಿ ಶಾಲೆಯ ವಿದ್ಯಾರ್ಥಿಗಳಾಗಿದ್ದಾಗ ಈಗಿನಂತೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಆಟೋ, ವ್ಯಾನು, ಬಸ್ಸುಗಳು ಇನ್ನು ರೋಡಿಗಿಳಿಯದಿದ್ದ ಕಾಲ ಅದು. ಅಷ್ಟಕ್ಕೂ ಶಾಲೆ ಬಿಟ್ಟ ಮೇಲೆ ತಂದೆ-ತಾಯಿಗಳು ಗೇಟಿನ ಹತ್ತಿರ ನಿಂತು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವ ಧಾವಂತ ಗಳು ಇರದಿದ್ದ ಕಾಲವದು. ಶಾಲೆ ಬಿಟ್ಟ ಮೇಲೆ ಹಳೇ ಸ್ಕೂಲ್ ಬ್ಯಾಗಿನ ದಾರ ಕ್ಕೊಂದು ಗಂಟು ಹಾಕಿ, ಬೆನ್ನಿಗಾನಿಸಿ ಕೊಂಡು ಎದೆಯ ಮುಂಭಾಗದ ಬ್ಯಾಗಿನ ದಾರಕ್ಕೆ ಕೈ ಸಿಕ್ಕಿಸಿಕೊಂಡು ಅವರವರ…
ಕನ್ನಡಿಗರ ನೆನಪಿನಾಗಸದ ತುಂಬ ರಾಜಕುಮಾರ
April 24, 2018ಅಂದಿನ ಸಿನಿಮಾಗಳಲ್ಲಿ ಕಥೆಗಾರರು ಸಿನಿಮಾದ ನಾಯಕ ನಟನಿಗಾಗಿ ಕತೆ ಬರೆಯುತ್ತಿರಲಿಲ್ಲ ಕತೆ ಬಯಸಿದ ಪಾತ್ರಕ್ಕೆ ನಾಯಕ ಬದಲಾಗುತ್ತಿದ್ದ. ಅಂಥ ಕಾಲದಲ್ಲಿ ಬಂದ ಅಣ್ಣಾವ್ರು ಪಾತ್ರಕ್ಕೆ ತಕ್ಕಂತೆ ಬದಲಾಗುತ್ತಿದ್ದರು. ಭಕ್ತ ಕನಕದಾಸ ಪಾತ್ರ ಮಾಡಿದ ಅದೇ ರಾಜ್ಕುಮಾರ್, ಜೇಮ್ಸ್ಬಾಂಡ್ ಪಾತ್ರವನ್ನೂ ಮಾಡುತ್ತಿದ್ದರು. ಅಂದರೆ ಆಗ ಕಲಾವಿದನಿಗೆ ಪರಕಾಯ ಪ್ರವೇಶದ ಸಾಮಥ್ರ್ಯ ಇರಬೇಕಿತ್ತು. ಶುದ್ಧ ಭಾವ ಪ್ರತಿಸ್ಪಂದನ ಇರಬೇಕಿತ್ತು. ಧ್ವನಿಯ ಏರಿಳಿತ ಮತ್ತು ಶ್ರಮವಹಿಸಿ ಅದನ್ನು ದುಡಿಸಿಕೊಳ್ಳುವ ಸತತ ಪರಿಶ್ರಮ ಇರಬೇಕಿತ್ತು. ಇದೆಲ್ಲಾ ಇದ್ದವರು ಕಲಾವಿದರಾಗುತ್ತಿದ್ದರೇ ವಿನಃ ಸ್ಟಾರ್ ಆಗುತ್ತಿರಲಿಲ್ಲ….