ಸರಗೂರು, ಏ. 17 (ನಾಗೇಶ್)- ಇಲ್ಲಿಗೆ ಸಮೀಪದ ಹಾಲಗಡ ಬಳಿ ಚಿರತೆ ಕಳೇಬರ ಪತ್ತೆಯಾಗಿದೆ. ಹಾಲಗಡ ಮತ್ತು ಇಟ್ನಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಕಪಿಲಾ ನದಿ ಸಮೀಪ ನಿರ್ಮಾಣ ಹಂತದಲ್ಲಿರುವ ಸೇತುವೆಯ ಪಿಲ್ಲರ್ ಬಳಿ 3ರಿಂದ 4 ವರ್ಷದ ಚಿರತೆ ಕಳೇಬರ ಪತ್ತೆ ಯಾಗಿದೆ. ಪಶುವೈದ್ಯ ಡಾ.ಮಹೇಶ್ ಮರಣೋತ್ತರ ಪರೀಕ್ಷೆ ನಡೆಸಿದರು. ಚಿರತೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಂಗಾಂಗ ಮಾದರಿಯನ್ನು ಪ್ರಯೋಗಾಲಕ್ಕೆ ಕಳುಹಿಸಲಾಗಿದೆ. ಎಸಿಎಫ್ ಪರಮೇಶ್ವರ್, ಸರಗೂರು ಆರ್ಎಫ್ ಮಧು ಹಾಗೂ ಅರಣ್ಯ ಸಿಬ್ಬಂದಿ…
ಶ್ರೀಕಂಠೇಶ್ವರನ ಸನ್ನಿಧಿ ತಲುಪಿದ ಕಪಿಲೆ
August 12, 2018ನಂಜನಗೂಡು: ಕಬಿನಿ ಜಲಾಶಯದಿಂದ ಕಳೆದ ಎರಡು ದಿನದಿಂದ ಸತತವಾಗಿ 80 ಸಾವಿರ ಕ್ಯೂಸೆಕ್ ನೀರು ಹೊರ ಬಿಟ್ಟ ಪರಿಣಾಮ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಪಿಲೆ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯವನ್ನು ಸ್ಪರ್ಶಿಸಿದೆ. ಇಂದು ಬೆಳಿಗ್ಗೆ ನೀರಿನ ಮಟ್ಟ ಹೆಚ್ಚಾಗಿದ್ದು, ಚಾಮರಾಜನಗರ ಬೈಪಾಸ್ ರಸ್ತೆಯನ್ನು ದಾಟಿ ಕಪಿಲಾ ನದಿಯ ನೀರು ಶ್ರೀಕಂಠೇಶ್ವರ ದೇವಾಲಯವನ್ನು ಭಾಗಶಃ ಆವರಿಸಿದೆ. ದೇವಾಲ ಯದ ಬಲ ಭಾಗದಲ್ಲಿರುವ ರಾಷ್ಟ್ರಪತಿ ರಸ್ತೆಗೂ ನೀರು ನುಗ್ಗಿದ್ದಲ್ಲಿ ದೇವಾಲಯ ಸಂಪೂರ್ಣವಾಗಿ ಜಲಾವೃತವಾಗುವ ಸಾಧ್ಯತೆ ಇದೆ. ದೇವಾಲಯದ ಪ್ರವೇಶ ದ್ವಾರದಲ್ಲಿ…
ಕಪಿಲೆಯಲ್ಲಿ ಮುಳುಗುತ್ತಿದ್ದ ಬೆಂಗಳೂರು ವೃದ್ಧ ದಂಪತಿ
July 25, 2018ನಂಜನಗೂಡು: ಬೆಂಗಳೂರಿನ ವೃದ್ಧ ದಂಪತಿ ಕಪಿಲಾ ನದಿಯಲ್ಲಿ ಮುಳುಗುತ್ತಿದ್ದಾಗ ಸ್ಥಳೀಯರು ವೃದ್ಧೆಯನ್ನು ಪಾರು ಮಾಡಿದರೆ, ವೃದ್ಧ ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಈ ದುರಂತ ಇಂದು ನಂಜನಗೂಡಿನ ಹದಿನಾರು ಕಾಲು ಮಂಟಪದ ಬಳಿ ನಡೆದೆ. ಬೆಂಗಳೂರಿನ ದಾಸರಹಳ್ಳಿ ನಿವಾಸಿ ನಾಗ ರಾಜು(70) ನೀರಲ್ಲಿ ಮುಳುಗಿ ಸಾವಿಗೀಡಾದರೆ, ಅವರ ಪತ್ನಿ ಕಲಾವತಿ(60)ಯನ್ನು ರಕ್ಷಿಸಲಾಗಿದೆ. ಮರದ ಕೊಂಬೆಯೊಂದಕ್ಕೆ ಸಿಲುಕಿದ್ದ ಕಲಾವತಿಯವರನ್ನು ಸ್ಥಳೀಯರು ರಕ್ಷಿಸಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿ ಸಿದ್ದಾರೆ. ಆದರೆ, ತಾನು ಮತ್ತು ಪತಿ ನಂಜನ ಗೂಡು ದೇವಸ್ಥಾನಕ್ಕೆ ಬಂದಿದ್ದು,…
ಕಪಿಲಾ ನದಿ ಪ್ರವಾಹದಿಂದ ಕೊಚ್ಚಿ ಹೋದ ಭತ್ತದ ಫಸಲು: ನೀರಲ್ಲಿ ಮುಳುಗಿ ಆತ್ಮಹತ್ಯೆಗೆ ಯತ್ನಿಸಿದ ರೈತ
June 18, 2018ಮೈಸೂರು/ನಂಜನಗೂಡು: ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ಉಂಟಾದ ಪ್ರವಾಹದಿಂದ ಭತ್ತದ ಬೆಳೆ ಕೊಚ್ಚಿ ಹೋದ ಪರಿಣಾಮ ಕಪಿಲಾ ನದಿಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ರೈತನೊಬ್ಬನನ್ನು ಸ್ಥಳೀಯರು ರಕ್ಷಿಸಿರುವ ಘಟನೆ ಭಾನುವಾರ ಬೆಳಿಗ್ಗೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕುಪ್ಪರವಳ್ಳಿಯಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ಕುಪ್ಪರವಳ್ಳಿ ಗ್ರಾಮದ ಬಸವಯ್ಯ ಎಂಬುವರೇ ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದು, ಗ್ರಾಮದ ಕೆಲ ಯುವಕರು ತಕ್ಷಣವೇ ನೀರಿನಿಂದ ಆವೃತವಾಗಿದ್ದ ಕಪಿಲಾ ನದಿ ಅಂಚಿನ ಗದ್ದೆಗೆ ಧಾವಿಸಿ ಮುಳುಗಲೆತ್ನಿಸಿದ ಬಸವಯ್ಯ…