Tag: Madikeri

ಇಂದು ತರಬೇತಿ ಕಾರ್ಯಕ್ರಮ
ಕೊಡಗು

ಇಂದು ತರಬೇತಿ ಕಾರ್ಯಕ್ರಮ

September 12, 2018

ಮಡಿಕೇರಿ: ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶ್ರೀರಂಗಪಟ್ಟಣ ಪರಿವರ್ತನಾ ಶಾಲೆ ಮತ್ತು ಕಾಲೇಜು, ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಮತ್ತು ಕಾವೇರಿ ಪದವಿ ಮತ್ತು ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಸೆ.12 ರಂದು ವಿರಾಜಪೇಟೆ ಕಾವೇರಿ ಕಾಲೇಜಿನ ಕೌಸ್ತುಭ ಸಭಾಂಗಣದಲ್ಲಿ ತರಬೇತಿ ಕಾರ್ಯಕ್ರಮ ನಡೆಯಲಿದೆ. ಜೆಸಿಐ ಪೊನ್ನಂಪೇಟೆ ನಿಸರ್ಗ ಅಧ್ಯಕ್ಷ ವಿಕ್ರಂ ಮೂಡಗದ್ದೆ, ಗೋಣಿಕೊಪ್ಪ ಕಾವೇರಿ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಕುಟ್ಟಂಡ ಜಿ.ಉತ್ತಪ್ಪ, ಶ್ರೀರಂಗಪಟ್ಟಣ ಪರಿವರ್ತನಾ ಶಾಲೆ ಹಾಗೂ ಅಂತರಾಷ್ಟ್ರೀಯ ತರಬೇತುದಾರರಾದ ಡೀನ್ ಆರ್.ಎ.ಚೇತನ್ ರಾಮ್…

ಪ್ರಕೃತಿ ವಿಕೋಪ ಹಾನಿ; ನಷ್ಟ ಪರಿಶೀಲನೆಗಾಗಿ ಮುಂದಿನ ವಾರ ಕೊಡಗಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ
ಕೊಡಗು

ಪ್ರಕೃತಿ ವಿಕೋಪ ಹಾನಿ; ನಷ್ಟ ಪರಿಶೀಲನೆಗಾಗಿ ಮುಂದಿನ ವಾರ ಕೊಡಗಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ

September 8, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪ ಸಂಬಂಧಿತ ಹಾನಿ ಮತ್ತು ನಷ್ಟದ ಸಮಗ್ರ ಪರಿಶೀಲನೆಗಾಗಿ ಮುಂದಿನ ವಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕೊಡಗಿಗೆ ಭೇಟಿ ನೀಡಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯಲ್ಲಿ 1709 ಮನೆಗಳು ನಷ್ಟವಾಗಿದ್ದು, ಈ ಮನೆಗಳ ಮಾಲೀಕರಿಗೆ ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ನಿಧಿಯಿಂದ 5.45 ಕೋಟಿ ರೂಪಾಯಿ ಪರಿಹಾರ ಧನ ನೀಡಲಾಗಿದೆ. ಮುಂದಿನ 3…

ಮೈಸೂರು ಮೂಲದ ಪೌರ ಕಾರ್ಮಿಕರ ಆತ್ಮಹತ್ಯೆ
ಕೊಡಗು

ಮೈಸೂರು ಮೂಲದ ಪೌರ ಕಾರ್ಮಿಕರ ಆತ್ಮಹತ್ಯೆ

September 6, 2018

ಮಡಿಕೇರಿ: ಮಡಿಕೇರಿ ಗಾಂಧಿ ಮೈದಾನದಲ್ಲಿರುವ ರಂಗಮಂಟಪದ ಹಿಂಬದಿಯಲ್ಲಿ ವಾಸ ವಾಗಿದ್ದ ಪೌರ ಕಾರ್ಮಿಕರಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ತಡವಾಗಿ ಬೆಳ ಕಿಗೆ ಬಂದಿದೆ. ಮಡಿಕೇರಿ ನಗರ ಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಸತೀಶ (38) ಮತ್ತು ಉಷಾ(29) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಘಟನೆ ವಿವರ: ಮೂಲತಃ ಮೈಸೂರಿನ ಅಶೋಕಪುರಂನ ಅಂಬೇಡ್ಕರ್ ಕಾಲೋನಿ ನಿವಾಸಿ ಸತೀಶ್ ಮತ್ತು ಹೆಚ್.ಡಿ.ಕೋಟೆ ರಸ್ತೆಯ ಸಿಲ್ಕ್ ಫ್ಯಾಕ್ಟರಿ ಸಮೀಪದ ನಿವಾಸಿ ಉಷಾ ಕಳೆದ 8 ವರ್ಷಗಳಿಂದ ಮಡಿಕೇರಿ…

ತಂತಿಪಾಲದಲ್ಲಿ ಮಳೆ ಮೀಟಿದ ಮರಣ ಮೃದಂಗ
ಕೊಡಗು

ತಂತಿಪಾಲದಲ್ಲಿ ಮಳೆ ಮೀಟಿದ ಮರಣ ಮೃದಂಗ

September 4, 2018

ಮಡಿಕೇರಿ:  ಭತ್ತದ ಗದ್ದೆಗಳು, ಕಾಫಿ ತೋಟಗಳ ನಡುವೆ ಕಂಗೊಳಿಸುತ್ತಿದ್ದ ಗ್ರಾಮವೇ ತಂತಿಪಾಲ. ಹಲವು ವರ್ಷ ಗಳ ಹಿಂದೆ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ತೂಗು ಸೇತುವೆಯನ್ನು ನಿರ್ಮಿಸಲಾಗಿತ್ತು. ಸರ್ವಋತುವಲ್ಲೂ ಹರಿಯುವ ಹೊಳೆಗೆ ಕಟ್ಟಿದ ತೂಗು ಸೇತುವೆಯಿಂದ ಈ ಗ್ರಾಮಕ್ಕೆ ತಂತಿಪಾಲ ಎಂಬ ಹೆಸರು ಬಂತು ಎನ್ನಲಾಗುತ್ತಿದೆ. ಅಧಿಕ ಮಳೆ, ಭೂ ಕುಸಿತ, ರಸ್ತೆ ಸಂಪರ್ಕ ಬಂದ್ ಆಗುವುದು ಈ ಗ್ರಾಮದ ನಿವಾಸಿಗಳಿಗೆ ಹೊಸದೇನಲ್ಲ. ಆದರೆ, ಪ್ರಕೃತಿ ಹರಸಿದ ಊರೇ ಇಂದು ಪ್ರಕೃತಿಯ ವಿಕೋಪಕ್ಕೆ ಭೂ ಸಮಾಧಿಯಾಗಿದೆ. ಕಾಫಿ…

ನೋಡಲಾಗದು ಮಕ್ಕಂದೂರು ಗ್ರಾಮದ ಭೀಕರತೆ
ಕೊಡಗು

ನೋಡಲಾಗದು ಮಕ್ಕಂದೂರು ಗ್ರಾಮದ ಭೀಕರತೆ

September 3, 2018

ಮಡಿಕೇರಿ: ಬಾಯ್ಬಿರಿದು ನಿಂತಿರುವ ಬೆಟ್ಟಗಳು.. ಕುಸಿದು ಬಿದ್ದ ಬೃಹತ್ ಬಂಡೆಗಳು.. ರಸ್ತೆಗಳು ಇತ್ತೆಂಬುದಕ್ಕೆ ಸಾಕ್ಷಿಯನ್ನೇ ಉಳಿಸದ ಮಣ್ಣಿನ ರಾಶಿ. ಕಾಫಿ ತೋಟಗಳಿಂದ ಛಿದ್ರಗೊಂಡು ಹಾರಿ ಹರಡಿಕೊಂಡಿರುವ ಕಾಫಿ ಗಿಡಗಳು. ಎಲ್ಲಿ ನೋಡಿದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮನೆಗಳ ಅವಶೇಷಗಳು. ಇದು ಮ್ಕಕಂದೂರು ವ್ಯಾಪ್ತಿಯಲ್ಲಿ ಕಂಡು ಬರುವ ಕರಾಳ ಚಿತ್ರಣ.. ಕಾಫಿ ತೋಟಗಳು, ಗದ್ದೆ ಬಯಲುಗಳ ನಡುವೆ ನೆಲೆ ನಿಂತಿದ್ದ ಮಕ್ಕಂದೂರು ಗ್ರಾಮ ವರುಣನ ಮುನಿಸಿಗೆ ಸಂಪೂರ್ಣ ಧ್ವಂಸಗೊಂಡಿದೆ. ಮಡಿಕೇರಿಯಿಂದ ಮಕ್ಕಂ ದೂರು ಜಂಕ್ಷನ್‍ಗೆ ತೆರಳಿ ಅಲ್ಲಿಂದ ತಂತಿ ಪಾಲದ…

ವಸತಿ ಗೃಹದಲ್ಲಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವ್ಯವಸ್ಥೆ ನೋಡಲ್ ಅಧಿಕಾರಿಗಳ ನೇಮಕ
ಕೊಡಗು

ವಸತಿ ಗೃಹದಲ್ಲಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವ್ಯವಸ್ಥೆ ನೋಡಲ್ ಅಧಿಕಾರಿಗಳ ನೇಮಕ

September 1, 2018

ಮಡಿಕೇರಿ: ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಸತತವಾಗಿ ಸುರಿದ ಮಳೆಯಿಂದ ಭೂಕುಸಿತ ಹಾಗೂ ಪ್ರವಾಹ ಉಂಟಾಗಿ ಮಾನವ ಪ್ರಾಣಹಾನಿ, ಜಾನುವಾರು ಪ್ರಾಣಹಾನಿ, ವಾಸದ ಮನೆ ಹಾನಿ, ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ, ಬೆಳೆಹಾನಿ ಆಗಿದ್ದು, ಈ ಬಗ್ಗೆ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳನ್ನು ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ವಿವಿಧ ಕಡೆಯ ಸಮುದಾಯ ಭವನಗಳಲ್ಲಿ ತೆರೆಯಲಾಗಿದೆ. ಮುಂದುವರೆದು ಶಾಲಾ-ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಜಿಲ್ಲೆಯಲ್ಲಿ ತುರ್ತಾಗಿ ಪರಿಹಾರ ವಿತರಣೆ, ಮೂಲ ಸೌಕರ್ಯಗಳ ಪುನರ್ ನಿರ್ಮಾಣ, ಹಾನಿ ಸಮೀಕ್ಷೆ ಕಾರ್ಯಗಳನ್ನು ಪೂರ್ಣಗೊಳಿಸಬೇಕಾಗಿರುವುದರಿಂದ…

ಇಂದು ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆ ಉದ್ಘಾಟನೆ
ಕೊಡಗು

ಇಂದು ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆ ಉದ್ಘಾಟನೆ

September 1, 2018

ಮಡಿಕೇರಿ: ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಸೆಪ್ಟೆಂಬರ್ 1 ರಂದು ಮಧ್ಯಾಹ್ನ 2.30 ಗಂಟೆಗೆ ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ನಡೆಯಲಿದೆ. ಶಾಸಕರಾದ ಅಪ್ಪಚ್ಚು ರಂಜನ್, ಸಂಸದರಾದ ಪ್ರತಾಪ್ ಸಿಂಹ, ಜಿಲ್ಲಾ ಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸುಮನ್ ಡಿ.ಪೆನ್ನೇ ಕರ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮಡಿಕೇರಿ-ಸಂಪಾಜೆ, ಮಡಿಕೇರಿ-ಸೋಮವಾರಪೇಟೆ ರಸ್ತೆ ಸರಿಪಡಿಸುವ ಬಗ್ಗೆ ಡಿಸಿ ಸಮಾಲೋಚನೆ
ಕೊಡಗು

ಮಡಿಕೇರಿ-ಸಂಪಾಜೆ, ಮಡಿಕೇರಿ-ಸೋಮವಾರಪೇಟೆ ರಸ್ತೆ ಸರಿಪಡಿಸುವ ಬಗ್ಗೆ ಡಿಸಿ ಸಮಾಲೋಚನೆ

September 1, 2018

ಮಡಿಕೇರಿ: ಮಡಿಕೇರಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ ಹಾಗೂ ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿ ಮಾರ್ಗದ ರಸ್ತೆ ಸರಿಪಡಿಸುವ ನಿಟ್ಟಿನಲ್ಲಿ ಗಡಿ ರಸ್ತೆ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಎಂಜಿ ನಿಯರ್‍ಗಳೊಂದಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಚರ್ಚೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರ ವಾರ ಸಮಾಲೋಚನೆ ನಡೆಸಿದ ಜಿಲ್ಲಾಧಿ ಕಾರಿ ಅವರು ಮಡಿಕೇರಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ ಹಾಗೂ ಮಡಿಕೇರಿ-ಸೋಮ ವಾರಪೇಟೆ ರಾಜ್ಯ ಹೆದ್ದಾರಿ ಮಾರ್ಗದ ರಸ್ತೆ ಯಲ್ಲಿ ವಾಹನಗಳ ಓಡಾಟಕ್ಕೆ ಉತ್ತಮ ರಸ್ತೆ ನಿರ್ಮಾಣ…

ಆಹಾರ ಇಲಾಖೆಯ ಉಪನಿರ್ದೇಶಕರಾಗಿಎಸ್.ಸದಾಶಿವಯ್ಯ ಅಧಿಕಾರ ಸ್ವೀಕಾರ
ಕೊಡಗು

ಆಹಾರ ಇಲಾಖೆಯ ಉಪನಿರ್ದೇಶಕರಾಗಿಎಸ್.ಸದಾಶಿವಯ್ಯ ಅಧಿಕಾರ ಸ್ವೀಕಾರ

September 1, 2018

ಮಡಿಕೇರಿ: ಆಹಾರ ಇಲಾಖೆಯ ನೂತನ ಉಪನಿರ್ದೇ ಶಕರಾಗಿ ಎಸ್.ಸದಾಶಿವಯ್ಯ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡಿ ದ್ದಾರೆ. ಎಸ್.ಸದಾಶಿವಯ್ಯ ಅವರು ಈ ಹಿಂದೆ ರಾಮನಗರ ಜಿಲ್ಲೆ ಯಲ್ಲಿ ಆಹಾರ ಇಲಾಖೆ ಉಪನಿರ್ದೇಶಕ ರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಒಂದೂವರೆ ವರ್ಷಗಳಿಂದ ಆಹಾರ ಇಲಾಖೆ ಉಪನಿರ್ದೇಶಕ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುಟ್ಟ ಸ್ವಾಮಿ ಅವರು ರಾಮನಗರ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ.

ಮದುವೆ ಭಾಗ್ಯ ಕಳೆದುಕೊಳ್ಳುವ ಆತಂಕದಲ್ಲಿದ್ದ ಯುವತಿಗೆ ಕಂಕಣ ಭಾಗ್ಯ
ಕೊಡಗು

ಮದುವೆ ಭಾಗ್ಯ ಕಳೆದುಕೊಳ್ಳುವ ಆತಂಕದಲ್ಲಿದ್ದ ಯುವತಿಗೆ ಕಂಕಣ ಭಾಗ್ಯ

August 31, 2018

ಮಡಿಕೇರಿ:  ಪ್ರಾಕೃತಿಕ ವಿಕೋಪದಿಂದ ಸಪ್ತಪದಿ ತುಳಿಯುವ ಭಾಗ್ಯವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದ ಪ್ರೀತಿಯ ಪುತ್ರಿಯ ವಿವಾಹ ಸಮಾರಂಭ ವನ್ನು ಪೂರ್ವ ನಿರ್ಧರಿತ ಮುಹೂರ್ತದಲ್ಲೆ ನಡೆಸುವ ಮೂಲಕ ಸಂಕಷ್ಟದ ನಡುವೆಯೂ ಬಡ ದಂಪತಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ನಗರದ ಸಮುದ್ರ ಕಲ್ಯಾಣ ಮಂಟಪದಲ್ಲಿ ಮಡಿಕೇರಿ ತಾಲೂಕಿನ ಅರೆ ಕಾಡು ಗ್ರಾಮದ ಧನಂಜಯ್ ಮತ್ತು ಪ್ರಾಕೃತಿಕ ವಿಕೋಪದಿಂದ ಆಸ್ತಿಪಾಸ್ತಿ ಗಳನ್ನು ಕಳೆದುಕೊಂಡ ಹಟ್ಟಿಹೊಳೆಯ ಪದ್ಮಿನಿ-ಉಮೇಶ್ ದಂಪತಿಗಳ ಪುತ್ರಿ ಕುಸುಮಾ ಅವರನ್ನು ವಿವಾಹವಾಗುವ ಮೂಲಕ, ಕಷ್ಟಗಳ ಸರಮಾಲೆಯ ನಡುವೆ ಸಂತಸದ ಶುಭಘಳಿಕೆ ಕೂಡಿ…

1 12 13 14 15 16 32
Translate »