ಮೈಸೂರು: ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಮುಂಭಾಗದಿಂದ ಪಡುವಾರಹಳ್ಳಿ ಸಿಗ್ನಲ್ ಜಂಕ್ಷನ್ವರೆಗಿನ ಹುಣಸೂರು ರಸ್ತೆ ನೇರಗೊಳಿಸುವ ಕಾಮಗಾರಿಗೆ ಅಡ್ಡಿಯಾಗಿರುವ 5 ಮರಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ. ಮರಗಳ ತೆರವಿಗೆ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧವಿದ್ದ ಹಿನ್ನೆಲೆಯಲ್ಲಿ ಯೋಜಿತ ರೀತಿಯಲ್ಲಿ ಕಾಮಗಾರಿ ಸಾಧ್ಯವಾಗಿರಲಿಲ್ಲ. ಹಾಗಾಗಿ ಸಂಸದ ಪ್ರತಾಪ್ಸಿಂಹ ಅವರು ಗುರುವಾರ ಮೈಸೂರು ಗ್ರಾಹಕರ ಪರಿಷತ್ ಪ್ರತಿನಿಧಿಗಳು, ರಾಷ್ಟ್ರೀಯ ಹೆದ್ದಾರಿ, ಅರಣ್ಯ ಇಲಾಖೆ ಹಾಗೂ ನಗರ ಪಾಲಿಕೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಕೇವಲ 5 ಮರಗಳ ತೆರವಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಸಂಸದ…
ಆಸ್ತಿ-ಪಾಸ್ತಿ ರಕ್ಷಣೆಗೆ ‘ಡಿಜಿಟಲ್ ಆಸ್ತಿ ಕಾರ್ಡ್’ ಸಹಕಾರಿ
July 9, 2018ಮೈಸೂರು: ತಮ್ಮ ಆಸ್ತಿ-ಪಾಸ್ತಿ ರಕ್ಷಣೆಗೆ ‘ಡಿಜಿಟಲ್ ಆಸ್ತಿ ಕಾರ್ಡ್’ ಸಹಕಾರಿ ಎಂದು ಅರ್ಬನ್ ಪ್ರಾಪರ್ಟಿ ಓನರ್ಶಿಪ್ ರೆಕಾರ್ಡ್ (ಯುಪಿಓಆರ್) ಯೋಜನಾಧಿಕಾರಿ ಪ್ರಸಾದ್ ವಿ.ಕುಲಕರ್ಣಿ ತಿಳಿಸಿದರು. ಯಾದವಗಿರಿಯ ಮೈಸೂರು ಗ್ರಾಹಕ ಪರಿಷತ್ತು ಕಚೇರಿಯಲ್ಲಿ ನಡೆದ ಮೈಗ್ರಾಪ ಸಾಮಾನ್ಯ ಸಭೆಯಲ್ಲಿ ‘ಆಸ್ತಿ ಹಕ್ಕು’ ವಿಷಯ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರಿ, ಖಾಸಗಿ ಮತ್ತು ಸಾರ್ವಜನಿಕರ ಆಸ್ತಿ-ಪಾಸ್ತಿಗಳ ಒತ್ತುವರಿಗೆ ಇನ್ನು ಮುಂದೆ ಶಾಶ್ವತವಾಗಿ ಬ್ರೇಕ್ ಬೀಳಲಿದೆ. ಈ ಉದ್ದೇಶ ಈಡೇರಿಕೆ ಗಾಗಿಯೇ ಕಂದಾಯ ಇಲಾಖೆಯು ನಗರ ಆಸ್ತಿ ಮಾಲೀಕತ್ವದ…
ಹುಣಸೂರು ರಸ್ತೆ ನೇರ, ಅಗಲೀಕರಣ ಕಾಮಗಾರಿ ಮುಂದುವರೆಸಿದರೆ ಕೋರ್ಟ್ ಆದೇಶ ಉಲ್ಲಂಘನೆ: ಎಂಜಿಪಿ ಎಚ್ಚರಿಕೆ
June 27, 2018ಮೈಸೂರು: ಪುನರಾರಂಭ ವಾಗಿರುವ ಹುಣಸೂರು ರಸ್ತೆಯನ್ನು ನೇರ ಹಾಗೂ ಅಗಲೀಕರಣ ಮಾಡುವ ಕಾಮ ಗಾರಿಯನ್ನು ತಕ್ಷಣವೇ ನಿಲ್ಲಿಸದಿದ್ದರೆ ಲೋಕೋ ಪಯೋಗಿ ಇಲಾಖೆಯಿಂದ ನ್ಯಾಯಾ ಲಯಕ್ಕೆ ಬರೆದುಕೊಟ್ಟಿರುವ ಮುಚ್ಚಳಿಕೆ ಉಲ್ಲಂಘನೆಯಾಗುತ್ತದೆ ಎಂದು ಮೈಸೂರು ಗ್ರಾಹಕ ಪರಿಷತ್ (ಎಂಜಿಪಿ) ಎಚ್ಚರಿಸಿದೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿ ರುವ ಎಂಜಿಪಿಯ ಎಸ್.ಶೋಭನ ಮತ್ತು ನಿವೃತ್ತ ಮೇಜರ್ ಜನರಲ್ ಎಸ್.ಜಿ. ಒಂಬತ್ಕೆರೆ ಅವರುಗಳು, ಈ ರಸ್ತೆ ಕಾಮ ಗಾರಿಯ ಮೂಲ ಯೋಜನೆಯು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮೈಸೂರು ಮಹಾ ಯೋಜನೆ-2031ಕ್ಕೆ ವಿರುದ್ಧ…
ಮೈಸೂರು ಗ್ರಾಹಕರ ಪರಿಷತ್ನಲ್ಲಿ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ: ಮೈಸೂರಿನ ಬಹುತೇಕರು ನೀಲನಕ್ಷೆಯಂತೆ ಕಟ್ಟಡ ನಿರ್ಮಿಸುತ್ತಿಲ್ಲ
June 11, 2018ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಹುತೇಕ ನಿವಾಸಿಗಳು ನೀಲನಕ್ಷೆ ಪ್ರಕಾರ ಕಟ್ಟಡ ನಿರ್ಮಾಣ ಮಾಡಿಲ್ಲ. ಇದರಿಂ ದಾಗಿ `ಸಿಆರ್’ ಪಡೆಯಲು ಸಾಕಷ್ಟು ಗೊಂದಲಕ್ಕಿಡಾಗುತ್ತಿ ದ್ದಾರೆ ಎಂದು ವಲಯ ಕಚೇರಿ-2ರ ಆರ್ಓ ಅರಸು ಕುಮಾರಿ ಹಾಗೂ ವಲಯ ಕಛೇರಿ-4ರ ಎಆರ್ಓ ಪ್ರಸಾದ್ ಮೈಗ್ರಾಪ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ಯಾದವಗಿರಿಯ ಮೈಸೂರು ಗ್ರಾಹಕ ಪರಿಷತ್ ವತಿಯಿಂದ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಸೂರು ನಗರ ಪಾಲಿಕೆಯ ಪ್ರಾಪರ್ಟಿ ಬೈಲಾ ಪ್ರಕಾರ ಬಹುತೇಕರು ಕಟ್ಟಡಗಳನ್ನು ನಿರ್ಮಾಣ ಮಾಡುವುದಿಲ್ಲ….