Tag: Mysore

ಇಂದಿನಿಂದ ಮೈಸೂರು-ಮುಂಬೈ ನಡುವೆ ನೂತನ ಬಸ್ ಸಂಚಾರ
ಮೈಸೂರು

ಇಂದಿನಿಂದ ಮೈಸೂರು-ಮುಂಬೈ ನಡುವೆ ನೂತನ ಬಸ್ ಸಂಚಾರ

June 10, 2019

ಮೈಸೂರು: ಕೆಎಸ್‍ಆರ್‍ಟಿಸಿ ಮೈಸೂರು ಗ್ರಾಮಾಂ ತರ ವಿಭಾಗದಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರಾಮದಾಯಕ ಪ್ರಯಾಣಕ್ಕಾಗಿ ಮೈಸೂರು -ಮುಂಬೈ ಮಾರ್ಗದಲ್ಲಿ ನೂತನವಾಗಿ ಐರಾವತ ಡ್ರೀಮ್ ಕ್ಲಾಸ್ (ಎಸಿ ಸ್ಲೀಪರ್) ವಾಹನ ಜೂನ್ 10ರಿಂದ ಸಂಚರಿಸಲಿದೆ. ಅಂತಾರಾಜ್ಯ ಮತ್ತು ದೂರ ಮಾರ್ಗವಾದ ಮುಂಬೈಗೆ ಈ ಹಿಂದೆ ಇದ್ದ ಐರಾವತ್ ಕ್ಲಬ್ ಕ್ಲಾಸ್ ವಾಹನದ ಬದಲಾಗಿ ಐರಾ ವತ ಡ್ರೀಮ್ ಕ್ಲಾಸ್ ಮಾದರಿಯ ಎಸಿ ಸ್ಲೀಪರ್ ವಾಹನ ಜೂ.10ರಿಂದ ಪ್ರತಿದಿನ ಮಧ್ಯಾಹ್ನ ಒಂದು ಗಂಟೆಗೆ ಮೈಸೂರಿನಿಂದ ಕೆ.ಆರ್.ಪೇಟೆ, ಶ್ರವಣ ಬೆಳಗೊಳ, ಅರಸೀಕೆರೆ,…

ಕೃಷಿ ಉತ್ಪನ್ನ ಸಾಗಾಟಕ್ಕೆ ಉಚಿತ ಸಾರಿಗೆ ಸೌಲಭ್ಯ
ಮೈಸೂರು

ಕೃಷಿ ಉತ್ಪನ್ನ ಸಾಗಾಟಕ್ಕೆ ಉಚಿತ ಸಾರಿಗೆ ಸೌಲಭ್ಯ

June 10, 2019

ಬೆಂಗಳೂರು: ರಾಜ್ಯದ ರೈತರು ತಮ್ಮ ಬೆಳೆಗಳನ್ನು ಸರ್ಕಾರಿ ಗೋದಾಮುಗಳಿಗೆ ಸಾಗಿಸಲು ಉಚಿತ ಸಾರಿಗೆ ಸೌಲಭ್ಯವನ್ನು ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಗೋದಾಮುಗಳಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಗರಿಷ್ಟ 8 ತಿಂಗಳ ಕಾಲ ಉಚಿತ ವಾಗಿ ಸಂಗ್ರಹಿಸಲು ಅವಕಾಶವಿದೆ ಎಂದು ಸಹಕಾರ ಸಚಿವ ಬಂಡಪ್ಪ ಕಾಶಂಪುರ್ ಹೇಳಿದ್ದಾರೆ. ಸೆಪ್ಟೆಂ ಬರ್‍ನಿಂದ ಇದಕ್ಕಾಗಿ ವಿಶೇಷ ಕಾಲ್ ಸೆಂಟರ್ ಪ್ರಾರಂ ಭಿಸಲು ಉದ್ದೇಶಿಸಿದ್ದು ರೈತರು ಫೆÇೀನ್ ಮೂಲಕ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸಿ ಉಚಿತ ಸಾರಿಗೆ ಹಾಗೂ ಗೋದಾಮು ಸೌಲಭ್ಯ ಹೊಂದ ಬಹುದಾಗಿದೆ…

ಮೈಸೂರಿನ ಯುಜಿಡಿ ಸಮಸ್ಯೆ ಬಗ್ಗೆ ಮೈಗ್ರಾಪದಲ್ಲಿ ಬಿಸಿಬಿಸಿ ಚರ್ಚೆ
ಮೈಸೂರು

ಮೈಸೂರಿನ ಯುಜಿಡಿ ಸಮಸ್ಯೆ ಬಗ್ಗೆ ಮೈಗ್ರಾಪದಲ್ಲಿ ಬಿಸಿಬಿಸಿ ಚರ್ಚೆ

June 10, 2019

ಮೈಸೂರು: `ಸ್ವಚ್ಛ ಮೈಸೂರು’ ಬಿರುದು ಬರೀ ಕಸ ಗುಡಿಸಿದರೆ, ಸಂಗ್ರಹಿಸಿದರೆ ಮಾತ್ರ ಈ ಬಿರುದು ಬರುವುದಿಲ್ಲ. ಸ್ವಚ್ಛತೆ ಮತ್ತೊಂದು ಘಟ್ಟವಾದ ನಗರದ ಯುಜಿಡಿ ಸಂಪರ್ಕ, ಇದರಿಂದ ಉತ್ಪತ್ತಿಯಾಗುವ ಕಲುಷಿತ ನೀರು ಸಂಸ್ಕರಣೆ ಕುರಿತು ಗಮನ ಹರಿಸಬೇಕು. ಈ ಕುರಿತು ಮೈಸೂರು ಮಹಾನಗರ ಪಾಲಿಕೆ ಇಂಜಿನಿಯರ್‍ಗಳು ಯಾವುದೇ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿಲ್ಲ ಎಂಬುದರ ಬಗ್ಗೆ ಮೈಗ್ರಾಪದಲ್ಲಿ ಭಾನುವಾರ ಬಿಸಿ ಬಿಸಿ ಚರ್ಚೆ ನಡೆಯಿತು. ಮೈಸೂರು ಯಾದವಗಿರಿಯ ಮೈಸೂರು ಗ್ರಾಹಕರ ಪರಿಷತ್ ಕಚೇರಿಯಲ್ಲಿ ಭಾನುವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರ…

ಮಳೆ ಕೊರತೆಯಿಂದ ಕಡಿಮೆ ಇಳುವರಿ; ತರಕಾರಿ ಬಲು ದುಬಾರಿ
ಮೈಸೂರು

ಮಳೆ ಕೊರತೆಯಿಂದ ಕಡಿಮೆ ಇಳುವರಿ; ತರಕಾರಿ ಬಲು ದುಬಾರಿ

June 10, 2019

ಮೈಸೂರು: ತರಕಾರಿ ಬೆಲೆ ದಿನೇ ದಿನೆ ಏರಿಕೆಯಾಗುತ್ತಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಮಳೆ ಕೊರತೆಯಿಂದ ತರಕಾರಿ ಇಳುವರಿ ಕಡಿಮೆಯಾಗಿರುವುದು ಹಾಗೂ ಇರುವ ಉತ್ಪನ್ನವೂ ನೆರೆ ರಾಜ್ಯಗಳಿಗೆ ರಫ್ತಾಗುತ್ತಿರುವು ದರಿಂದ ಬೇಡಿಕೆಯೊಂದಿಗೆ ಬೆಲೆಯೂ ಹೆಚ್ಚಾಗುತ್ತಿದೆ. ಒಂದೆರಡು ವಿಧದ ತರಕಾರಿ ಹೊರತು ಬಹುತೇಕ ತರಕಾರಿಗಳ ಬೆಲೆ ಗಗನಮುಖಿ ಯಾಗಿದೆ. ತರಕಾರಿ ಜೊತೆಗೆ ಕೊತ್ತಂಬರಿ ಸೊಪ್ಪಿನ ಬೆಲೆಯೂ ಏರುತ್ತಲೇ ಇದೆ. ನೆರೆ ರಾಜ್ಯ ಕೇರಳ, ತರಕಾರಿಗೆ ಮೈಸೂರನ್ನೇ ಅವಲಂಬಿಸಿದೆ. ನಿತ್ಯ ನೂರಾರು ಲೋಡ್ ತರಕಾರಿ ಕೇರಳಕ್ಕೆ ರಫ್ತಾಗುತ್ತದೆ. ಮತ್ತಷ್ಟು ತರಕಾರಿಯನ್ನು ತಮಿಳುನಾಡಿಗೂ ಸಾಗಿಸಲಾ…

ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳದಿದ್ದರೆ ಬಿಎಸ್‍ಎನ್‍ಎಲ್ ಅವನತಿ: ಎಚ್ಚರಿಕೆ
ಮೈಸೂರು

ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳದಿದ್ದರೆ ಬಿಎಸ್‍ಎನ್‍ಎಲ್ ಅವನತಿ: ಎಚ್ಚರಿಕೆ

June 10, 2019

ಮೈಸೂರು: ಟೆಲಿಕಾಂ ಕ್ಷೇತ್ರದಲ್ಲಿ ಬದಲಾವಣೆ ಹಾಗೂ ಬೆಳ ವಣಿಗೆ ತೀವ್ರತರದಲ್ಲಿ ಆಗುತ್ತಿದ್ದು, ಇಂತಹ ಸಂದರ್ಭದಲ್ಲಿ ಬಿಎಸ್‍ಎನ್‍ಎಲ್ ಅಂತಹ ಸಂಸ್ಥೆ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗುಣಮಟ್ಟದ ಸೇವೆ ನೀಡುವ ಮೂಲಕ ಉಳಿದು ಬೆಳೆಯ ಬೇಕಿದೆ. ಇಲ್ಲವಾದರೆ ಅವನತಿ ಹಾದಿ ಹಿಡಿಯಬೇಕಾಗುತ್ತದೆ ಎಂದು ಬಿಎಸ್ ಎನ್‍ಎಲ್ ಟೆಲಿಕಾಂನ ಕರ್ನಾಟಕ ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ಸುಶೀಲ್ ಕುಮಾರ್ ಮಿಶ್ರಾ ಎಚ್ಚರಿಸಿದರು. ಮೈಸೂರಿನ ಕುವೆಂಪುನಗರದ ಬಿಎಸ್ ಎನ್‍ಎಲ್ ಸಂಸ್ಥೆಯ ದೂರಸಂಪರ್ಕ ಪ್ರಾದೇಶಿಕ ತರಬೇತಿ ಕೇಂದ್ರದ ಸಭಾಂ ಗಣದಲ್ಲಿ ನ್ಯಾಷನಲ್ ಫೆಡರೇಷನ್ ಆಫ್…

ಪರಿಸರ ಸಂರಕ್ಷಣೆಗಾಗಿ ಬಿಎಐ ಬ್ಲ್ಯೂ ಸ್ಯಾಂಡ್ ಗ್ರೀನ್ ಮ್ಯಾರಥಾನ್
ಮೈಸೂರು

ಪರಿಸರ ಸಂರಕ್ಷಣೆಗಾಗಿ ಬಿಎಐ ಬ್ಲ್ಯೂ ಸ್ಯಾಂಡ್ ಗ್ರೀನ್ ಮ್ಯಾರಥಾನ್

June 10, 2019

ಮೈಸೂರು: ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಬಿಲ್ಡರ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಮೈಸೂರು ಘಟಕ ಭಾನುವಾರ ಹಮ್ಮಿಕೊಂಡಿರುವ ಬಿಎಐ ಬ್ಲ್ಯೂ ಸ್ಯಾಂಡ್ ಗ್ರೀನ್ ಮ್ಯಾರಥಾನ್‍ನಲ್ಲಿ 400ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಗಮನ ಸೆಳೆದರು. ಬಿಲ್ಡರ್ಸ್ ಅಸೋಸಿಯೇಷನ್ ಮೈಸೂರು ಘಟಕ ಪರಿಸರ ಮಾಸಾಚರಣೆ ಆಚರಿ ಸುತ್ತಿದ್ದು, ಪರಿಸರ ಸಂರಕ್ಷಣೆಗೆ ಪೂರಕ ವಾದ ವಿವಿಧ ಕಾರ್ಯಕ್ರಮ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಭಾನುವಾರ 5 ಮತ್ತು 10 ಕಿ.ಮೀ ಮ್ಯಾರ ಥಾನ್…

ಹಿಂದಿ `ಕಡ್ಡಾಯ’ ಪದ ಹಿಂಪಡೆದಿದ್ದರೂ ಹಿಂದಿ ಕಲಿಕೆಗೆ ಕೇಂದ್ರ ಸಂಚು
ಮೈಸೂರು

ಹಿಂದಿ `ಕಡ್ಡಾಯ’ ಪದ ಹಿಂಪಡೆದಿದ್ದರೂ ಹಿಂದಿ ಕಲಿಕೆಗೆ ಕೇಂದ್ರ ಸಂಚು

June 10, 2019

ಮೈಸೂರು: ಕರ್ನಾಟಕ, ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿದ್ದ ತ್ರಿಭಾಷಾ ಸೂತ್ರದಿಂದ ಮೇಲ್ನೋ ಟಕ್ಕಷ್ಟೇ ಹಿಂದಿ ಕಡ್ಡಾಯ ಪದವನ್ನು ಮಾತ್ರ ಹಿಂಪಡೆ ದಿದ್ದು, ಪರೋಕ್ಷವಾಗಿ ಹಿಂದಿ ಕಲಿಕೆಗೆ ಸಂಚು ರೂಪಿಸಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪೆÇ್ರ.ಎಸ್.ಜಿ.ಸಿದ್ದರಾಮಯ್ಯ ವಿಷಾದಿಸಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯಲ್ಲಿ ಹಿಂದಿ ಕಲಿಕೆ ಕಡ್ಡಾಯಗೊಳಿ…

ಜೂ.16ರಂದು ರೇಸ್ ಕೋರ್ಸ್ ಮೈದಾನದಲ್ಲಿ ಲಕ್ಷ ಯೋಗ ಪಟುಗಳಿಂದ ಮೆಗಾ ತಾಲೀಮು
ಮೈಸೂರು

ಜೂ.16ರಂದು ರೇಸ್ ಕೋರ್ಸ್ ಮೈದಾನದಲ್ಲಿ ಲಕ್ಷ ಯೋಗ ಪಟುಗಳಿಂದ ಮೆಗಾ ತಾಲೀಮು

June 10, 2019

ಮೈಸೂರು: ಅಂತಾ ರಾಷ್ಟ್ರೀಯ ಯೋಗ ದಿನೋತ್ಸವ ಸಮೀಪಿ ಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಯೋಗ ಪಟುಗಳ ಉತ್ಸಾಹವೂ ಹೆಚ್ಚುತ್ತಿದ್ದು, ಜೂ.21ರಂದು ರೇಸ್‍ಕೋರ್ಸ್ ಮೈದಾನ ದಲ್ಲಿ ಲಕ್ಷ ಯೋಗ ಪಟುಗಳು ಸಾಮೂ ಹಿಕ ಯೋಗ ದಾಖಲೆ ನಿರ್ಮಿಸಲು ಸಂಕಲ್ಪ ಮಾಡಿದ್ದಾರೆ. ಇದಕ್ಕೆ ಪೂರ್ವಭಾವಿ ಯಾಗಿ ಭಾನುವಾರ ಮೈಸೂರು ಅರಮನೆ ಒಳಾಂಗಣದಲ್ಲಿ ನಡೆದ ಮೆಗಾ ಯೋಗ ತಾಲೀಮಿನಲ್ಲಿ 1500ಕ್ಕೂ ಹೆಚ್ಚು ಯೋಗ ಪಟುಗಳು ಪಾಲ್ಗೊಂಡು ಸಾಮೂಹಿಕ ಯೋಗ ತಾಲೀಮು ನಡೆಸಿದರು. ಜಿಲ್ಲಾಡ ಳಿತ ಮತ್ತು ಯೋಗ ಫೆಡರೇಷನ್ ಆಫ್ ಮೈಸೂರ್ ಆಶ್ರಯದಲ್ಲಿ…

ವಿಜಯನಗರ ಮುಡಾ ಕ್ರೀಡಾ ಸಂಕೀರ್ಣದಲ್ಲಿ ಜಿಮ್, ಬ್ಯಾಡ್ಮಿಂಟನ್ ತರಬೇತಿ ಅಕಾಡೆಮಿ
ಮೈಸೂರು

ವಿಜಯನಗರ ಮುಡಾ ಕ್ರೀಡಾ ಸಂಕೀರ್ಣದಲ್ಲಿ ಜಿಮ್, ಬ್ಯಾಡ್ಮಿಂಟನ್ ತರಬೇತಿ ಅಕಾಡೆಮಿ

June 10, 2019

ಮೈಸೂರು: ಮೈಸೂ ರಿನ ವಿಜಯನಗರ 1ನೇ ಹಂತದಲ್ಲಿ ಮುಡಾ ಕ್ರೀಡಾ ಸಂಕೀರ್ಣದಲ್ಲಿ ಭಾನು ವಾರ ಮಿತ್ರ ಫೌಂಡೇಷನ್ ವತಿಯಿಂದ ಆರಂಭಿಸಲಾಗಿರುವ ಟೆನ್ಸೈಲ್ ಅರೆನಾ ಫಿಟ್‍ನೆಟ್ ಸ್ಟುಡಿಯೋ ಮತ್ತು ಬ್ಯಾಡ್ಮಿಂ ಟನ್ ಅಕಾಡೆಮಿಗೆ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಎಲ್.ನಾಗೇಂದ್ರ ಉದ್ಘಾಟನೆ ನೆರವೇರಿಸಿದರು. ಮೇಯರ್ ಪುಷ್ಪಲತಾ ಜಗನ್ನಾಥ್, ಶಾಸಕ ಅನಿಲ್ ಚಿಕ್ಕಮಾದು, ಆದಿ ಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥೇಶ್ವರ ಸ್ವಾಮೀಜಿ, ಡಾ.ಶೆಲ್ವ ಪಿಳ್ಳೈ ಅಯ್ಯಂಗಾರ್ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದು, ಅರಣ್ಯ ಇಲಾಖೆ ಸಹಯೊಗದಲ್ಲಿ ಕ್ರೀಡಾ…

ಸರ್ಕಾರಿ ನೌಕರರ ಮೈಸೂರು ಜಿಲ್ಲಾ ಕಾರ್ಯಕಾರಿ ಸಮಿತಿಗೆ ಚುನಾವಣೆ
ಮೈಸೂರು

ಸರ್ಕಾರಿ ನೌಕರರ ಮೈಸೂರು ಜಿಲ್ಲಾ ಕಾರ್ಯಕಾರಿ ಸಮಿತಿಗೆ ಚುನಾವಣೆ

June 10, 2019

ಮೈಸೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮೈಸೂರು ಜಿಲ್ಲಾ ಕಾರ್ಯಕಾರಿ ಸಮಿತಿಗೆ ಜೂ.13ರಂದು ಚುನಾವಣೆ ನಡೆಯಲಿದ್ದು, ಮೈಸೂರಿನ 4 ಕೇಂದ್ರಗಳಲ್ಲಿ ಅಂದು ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. 2019-24ನೇ ಸಾಲಿನ ಕಾರ್ಯಕಾರಿ ಸಮಿತಿಯ 31 ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆಯಾಗಿದ್ದು, ಇನ್ನುಳಿದ 30 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 22 ಇಲಾಖೆಗಳ 112 ನೌಕರರು ಸ್ಪರ್ಧಿಸಿದ್ದಾರೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ಕೆ.ರಾಮು ತಿಳಿಸಿದ್ದಾರೆ. ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು,…

1 281 282 283 284 285 330
Translate »