ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮೈಸೂರು, ಫೆ.1(ಪಿಎಂ)- ಕೇಂದ್ರ ಬಜೆಟ್ ಕೃಷಿ ಕ್ಷೇತ್ರಕ್ಕೆ ನಿರಾಸೆ ತಂದಿದೆ. ಇದರಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿ ಮತ್ತು ರೈತರ ಆದಾಯ ದ್ವಿಗುಣಗೊಳಿಸಲು ಸ್ಪಷ್ಟ ಕಾರ್ಯಕ್ರಮಗಳೇ ಇಲ್ಲ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಕೃಷಿ ಸಾಲ ನೀತಿ ಬಗ್ಗೆ ಯಾವುದೇ ಯೋಜನೆಗಳಿಲ್ಲ. ರೈತರಿಗೆ ಈ ಬಜೆಟ್ ನಿರಾಸೆ ತಂದಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಟೀಕಿಸಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ…
ಲ್ಯಾಪ್ಟಾಪ್ಗೆ ಆಗ್ರಹಿಸಿ ಮೈಸೂರಲ್ಲಿ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರ ದಿಢೀರ್ ಪ್ರತಿಭಟನೆ
February 2, 2020ಮೈಸೂರು,ಫೆ.1(ಆರ್ಕೆ)-ಲ್ಯಾಪ್ಟಾಪ್ ಕೊಡಿಸಬೇಕೆಂದು ಒತ್ತಾಯಿಸಿ ಮೈಸೂರಿನ ಮಹಾರಾಣಿ ಪದವಿ ಕಾಲೇಜು ವಿದ್ಯಾ ರ್ಥಿನಿಯರು ಡಿಸಿ ಕಚೇರಿ ಬಳಿ ದಿಢೀರ್ ಪ್ರತಿಭಟನೆ ನಡೆಸಿದರು. ಕಾಲೇಜು ಬಳಿ ಜಮಾಯಿಸಿದ ನೂರಾರು ಪದವಿ ವಿದ್ಯಾರ್ಥಿನಿಯರು, ಈ ಹಿಂದಿನ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಪದವಿ ವಿದ್ಯಾರ್ಥಿಗಳೆಲ್ಲರಿಗೂ ಲ್ಯಾಪ್ಟಾಪ್ ಕೊಡುವುದಾಗಿ ಘೋಷಿಸಿದ್ದರಾದರೂ ಒಬ್ಬರಿಗೂ ಕೊಡಿಸಲಿಲ್ಲ. ಈ ವರ್ಷ ಮೊದಲನೇ ವರ್ಷದವರಿಗೆ ಮಾತ್ರ ಲ್ಯಾಪ್ಟಾಪ್ ವಿತರಿಸುತ್ತಿದ್ದು, ತಮಗೂ ನೀಡಬೇಕೆಂದು ದ್ವಿತೀಯ ಮತ್ತು ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯರು ಒತ್ತಾಯಿಸಿದರು. ಪ್ರಸ್ತುತ ಪಠ್ಯಕ್ರಮಕ್ಕೆ ಲ್ಯಾಪ್ಟಾಪ್ ಅತ್ಯವಶ್ಯವಾಗಿದೆ. ಅದನ್ನು ಕೊಂಡುಕೊಳ್ಳುವಷ್ಟು…
ದಾಖಲೆ ಬಜೆಟ್ ಮಂಡನೆ ವೇಳೆ ಬಳಲಿದ ಸಚಿವೆ ನಿರ್ಮಲಾ ಸೀತಾರಾಮನ್
February 2, 2020ನವದೆಹಲಿ, ಫೆ.1- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 2020-21ನೇ ಸಾಲಿನ ಮುಂಗಡ ಪತ್ರವನ್ನು ಸಂಸತ್ತಿನಲ್ಲಿ ಶನಿವಾರ ಬೆಳಿಗ್ಗೆ ಮಂಡಿಸಿ ದರು. ಬೆಳಿಗ್ಗೆ 11.01ಕ್ಕೆ ಆರಂಭಗೊಂಡ ಬಜೆಟ್ ಭಾಷಣ, ಮಧ್ಯಾಹ್ನ 1.41 ಗಂಟೆಗೆ ಮುಕ್ತಾಯಗೊಂಡಿತು. 2.40 ನಿಮಿಷಗಳ ಕಾಲ, ಮಧ್ಯೆ ಎಲ್ಲೂ ವಿರಾಮ ತೆಗೆದು ಕೊಳ್ಳದೇ ಮುಂಗಡಪತ್ರ ಓದಿದ ನಿರ್ಮಲಾ ಸೀತಾ ರಾಮನ್, ಆಡಳಿತ ಪಕ್ಷದ ಸದಸ್ಯರಿಂದ ಸೈ ಎನಿಸಿಕೊಂಡರು. ಮಹತ್ವದ ಯೋಜನೆಗಳನ್ನು ಪ್ರಕಟಿಸಿದಾಗ, ಸಾಧ ನೆಯ ಅಂಕಿ ಅಂಶಗಳನ್ನು ಪ್ರಸ್ತುತಪಡಿಸಿದಾಗ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ…
ಕೇಂದ್ರದ್ದು ತೇಪೆ ಹಚ್ಚುವ ಬಜೆಟ್: ಸಿದ್ದರಾಮಯ್ಯ ಅಣಕ
February 2, 2020ಮೈಸೂರು, ಫೆ.1 (ಎಸ್ಬಿಡಿ)- ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2020-21ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ `ಟಿಂಕರಿಂಗ್’ (ತೇಪೆ ಹಚ್ಚುವ) ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಮೈಸೂರಿನ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಬಜೆಟ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಅವರು, 2019-20ನೇ ಹಣಕಾಸು ವರ್ಷದಲ್ಲಿ 27 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದರು. ಈ ಬಾರಿ 30.47 ಲಕ್ಷ ಕೋಟಿ ರೂ.ಗಳಷ್ಟು ಭಾರೀ ಗಾತ್ರದ ಬಜೆಟ್ ಮಂಡಿಸಿದ್ದಾರೆ. ತೆರಿಗೆ ಸಂಗ್ರಹ ಆಗದ ಕಾರಣ…
ಅರಮನೆ ಪ್ರಾಂಗಣದಲ್ಲಿ ವಿಜೃಂಭಣೆಯ `ರಥಸಪ್ತಮಿ’ ಉತ್ಸವ
February 2, 2020ಮೈಸೂರು,ಫೆ.1(ಎಂಟಿವೈ)- ರಥಸಪ್ತಮಿ ಅಂಗವಾಗಿ ಮೈಸೂರು ಅರಮನೆ ಆವರಣದಲ್ಲಿನ ವಿವಿಧ ದೇವಾಲಯ ಗಳ ಉತ್ಸವ ಮೂರ್ತಿಗಳ ಉತ್ಸವ ಶನಿವಾರ ನಡೆಯಿತು. ನೂರಾರು ಭಕ್ತರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೂರ್ಯದೇವನ ಆರಾಧನೆ ಮಾಡಿ ಸಂಭ್ರಮಿಸಿದರು. ಅರಮನೆ ಆವರಣದಲ್ಲಿನ ಎಲ್ಲಾ ದೇವಾಲಯಗಳಿಂದ ಉತ್ಸವ ಮೂರ್ತಿಗಳನ್ನು ಅರಮನೆ ಪ್ರಾಂಗಣದಲ್ಲಿ ಒಂದೇ ಸ್ಥಳಕ್ಕೆ ತಂದು ಅಲಂಕರಿಸಿ ಪೂಜಿಸಿ, ಭಕ್ತರ ದರ್ಶನಕ್ಕೆ ಅವ ಕಾಶ ಕಲ್ಪಿಸುವ ಕ್ರಮ ಬಲು ಹಿಂದಿನಿಂದಲೂ ಆಚರಣೆಯ ಲ್ಲಿದೆ. ಶನಿವಾರ ಮುಂಜಾನೆ ಅರಮನೆ ಆವರಣದ ಎಲ್ಲಾ ದೇವಾಲಯಗಳಲ್ಲೂ ಅಭಿಷೇಕ, ನೈವೇದ್ಯ…
ಕುರುಬ ಸಮುದಾಯ ಮೂಲ ಕಸುಬು ಮರೆಯಬಾರದು
February 2, 2020ಮೈಸೂರು,ಫೆ.1(ವೈಡಿಎಸ್)-ಕುರುಬ ಸಮುದಾಯವು ಎಂದಿಗೂ ಮೂಲ ಕಸು ಬನ್ನು ಮರೆಯಬಾರದು ಎಂದು ಕಾಗಿ ನೆಲೆ ಪೀಠ ಮೈಸೂರು ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಹೇಳಿದರು. ನಗರದ ಆರಾಧ್ಯ ಮಹಾಸಭಾದಲ್ಲಿ ಕುರುಬರಿಂದ ಕುರುಬರಿಗಾಗಿ ಶುದ್ಧ ಗಾಳಿ -ಶುದ್ಧ ನೀರು-ಶುದ್ಧ ಮನಸ್ಸಿನ ಶುದ್ಧ ಬದುಕಿನೆಡೆಗೆ ಧ್ಯೇಯವಾಕ್ಯದೊಂದಿಗೆ ಎಸ್.ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗ ಆಯೋಜಿಸಿದ್ದ ಉಳ್ಳವರಿಂದ ಅವಶ್ಯ ವಿರುವವರಿಗೆ ಕುರಿ ನೀಡುವ ಕಾರ್ಯ ಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಅವರು, ಕುರುಬ ಸಮುದಾಯ ಎಂದಿಗೂ ನಮ್ಮತನವನ್ನು ಬಿಡಬಾರದು. ಕುರಿಯೇ ಕುರುಬರ ಐಶ್ವರ್ಯ, ಹಾಲುಮತ…
ನೂರಾರು ಯೋಗಪಟುಗಳಿಂದ ರಥಸಪ್ತಮಿಗಾಗಿ 108 ಸೂರ್ಯ ನಮಸ್ಕಾರ
February 2, 2020ಮೈಸೂರು,ಫೆ.1(ಎಂಟಿವೈ)-ರಥಸಪ್ತಮಿ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಆವ ರಣದಲ್ಲಿ ಶನಿವಾರ ಬೆಳಿಗ್ಗೆ ಮೈಸೂರು ಯೋಗ ಒಕ್ಕೂಟ ಆಯೋಜಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ 700ಕ್ಕೂ ಹೆಚ್ಚು ಯೋಗಪಟುಗಳು ಪಾಲ್ಗೊಂಡು 108 ಸೂರ್ಯ ನಮಸ್ಕಾರ ಮಾಡುವ ಮೂಲಕ ಗಮನ ಸೆಳೆದರು. ಮೈಸೂರು ಯೋಗ ಒಕ್ಕೂಟದ 19ನೇ ವಾರ್ಷಿಕೋತ್ಸವ ಹಾಗೂ ರಥಸಪ್ತಮಿ ಅಂಗ ವಾಗಿ ಆಯೋಜಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ನಗರದ ವಿವಿಧ ಯೋಗ ಶಾಲೆಗಳ ಯೋಗ ಪಟುಗಳು ಭಾಗಿಯಾದರು. ಶನಿವಾರ ಮುಂಜಾನೆ 5.15ಕ್ಕೆ ಅರಮನೆಯ ಉತ್ತರ ದ್ವಾರದಲ್ಲಿರುವ ಕೋಟೆ…
3 ದಿನದಲ್ಲಿ ಸಂಪುಟ ವಿಸ್ತರಣೆ
February 1, 2020ಬೆಂಗಳೂರು,ಜ.31(ಕೆಎಂಶಿ)-ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ವರಿಷ್ಠರು ಕೊನೆಗೂ ಗ್ರೀನ್ ಸಿಗ್ನಲ್ ನೀಡಿದ್ದಾರೆ. ನೂತನ ಶಾಸಕರಲ್ಲಿ 10 ಮಂದಿ ಸೇರಿದಂತೆ ಒಟ್ಟು 13 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರುಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅವಕಾಶ ನೀಡಿದ್ದು, ಅಂತು ಇನ್ನು ಮೂರು ದಿನದಲ್ಲಿ ಸಂಪುಟ ವಿಸ್ತರಣೆ ಯಾಗುವುದು ಬಹುತೇಕ ಖಚಿತವಾಗಿದೆ. ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶುಕ್ರವಾರ ಮಧ್ಯಾಹ್ನ ಸಂಸತ್ ಭವನದಲ್ಲಿ…
ನಿರ್ಭಯಾ ಹಂತಕರ ಗಲ್ಲು ಶಿಕ್ಷೆಗೆ ತಡೆಯಾಜ್ಞೆ
February 1, 2020ನವದೆಹಲಿ, ಜ.31- ನಿರ್ಭಯಾ ಅಪರಾಧಿಗಳ ಗಲ್ಲು ಶಿಕ್ಷೆಗೆ ವಿಧಿಸಿದ್ದ ಡೆತ್ ವಾರಂಟ್ಗೆ ಪಟಿಯಾಲ ಕೋರ್ಟ್ ತಡೆ ಯಾಜ್ಞೆ ನೀಡಿದೆ. ಫೆ.1ರಂದು ಬೆಳಿಗ್ಗೆ 6 ಗಂಟೆಗೆ ನಿರ್ಭಯಾ ಅಪರಾಧಿಗಳ ಗಲ್ಲಿಗೇರಿಸಲು ಕೋರ್ಟ್ ಆದೇಶ ನೀಡಿತ್ತು. ಆದರೆ ಅಪರಾಧಿಗಳು ಗಲ್ಲುಶಿಕ್ಷೆ ಜಾರಿ ಮುಂದೂಡಲು ನಾನಾ ಪ್ರಯತ್ನವನ್ನು ಮುಂದುವರಿಸಿದ್ದರು. ಬುಧವಾರ ಅಪರಾಧಿ ವಿನಯ್ ಶರ್ಮಾ ರಾಷ್ಟ್ರಪತಿ ಅವರಿಗೆ ಎರಡನೇ ಬಾರಿ ಕ್ಷಮಾ ದಾನ ಕೋರಿ ಅರ್ಜಿ ಸಲ್ಲಿಸಿದ್ದನು. ಇನ್ನೊಂದೆಡೆ ಪವನ್, ನಾನು ಅಪ್ರಾಪ್ತನಾಗಿದ್ದಾಗ ಈ ಘಟನೆ ನಡೆದಿತ್ತು. ಹಾಗಾಗಿ ನನ್ನನ್ನು ಮರಣದಂಡನೆಗೆ…
ಇಂದು ಕೇಂದ್ರ ಬಜೆಟ್
February 1, 2020 ಬೆಳಿಗ್ಗೆ 11ರಿಂದ ನಿರ್ಮಲಾಸೀತಾರಾಮನ್ ಮಂಡನೆ ದೇಶದ ಎಲ್ಲಾ ವರ್ಗದ ಜನರಲ್ಲಿ ಭಾರೀ ನಿರೀಕ್ಷೆ ನವದೆಹಲಿ,ಜ.31- ದೇಶದ ಆರ್ಥಿ ಕತೆಯ ದೃಷ್ಟಿಯಿಂದ ಭಾರೀ ಮಹತ್ವ ಗಳಿಸಿರುವ 2020-21ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮಂಡಿಸಲಿದ್ದಾರೆ. ಇದು ನಿರ್ಮಲಾ ಅವರ ಎರಡನೇ ಆಯವ್ಯಯ. ಸಂಸತ್ತಿ ನಲ್ಲಿ ಶನಿವಾರ ಬೆಳಿಗ್ಗೆ 11ಕ್ಕೆ ಬಜೆಟ್ ಮಂಡನೆಯಾಗಲಿದೆ. ಕಳೆದ ಒಂದೂ ವರೆ ವರ್ಷಗಳಿಂದ ಸತತವಾಗಿ ಜಿಡಿಪಿ ಇಳಿಮುಖವಾಗಿರುವುದರಿಂದ ಆರ್ಥಿ ಕತೆಯ ಚೇತರಿಕೆ ದೃಷ್ಟಿಯಿಂದ ಈ…










