ಮೈಸೂರು: ಮೈಸೂರಿನ ಕಾರಂಜಿಕೆರೆ ಬಳಿ ಕಳೆದ ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೃಹತ್ ಅಕ್ವೇರಿಯಂ ಕಟ್ಟಡವನ್ನು ಮೈಸೂರು ನಗರ ಪಾಲಿಕೆ, ಮೃಗಾಲಯದ ವಶಕ್ಕೆ ಒಪ್ಪಿಸಿದ್ದು, ಕಾಮಗಾರಿ ಮುಂದುವರೆಸಲು ಮೃಗಾಲಯದ ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ. ಸಾಂಸ್ಕೃತಿಕ ನಗರಿ ಮೈಸೂರಿಗೆ ಬರುವ ಪ್ರವಾಸಿಗರ ಆಕರ್ಷಿಸುವ ನಿಟ್ಟಿನಲ್ಲಿ ಮೈಸೂರು ನಗರ ಪಾಲಿಕೆ, ಮೃಗಾಲಯ ಹಾಗೂ ಕಾರಂಜಿಕೆರೆ ನಡುವೆ ಬೃಹತ್ ಮತ್ಸ್ಯಾಗಾರ(ಅಕ್ವೇರಿಯಂ) ನಿರ್ಮಾಣಕ್ಕೆ ಉದ್ದೇಶಿಸಿತ್ತು. ಕಾಮಗಾರಿ ಆರಂಭವಾ ದರೂ ಅನುದಾನದ ಕೊರತೆ ಹಾಗೂ ಗುತ್ತಿಗೆದಾರರ ವಿಳಂಬ ಧೋರಣೆಯಿಂದ ಅರ್ಧಕ್ಕೆ ನಿಂತಿತ್ತು. ಸುಮಾರು…
ಮೃಗಾಲಯದ ಸುಪರ್ದಿಗೆ ಅಕ್ವೇರಿಯಂ ನೀಡಿ ಪಾಲಿಕೆಗೆ ಸಚಿವ ಸಾ.ರಾ.ಮಹೇಶ್ ಸೂಚನೆ
July 2, 2018ಮೈಸೂರು: ಮೈಸೂರಿನ ಕಾರಂಜಿಕೆರೆ ಬಳಿ ನೆನೆಗುದಿಗೆ ಬಿದ್ದಿರುವ ಅಕ್ವೇರಿಯಂ ಅನ್ನು ಶೀಘ್ರವೇ ಮೃಗಾಲಯದ ಸುಪರ್ದಿಗೆ ಒಪ್ಪಿಸುವಂತೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮೃಗಾಲಯ ಹಾಗೂ ಕಾರಂಜಿಕೆರೆ ನಡುವೆ ಮೈಸೂರು ನಗರ ಪಾಲಿಕೆ ಐದು ಕೋಟಿ ರೂ ವೆಚ್ಚದಲ್ಲಿ ಕಳೆದ ಆರು ವರ್ಷದ ಹಿಂದೆ ಭಾಗಶಃ ನಿರ್ಮಿಸಿರುವ ಅಕ್ವೇರಿಯಂ ಕಟ್ಟಡವನ್ನು ಭಾನುವಾರ ಬೆಳಿಗ್ಗೆ ಮೃಗಾಲಯ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಸಾ.ರಾ.ಮಹೇಶ್, ಕಳೆದ ಕೆಲವು ವರ್ಷಗಳಿಂದ ಪಾಳುಬಿದ್ದಿರುವ ಅಕ್ವೇರಿಯಂ ಕಟ್ಟಡವನ್ನು ಕಂಡು…
ರಜೆ ರದ್ದಾದರೂ ಮೃಗಾಲಯಕ್ಕೆ ಪ್ರವೇಶ ಕುಸಿತ
June 20, 2018ಮೈಸೂರು: ಮಂಗಳವಾರ ಮೃಗಾಲಯಕ್ಕೆ 8,189 ಮಂದಿ ಭೇಟಿ ನೀಡಿದ್ದರೆ, ಕಾರಂಜಿ ಕೆರೆಗೆ 960 ಮಂದಿ ಭೇಟಿ ನೀಡಿದ್ದರು. ಮೃಗಾಲಯದ ಹಬ್ಬದ ರಜೆಗಳಲ್ಲಿ ಪ್ರವಾಸ ಕೈಗೊಳ್ಳುವವರು ಹಾಗೂ ಸಾರ್ವಜನಿಕರಿಗೆ ಅನು ಕೂಲ ಕಲ್ಪಿಸುವ ಉದ್ದೇಶದಿಂದ ಮಂಗಳವಾರದ ವಾರದ ರಜೆಯನ್ನು ರದ್ದುಗೊಳಿಸಲಾಗಿತ್ತು. ಹೀಗಾಗಿ ವಿವಿಧ ರಾಜ್ಯಗಳಿಂದ ಮೈಸೂರಿಗೆ ಆಗಮಿಸಿದ್ದ ಪ್ರವಾಸಿಗರು ಮೃಗಾಲಯವನ್ನು ವೀಕ್ಷಿಸಲು ಸಾಧ್ಯವಾಯಿತು. ಸರ್ಕಾರಿ ರಜೆಗಳ ಸಂದರ್ಭದಲ್ಲಿ ಹೀಗೆ ವಾರದ ರಜೆಯನ್ನು ರದ್ದುಗೊಳಿಸಿ, ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ಪರಿಪಾಠವನ್ನು ಮೃಗಾಲಯ ನಡೆಸಿಕೊಂಡು ಬಂದಿದೆ. ಎಂದಿನಂತೆ ಈ ಮಂಗಳವಾರ ರಜೆ…
ಸೆರೆ ಸಿಕ್ಕಿದ್ದ ಹುಲಿರಾಯ ಸಾವು ಕಾದಾಟದಲ್ಲಿ ತೀವ್ರ ಗಾಯಗೊಂಡಿತ್ತು
June 13, 2018ಮೈಸೂರು: ಬಂಡೀಪುರ ಅರಣ್ಯ ಪ್ರದೇಶದ ಹೆಡಿ ಯಾಲ ವಲಯದಲ್ಲಿ ಸೆರೆ ಹಿಡಿಯಲಾ ಗಿದ್ದ ಗಂಡು ಹುಲಿ ಇಂದು ಬೆಳಿಗ್ಗೆ ಮೈಸೂರಿನ ಹೊರವಲಯದ ಕೂರ್ಗಳ್ಳಿ ಯಲ್ಲಿರುವ ಮೈಸೂರು ಮೃಗಾಲಯದ ಪ್ರಾಣಿಗಳ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದೆ. ಬಂಡೀಪುರ ಹುಲಿ ಯೋಜನೆಯ ಹೆಡಿಯಾಲ ವಲಯಕ್ಕೆ ಸೇರುವ ಕಾಳಿಕಟ್ಟೆ ಕೆರೆಯ ಬಳಿ ವೀರಭದ್ರಪ್ಪ ಎಂಬುವರ ಜಮೀನಿನಲ್ಲಿ ಜೂ.10ರಂದು ಬೆಳಿಗ್ಗೆ 11.30ರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿ ಯಾಗಿದ್ದರು. ಕಾಡಿನಲ್ಲಿ…