ಮೈಸೂರು: ಹನ್ನೆರಡನೇ ಶತಮಾನದಲ್ಲಿ ಆಗಿ ಹೋದ ಬಸವಣ್ಣನವರ ತತ್ವಾದರ್ಶಗಳು ಎಂದೆಂದಿಗೂ ಪ್ರಸ್ತುತ ಎಂದು ಅಮೇರಿಕಾದಲ್ಲಿರುವ ಭಾರತದ ರಾಯಭಾರಿ ಕಚೇರಿಯ ಮೊದಲ ಕಾರ್ಯದರ್ಶಿ ಶಂಭುಲಿಂಗಪ್ಪ ತಿಳಿಸಿದರು. ಅಮೇರಿಕಾದ ಮೆರಿಲ್ಯಾಂಡ್ನಲ್ಲಿ ನಡೆದ ಜೆಎಸ್ಎಸ್ ಸ್ಪಿರಿಚ್ಯುಯಲ್ ಮಿಷನ್ನಿನ 12ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸುತ್ತೂರು ಮಠ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠವು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪ್ರಶಂಸಿಸಿದರು. ಅಮೇರಿಕಾದ ಮಿಷಿಗನ್ನಲ್ಲಿ 1999ರಲ್ಲಿ ಜೆಎಸ್ಎಸ್ ಸ್ಪಿರಿಚ್ಯುಯಲ್ ಮಿಷನ್ ಪ್ರಾರಂಭವಾಯಿತು. 2006ರಲ್ಲಿ ಮೆರಿಲ್ಯಾಂಡ್ನಲ್ಲಿ ಜೆಎಸ್ಎಸ್ ಮಿಷನ್ನ ಕೇಂದ್ರ…
ಗಣ್ಯರಿಗೆ ಕೇಂದ್ರ ಸರ್ಕಾರದ 4 ವರ್ಷದ ಸಾಧನೆ ಸಾರುವ ಕಿರು ಪುಸ್ತಕ ಅರ್ಪಿಸಿ `ಸಂಪರ್ಕ ಸಮರ್ಥನ್’ಗೆ ಚಾಲನೆ
June 17, 2018ಸುತ್ತೂರು ಶ್ರೀಗಳು, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ಗೂ ಸಾಧನೆ ವಿವರಿಸಿದ ಸಂಸದ ಪ್ರತಾಪ್ ಸಿಂಹ ಮೈಸೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್ಡಿಎ ಸರ್ಕಾರದ 4 ವರ್ಷಗಳ ಸಾಧನೆಯ ಪಕ್ಷಿ ನೋಟ ಒಳಗೊಂಡ ಕಿರು ಪುಸ್ತಕ ವನ್ನು ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಗೆ ಅರ್ಪಿ ಸುವ ಮೂಲಕ ಶನಿವಾರ ಮೈಸೂರು ಭಾಗದ ಬಿಜೆಪಿಯ ‘ಸಂಪರ್ಕ ಸಮರ್ಥನ್’ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ನರೇಂದ್ರ ಮೋದಿ ನೇತೃತ್ವದ ಸರ್ಕಾ ರದ ಸಾಧನೆಗಳನ್ನು ಜನರಿಗೆ ಮನದಟ್ಟು ಮಾಡಿಕೊಡುವ ಈ…
ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ನಾಡೋಜ ಡಾ. ಪಂ. ರಾಜೀವ ತಾರಾನಾಥ್
June 1, 2018ಮೈಸೂರು : ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಪುರಸ್ಕøತರಾದ ಡಾ.ಪಂ.ರಾಜೀವ ತಾರಾನಾಥ್ರವರು ಮೇ. 30ರಂದು ಮೈಸೂರಿನಲ್ಲಿರುವ ಶ್ರೀ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸಾಮಿಗಳ ಆಶೀರ್ವಾದ ಪಡೆದರು. ಸಂಗೀತದಂತಹ ಅಭಿಜಾತ ಕಲೆಗಳನ್ನು ಬೆಳೆಸುವಲ್ಲಿ ಮಠಗಳು ಮತ್ತು ಗುರುಕುಲಗಳು ಗಂಭೀರವಾಗಿ ಗಮನ ಕೊಡಬೇಕಾಗಿದೆ. ಸಂಗೀತವನ್ನು ಕಲಿಯುವ ವಿದ್ಯಾರ್ಥಿಗಳು ನಿಜವಾದ ಶ್ರದ್ಧೆ, ನಿಷ್ಠೆ, ಬದ್ಧತೆಯಿಂದ ಗುರುಮುಖೇನ ಈ ವಿದ್ಯೆಯನ್ನು ತಮ್ಮದಾಗಿಸಿಕೊಳ್ಳಬೇಕು. ಈ ವಿಷಯದಲ್ಲಿ ವಿದೇಶೀಯರು ತೋರಿಸುವಷ್ಟು ಕಾಳಜಿಯನ್ನು ಭಾರತೀಯರು ತೋರಿಸದೆ ಇರುವುದು ವಿಷಾದನೀಯ ಎಂದು…
ಕಾಯಕಯೋಗಿ 102 ಕಾಫಿ ಟೇಬಲ್ ಪುಸ್ತಕ ಬಿಡುಗಡೆ
May 31, 2018ಮೈಸೂರು: ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಕಾಯಕಯೋಗಿ 102 ಕಾಫಿ ಟೇಬಲ್ ಪುಸ್ತಕವನ್ನು ಬುಧವಾರ ಬಿಡುಗಡೆಗೊಳಿಸಲಾಯಿತು. ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ ಮತ್ತು ವಿಆರ್ಎಲ್ ಮೀಡಿಯಾ ಲಿಮಿಟೆಡ್ ಸಹಯೋಗದಲ್ಲಿ ಹೊರತಂದಿರುವ ಕಾಯಕಯೋಗಿ 102 ಕಾಫಿ ಟೇಬಲ್ ಪುಸ್ತಕವನ್ನು ವಿಆರ್ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ವಿಜಯ ಸಂಕೇಶ್ವರ ಬಿಡುಗಡೆಗೊಳಿಸಿದರು. ನಂತರ ಅವರು ಮಾತನಾಡಿ, ವೀರಶೈವ ಮಠಾಧೀಶರ ವಿದ್ಯಾ ಸಂಸ್ಥೆಗಳಿಗಿಂತ ಸುತ್ತೂರು ಶ್ರೀಗಳು ಮತ್ತು ಸಿದ್ದಗಂಗಾ ಶ್ರೀಗಳು ನಡೆಸುತ್ತಿರುವ ವಿದ್ಯಾ ಸಂಸ್ಥೆಗಳು ಹೆಚ್ಚು ಮುಂಚೂಣ…