ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳ ಹೊಡೆ ಯುವುದನ್ನು ಕೇಳಿದ್ದೇವೆ. ಆದರೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕುಮಾರ ಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಗಳ ರೆಕ್ಕೆ ಕತ್ತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿರೀಕ್ಷೆಯಂತೆ ಅತಂತ್ರ ವಿಧಾನಸಭೆ ಸೃಷ್ಟಿ ಯಾದರೆ, ಎರಡು ರಾಷ್ಟ್ರೀಯ ಪಕ್ಷಗಳ ಪೈಕಿ ಯಾವುದರ ಜೊತೆ ಹೊಂದಾಣ ಕೆ ಮಾಡಿ ಕೊಂಡರೂ ಅದು ಕುಮಾರಸ್ವಾಮಿ ನೇತೃತ್ವದ ಸರ್ಕಾರ ಆಗಿರಬೇಕು. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅಥವಾ ಯಡಿಯೂರಪ್ಪ…
ದೇಶಭಕ್ತರನ್ನು ಕಡೆಗಾಣಿಸುವುದೇ ಕಾಂಗ್ರೆಸಿನ ಜಾಯಮಾನವೇ?
May 17, 2018ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಭಾರತರತ್ನ ಗೌರವಕ್ಕೆ ಅರ್ಹರಲ್ಲವೆ? “ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿ ಭಾರತ ರತ್ನವನ್ನು ದೇಶಕಂಡ ಅಪ್ರತಿಮ ದೇಶಭಕ್ತ ವೀರ ಸೇನಾನಿ ‘ಫೀಲ್ಡ್ ಮಾರ್ಷಲ್ ಕಾರ್ಯಪ್ಪ’ನವರಿಗೆ ಕೊಡಬೇಕು. ನಾನು ಈ ಬಗ್ಗೆ ಪ್ರಾಮಾಣಿಕವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ’’ ಈ ಮಾತನ್ನು ಮೊನ್ನೆ ಹೇಳಿದ್ದು ದೇಶದ ಭೂಸೇನೆಯ ಮಹಾ ದಂಡನಾಯಕ ಜನರಲ್ ಬಿಪಿನ್ ರಾವತ್. ಇವರು ವೀರ ಸೇನಾನಿಯ ಜನ್ಮ ಭೂಮಿ ಕೊಡಗಿನ ಗೋಣಿಕೊಪ್ಪಲಿನಲ್ಲಿ ಫೀಲ್ಡ್ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿ…
ಮನಸೂರೆಗೊಳ್ಳುವ ನಮ್ಮ ಮೈಸೂರು
May 14, 2018ಯಾವುದೇ ರಾಷ್ಟ್ರದಲ್ಲಿನ ಪ್ರಮುಖ ನಗರಗಳು ಅಚ್ಚರಿಯ ಇತಿಹಾಸ ಹೊಂದಿ ರುವುದರ ಜೊತೆಗೆ ಯಾವುದಾದರೂ ಒಂದು ವೈಶಿಷ್ಟ್ಯತೆಗೆ ಹೆಸರಾಗಿರುತ್ತದೆ. ಭೌಗೋಳಿಕ ವಿಶೇಷ, ಸ್ಮಾರಕ, ಕಲೆ, ಸಂಸ್ಕೃತಿ, ತಿನಿಸು, ಸಾಧಕರು……ಹೀಗೆ ಯಾವುದಾದರು ಒಂದು ವಿಷಯಕ್ಕೆ ಖ್ಯಾತಿ ಪಡೆದಿರುತ್ತದೆ. ಆದರೆ ಭಾರತ ದೇಶದಲ್ಲಿ ಅನೇಕ ವಿಷಯಗಳಿಗೆ ವಿಶ್ವವಿಖ್ಯಾತಿ ಪಡೆದಿರುವ ಕೆಲವೇ ನಗರಗಳಲ್ಲಿ ನಮ್ಮ ಹೆಮ್ಮೆಯ ಮೈಸೂರು ನಗರವೂ ಸಹ ಒಂದು. ಸುವಾಸನೆ ಸೂಸುವ ಮೈಸೂರು ಮಲ್ಲಿಗೆಯಿಂದ ಹಿಡಿದು ಪರಂಪರೆಯ ದ್ಯೋತಕವಾದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದವರೆವಿಗೆ ಮೈಸೂರಿನ ಹಿರಿಮೆಯಿದೆ. ಕರ್ನಾಟಕದ ‘ಸಾಂಸ್ಕೃತಿಕ…
ಬಿಜೆಪಿಗೆ ಯಡಿಯೂರಪ್ಪ ಮತಗಳು ಬೇಕು… ಆದರೆ ಯಡಿಯೂರಪ್ಪ ಬೇಕಿಲ್ಲ?
April 29, 2018– ವಿಕ್ರಂ ಮುತ್ತಣ್ಣ ಇಡೀ ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಬಿ.ಎಸ್. ಯಡಿಯೂರಪ್ಪ ನವರನ್ನು ಅವರ ಸ್ವಪಕ್ಷೀಯರೇ ಮತ್ತೊಮ್ಮೆ ಕಾಲೆಳೆಯುತ್ತಿದ್ದಾರೆಯೇ ಎಂಬ ಅನುಮಾನ ಇತ್ತೀಚಿನ ಬೆಳವಣಿಗೆಗಳಿಂದ ಮೂಡುತ್ತಿದೆ. ಯಾವಾಗ ಯಡಿಯೂರಪ್ಪನವರು ಕರ್ನಾಟಕ ಬಿಜೆಪಿಯ ಪಕ್ಷಾತೀತ ಸಮೂಹ ನಾಯಕರಾದರೋ, ಅಂದಿನಿಂದಲೂ ಬಿಜೆಪಿ ಹೈಕಮಾಂಡ್ಗೆ ‘ಯಡಿಯೂರಪ್ಪ ಸನ್ನಿ’ (Yeddyurappa phobia) ಶುರುವಾಗಿದ್ದು, ಅದು ಇನ್ನೂ ಮುಂದುವರೆದಿದೆ. ಲೋಕಾಯುಕ್ತ ವರದಿಯನ್ನು ಮುಂದಿಟ್ಟುಕೊಂಡು, ಬಿಜೆಪಿ ಹೈಕಮಾಂಡ್ 2011ರಲ್ಲಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸುವ ಮೂಲಕ…
ಕನ್ನಡಿಗರ ನೆನಪಿನಾಗಸದ ತುಂಬ ರಾಜಕುಮಾರ
April 24, 2018ಅಂದಿನ ಸಿನಿಮಾಗಳಲ್ಲಿ ಕಥೆಗಾರರು ಸಿನಿಮಾದ ನಾಯಕ ನಟನಿಗಾಗಿ ಕತೆ ಬರೆಯುತ್ತಿರಲಿಲ್ಲ ಕತೆ ಬಯಸಿದ ಪಾತ್ರಕ್ಕೆ ನಾಯಕ ಬದಲಾಗುತ್ತಿದ್ದ. ಅಂಥ ಕಾಲದಲ್ಲಿ ಬಂದ ಅಣ್ಣಾವ್ರು ಪಾತ್ರಕ್ಕೆ ತಕ್ಕಂತೆ ಬದಲಾಗುತ್ತಿದ್ದರು. ಭಕ್ತ ಕನಕದಾಸ ಪಾತ್ರ ಮಾಡಿದ ಅದೇ ರಾಜ್ಕುಮಾರ್, ಜೇಮ್ಸ್ಬಾಂಡ್ ಪಾತ್ರವನ್ನೂ ಮಾಡುತ್ತಿದ್ದರು. ಅಂದರೆ ಆಗ ಕಲಾವಿದನಿಗೆ ಪರಕಾಯ ಪ್ರವೇಶದ ಸಾಮಥ್ರ್ಯ ಇರಬೇಕಿತ್ತು. ಶುದ್ಧ ಭಾವ ಪ್ರತಿಸ್ಪಂದನ ಇರಬೇಕಿತ್ತು. ಧ್ವನಿಯ ಏರಿಳಿತ ಮತ್ತು ಶ್ರಮವಹಿಸಿ ಅದನ್ನು ದುಡಿಸಿಕೊಳ್ಳುವ ಸತತ ಪರಿಶ್ರಮ ಇರಬೇಕಿತ್ತು. ಇದೆಲ್ಲಾ ಇದ್ದವರು ಕಲಾವಿದರಾಗುತ್ತಿದ್ದರೇ ವಿನಃ ಸ್ಟಾರ್ ಆಗುತ್ತಿರಲಿಲ್ಲ….
ಆಚಾರ್ಯ ಶಂಕರರ ದಾರ್ಶನಿಕ ಸಾಹಿತ್ಯ
April 19, 2018ಆಚಾರ್ಯಶಂಕರರು ಈ ಲೋಕದಲ್ಲಿ ಜೀವಿಸಿದ್ದುದು ಕೇವಲ 32 ವರ್ಷಗಳೆಂದು ಹೇಳುತ್ತಾರೆ. ಇಷ್ಟು ಸ್ವಲ್ಪ ಕಾಲದಲ್ಲಿ ಅವರು ಸಾಧಿಸಿದುದು ಅಪಾರ. ಮುಕ್ತಿಕೋಪನಿಷತ್ತಿನಲ್ಲಿ ನೂರೆಂಟು ಉಪನಿಷತ್ತುಗಳ ಹೆಸರುಗಳು ಬರುತ್ತವೆ. ಅವುಗಳಲ್ಲಿ ಅತ್ಯಂತ ಮುಖ್ಯವಾದ ಈಶಾವಾಸ್ಯ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ್ಯ, ತೈತ್ತಿರೀಯ, ವಿತರೇಯ, ಛಾಂದೋಗ್ಯ, ಬೃಹದಾರಣ್ಯಕ ಎಂಬ ಹತ್ತು ಉಪನಿಷತ್ತುಗಳಿಗೂ ಆಚಾರ್ಯರು ಭಾಷ್ಯಗಳನ್ನು ಬರೆದರು. ಇದು ಭಾರತೀಯ ದಾರ್ಶನಿಕ ಸಾಹಿತ್ಯಕ್ಕೆ ಅನುಪಮ ಕೊಡುಗೆ. ಶ್ರುತಿಸ್ಮೃತಿ ಪುರಾಣಾನಾಮಾಲಯಂ ಕರುಣಾಲಯಮ್ ನಮಾಮಿ ಭಗವತ್ಪಾದ ಶಂಕರಂ ಲೋಕಶಂಕರಮ್|| ಕ್ರಿ.ಶ. ಏಳನೆಯ ಅಥವಾ ಎಂಟನೆಯ ಶತಮಾನದಲ್ಲಿ ಭಾರತದ…