ಮೈಸೂರು, ಜ.11(ಎಂಕೆ)- ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು. ನಗರದ ನಂಜರಾಜ ಬಹದ್ದೂರ್ ಛತ್ರದ ಆವರಣ ದಲ್ಲಿ ಜಮಾಯಿಸಿದ ಬಿಜೆಪಿ ಯುವ ಮೋರ್ಚಾದ ನೂರಾರು ಕಾರ್ಯಕರ್ತರು ಪಂಜುಗಳನ್ನು ಹಿಡಿದು, ಜೈಕಾರ ಕೂಗಿದರು. ದೇಶದ ಏಕತೆ ಮತ್ತು ಅಭಿ ವೃದ್ಧಿಗಾಗಿ ಪೌರತ್ವ ಕಾಯಿದೆ ಜಾರಿಯಾಗಬೇಕು ಎಂದು ಪ್ರತಿಪಾದಿಸಿದರು. ಪೌರತ್ವ ತಿದ್ದುಪಡಿ ಕಾಯಿದೆ ಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಕಾಂಗ್ರೆಸ್, ಅಲ್ಪಸಂಖ್ಯಾತರನ್ನು ಕಾಯಿದೆ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು….
ಶಾರದಾ ವಿಲಾಸ ಕಾಲೇಜಿನಲ್ಲಿ ರೋಬೋಟಿಕ್ಸ್ `ಐಐ’ ಕೋರ್ಸ್ಗೆ ಚಾಲನೆ
January 12, 2020ಮೈಸೂರು,ಜ.11(ಎಂಟಿವೈ)-ಬೇರೊಬ್ಬರು ಕಸಿದು ಕೊಳ್ಳಲಾಗದ ವಿದ್ಯೆಗೆ ಪರ್ಯಾಯ ಆಸ್ತಿ ಮತ್ತೊಂ ದಿಲ್ಲ. ತಪಸ್ಸಿನಂತೆ ವಿದ್ಯೆಯನ್ನು ಕಲಿಯಲು ಪಣ ತೊಟ್ಟಾಗ ಮಾತ್ರ ಯಶಸ್ಸು ಸಾಧಿಸಬಹುದು ಎಂದು ಸಂಸದ ಪ್ರತಾಪ ಸಿಂಹ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶಿಕ್ಷಣ ಸಂಸ್ಥೆ ಶತಮಾನೋತ್ಸವ ಭವನದಲ್ಲಿ ಆಯೋಜಿ ಸಿದ್ದ ಕಾಲೇಜಿನಲ್ಲಿ ನೂತನವಾಗಿ ಆರಂಭಿಸಿರುವ ರೋಬೋಟಿಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೋರ್ಸ್ಗೆ ಚಾಲನೆ ನೀಡಿ, ಮಾತನಾಡಿದರು. ಈ ಹಿಂದೆ ಕೊಲಂಬಿಯಾ ಹಾಗೂ ದೆಹಲಿ ವಿವಿ ಯಲ್ಲಿ ನಡೆದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಡಾಟಾ ಪೆÇ್ರಟೆಕ್ಷನ್ಗೆ ಸಂಬಂಧಿಸಿದ…
ಪ್ರಥಮ್ ಮೈಸೂರು ಆಶ್ರಯದ ಗ್ರಾಮೀಣ ಶಾಲೆಗಳ ಶೈಕ್ಷಣಿಕ ಮೇಳ
January 12, 2020ಮೈಸೂರು, ಜ.11(ಎಸ್ಪಿಎನ್)-ತಿ.ನರಸೀಪುರ ತಾಲೂಕಿನ ಮುತ್ತತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಇಂದು ಆಯೋಜಿಸಿದ್ದ ಹತ್ತು ಹಲವು ಶೈಕ್ಷಣಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು ಪ್ರಥಮ್ ಮೈಸೂರು ಶನಿವಾರ ಆಯೋ ಜಿಸಿದ್ದ ಶೈಕ್ಷಣಿಕ ಮಾದರಿ ಗ್ರಾಮಗಳ 2ನೇ ವಾರ್ಷಿಕೋತ್ಸವ ಹಾಗೂ ಶೈಕ್ಷಣಿಕ ಮೇಳ ದಲ್ಲಿ ಮುತ್ತತ್ತಿ ಶಾಲೆಯ ಮಕ್ಕಳು ಗಣಿತ ಮೇಳ, ಮಾವಿನಹಳ್ಳಿ ಶಾಲೆ ಮಕ್ಕಳು ವಿಜ್ಞಾನ, ಯಾತನೂರು ಶಾಲೆ ಮಕ್ಕಳು ಕನ್ನಡ ಭಾಷಾ, ಸುಜ್ಜಲ್ಲೂರು ಶಾಲೆ ಮಕ್ಕಳು ಇಂಗ್ಲಿಷ್ ಮೇಳವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಜತೆಗೆ ಕಲಿಕಾ…
ಸರದಿ ಸಾಲಿನಲ್ಲಿ ನಿಂತು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತಾಗಬೇಕು
January 12, 2020ಮೈಸೂರು, ಜ.11(ಪಿಎಂ)- ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಸಾಲಿನಲ್ಲಿ ನಿಲ್ಲುವಂತಹ ವಾತಾವರಣ ನಿರ್ಮಾಣ ಮಾಡಬೇಕೆಂಬ ಆಸೆ ನನಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ತಿಳಿಸಿದರು. ಮೈಸೂರಿನ ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಶಿಕ್ಷಣ ಸಂಸ್ಥೆಗಳ ಆವ ರಣದಲ್ಲಿ ಶನಿವಾರ ಫಾರ್ಮಸಿ ಕಾಲೇ ಜಿನ ಅಡ್ವಾನ್ಸ್ಡ್ ರಿಸರ್ಚ್ ಸೆಂಟರ್ ಹಾಗೂ ಸಂಸ್ಥೆಯ ಮಹಾದ್ವಾರ ಉದ್ಘಾ ಟಿಸಿ ಇಲ್ಲಿನ ಶಾರದಾ ವಿಲಾಸ ಶತಮಾ ನೋತ್ಸವ ಭವನದಲ್ಲಿ ನಡೆದ ಸಭಾ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ನನ್ನ ಅವಧಿಯಲ್ಲಿ ಪೋಷಕರು…
ನಾನಾ ಬೇಡಿಕೆ ಈಡೇರಿಕೆಗಾಗಿ ಸಚಿವರಿಗೆ ಶಿಕ್ಷಕರ ಮನವಿ
January 12, 2020ಮೈಸೂರು,ಜ.11-ಶಿಕ್ಷಕರ ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೈಸೂರು ಜಿಲ್ಲಾ ಶಾಖೆ ವತಿಯಿಂದ ಶಿಕ್ಷಣ ಸಚಿವ ಸುರೇಶ್ಕುಮಾರ್ ಅವರಿಗೆ ಸುತ್ತೂರಿನಲ್ಲಿ ಮನವಿ ಸಲ್ಲಿಸಲಾಯಿತು. ಬಿಸಿಯೂಟ ಸಿಬ್ಬಂದಿ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸ ಬೇಕು. ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಿಎಲ್ಓ ಕಾರ್ಯದಿಂದ ಮುಕ್ತಿಗೊಳಿಸಬೇಕು. ಶಿಕ್ಷಕರಿಗೆ ನೀಡುವ ತರಬೇತಿಗಳನ್ನು ಜೂನ್ ಮಾಹೆಯ ಅಂತ್ಯ ಹಾಗೂ ಜುಲೈ ಮಾಹೆ ಯಲ್ಲಿ ನೀಡಬೇಕು. ಪ್ರಾಥಮಿಕ ಶಾಲೆಯ ಸಬಲೀಕರಣ ಉದ್ದೇಶಕ್ಕಾಗಿ ನೀಡುವ ಅನು ದಾನವನ್ನು…
ಕೊಡವ ಸಂಪ್ರದಾಯದಲ್ಲಿ ಮಹಿಳೆಗೆ ಮೊದಲ ಆದ್ಯತೆ
January 12, 2020ಮೈಸೂರು,ಜ.11(ಎಸ್ಪಿಎನ್)-ಭಾರ ತೀಯ ಪರಂಪರೆಯಲ್ಲಿ ಪುರುಷರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಎಲ್ಲಾ ಸಾಹಿತಿ ಗಳು, ಚಿಂತಕರು ವೇದಿಕೆಗಳಲ್ಲಿ ಮಾತನಾ ಡುತ್ತಾರೆ. ಆದರೆ, ನಮ್ಮ ಕೊಡವ ಸಂಪ್ರ ದಾಯದಲ್ಲಿ ಮಹಿಳೆಯರಿಗೆ ಮೊದಲ ಆದ್ಯತೆ ಇದೆ. ಅದರಲ್ಲೂ ವಿಧವಾ ಮಹಿಳೆ ಯರಿಗೆ ವಿಶೇಷ ಸ್ಥಾನಮಾನವೇ ಇದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅಭಿಪ್ರಾಯಪಟ್ಟರು. ಕಲಾಮಂದಿರ ಆವರಣದ ಚಿಂತಕ ಚಾವಡಿ ಯಲ್ಲಿ ರಂಗಬಂಡಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಡಾ.ಸುಜಾತ ಅಕ್ಕಿ ರಚಿತ `ಪ್ರಜಾರಾಜ ನಾಲ್ವಡಿ ಕೃಷ್ಣರಾಜ ಒಡೆ ಯರ್’ ನಾಟಕ…
ನಾವೆಲ್ಲಾ ಒಂದು ಎಂಬುದೇ ಭಾರತದ ಮಹಾಶಕ್ತಿ
January 12, 2020ಮೈಸೂರು, ಜ.11- ಮೈಸೂರಿನ ಶ್ರೀ ಮಹಾಲಕ್ಷ್ಮೀ ಸ್ವೀಟ್ಸ್ ವತಿಯಿಂದ ಧಾರ್ಮಿಕ ಪ್ರಚಾರಕರಿಂದ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮೈಸೂರಿನ ವಿಶ್ವೇಶ್ವರನಗರದಲ್ಲಿರುವ ಬಸಂತ್ ಕನ್ವೆನ್ಷನ್ ಸೆಂಟರ್ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಗೋತೀರ್ಥ ಕಪಿಲಾಶ್ರಮದ ಶ್ರೀ ರಾಮಚಂದ್ರ ಭಾರತೀ ಸ್ವಾಮೀಜಿ, ಭಾರತದ ಸಂಸ್ಕøತಿ `ವಸುದೈವ ಕುಟುಂಬಕಂ’ ಆಧಾರದಲ್ಲಿ ನಿಂತಿದೆ. ಭಾರತವು ಭಾವನೆ, ರಾಗ, ತಾಳವನ್ನು ಒಳಗೊಂಡಿದೆ. ನಾವೆಲ್ಲಾ ಒಂದು ಎಂಬುದು ಭಾರತದ ಶಕ್ತಿ. ಹಾಗೆಯೇ ಶ್ರೀ ಮಹಾಲಕ್ಷ್ಮೀ ಸ್ವೀಟ್ಸ್ ಮಾಲೀಕರಾದ ಶಿವಕುಮಾರ್ ಅವರ ಮನಸ್ಸು, ಹೃದಯವೂ ಸಿಹಿಯಾಗಿದೆ. ಮಹಾಲಕ್ಷ್ಮೀ…
ಭವನ್ಸ್ ಪ್ರಿಯಂವಧಾ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಘಟಿಕೋತ್ಸವ
January 12, 2020ಮೈಸೂರು, ಜ.11(ಎಂಟಿವೈ)- ಮೈಸೂರಿನ ವಿಜಯ ನಗರ ಮೊದಲ ಹಂತದಲ್ಲಿನÀ ಭಾರತೀಯ ವಿದ್ಯಾ ಭವನದ ಸಭಾಂಗಣದಲ್ಲಿ ಶನಿವಾರ ನಡೆದ ಭವನ್ಸ್ ಪ್ರಿಯಂವಧಾ ಬಿರ್ಲಾ ಇನ್ಸ್ಸ್ಟಿಟೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆ ಘಟಿಕೋತ್ಸವದಲ್ಲಿ 90 ಮಂದಿಗೆ ಪದವಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಅವರು ಚಿನ್ನದ ಪದಕ ಗಳಿಸಿದ 42 ಮಂದಿ ಒಳಗೊಂಡಂತೆ 90 ಮಂದಿಗೆ ಪದವಿ ಪ್ರದಾನ ಮಾಡಿ, ಶುಭಕೋರಿದರು. ಪದಕ ವಿಜೇತರು: ಎಲ್ಲಾ ವಿಷಯಗಳಲ್ಲೂ ಹೆಚ್ಚು ಅಂಕ ಗಳಿಸಿದ ಉತ್ತಮ ವಿದ್ಯಾರ್ಥಿಗೆ ನೀಡುವ…
ಇಸ್ಕಾನ್ನಿಂದ ಅದ್ಧೂರಿ ಕೃಷ್ಣ-ಬಲರಾಮ ರಥಯಾತ್ರೆ
January 12, 2020ಮೈಸೂರು,ಜ.11(ಎಂಕೆ)-ಮೈಸೂರಿನ ಇಸ್ಕಾನ್ ದೇವಾ ಲಯದ ವತಿಯಿಂದ ಆಯೋಜಿಸಿದ್ದ 22ನೇ ಶ್ರೀ ಶ್ರೀ ಕೃಷ್ಣ ಬಲರಾಮ ರಥಯಾತ್ರೆ ಭಕ್ತಿ-ಭಾವದಿಂದ ನೆರವೇರಿತು. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ದಿಂದ ಆರಂಭವಾದ ರಥಯಾತ್ರೆ ಚಾಮರಾಜ ವೃತ್ತ, ದೊಡ್ಡ ಗಡಿಯಾರ, ಗಾಂಧಿ ವೃತ್ತ ಮೂಲಕ ಹಳೇ ಬ್ಯಾಂಕ್ ರಸ್ತೆಯಲ್ಲಿ ಸಾಗಿ ಸಯ್ಯಾಜಿರಾವ್ ರಸ್ತೆ ಮೂಲಕ ಕೆ.ಆರ್. ವೃತ್ತ, ದೇವರಾಜ ಅರಸು ರಸ್ತೆ ಮಾರ್ಗವಾಗಿ ಸಾಗಿ ನಾರಾಯಣ ಶಾಸ್ತ್ರಿ ರಸ್ತೆಯಿಂದ ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತದಲ್ಲಿ ಬಲಕ್ಕೆ ತಿರುಗಿ ಜೆಎಲ್ಬಿ ರಸ್ತೆ ಮಾರ್ಗವಾಗಿ…
ಮಕ್ಕಳಲ್ಲಿ ತಂತ್ರಜ್ಞಾನ ಆವಿಷ್ಕಾರದ ಅರಿವು ಮೂಡಿಸುವುದು ಅವಶ್ಯ
January 12, 2020ಮೈಸೂರು,ಜ.11(ವೈಡಿಎಸ್)-ವಿಜಯನಗರ ದಲ್ಲಿರುವ ಭಾರತೀಯ ವಿದ್ಯಾಭವನದ ಸಭಾಂ ಗಣದಲ್ಲಿ ಶಂಕರ್ ಬೆಳ್ಳೂರು ಅವರ `ಅಟ್ ದಿ ಕ್ರಾಸ್ರೋಡ್ಸ್’ ಪುಸ್ತಕವನ್ನು ಶನಿವಾರ ಲೋಕಾರ್ಪಣೆಗೊಳಿಸಲಾಯಿತು. ಬೆಂಗಳೂರು ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್.ರಾಮಾನುಜ ಅವರು ಪುಸ್ತಕ ಬಿಡು ಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಆಗ ಮಿಸಿದ್ದ ಯುನಿಲಾಗ್ ಕಾಂಟೆಂಟ್ ಸಲ್ಯುಶನ್ಸ್ ಕಂಪೆನಿ ಅಧ್ಯಕ್ಷ ಕೆ.ಅಚ್ಚುತ ಬಾಚಳ್ಳಿ ಮಾತನಾಡಿ, ನಮ್ಮ ಶಾಲೆ, ಕಾಲೇಜುಗಳಲ್ಲಿ ಮಕ್ಕಳಿಗೆ ಕಲಿಸು ತಂತ್ರಜ್ಞಾನದ ನೆರವು ಬಳಸುತ್ತೇವೆ. ಆದರೆ ಕೇವಲ ತಂತ್ರಜ್ಞಾನದ ಬಳಕೆ ಮಾತ್ರ ಸಾಲದು. ತಂತ್ರ ಜ್ಞಾನದ ಆವಿಷ್ಕಾರ ಹೇಗೆ ಎಂಬುದನ್ನೂ…










