ಮೈಸೂರು, ಜ.12(ಆರ್ಕೆಬಿ)- ಮೈಸೂರಿನಲ್ಲಿ ಕಳೆದ 2019ರ ಡಿಸೆಂಬರ್ನಿಂದ ಇಲ್ಲಿಯವರೆಗೆ ಚಿನ್ನದ ದರ ಸತತವಾಗಿ ಏರಿಕೆಯಾಗುತ್ತಲೇ ಬಂದಿದೆ. ಅಲ್ಲೊಮ್ಮೆ ಇಲ್ಲೊಮ್ಮೆ ಕೆಲವೇ ರೂಪಾಯಿ ಇಳಿಕೆ ಕಂಡಿದ್ದು ಬಿಟ್ಟರೆ ದಿನೇ ದಿನೆ ಚಿನ್ನದ ದರ ಏರಿಕೆಯನ್ನು ದಾಖಲಿಸಿದೆ. ಡಿ.1, 2019ರಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ರೂ.35,490 ಇತ್ತು. ಆದರೆ 2020ರ ಜ.9 ರಂದು 37,470ಕ್ಕೇರಿತ್ತು. ಜ.8ರಂದು 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 38,600 ರೂಗಳಿಗೆ ಗರಿಷ್ಟ ಮಾರಾಟ ದರ ದಾಖಲಿಸಿದೆ. 2019ರ ಡಿ.1ರಿಂದ…
ಪೌರತ್ವ ಕಾಯ್ದೆ ಬೆಂಬಲಿಸಿ 1 ಲಕ್ಷ ಅಂಚೆ ಪತ್ರ ಅಭಿಯಾನಕ್ಕೆ ಶಾಸಕ ರಾಮದಾಸ್ ಚಾಲನೆ
January 13, 2020ಮೈಸೂರು, ಜ.12(ಆರ್ಕೆಬಿ)- ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಂಡಾಗ ಇಡೀ ದೇಶದ ಜನರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರೇಳಿಕೊಂಡು ಆನಂದ ಪಟ್ಟಿದ್ದಾರೆ. ಅವರಿಗೋಸ್ಕರ ಪೌರತ್ವವೇ ಹೊರತು, ಪೌರತ್ವ ಕಿತ್ತುಕೊಳ್ಳುವುದಲ್ಲ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಹೇಳಿದರು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬ ಲಿಸಿ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿಗೆ ಒಂದು ಲಕ್ಷ ಅಂಚೆ ಪತ್ರ ಬರೆ ಯುವ ಅಭಿಯಾನಕ್ಕೆ ಮೈಸೂರಿನ ವಿವೇಕಾ ನಂದ ವೃತ್ತದಲ್ಲಿರುವ ಅಂಚೆ ಡಬ್ಬದ ಬಳಿ ಅಂಚೆ ಪತ್ರ ಹಾಕುವ ಮೂಲಕ…
ಜಿಲ್ಲಾ ಮಟ್ಟದ ಯುವ ಸಬಲೀಕರಣ ಕೇಂದ್ರ ಉದ್ಘಾಟನೆ
January 13, 2020ಮೈಸೂರು, ಜ.12(ಪಿಎಂ)- ವಿದ್ಯಾರ್ಥಿ ಗಳಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮಾಹಿತಿ ನೀಡುವ ಸಲುವಾಗಿ ಮೈಸೂ ರಿನ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಆರಂಭಿಸಿರುವ ಜಿಲ್ಲಾ ಮಟ್ಟದ `ಯುವ ಸಬಲೀಕರಣ ಕೇಂದ್ರ’ ಭಾನುವಾರ ಉದ್ಘಾಟನೆಗೊಂಡಿತು. ಕಾಲೇಜು ಆವರಣದಲ್ಲಿ ಹಮ್ಮಿಕೊಂ ಡಿದ್ದ ರಾಷ್ಟ್ರೀಯ ಯುವ ದಿನಾಚರಣೆ ವೇಳೆ ಯಲ್ಲಿ ಯುವ ಸಬಲೀಕರಣ ಕೇಂದ್ರದ ಉದ್ಘಾ ಟನೆಯನ್ನು ಗಣ್ಯರು ನೆರವೇರಿಸಿದರು. ರಾಜ್ಯ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ ಮೂಲಕ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ತಲಾ ಒಂದು ಯುವ ಸಬಲೀಕರಣ ಕೇಂದ್ರ ಆರಂಭಿಸುತ್ತಿದ್ದು,…
ಕಿವುಡರ ಚೆಸ್ ಪಂದ್ಯಾವಳಿ: ಕರ್ನಾಟಕ ತಂಡ ಚಾಂಪಿಯನ್
January 13, 2020ಮೈಸೂರು,ಜ.12(ವೈಡಿಎಸ್)- ವಿಶ್ವೇ ಶ್ವರನಗರದ ರಾಹುಲ್ ಕನ್ವೆನ್ಷನ್ ಹಾಲ್ನಲ್ಲಿ ನಡೆದ ಕಿವುಡರ ಚೆಸ್ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಕರ್ನಾಟಕ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಮೈಸೂರು ಜಿಲ್ಲಾ ಕಿವುಡರ ಸಂಘ, ಬೆಂಗಳೂರಿನ ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟ, ನವದೆಹಲಿಯ ಅಖಿಲ ಭಾರತ ಕಿವುಡರ ಕ್ರೀಡಾ ಒಕ್ಕೂಟ ಹಾಗೂ ಲಯನ್ಸ್ ಕ್ಲಬ್ ಆಫ್ ಮೈಸೂರು ನಿಸರ್ಗ ಮತ್ತು ಮಯೂರಿ ಸಂಯುಕ್ತಾಶ್ರಯದಲ್ಲಿ 5 ದಿನ ಗಳ ಕಾಲ ನಡೆದ 22ನೇ ರಾಷ್ಟ್ರೀಯ ಕಿವು ಡರ ಚೆಸ್ ಚಾಂಪಿಯನ್ಶಿಪ್ ಪಂದ್ಯದಲ್ಲಿ 9…
ಸಂಕ್ರಾಂತಿ: ರಂಗೋಲಿ ಸ್ಪರ್ಧೆ
January 13, 2020ಮೈಸೂರು, ಜ.12(ಆರ್ಕೆಬಿ)- ಸಂಕ್ರಾಂತಿ ಹಬ್ಬದ ಅಂಗವಾಗಿ ಮೈಸೂರಿನ ಬಿಗ್ ಬಜಾರ್ ವತಿಯಿಂದ ಬಿಗ್ ಬಜಾರ್ ಆವರಣದಲ್ಲಿ ಭಾನುವಾರ ಮಹಿಳೆ ಯರಿಗಾಗಿ ಬಣ್ಣ ಬಣ್ಣದ ರಂಗೋಲಿ ಸ್ಪರ್ಧೆ ನಡೆಸಲಾಯಿತು. ಬಣ್ಣಬಣ್ಣದ ರಂಗೋಲಿ ಸ್ಪರ್ಧೆಯಲ್ಲಿ ಅತ್ಯುತ್ತಮ ರಂಗೋಲಿಗಳನ್ನು ಬಿಡಿಸಿದ ಗೀತಾ (ಪ್ರ), ಸ್ನೇಹಾ (ದ್ವಿ), ಸವಿತಾ (ತೃ) ಹಾಗೂ ರೇಣುಕಾ ಮತ್ತು ಸಿಂಚನಾ (ಸಮಾ ಧಾನಕರ ಬಹುಮಾನ) ಪಡೆದುಕೊಂಡರು. ವಿಜೇತರಿಗೆ ಬಿಗ್ಬಜಾರ್ ಹೈಪರ್ ಮಾರ್ಕೆಟ್ನ ವ್ಯವಸ್ಥಾಪಕ ರವಿಚಂದ್ರನ್ ಇನ್ನಿತರರು ಬಹುಮಾನ ವಿತರಿಸಿದರು.
ವೈಭವದಿಂದ ಜರುಗಿದ ಕಸ್ತೂರು ಶ್ರೀ ದೊಡ್ಡಮ್ಮತಾಯಿ ಚಿಕ್ಕಜಾತ್ರೆ
January 13, 2020ಚಾಮರಾಜನಗರ, ಜ.12(ಎಸ್ಎಸ್)- ತಾಲೂಕಿನ ಕಸ್ತೂರು ಶ್ರೀ ದೊಡ್ಡಮ್ಮ ತಾಯಿ ಚಿಕ್ಕಜಾತ್ರೆಯು ಭಾನುವಾರ ವೈಭವದಿಂದ ನಡೆಯಿತು. ಕಳೆದ ಭಾನುವಾರ (ಜ.5) ದೊಡ್ಡಜಾತ್ರೆ ನಡೆದಿತ್ತು. ಈ ಭಾನುವಾರ ಚಿಕ್ಕಜಾತ್ರೆ ಇತ್ತು. ಹೀಗಾಗಿ ಅಸಖ್ಯಾಂತ ಭಕ್ತರು ಶ್ರೀ ದೊಡ್ಡಮ್ಮ ತಾಯಿ ದೇವಸ್ಥಾನಕ್ಕೆ ಆಗಮಿಸಿ ಭಕ್ತಿ ಸಮ ರ್ಪಿಸಿದರು. ಬಿಸಿಲೆನ್ನದೇ ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ಹರಕೆ ಹೊತ್ತ ಭಕ್ತರು ಪಂಜಿನ ಸೇವೆಗೈದರು. ಜಾತ್ರೆ ಮೈದಾನ ತುಂಬಾ ಜನವೋ ಜನ ಕಂಡು ಬಂದರು. ಈ ಭಾಗದಲ್ಲಿ ಕಸ್ತೂರು ಶ್ರೀ ದೊಡ್ಡಮ್ಮ ತಾಯಿ…
ಸುರಕ್ಷತಾ ಕ್ರಮ ಖಾತರಿ ನೀಡುವವರೆಗೆ ಕೇಬಲ್ ಅಳವಡಿಸಕೂಡದು
January 12, 2020ಮೈಸೂರು, ಜ. 11(ಆರ್ಕೆ)- ಈವರೆಗೆ ತೆಗೆದಿ ರುವ ಗುಂಡಿಗಳನ್ನು ಮುಚ್ಚಿ ವೈಜ್ಞಾನಿಕ ರೀತಿಯಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವವರೆಗೆ ರಸ್ತೆಗಳಲ್ಲಿ ಕೇಬಲ್ ಅಳವಡಿಸುವ ಕೆಲಸ ಸ್ಥಗಿತಗೊಳಿಸುವಂತೆ ಪಾಲಿಕೆ ಅಧಿಕಾರಿಗಳು, ಮೊಬೈಲ್ ಕಂಪನಿ ಹಾಗೂ ಚೆಸ್ಕಾಂ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ. ಮೈಸೂರಿನ ಯಾದವಗಿರಿಯ ರಾಮಕೃಷ್ಣ ವಿದ್ಯಾ ಶಾಲೆ ಹಿಂಭಾಗದ ಜಾಯ್ ಐಸ್ ಕ್ರೀಂ ಸರ್ಕಲ್ ಕಡೆಗೆ ಹೋಗುವ ರಸ್ತೆಯಲ್ಲಿ ಮೊಬೈಲ್ ಕಂಪನಿಯು ಆಪ್ಟಿಕಲ್ ಫೈಬರ್ ಕೇಬಲ್ (ಔಈಅ) ಅಳವಡಿಸಲು ತೆಗೆದಿದ್ದ ಗುಂಡಿಗೆ ಬೈಕೊಂದು ಬಿದ್ದು ಸವಾರ ಪ್ರದೀಪ್ ಎಂಬುವರು ತೀವ್ರವಾಗಿ…
ಮೈಸೂರಲ್ಲಿ ನಾನಾ ಗಡ್ಡೆ-ಗೆಣಸು ಮೇಳ
January 12, 2020ಮೈಸೂರು,ಜ.11(ಎಂಟಿವೈ)-ಮೈಸೂರಿನ ನಂಜ ರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿ ಎರಡು ದಿನಗಳ ಗಡ್ಡೆ-ಗೆಣಸು ಮೇಳ ಶನಿವಾರ ಆರಂಭ ವಾಯಿತು. ಆರೋಗ್ಯಕರ ಭೂತಾಯಿ ಮಡಿಲಲ್ಲಿ ಬೆಳೆಯುವ ಬಗೆ ಬಗೆಯ ಗಡ್ಡೆ-ಗೆಣಸುಗಳಿಗೆ ಭಾರೀ ಬೇಡಿಕೆ ವ್ಯಕ್ತವಾಯಿತು. ಸಹಜ ಸಮೃದ್ಧ ಸಂಸ್ಥೆ ಆಯೋಜಿಸಿರುವ ಮೇಳಕ್ಕೆ ಶನಿವಾರ ಬೆಳಿಗ್ಗೆ ಪ್ರಗತಿಪರ ಚಿಂತಕ ಪ್ರೊ.ಕಾಳೇಗೌಡ ನಾಗವಾರ ಚಾಲನೆ ನೀಡಿದರು. ಬಳಿಕ ಮಾತನಾ ಡಿದ ಅವರು, ಭೂ ಒಡಲಲ್ಲಿ ಬೆಳೆಯುವ ಗಡ್ಡೆ-ಗೆಣಸು ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥವಾಗಿದೆ. ಕಾಡಲ್ಲಿ ಬೆಳೆಯುತ್ತಿದ್ದ ಇವುಗಳನ್ನು ಬುಡಕಟ್ಟು, ಗ್ರಾಮೀಣ ಪ್ರದೇಶದ ಜನರು ಹೆಚ್ಚಾಗಿ…
ವಾಯುಮಾಲಿನ್ಯ: ಮೈಸೂರು ವಿವಿಗೆ ನಗರಪಾಲಿಕೆ 10 ಸಾವಿರ ದಂಡ
January 12, 2020ಮೈಸೂರು, ಜ. 11(ಆರ್ಕೆ)- ವಾಯುಮಾಲಿನ್ಯ ತಡೆ ಕಾಯ್ದೆ ಉಲ್ಲಂಘನೆಗಾಗಿ ಮೈಸೂರು ಮಹಾನಗರ ಪಾಲಿಕೆಯು ಮೈಸೂರು ವಿಶ್ವ ವಿದ್ಯಾನಿಲಯಕ್ಕೆ 10 ಸಾವಿರ ರೂ. ದಂಡ ವಿಧಿಸಿದೆ. 2020ರ ಜನವರಿ 1ರಂದು ಸಂಜೆ 4.30 ಗಂಟೆ ವೇಳೆಗೆ ಮಾನಸಗಂಗೋತ್ರಿ ಆವರಣದ ರಾಸಾಯನ ಶಾಸ್ತ್ರ ವಿಭಾಗದ ಎದುರಿನ ರಸ್ತೆಯಲ್ಲಿಟ್ಟಿರುವ ಕಸದ ತೊಟ್ಟಿಗೆ ಬೆಂಕಿ ಹಾಕಿದ್ದ ರಿಂದ ಪ್ಲಾಸ್ಟಿಕ್ ತ್ಯಾಜ್ಯ ಸೇರಿ ದಂತೆ ಘನತ್ಯಾಜ್ಯ ವಸ್ತು ಸುಟ್ಟು ವಾಯುಮಾಲಿನ್ಯ ಉಂಟಾಗಿರುವುದರಿಂದ 10 ಸಾವಿರ ರೂ. ದಂಡ ಪಾವ ತಿಸುವಂತೆ ನಗರಪಾಲಿಕೆ ಆಯುಕ್ತ ಗುರುದತ್…
ಧರ್ಮದ ಪರಿಭಾಷೆಯಿಂದ ಪ್ರಜಾಪ್ರಭುತ್ವಕ್ಕೆ ಹಿನ್ನಡೆ
January 12, 2020ಮೈಸೂರು, ಜ.11(ಆರ್ಕೆ)- ಧರ್ಮದ ಪರಿಭಾಷೆಯಿಂದ ಪ್ರಜಾಪ್ರಭುತ್ವ ಹಿನ್ನಡೆ ಅನುಭವಿಸುತ್ತದೆ ಎಂದು ಸಾಹಿತಿ ಪ್ರೊ. ಅರವಿಂದ ಮಾಲ ಗತ್ತಿ ಇಂದಿಲ್ಲಿ ಅಭಿ ಪ್ರಾಯಪಟ್ಟಿದ್ದಾರೆ. ಬಹುಜನ ವಿದ್ಯಾರ್ಥಿ ಸಂಘದ ವತಿ ಯಿಂದ ಮೈಸೂರಿನ ಮಾನಸಗಂಗೋ ತ್ರಿಯ ಮಾನವಿಕ ಸಭಾಂಗಣದಲ್ಲಿ ಆಯೋ ಜಿಸಿದ್ದ ‘ಭಾರತಕ್ಕೆ ಬೇಕಿರುವುದು ಇಇಇ (ಕ್ರಿಯಾತ್ಮಕ ಶಿಕ್ಷಣ, ಸಶಕ್ತ ಉದ್ಯೋಗ, ಸುಭದ್ರ ಆರ್ಥಿಕತೆ)-ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಅಲ್ಲ’ ಎಂಬ ವಿಚಾರ ಸಂಕಿರಣ ದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎಗೆ ಜನರು ವಿರೋಧ…










