ಮೈಸೂರು, ಜ.13(ಪಿಎಂ)- ಪ್ರಭಾವಶಾಲಿ ಭಾಷಣ ಮಾಡುವುದು ಒಂದು ಕಲೆ. ಪ್ರಸ್ತುತ ಪ್ರಧಾನಿ ನರೇಂದ್ರಯವರು ಅತ್ಯಂತ ಪ್ರಭಾವಶಾಲಿ ಭಾಷಣ ಮಾಡುವ ಕಲೆ ಕರಗತ ಮಾಡಿಕೊಂಡಿದ್ದು, ಆ ಮೂಲಕ ಭಾರತದ ಒಬ್ಬ ರಾಷ್ಟ್ರ ರಾಜಕಾರಣಿ ಜಗತ್ತಿನಾದ್ಯಂತ ಗಮನ ಸೆಳೆದಿದ್ದಾರೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಪ್ರಧಾನ್ ಗುರುದತ್ತ ಅಭಿಪ್ರಾಯಪಟ್ಟರು. ಮೈಸೂರಿನ ಬಾಸುದೇವ ಸೋಮಾನಿ ಕಾಲೇಜಿನ ಸಭಾಂಗಣದಲ್ಲಿ ಮೈಸೂರು ವಿವಿ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ (ಎನ್ಎಸ್ಎಸ್) ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನದ…
ಕುವೆಂಪು ಸಾಹಿತ್ಯ ಆತ್ಮಸ್ಥೈರ್ಯದ ಕಣಜ
January 14, 2020ಮೈಸೂರು, ಜ.13(ಪಿಎಂ)- ಯಾವ ಮನೋವೈದ್ಯರು ನೀಡಲಾಗದ ಆತ್ಮ ಸ್ಥೈರ್ಯವನ್ನು ರಾಷ್ಟ್ರಕವಿ ಕುವೆಂಪು ಸಾಹಿತ್ಯ ನಮಗೆ ನೀಡಲಿದೆ ಎಂದು ಮುಕ್ತ ವಿವಿ ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್ ಸ್ಮರಿಸಿದರು. ಮೈಸೂರು ವಕೀಲರ ಸಂಘದ ವತಿ ಯಿಂದ ಸಂಘದ ಸಭಾಂಗಣದಲ್ಲಿ ಸೋಮ ವಾರ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಅವರ 116ನೇ ಜಯಂತೋತ್ಸವದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಕುವೆಂಪು ಸಮಾನತೆಯ ನ್ಯಾಯ, ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗಳನ್ನು ಪ್ರತಿ ಪಾದಿಸಿದವರು ಎಂದು ತಿಳಿಸಿದರು. ಕನ್ನಡವಿರುವ ತನಕ ಕುವೆಂಪು ನಮ್ಮೊ ಡನೆ ಇರಲಿದ್ದಾರೆ….
ಪಾಲಿಕೆ ಸದಸ್ಯರೊಂದಿಗೆ ಅನುಚಿತ ವರ್ತನೆ ಉಗ್ರಾಣ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
January 14, 2020ಮೈಸೂರು,ಜ.13(ಎಂಟಿವೈ)- ಪರಿಶೀಲನೆಗೆ ಅವಕಾಶ ನೀಡದೆ ಇಬ್ಬರು ಪಾಲಿಕೆ ಸದಸ್ಯರೊಂದಿಗೆ ಅಸಭ್ಯವಾಗಿ ವರ್ತಿಸಿರುವ ಉಗ್ರಾಣ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಂಡು, ನಡೆದಿರುವ ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿ ಮೈಸೂರು ನಗರ ಪಾಲಿಕೆ ಕಚೇರಿ ಮುಂದೆ ವಿನಾಯಕ ಕ್ರೀಡಾ ಹಾಗೂ ಸಮಾಜ ಸೇವಾ ಸಂಸ್ಥೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪರಿಶಿಷ್ಟ ಜಾತಿ ಹಾಗೂ ಹಿಂದುಳಿತ ವರ್ಗಕ್ಕೆ ಸೇರಿದ ಪಾಲಿಕೆ ಸದಸ್ಯರಾದ ಡಾ.ಅಶ್ವಿನಿ ಹಾಗೂ ಪಲ್ಲವಿ ಬೇಗಂ ಜ.4ರಂದು ಮೈಸೂರು ಪಾಲಿಕೆ ಉಗ್ರಾಣವನ್ನು ಪರಿಶೀಲಿಸಲು ತೆರಳಿದ್ದಾಗ ಉಗ್ರಾಣ ಸಿಬ್ಬಂದಿ…
ಇಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ
January 14, 2020ಮೈಸೂರು, ಜ.13- ನೆಹರು ಯುವ ಕೇಂದ್ರ, ಶ್ರೀ ತಲ ಕಾವೇರಿ ಮಹಿಳಾ ವಿದ್ಯಾ ಸಂಸ್ಥೆ ಮತ್ತು ಕಾಲೇಜು ಸಹ ಯೋಗದಲ್ಲಿ ಹಿಂದೂ ಸ್ಥಾನ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ.14 ರಂದು ಬೆಳಿಗ್ಗೆ 11 ಗಂಟೆಗೆ ದಿವ್ಯಚೇತನ ಸ್ವಾಮಿ ವಿವೇಕಾನಂದರ ಜನ್ಮ ದಿನಾ ಚರಣೆ ಹಮ್ಮಿಕೊಳ್ಳಲಾಗಿದೆ. ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಿಂದೂ ಸ್ಥಾನ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಜೆ.ಪ್ರಿಯಾ ಅಧ್ಯಕ್ಷತೆ ವಹಿಸುವರು ಎಂದು ನೆಹರು ಯುವ ಕೇಂದ್ರದ ಎಸ್.ಸಿದ್ದರಾಮಪ್ಪ ತಿಳಿಸಿದ್ದಾರೆ. ಕ್ರೀಡಾ ಸಾಮಗ್ರಿಗಳನ್ನು ನಗರಪಾಲಿಕೆ…
ಮೈಸೂರು, ಚಾ.ನಗರ ಧಾರ್ಮಿಕ ಕ್ಷೇತ್ರಗಳಿಗೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ದಂಪತಿ ಭೇಟಿ
January 14, 2020ಮೈಸೂರು, ಜ.13(ಪಿಎಂ/ಎಸ್ಎಸ್)- ಅಯೋಧ್ಯೆ ರಾಮ ಜನ್ಮಭೂಮಿ ತೀರ್ಪಿನಿಂದ ಇಡೀ ದೇಶದಲ್ಲಿ ವಿಶೇಷ ಗಮನ ಸೆಳೆದಿದ್ದ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ದಂಪತಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದರು. ಭಾನುವಾರ ಬೆಳಿಗ್ಗೆ ಮೈಸೂರಿನ ಚಾಮುಂಡೇ ಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ದಂಪತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ಅವರ ಪತ್ನಿ ರೂಪಾಂಜಲಿ ಗೊಗೊಯ್ ಅವರನ್ನು ದೇವ ಸ್ಥಾನದ ಆಡಳಿತ ಮಂಡಳಿ ವತಿಯಿಂದ…
ಮೈಸೂರಿನ ಐವರು ಸೇರಿ 90 ಇನ್ಸ್ಪೆಕ್ಟರ್ಗಳ ವರ್ಗಾವರ್ಗಿ
January 14, 2020ಮೈಸೂರು, ಜ.13(ಎಸ್ಬಿಡಿ)- ಮೈಸೂರಿನ ಐವರು ಸೇರಿದಂತೆ ರಾಜ್ಯಾದ್ಯಂತ 90 ಪೊಲೀಸ್ ಇನ್ಸ್ಪೆಕ್ಟರ್ ಗಳ ವರ್ಗಾವಣೆ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಎನ್.ಮುನಿಯಪ್ಪ ಲಷ್ಕರ್ ಠಾಣೆಯಿಂದ ದೇವರಾಜ ಸಂಚಾರ ಠಾಣೆಗೆ, ಕೆ.ಶ್ರೀಕಾಂತ್ ಎಸಿಬಿಯಿಂದ ನಜರ್ ಬಾದ್ ಠಾಣೆಗೆ, ಮೊಹಮ್ಮದ್ ಇರ್ಶಾದ್ ಜಿಲ್ಲಾ ಅಪರಾಧ ದಾಖಲೆಗಳ ಬ್ಯೂರೋ(ಡಿಸಿಆರ್ಬಿ)ದಿಂದ ಸಿಐಡಿಗೆ, ಬಿ.ಜಿ.ಪ್ರಕಾಶ್ ವಿವಿಪುರಂ ಸಂಚಾರ ಠಾಣೆ ಯಿಂದ ರಾಜ್ಯ ಗುಪ್ತವಾರ್ತೆ ವಿಭಾಗಕ್ಕೆ ಹಾಗೂ ಎಲ್. ಅರುಣ್ ಮಂಡಿ ಠಾಣೆಯಿಂದ ಕರ್ನಾಟಕ ಲೋಕಾ ಯುಕ್ತ (ಕೆಎಲ್ಎ)ಕ್ಕೆ ವರ್ಗಾವಣೆಗೊಂಡಿದ್ದಾರೆ. ಸ್ಥಳ ನಿರೀಕ್ಷಣೆಯಲ್ಲಿದ್ದ ಪಿ.ಪಿ.ಸಂತೋಷ್…
ಮಹಿಳೆ ಮಾಂಗಲ್ಯ ಸರ ಅಪಹರಣ
January 14, 2020ಮೈಸೂರು, ಜ.13(ಆರ್ಕೆ)- ಅಂಗಡಿಯಿಂದ ಮನೆಗೆ ನಡೆದು ಕೊಂಡು ಹೋಗುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ರಾಮಕೃಷ್ಣನಗರದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ. ರಾಮಕೃಷ್ಣನಗರ ‘ಇ’ ಅಂಡ್ ‘ಎಫ್’ ಬ್ಲಾಕ್ ನಿವಾಸಿ ಪಾರ್ವತಿ ಎಂಬುವರೇ 1.2 ಲಕ್ಷ ರೂ. ಮೌಲ್ಯದ 40 ಗ್ರಾಂ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡವರು. ಜ.10ರಂದು ಸಂಜೆ 4 ಗಂಟೆ ವೇಳೆಗೆ ರಾಮಕೃಷ್ಣನಗರದ ರೂಬಿ ಬೇಕರಿ ಬಳಿಯ ಕ್ರಾಸ್ ರೋಡ್ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬೈಕ್ನಲ್ಲಿ ಬಂದ ಅಪರಿಚಿತ ಯುವಕನೋರ್ವ ಏಕಾಏಕಿ ತಮ್ಮ…
ಗುಂಡ್ಲುಪೇಟೆಯಲ್ಲಿ ಶಂಕಿತ ಉಗ್ರನ ವಶ
January 13, 2020ಚಾಮರಾಜನಗರ, ಜ.12(ಎಸ್ಎಸ್, ಎಸಿಪಿ)-ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಉಗ್ರರ ಕರಿನೆರಳು ಕಾಣಿಸಿಕೊಂಡಿದ್ದು, ಗುಂಡ್ಲುಪೇಟೆಯ ಮದರಸಾವೊಂದರ ಮೇಲೆ ಶನಿವಾರ ಸಂಜೆ ಆಂತರಿಕ ಭದ್ರತಾ ವಿಭಾಗ (ಐಎಸ್ಡಿ), ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಜಿಲ್ಲಾ ಪೊಲೀಸರು ಜಂಟಿ ದಾಳಿ ನಡೆಸಿ ಶಂಕಿತ ಉಗ್ರನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಈ ದಾಳಿಯಲ್ಲಿ ಶಂಕಿತ ಉಗ್ರನಿಗೆ ಆಶ್ರಯ ನೀಡಿದ ಶಂಕೆ ಮೇರೆಗೆ ಮದರಸಾದ ಮೌಲ್ವಿ ಯನ್ನೂ ವಶಕ್ಕೆ ಪಡೆದಿದ್ದ ಐಎಸ್ಡಿ ತಂಡ ವಿಚಾರಣೆ ನಂತರ ಭಾನುವಾರ ಸಂಜೆ ಅವರನ್ನು ಬಿಡುಗಡೆ ಮಾಡಿದೆ ಎಂದು ಪೊಲೀಸ್…
ನಿಂಬೆಹಣ್ಣು, ತರಕಾರಿ ಮಾರುತ್ತಿದ್ದವನು ಈಗ ಮುಖ್ಯಮಂತ್ರಿ ಆಗಿದ್ದೇನೆ
January 13, 2020ಬೆಂಗಳೂರು, ಜ.12- ಪ್ರೌಢಶಾಲೆ ವ್ಯಾಸಂಗ ಮಾಡುವಾಗ ಬೂಕನಕೆರೆಯಲ್ಲಿ ನಿಂಬೆಹಣ್ಣು, ತರಕಾರಿ ಮಾರುತ್ತಿದ್ದವನು ಇಂದು ನಾಲ್ಕನೇ ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ, ಅಚಲ ವಿಶ್ವಾಸವಿದ್ದ ಯಾರು ಏನು ಬೇಕಾದರೂ ಆಗಬಹುದು ಎಂದು ತಮ್ಮ ಜೀವನವನ್ನೇ ಉದಾಹರಣೆ ನೀಡಿ ವಿದ್ಯಾರ್ಥಿಗಳಿಗೆ ಭವಿಷ್ಯದ ಗುರಿಯೊಂದಿಗೆ ಸಂಕಲ್ಪ ತೊಟ್ಟು ಮುನ್ನಡೆಯುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸರ್ಕಾರದಿಂದ ಪದವಿ ವಿದ್ಯಾರ್ಥಿ ಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ ಯೋಜನೆಯಡಿ ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ಕಲೆ, ವಾಣಿಜ್ಯ,…
ಕಾವೇರಿ-ಗೋದಾವರಿ ನದಿ ಜೋಡಣೆ ಬಗ್ಗೆ ಸಮಾಲೋಚನಾ ಸಭೆ
January 13, 2020ಮೈಸೂರು,ಜ.12(ಬಿಸಿಟಿ)- ಕೊಡಗು ಜಿಲ್ಲೆಯಲ್ಲಿ ಉಗಮ ವಾಗುವ ಕಾವೇರಿ ನದಿ ಪಾತ್ರದಿಂದ ತಮಿಳುನಾಡಿನ ಸಂಗಮದ ತನಕದ ನದಿಯ ಹಾದಿಯನ್ನು ಇಡಿಯಾಗಿ ರಕ್ಷಿಸುವ ಕ್ರಮಗಳನ್ನು ಚರ್ಚಿಸಲು ಬೆಂಗಳೂರಿನ ವಿಧಾನಸಭೆಯ ಎರಡನೆಯ ಕಟ್ಟಡದಲ್ಲಿ ಸಮಾಲೋಚನಾ ಸಭೆಯನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು. ನವೆಂಬರ್ 2019ರಲ್ಲಿ ಚೆನ್ನೈನಲ್ಲಿ ನಡೆದ ಪರ್ಯಾಯ ದ್ವೀಪದ ನದಿಗಳ (Peninsular rivers) ಸಂರಕ್ಷಣಾ ಸಭೆ ಹಾಗೂ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಡಿಸೆಂಬರ್ 2019ರಲ್ಲಿ ನಡೆದ ರಾಷ್ಟ್ರೀಯ ಜಲ ಸಮಾವೇಶದ ನಂತರದ ಸಭೆ ಇದಾಗಿತ್ತು. ಉಜ್ಜಯಿನಿಯಲ್ಲಿ ನಡೆದ ಸಭೆಯಲ್ಲಿ ಗೋದಾವರಿ, ಕೃಷ್ಣ ಹಾಗೂ ಕಾವೇರಿ…










