ಇಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ
ಮೈಸೂರು

ಇಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ

January 14, 2020

ಮೈಸೂರು, ಜ.13- ನೆಹರು ಯುವ ಕೇಂದ್ರ, ಶ್ರೀ ತಲ ಕಾವೇರಿ ಮಹಿಳಾ ವಿದ್ಯಾ ಸಂಸ್ಥೆ ಮತ್ತು ಕಾಲೇಜು ಸಹ ಯೋಗದಲ್ಲಿ ಹಿಂದೂ ಸ್ಥಾನ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ.14 ರಂದು ಬೆಳಿಗ್ಗೆ 11 ಗಂಟೆಗೆ ದಿವ್ಯಚೇತನ ಸ್ವಾಮಿ ವಿವೇಕಾನಂದರ ಜನ್ಮ ದಿನಾ ಚರಣೆ ಹಮ್ಮಿಕೊಳ್ಳಲಾಗಿದೆ. ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಿಂದೂ ಸ್ಥಾನ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಜೆ.ಪ್ರಿಯಾ ಅಧ್ಯಕ್ಷತೆ ವಹಿಸುವರು ಎಂದು ನೆಹರು ಯುವ ಕೇಂದ್ರದ ಎಸ್.ಸಿದ್ದರಾಮಪ್ಪ ತಿಳಿಸಿದ್ದಾರೆ.

ಕ್ರೀಡಾ ಸಾಮಗ್ರಿಗಳನ್ನು ನಗರಪಾಲಿಕೆ ಸದಸ್ಯೆ ಶಾಂತಮ್ಮ ವಡಿವೇಲು ವಿತರಿಸು ವರು. ಓರಿಯಂಟ್ ಫ್ಲೈಟ್ಸ್ ಏವಿಯೇ ಷನ್ ಅಕಾಡೆಮಿ ವಿಂಗ್ ಕಮ್ಯಾಂಡರ್ ಪಾಂಡುರಂಗಿ ವೃತ್ತಿ ತರಬೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿ ಸುವರು. ಕಾರ್ಯಕ್ರಮದ ಅತಿಥಿ ಉಪ ನ್ಯಾಸವನ್ನು ಜಿಲ್ಲಾ ಮಕ್ಕಳ ರಕ್ಷಣಾಧಿ ಕಾರಿ ಡಾ.ಎಸ್.ದಿವಾಕರ್ ಹಾಗೂ ಕ್ರೆಡಿಟ್ -ಐನ ನಿರ್ದೇಶಕ ಡಾ.ಎಂ.ಪಿ.ವರ್ಷ ಮಾಡಲಿದ್ದು, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಡಿ.ಮಂಚಯ್ಯ, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಧ್ಯಾಪಕಿ ಪೆÇ್ರ.ಎಂ.ಎಸ್. ಮನೋನ್ಮಣಿ ಹಾಗೂ ಎನ್.ಎ.ಎಫ್‍ನ ನಿರ್ದೇಶಕಿ ರುಕ್ಮಿಣಿ ಚಂದ್ರನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

Translate »