ರಾಮನಗರ: ಬಾಂಗ್ಲಾದೇಶದ ನಿಷೇಧಿತ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ್(ಜೆಎಂಬಿ) ಸಂಘಟನೆಯ ಶಂಕಿತ ಉಗ್ರ ಎಸ್.ಕೆ. ಹಬಿಬುರ್ ರೆಹಮಾನ್ ಅಲಿಯಾಸ್ ಶೇಖ್ ಮಂಗಳ ವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬಂಧನವಾದ ಬೆನ್ನಲ್ಲೇ ರಾಮನಗರದಲ್ಲಿ ಎರಡು ಸಜೀವ ಬಾಂಬ್ಗಳು ಬುಧವಾರ ಪತ್ತೆಯಾಗಿವೆ. ಈ ಮೂಲಕ ಸಂಭವಿಸಬಹು ದಾಗಿದ್ದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ರಾಮನಗರದ ಟಿಪ್ಪು ನಗರದ 23ನೇ ವಾರ್ಡ್ನ ಸೇತುವೆ ಬಳಿ ಎನ್ಐಎ, ಗುಪ್ತಚರ ದಳ ಮತ್ತು ಪೊಲೀಸರು ನಡೆಸಿದ ಶೋಧ ಕಾರ್ಯದಲ್ಲಿ ಎರಡು ಸಜೀವ ಬಾಂಬ್ಗಳು ಪತ್ತೆಯಾಗಿವೆ….
ಮಾದಕ ವಸ್ತು ಬಳಕೆ, ಸಾಗಾಟದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಥಾ
June 27, 2019ಮೈಸೂರು,ಜೂ.26(ವೈಡಿಎಸ್)- ಅಂತಾರಾಷ್ಟ್ರೀಯ ಮಾದಕ ವಸ್ತು ಬಳಕೆ ಮತ್ತು ಕಾನೂನು ಬಾಹಿರ ಕಳ್ಳ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಬುಧವಾರ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮ ಕುರಿತು ರೈಲ್ವೆ ನಿಲ್ದಾಣದಲ್ಲಿ ಜಾಥಾ ನಡೆಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗು ವುದನ್ನು ತಡೆಯುವ ನಿಟ್ಟಿನಲ್ಲಿ ಔಷಧ ನಿಯಂತ್ರಣ ಇಲಾಖೆ ಪ್ರಾದೇಶಿಕ ಕಚೇರಿ ಮೈಸೂರು, ರೈಲ್ವೆ ಭದ್ರತಾ ಕಚೇರಿ ಸಹ ಯೋಗದಲ್ಲಿ ನೂರಾರು ಮಂದಿ ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ವೈದ್ಯರು, ಔಷಧ ನಿಯಂತ್ರಣ ಇಲಾಖೆ ಸದಸ್ಯರು, ಭದ್ರತಾ…
ಚಾಮುಂಡಿಬೆಟ್ಟ ದಾಸೋಹ ಭವನದ ಎದುರಿನ ಕಲ್ಲು ಮಂಟಪದ ಕಂಬಕ್ಕೆ ಹಾನಿ
June 27, 2019ಮೈಸೂರು, ಜೂ.26(ಎಸ್ಪಿಎನ್)-ಚಾಮುಂಡಿಬೆಟ್ಟದ ಪ್ರಸಾದ ನಿಲಯ ಎದುರಿನ ಉದ್ಯಾನವನದಲ್ಲಿ ಅಭಿವೃದ್ಧಿ ಪಡಿಸಿರುವ ಅಲಂಕಾರಿಕ ಮಂಟಪದ ಕಂಬ ಮುರಿದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಅದನ್ನು ತೆರವು ಗೊಳಿಸುವ ಬದಲು ತೇಪೆ ಹಚ್ಚಿ ಸುಮ್ಮ ನಾಗಿರುವುದಕ್ಕೆ ಜಿಲ್ಲಾಡಳಿತ ವಿರುದ್ದ ಇಲ್ಲಿನ ನಿವಾಸಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 15 ದಿನಗಳಿಂದ ಆಷಾಢ ಶುಕ್ರವಾರ ಪೂಜೆಗೆ ಸಕಲ ಸಿದ್ದತೆ ಆರಂ ಭವಾಗಿದ್ದು, ಇದಕ್ಕಾಗಿ ಜಿಲ್ಲಾಧಿಕಾರಿಗಳು, ಜಿಪಂ ಸಿಇಓ, ನಗರ ಪೊಲೀಸ್ ಆಯು ಕ್ತರು ಸೇರಿದಂತೆ ಇತರೆ ಅಧಿಕಾರಿಗಳು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುತ್ತಲೇ ಇದ್ದಾರೆ. ಆದರೆ,…
ಕನಗನಮರಡಿ ಬಸ್ ದುರಂತ, ಸುಳವಾಡಿ ವಿಷ ಪ್ರಸಾದ ಕುರಿತ ಪುಸ್ತಕ ಬಿಡುಗಡೆ
June 27, 2019ಮೈಸೂರು, ಜೂ.26(ಎಂಕೆ)- ಭಾರತ ನಂಬಿಕೆ ಎಂಬ ತತ್ವ ಸಿದ್ಧಾಂತದ ಮೇಲೆ ನಿಂತಿದೆ. ಇಲ್ಲಿ ನಂಬಿಕೆಯೇ ದೇವರು, ನಂಬದಿರುವುದು ದೆವ್ವ. ದೇವರ ಹೆಸರಿನಲ್ಲಿ ನಡೆದ ಸುಳವಾಡಿ ವಿಷ ಪ್ರಸಾದ ಘಟನೆ ಒಂದು ದುರಂತ ಇತಿಹಾಸವಾಗಿದೆ ಎಂದು ಶಾಸಕ ಅಡಗೂರು ಹೆಚ್.ವಿಶ್ವನಾಥ್ ಹೇಳಿದರು. ಮಾನಸ ಗಂಗೋತ್ರಿಯ ರಾಣಿ ಬಹ ದ್ದೂರ್ ಸಭಾಂಗಣದಲ್ಲಿ ಸಂವಹನ ಪ್ರಕಾಶನ ಆಯೋಜಿಸಿದ್ದ ಪತ್ರಕರ್ತ ರವಿ ಪಾಂಡವ ಪುರ ಅವರ ‘ರೈಟ್ರೈಟ್, ಅಯ್ಯೋದ್ಯಾವ್ರೇ’ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಮ್ಮಲ್ಲಿ ಎಲ್ಲರಿಗೂ ದೇವರೆಂದರೆ ಭಯ-ಭಕ್ತಿ. ಎಲ್ಲವನ್ನು ಮೀರಿದ…
ಮೈಸೂರಿನ ಬಾಲಕ ಇಸ್ರೋದಲ್ಲಿ ಯುವ ವಿಜ್ಞಾನಿ!
June 27, 2019ಮೈಸೂರು,ಜೂ.26-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದೇಶದ ಅತ್ಯಂತ ಹೆಮ್ಮೆಯ ಸಂಸ್ಥೆ. ಉಪಗ್ರಹಗಳ ಉಡಾವಣೆ, ಚಂದ್ರಯಾನಕ್ಕೆ ಸಿದ್ಧತೆ, ಮಂಗಳ ಗ್ರಹ ಸಂಶೋಧನೆ ಮೂಲಕ ಅಮೆರಿಕದ ಪ್ರತಿಷ್ಠಿತ `ನಾಸಾ’ಗೇ ಪೈಪೋಟಿ ನೀಡುತ್ತಿರುವ ಸಂಸ್ಥೆ. ಇಂತಹ ಹೆಸರಾಂತ ಸಂಸ್ಥೆಗೆ ಮೈಸೂರಿನ ವಿದ್ಯಾರ್ಥಿ ಯೊಬ್ಬ `ಯುವ ವಿಜ್ಞಾನಿ’ಯಾಗಿ ಆಯ್ಕೆಯಾಗಿದ್ದು, ಸಾಂಸ್ಕøತಿಕ ನಗರಿಯ ಮುಡಿಗೆ ವಿಶೇಷ ಗರಿ ಸೇರಿಸಿದ್ದಾನೆ. ಮೈಸೂರಿನ ಎಂ.ಭರತೇಶ್ವರ್ ಇಸ್ರೋದ `ಯುವಿಕಾ’ (ಯುವ ವಿಜ್ಞಾನಿ ಕಾರ್ಯಕ್ರಮ)ಕ್ಕೆ ಸೇರ್ಪಡೆಗೊಳ್ಳುತ್ತಿರುವ ವಿದ್ಯಾರ್ಥಿ. ಜವಾಹರ್ ನವೋದಯ ವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿ ಯಾದ ಭರತೇಶ್ವರ್ ಜತೆಗೇ…
ಇಂದು ಅದ್ಧೂರಿ ಕೆಂಪೇಗೌಡ ಜಯಂತಿ
June 27, 2019ಮೈಸೂರು, ಜೂ.26(ಪಿಎಂ)-ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಾಡಪ್ರಭು ಕೆಂಪೇಗೌಡ ಜಯಂತ್ಯೋತ್ಸವ ಸಮಿತಿ ಸಂಯು ಕ್ತಾಶ್ರಯದಲ್ಲಿ ಜೂ.27ರಂದು ನಾಡಪ್ರಭು ಕೆಂಪೇಗೌಡ ಜಯಂತಿ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮಹಾಲಿಂಗಂ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11.30ಕ್ಕೆ ಕಲಾಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ…
ಪ್ರತಿ ಬುಧವಾರದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ
June 27, 2019ಮೈಸೂರು, ಜೂ.26 (ಪಿಎಂ)- ಮೈಸೂರು ನಗರದಲ್ಲಿ ಸ್ವಚ್ಛತೆಯನ್ನು ಪರಿಣಾಮಕಾರಿಯಾಗಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ `ಬುಧವಾರ ಸ್ವಚ್ಛತಾ ದಿವಸ-2020’ ಅಭಿಯಾನ ಆರಂಭಿಸಿದೆ. ಒಂದು ವರ್ಷದ ಅವಧಿಯಲ್ಲಿ ಈ ಅಭಿಯಾನದ ಮೂಲಕ ಸ್ವಚ್ಛತೆಯನ್ನು ಪರಿಣಾಮಕಾರಿಯಾಗಿ ಕಾಯ್ದುಕೊಳ್ಳುವ ಜೊತೆಗೆ ಸ್ವಚ್ಛತೆ ಕುರಿತಂತೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ. ಅದರಂತೆ ಪ್ರತಿ ಬುಧವಾರ ಎಲ್ಲಾ 65 ವಾರ್ಡ್ಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಸ್ವಚ್ಛತಾ ಕಾರ್ಯ ನಡೆಯಲಿದೆ. ಚಾಲನೆ: ಸ್ವಚ್ಛತಾ ದಿವಸ ಅಭಿಯಾನಕ್ಕೆ ಒಂದು ದಿನ ಮುಂಗಡವಾಗಿ ಮಂಗಳ ವಾರವೇ…
ಮೈಸೂರಿನ ವಿವಿಧೆಡೆ ಕಳವು
June 27, 2019ಮೈಸೂರು, ಜೂ.26(ಎಸ್ಪಿಎನ್)- ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಮೂರು ಮನೆಕಳ್ಳತನ ಪ್ರಕರಣ ದಾಖಲಾಗಿದ್ದು, 107 ಗ್ರಾಂ ತೂಕ ಚಿನ್ನಾಭರಣ ಹಾಗೂ ಮೊಬೈಲ್, 70 ಸಾವಿರ ನಗದು ದೋಚಿರುವ ಬಗ್ಗೆ ದೂರು ದಾಖಲಾಗಿದೆ. 40 ಗ್ರಾಂ ಚಿನ್ನದ ಸರ ಕಳವು: ಮನೆಯಲ್ಲಿ ಯಾರೂ ಇಲ್ಲದ ವೇಳೆ ನಕಲಿ ಕೀ ಬಳಸಿ ಒಳನುಗ್ಗಿ ರುವ ಕಳ್ಳರು ಬೀರುವಿನಲ್ಲಿದ್ದ 40 ಗ್ರಾಂ ಚಿನ್ನದ ಸರ, ಮನೆಯ ದಾಖಲಾತಿ ಪತ್ರಗಳು ಕಳವು ಮಾಡಿ ರುವ ಘಟನೆ ಗಾಂಧಿನಗರದ 2 ಅಡ್ಡರಸ್ತೆಯಲ್ಲಿ…
ಇಟಲಿಯ ಅಂತಾರಾಷ್ಟ್ರೀಯ ವಿವಿ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಮೈಸೂರು ವಿವಿಯ ಧನುಷಾ ಆಯ್ಕೆ
June 27, 2019ಮೈಸೂರು, ಜೂ.26(ಪಿಎಂ)- ಇಟಲಿಯಲ್ಲಿ ಜು.3ರಿಂದ 14ರವರೆಗೆ ನಡೆಯುವ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿ ಸಲು ಮೈಸೂರು ವಿವಿಯ ಎಂ.ಆರ್.ಧನುಷಾ ಆಯ್ಕೆಯಾಗಿದ್ದಾರೆ. ಈ ಕ್ರೀಡಾಕೂಟಕ್ಕೆ ಮೈಸೂರು ವಿವಿಯಿಂದ ಆಯ್ಕೆ ಯಾದ ಮೊದಲಿಗರು ಎಂಬ ಹಿರಿಮೆಗೂ ಎಂ. ಆರ್.ಧನುಷಾ ಭಾಜನ ರಾಗಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾನಿಲ ಯದ ಕ್ರೀಡಾಪಟುವಾದ ಎಂ.ಆರ್.ಧನುಷಾ ದ್ವಿತೀಯ ಬಿಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಮೈಸೂರು ಜಿಲ್ಲೆಯ ಕೆಆರ್ ನಗರದ ನಿವಾಸಿ ಆಟೋರಿಕ್ಷಾ ಚಾಲಕ ಮಂಜು ಹಾಗೂ ರುಕ್ಮಿಣಿ ದಂಪತಿ…
ಮಾದಕ ವಸ್ತುಗಳು ಬದುಕಿಗೆ ಮಾರಕ
June 27, 2019ಮೈಸೂರು, ಜೂ.26(ಪಿಎಂ)- ಮಾದಕ ವ್ಯಸನದ ಹಾದಿ ಕಟ್ಟುವುದು ಬೇಗ ಸಮಾಧಿ… ಎಂಬಿತ್ಯಾದಿ ಘೋಷ ವಾಕ್ಯಗಳ ಫಲಕಗಳನ್ನಿಡಿದು ಹೆಜ್ಜೆ ಹಾಕಿದ ವಿದ್ಯಾರ್ಥಿ ಸಮೂಹ ಮಾದಕ ಪದಾರ್ಥಗಳು ವ್ಯಕ್ತಿಯ ಬದುಕಿಗೆ ಮಾರಕ ಎಂಬುದನ್ನು ಅನಾವರಣ ಗೊಳಿಸಿತು. ಮಾದಕ ಪದಾರ್ಥ ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ಅಂತಾ ರಾಷ್ಟ್ರೀಯ ದಿನಾಚರಣೆ ಅಂಗವಾಗಿ ಮೈಸೂರಿನಲ್ಲಿ ಮಂಡಿ ಪೊಲೀಸ್ ಠಾಣೆ ಆಶ್ರಯದಲ್ಲಿ ಬುಧವಾರ ನಡೆದ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಸಮೂಹ ಮಾದಕ ವಸ್ತು ಬಳಕೆಯ ಅನಾಹುತದ ಬಗ್ಗೆ ಸಂದೇಶ ಸಾರಿತು. ವಿದ್ಯಾವರ್ಧಕ…










