ಹಾಸನ: ಖಾಸಗಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ಹೊರವಲಯದ ನುಗ್ಗೇಹಳ್ಳಿ ಕ್ರಾಸ್ ಬಳಿ ಗುರುವಾರ ನಡೆದಿದೆ. ವಿಆರ್ಎಲ್ ಮತ್ತು ದುರ್ಗಾಂಬಾ ಟ್ರಾವೆಲ್ಸ್ ಎಂಬ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯವಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತೀವೇಗವಾಗಿ ವಾಹನವನ್ನು ಚಲಾಯಿಸಿದ್ದೇ ಘಟನೆಗೆ ಕಾರಣ ಎಂದು ತಿಳಿದು ಬಂದಿದ್ದು, ಎರಡು ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಈ…
ಆಟೋಗೆ ಬಸ್ ಡಿಕ್ಕಿ: ಮೂವರಿಗೆ ಗಾಯ
July 13, 2018ಹಾಸನ: ಕೆಎಸ್ ಆರ್ಟಿಸಿ ಬಸ್ವೊಂದು ಪ್ರಯಾಣಿಕರ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ನಗರದ ಸಮೀಪ ವರ್ತುಲ ರಸ್ತೆಯ ರಾಜೀವ್ ಕಾಲೇಜಿನ ಸಮೀಪ ಗುರು ವಾರ ನಡೆದಿದೆ. ಹಾಸನ-ಅರಸೀಕೆರೆ ನಾಮ ಫಲಕವುಳ್ಳ ಬಸ್ಸೊಂದು ವರ್ತುಲ ರಸ್ತೆಯಲ್ಲಿ ಹೋಗುತ್ತಿದ್ದಾಗ ಆಟೋ ನಡುವೆ ಮುಖಮುಖಿಯಾಗಿ ಅಪಘಾತ ಸಂಭವಿಸಿದೆ. ಈ ಸಂದರ್ಭದಲ್ಲಿ ಆಟೋದಲ್ಲಿದ್ದ ಮೂವರಿಗೆ ಹೆಚ್ಚಿನ ಗಾಯಗಳಾಗಿದ್ದು, ತಕ್ಷಣ ತುರ್ತು ವಾಹನದಲ್ಲಿ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ. ಈ ಸಂಬಂಧ ಬಡಾವಣೆಯ ಪೊಲೀಸ್ ಠಾಣೆಯಲ್ಲಿ…
ಕ್ಲೀನರ್ ಚಾಲನೆ ಮಾಡುತ್ತಿದ್ದ ಲಾರಿ, ಬಸ್ಗೆ ಡಿಕ್ಕಿ
July 11, 2018ಮಡಿಕೇರಿ: ಹೆದ್ದಾರಿಯಲ್ಲಿ ಕ್ಷೀನರ್ ಓರ್ವ ಲಾರಿ ಚಾಲಿಸಲು ಹೋಗಿ ಬಸ್ಗೆ ಡಿಕ್ಕಿ ಪಡಿಸಿ ಧರ್ಮದೇಟು ತಿಂದ ಘಟನೆ ನಗರದ ಚೈನ್ಗೇಟ್ ಬಳಿ ನಡೆದಿದೆ. ಮೈಸೂರಿನಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಸರಕು ತುಂಬಿದ್ದ ಲಾರಿಯನ್ನು ಚಾಲಕ, ಕ್ಲೀನರ್ ರಾಜು ಎಂಬಾತನಿಗೆ ಚಾಲನೆ ಮಾಡಲು ನೀಡಿದ್ದ. ಚೈನ್ಗೇಟ್ ತಲುಪುತ್ತಿದ್ದಂತೆಯೇ ಲಾರಿ ಚಾಲಿಸುತ್ತಿದ್ದ ಕ್ಲೀನರ್ ರಾಜು, ಲಾರಿಯನ್ನು ಅಡ್ಡಾದಿಡ್ಡಿ ಚಾಲನೆ ಮಾಡಿ ಹಾಸನದಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದಿದ್ದಾನೆ. ಬಸ್ನ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರು ಲಾರಿ…
ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿ ಸಾವು
July 4, 2018ಮೈಸೂರು: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಯೋರ್ವ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮೈಸೂರು ತಾಲೂಕಿನ ಸೋಮೇಶ್ವರಪುರದ ಶ್ರೀಕಂಠಪ್ಪ ಅವರ ಪುತ್ರ, ಮನೋಜ್ (16) ಮೃತ ವಿದ್ಯಾರ್ಥಿ. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಮನೋಜ್, ಜೂ.22 ರಂದು ಸಹೋದರ ರಾಹುಲ್ ನೊಂದಿಗೆ ಬೈಕ್ನಲ್ಲಿ ಜಮೀನಿಗೆ ತೆರಳುತ್ತಿದ್ದಾಗ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ರಾಹುಲ್ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಮನೋಜ್ ತೀವ್ರವಾಗಿ ಗಾಯ ಗೊಂಡಿದ್ದ. 10 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಮನೋಜ್ಗೆ…
ಪ್ರತ್ಯೇಕ ಅಪಘಾತ: ಬೈಕ್ ಸವಾರ, ಪಾದಚಾರಿ ಸಾವು
July 2, 2018ಮೈಸೂರು: ಎರಡು ಪ್ರತ್ಯೇಕ ಅಪಘಾತ ಗಳಲ್ಲಿ ಬೈಕ್ ಸವಾರ ಹಾಗೂ ಪಾದಚಾರಿಯೊಬ್ಬ ಮೃತಪಟ್ಟಿದ್ದಾರೆ. ಬೈಕ್ ಸವಾರ ಸಾವು: ಮರಿದೇವರು ಮತ್ತು ಮಹೇಶ್ ಇಬ್ಬರು ಪ್ರತ್ಯೇಕ ಬೈಕ್ಗಳಲ್ಲಿ ಆರ್ಟಿ ನಗರದ ಉರು ಕಾತೇಶ್ವರಿ ದೇವಸ್ಥಾನದ ರಿಂಗ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಎಡಕ್ಕೆ ತಿರುವು ಪಡೆದಿದ್ದಾರೆ. ಈ ವೇಳೆ ಬಲಬಾಗದಿಂದ ವೇಗವಾಗಿ ಬಂದ ಲಾರಿ ಮಹೇಶ್ ಓಡಿಸುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಗಾಯಗೊಂಡ ಮಹೇಶ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆಗೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಕೆ.ಆರ್.ಸಂಚಾರ ಠಾಣೆಯಲ್ಲಿ…
ಮೂಗೂರು ಬಳಿ ಅಪಘಾತ ಪ್ರಕರಣ ಪರಿಹಾರಕ್ಕೆ ಆಗ್ರಹಿಸಿ ಶವವಿಟ್ಟು ಪ್ರತಿಭಟನೆ
June 29, 2018ಹನೂರು: ಅಪಘಾತ ದಲ್ಲಿ ಮೃತಪಟ್ಟು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಆನಾಪುರ ಗ್ರಾಮಸ್ಥರು ಮಂಗಲ ಗ್ರಾಮದ ಮುಖ್ಯ ರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿದರು. ನಂಜನೂಡಿಗೆ ದೇವರ ದರ್ಶನಕ್ಕಾಗಿ ಕುಟುಂಬ ಸಮೇತರಾಗಿ ತೆರಳುತ್ತಿದ್ದಾಗ ಮೂಗೂರು ಗ್ರಾಮದ ರಾಷ್ಟ್ರೀಯ ಹೆದ್ಧಾರಿ 212ರಲ್ಲಿ ಖಾಸಗಿ ಬಸ್ ಹಾಗೂ ಆಟೋ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂ ಬದ ಮೂವರು ಸ್ಥಳದಲ್ಲೇ ಮೃತಪಟ್ಟಿ ದ್ದರು. ಮೃತರ ಕುಟುಂಬಕ್ಕೆ ಪರಿಹಾರ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ…
ಬೈಕ್-ಲಾರಿ ಡಿಕ್ಕಿ: ಬೈಕ್ ಸವಾರ ಸಾವು
June 28, 2018ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಗ್ರಾಮದ ಬಳಿ ಬುಧವಾರ ಸಂಜೆ ಲಾರಿ-ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಮೃತಪಟ್ಟ ವ್ಯಕ್ತಿಯನ್ನು ನಂಜನಗೂಡು ತಾಲೂಕು ಹಲ್ಲರೆ ಗ್ರಾಮದ ಶಿವರಾಜು (27) ಎಂದು ಗುರುತಿಸಲಾಗಿದೆ. ಕಾರ್ಯನಿಮಿತ್ತ ವೆಂಕಟಯ್ಯನ ಛತ್ರಕ್ಕೆ ತೆರಳಿದ್ದ ಶಿವರಾಜು ಚಾ.ನಗರದತ್ತ ಬರುತ್ತಿರುವಾಗ ಇವರ ಬೈಕ್ಗೆ ಲಾರಿ ಡಿಕ್ಕಿ ಹೊಡೆಯಿತೆನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಶಿವರಾಜು ಅವರ ತಲೆಗೆ ತೀವ್ರ ಪೆಟ್ಟು ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾ.ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಣಿ ಅಪಘಾತ: 2 ಲಾರಿ, ಆಟೋ ಜಖಂ ಓರ್ವ ಚಾಲಕನಿಗೆ ಗಾಯ
June 23, 2018ಮೈಸೂರು: ಎರಡು ಲಾರಿಗಳು ಹಾಗೂ ಆಟೋ ನಡುವೆ ಸಂಭವಿಸಿದ ಸರಣ ಅಪಘಾತದಲ್ಲಿ ಲಾರಿ ಚಾಲಕನೋರ್ವ ಗಾಯಗೊಂಡಿರುವ ಘಟನೆ ಮೈಸೂರು ಹೈವೇ ವೃತ್ತದ ಸಮೀಪದ ಗಾಯತ್ರಿ ಕಲ್ಯಾಣ ಮಂಟಪದ ಬಳಿ ಶುಕ್ರವಾರ ರಾತ್ರಿ ನಡೆದಿದೆ. ‘ಬನ್ನಿಮಂಟಪದ ಕಡೆಯಿಂದ ಆರ್ಎಂಸಿ ಕಡೆಗೆ ಸಾಗುತ್ತಿದ್ದ ಲಾರಿ(ಕೆಎ02 ಎಎ5515)ಗೆ ಎದುರಿಗೆ ಬರುತ್ತಿದ್ದ ವಿಆರ್ಎಲ್ ಸಂಸ್ಥೆಯ ಲಾರಿ(ಕೆಎ25 6265) ಡಿಕ್ಕಿ ಹೊಡೆದಿದೆ. ನಂತರ ಅದೇ ಲಾರಿ ಆಟೋಗೆ ಗುದ್ದಿದೆ. ಪರಿಣಾಮ ಮೂರು ವಾಹನಗಳ ಮುಂಭಾಗ ಜಖಂಗೊಂಡಿದೆ. ಘಟನೆಯಲ್ಲಿ ವಿಆರ್ಎಲ್ ಲಾರಿ ಚಾಲಕ ತೀವ್ರವಾಗಿ ಗಾಯಗೊಂಡಿದ್ದು,…
ಶಾಲಾ ಬಸ್ ಬೈಕ್ಗೆ ಡಿಕ್ಕಿ: ಸವಾರ ಸಾವು
June 8, 2018ಪಾಂಡವಪುರ: ಶಾಲಾ ವಾಹನ ಹಾಗೂ ಬೈಕ್ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟಿ ರುವ ಘಟನೆ ತಾಲೂಕಿನ ಕಾಮನಾಯಕನಹಳ್ಳಿ ಗೇಟ್ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.ತಾಲೂಕಿನ ಸಣಬ ಗ್ರಾಮದ ನಿವಾಸಿ ಹಾಗೂ ಗ್ರಾಪಂ ಸದಸ್ಯ ಶಿವಣ್ಣ(43) ಅಪ ಘಾತದಲ್ಲಿ ಮೃತಪಟ್ಟವರು. ಘಟನೆ ಹಿನ್ನೆಲೆ: ಚಿನಕುರುಳಿಯ ಎಸ್ಟಿಜಿ ಪಬ್ಲಿಕ್ ಶಾಲೆಗೆ ಸೇರಿದ ಬಸ್ ಗುರುವಾರ ಬೆಳಿಗ್ಗೆ ಕಾಮನಾಯಕನ ಹಳ್ಳಿಯಿಂದ ಶಾಲಾ ಮಕ್ಕಳನ್ನು ಕರೆದೊ ಯ್ಯುತ್ತಿದ್ದ ವೇಳೆ ಗ್ರಾಮದ ತಿರುವಿನಲ್ಲಿ ಶಿವಣ್ಣ ಅವರ ಬೈಕ್ಗೆ ಡಿಕ್ಕಿ…
ಅಪಘಾತ: ದಂಪತಿಗಳ ದುರ್ಮರಣ
June 4, 2018ಮಂಡ್ಯ: ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ನಲ್ಲಿದ್ದ ದಂಪತಿ ಮೃತಪಟ್ಟಿರುವ ಘಟನೆ ಮದ್ದೂರು ಸಮೀಪದ ಗೆಜ್ಜಲಗೆರೆಯ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿಂದು ನಡೆದಿದೆ. ಸಾದೊಳಲು ಗ್ರಾಮದ ಚಂದ್ರಶೇಖರಾಚಾರಿ (63) ಮತ್ತು ಜಯಮ್ಮ (55) ಮೃತ ದಂಪತಿಯಾಗಿದ್ದಾರೆ. ಘಟನೆ ಹಿನ್ನೆಲೆ: ಭಾನುವಾರ ಬೆಳಗ್ಗೆ ಮಂಡ್ಯಕ್ಕೆ ಮಗಳ ಮನೆಗೆ ಹೋಗಿ ವಾಪಸ್ ಸ್ವಗ್ರ್ರಾಮಕ್ಕೆ ಬೈಕ್ನಲ್ಲಿ ಹಿಂದುರುಗುತ್ತಿದ್ದ ವೇಳೆ ಮೊದಲು ಬೇರೆ ಬೈಕ್ ಡಿಕ್ಕಿ ಹೊಡೆದು ಹೆದ್ದಾರಿ ಯಲ್ಲಿ ಇಬ್ಬರು ಬಿದ್ದಿದ್ದಾರೆ. ಈ ಸಂದರ್ಭ ಹಿಂದಿನಿಂದ ಅತಿವೇಗವಾಗಿ ಬಂದ ಕಾರು…