Tag: ATM

ಎಟಿಎಂ ಕಾರ್ಡ್‍ಗೆ ಕನ್ನ:ತಾಂಜೇನಿಯಾ ವಿದ್ಯಾರ್ಥಿ ಬಂಧನ
ಮೈಸೂರು

ಎಟಿಎಂ ಕಾರ್ಡ್‍ಗೆ ಕನ್ನ:ತಾಂಜೇನಿಯಾ ವಿದ್ಯಾರ್ಥಿ ಬಂಧನ

January 29, 2019

ಹೊಳೆನರಸೀಪುರ: ಎಟಿಎಂಗಳಿಗೆ ಕಾರ್ಡ್ ರೀಡರ್ ಮತ್ತು ಕ್ಯಾಮರಾ ಅಳವಡಿಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‍ಗಳ ದತ್ತಾಂಶ ಕದ್ದು, ಹಣ ಲಪಟಾಯಿಸುತ್ತಿದ್ದ ತಾಂಜೇನಿಯಾ ವಿದ್ಯಾರ್ಥಿಯನ್ನು ಬಂಧಿಸಿರುವ ಹೊಳೆನರಸೀಪುರ ಪೊಲೀಸರು 7.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಎಸ್‍ಬಿ ಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಆಂಡ್ರ್ಯೂ ರೆನಾಟಸ್ ಸಂಗ(28) ಬಂಧಿತನಾಗಿದ್ದು, ಈತ ಲಪಟಾಯಿಸಿದ ಹಣದಲ್ಲಿ ವಿಜಯ ನಗರ 3ನೇ ಹಂತದಲ್ಲಿ ಮನೆಯನ್ನು ಲೀಸ್‍ಗೆ ಪಡೆದು, ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಿವರ: ಹೊಳೆನರಸೀಪುರ…

ಎಟಿಎಂನಲ್ಲಿ ಹಣ ತೆಗೆಯಲು ನೆರವಾಗುವವನಂತೆ 1.15 ಲಕ್ಷ ವಂಚಿಸಿದ ಖದೀಮ
ಮೈಸೂರು

ಎಟಿಎಂನಲ್ಲಿ ಹಣ ತೆಗೆಯಲು ನೆರವಾಗುವವನಂತೆ 1.15 ಲಕ್ಷ ವಂಚಿಸಿದ ಖದೀಮ

September 27, 2018

ಮೈಸೂರು: ಎಟಿಎಂನಿಂದ ಹಣ ಪಡೆಯಲು ಸಹಾಯ ಮಾಡುವನಂತೆ ನಂಬಿಸಿದ ಖದೀಮನೊಬ್ಬ, ವ್ಯಕ್ತಿಯೊಬ್ಬರ ಎಟಿಎಂ ಕಾರ್ಡ್ ಬದಲಿಸಿ, 1.15 ಲಕ್ಷ ರೂ. ಡ್ರಾ ಮಾಡಿಕೊಂಡು ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೃಷ್ಣೇಗೌಡ ಹಣ ಕಳೆದುಕೊಂಡವರು. ಇವರು ಸೆ.20ರಂದು ನಗರ ಬಸ್ ನಿಲ್ದಾಣದ ಕರ್ನಾಟಕ ಬ್ಯಾಂಕ್ ಎಟಿಎಂನಲ್ಲಿ ಕೆನರಾ ಬ್ಯಾಂಕ್ ತಮ್ಮ ಎಟಿಎಂ ಕಾರ್ಡ್ ಅನ್ನು ಬಳಸಿ, ಹಣ ಪಡೆಯುವ ಸಂದರ್ಭದಲ್ಲಿ 30 ವರ್ಷದ ಖದೀಮ, ಸಹಾಯ ಮಾಡುವಂತೆ ನಟಿಸಿ, ಕೃಷ್ಣೇಗೌಡರ ಎಟಿಎಂ ಕಾರ್ಡ್‍ನ್ನು ಬದಲಾಯಿಸಿದ್ದಾನೆ. ಇದು ಕೃಷ್ಣೇಗೌಡರ…

ಎಟಿಎಂ ಕಳುವಿಗೆ ವಿಫಲ ಯತ್ನ
ಹಾಸನ

ಎಟಿಎಂ ಕಳುವಿಗೆ ವಿಫಲ ಯತ್ನ

July 19, 2018

ಹಾಸನ: ನಗರದ ಆರ್.ಸಿ. ರಸ್ತೆ, ಅರಳಿಕಟ್ಟೆ ರಸ್ತೆ ಎದುರು ವೃತ್ತದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿರುವ ಹಣ ಕಳುವು ಮಾಡಲು ವಿಫಲ ಯತ್ನ ನಡೆಸಿರುವ ಘಟನೆ ತಡರಾತ್ರಿ ನಡೆದಿದೆ. ಎಟಿಎಂ ಒಳಗೆ ನುಗ್ಗಿರುವ ಕಳ್ಳರು ಮೊದಲು ಸಿಸಿ ಕ್ಯಾಮೆರಾವನ್ನು ಪೇಪರ್‍ನಿಂದ ಮುಚ್ಚಿದ ಬಳಿಕ ಹಣವನ್ನು ದೋಚಲು ನಾನಾ ಪ್ರಯತ್ನ ಮಾಡಿದ್ದಾರೆ. ಕಬ್ಬಿಣದ ರಾಡು ಬಳಿಸಿ ಎಟಿಎಂ ಮಷಿನ್ ಓಪನ್ ಮಾಡಲಾಗದೆ ಬೇಸತ್ತು ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ. ವೃತ್ತ ನಿರೀಕ್ಷಕ ಸತ್ಯನಾರಾಯಣ್, ಬಡಾವಣೆ ಪೊಲೀಸ್ ಸಿಬ್ಬಂದಿ ಮತ್ತು ಶ್ವಾನದಳ…

ಡಿಸಿಸಿ ಬ್ಯಾಂಕ್ ಎಟಿಎಂ ಉದ್ಘಾಟನೆ
ಕೊಡಗು

ಡಿಸಿಸಿ ಬ್ಯಾಂಕ್ ಎಟಿಎಂ ಉದ್ಘಾಟನೆ

July 8, 2018

ವಿರಾಜಪೇಟೆ: ಸಾರ್ವಜನಿಕರಿಗೆ ಸುಲಭವಾಗಿ ಹಣ ದೊರಕಿಸಿಕೊಡುವ ಸಲುವಾಗಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಎಟಿಎಂ ಸೇವೆಯನ್ನು ಲೋಕಾರ್ಪಣೆ ಗೊಳಿಸಿದೆ ಎಂದು ದೇವಣಗೇರಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಹೇಳಿದರು. ವಿರಾಜ ಪೇಟೆ ಪಟ್ಟಣದಲ್ಲಿರುವ ಸಹಕಾರ ಬ್ಯಾಂಕ್‍ನ ಎಟಿಎಂನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ವಿವಿಧ ರಾಷ್ಟ್ರೀಕೃತ ಬ್ಯಾಂಕ್‍ಗಳ ಒಟ್ಟು 10 ಎಟಿಎಂಗಳಿದ್ದು ಅದರೊಂದಿಗೆ ಕೆಡಿಸಿಸಿ ಬ್ಯಾಂಕ್‍ನ ಎಟಿಎಂ ಕೂಡ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ ಎಂದರು….

ಎಟಿಎಂನಲ್ಲಿ ಹರಿದ, ಕಪ್ಪು ಮಸಿಯುಳ್ಳ 2 ಸಾವಿರ ನೋಟು.!
ಮಂಡ್ಯ

ಎಟಿಎಂನಲ್ಲಿ ಹರಿದ, ಕಪ್ಪು ಮಸಿಯುಳ್ಳ 2 ಸಾವಿರ ನೋಟು.!

June 30, 2018

ಮಂಡ್ಯ: ಬ್ಯಾಂಕ್‍ಗಳಲ್ಲಿ ಸಾಮಾನ್ಯವಾಗಿ ಹರಿದ ಮತ್ತು ವಿರೂಪ ಗೊಂಡ ನೋಟುಗಳನ್ನು ತಿರಸ್ಕರಿಸುವುದನ್ನು ನಾವು ನೋಡಿದ್ದೇವೆ. ಆದರೆ ಹರಿದ ಮತ್ತು ಕಪ್ಪು ಮಸಿ ಮೆತ್ತ್ತಿದ 2 ಸಾವಿರ ರೂ. ಮುಖ ಬೆಲೆಯ ನೋಟುಗಳು ಬ್ಯಾಂಕ್ ಎಟಿಎಂ ನಿಂದಲೇ ಗ್ರಾಹಕರೊಬ್ಬರ ಕೈಗೆ ಬಂದಿ ರುವ ಘಟನೆ ಕೆ.ಆರ್.ಪೇಟೆ ಪಟ್ಟಣದ ವಿಜಯಾ ಬ್ಯಾಂಕ್ ಎಟಿಎಂನಲ್ಲಿ ನಡೆದಿದೆ. ಗ್ರಾಹಕರಾದ ಸುನೀಲ್ ಹಾಗೂ ಭರತ್ ಎಂಬುವವರು ಎಟಿಎಂನಲ್ಲಿ ಹಣ ಡ್ರಾ ಮಾಡಿ ದಾಗ ಈ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದ ಹಿನ್ನೆಲೆ: ಗ್ರಾಹಕರಾದ ಸುನೀಲ್…

Translate »