Tag: Bannimantap

ಶಾಸಕ ತನ್ವೀರ್ ಸೇಠ್ ಹತ್ಯೆಗೆ ಯತ್ನ
ಮೈಸೂರು

ಶಾಸಕ ತನ್ವೀರ್ ಸೇಠ್ ಹತ್ಯೆಗೆ ಯತ್ನ

November 18, 2019

ಮೈಸೂರು: ನೂರಾರು ಜನರ ಸಮ್ಮುಖ ದಲ್ಲೇ ನರ ಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರನ್ನು ಮಚ್ಚಿ ನಿಂದ ಕೊಚ್ಚಿ ಹತ್ಯೆ ಮಾಡಲು ಪ್ರಯತ್ನಿಸಿದ ಘಟನೆ ಭಾನು ವಾರ ರಾತ್ರಿ ಮೈಸೂರಿನ ಪಂಜಿನ ಕವಾ ಯತು ಮೈದಾನದಲ್ಲಿ ನಡೆದಿದೆ. ತೀವ್ರ ವಾಗಿ ಗಾಯಗೊಂಡಿರುವ ಶಾಸಕರು ಖಾಸಗಿ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಆಪ್ತರ ಪುತ್ರನ ವಿವಾಹದ ಆರತ ಕ್ಷತೆ ಕಾರ್ಯ ಕ್ರಮದಲ್ಲಿ ಕುಟುಂಬ ಸಮೇತರಾಗಿ ಶಾಸಕ ತನ್ವೀರ್‍ಸೇಠ್ ಭಾಗವಹಿಸಿದ್ದ ವೇಳೆಯಲ್ಲೇ ಈ ಘಟನೆ ನಡೆದಿದ್ದು,…

ಮೈಸೂರಲ್ಲಿ ‘ಸೀತಾರಾಮ ಕಲ್ಯಾಣ’ ಚಿತ್ರದ ಟ್ರೇಲರ್ ಅದ್ಧೂರಿ ಬಿಡುಗಡೆ
ಮೈಸೂರು

ಮೈಸೂರಲ್ಲಿ ‘ಸೀತಾರಾಮ ಕಲ್ಯಾಣ’ ಚಿತ್ರದ ಟ್ರೇಲರ್ ಅದ್ಧೂರಿ ಬಿಡುಗಡೆ

January 20, 2019

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಶನಿವಾರ ಮೈಸೂರಿನಲ್ಲಿ ಅದ್ಧೂರಿ ಯಾಗಿ ನೆರವೇರಿತು. ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಬೆಳಕಿನ ಚಿತ್ತಾರದೊಂದಿಗೆ ತೆರೆ ಬೀಳುವ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿಂದು ನಡೆದ ಸೀತಾರಾಮ ಕಲ್ಯಾಣೋತ್ಸವ’ಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಅವರ ತಾಯಿ ಚೆನ್ನಮ್ಮ, ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ, ಉನ್ನತ ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಸಣ್ಣ…

ಮಕ್ಕಳಿಗಿಲ್ಲ ಬಾಲಭವನದ ಪುಟಾಣಿ ರೈಲು
ಮೈಸೂರು

ಮಕ್ಕಳಿಗಿಲ್ಲ ಬಾಲಭವನದ ಪುಟಾಣಿ ರೈಲು

July 9, 2018

ಕೆಟ್ಟು ನಿಂತಿರುವ ಇಂಜಿನ್… ಕಳೆ ಬೆಳೆದು ಮುಚ್ಚಿ ಹೋಗಿರುವ ರೈಲು ಹಳಿ ಹಾಳು ಕೊಂಪೆಯಂತಾಗಿರುವ ಜವಾಹರ್ ಬಾಲ ಭವನ ಆವರಣ ಮೈಸೂರು: ಒಂದು ಕಾಲದಲ್ಲಿ ಮಕ್ಕಳ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಮೈಸೂರಿನ ಬನ್ನಿಮಂಟಪದ ಜವಾಹರ್ ಬಾಲ ಭವನ ಇಂದು ಪಾಳು ಬಿದ್ದ ಕೊಂಪೆಯಾಗಿದೆ. ಮಕ್ಕಳನ್ನು ಹೊತ್ತೊಯ್ದು ಸಂತಸಗೊಳಿಸುತ್ತಿದ್ದ ಬಾಲ ಭವನದ ಪುಟಾಣಿ ರೈಲು ಕೆಟ್ಟು ನಿಂತಿದೆ. ನ್ಯಾರೋ ಗೇಜ್ ರೈಲು ಹಳಿಗಳು ಕಳೆ ಬೆಳೆದು ಮುಚ್ಚಿಕೊಂಡಿವೆ. ಬಾಲ ಭವನದ ಇಡೀ ಆವರಣ ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವುದನ್ನು…

ಚರಂಡಿ ನೀರು ಹೊಂಡ; ವಿದ್ಯುತ್ ಕಂಬದಿಂದ ಅನಾಹುತ ಭೀತಿ
ಮೈಸೂರು

ಚರಂಡಿ ನೀರು ಹೊಂಡ; ವಿದ್ಯುತ್ ಕಂಬದಿಂದ ಅನಾಹುತ ಭೀತಿ

June 30, 2018

ಆತಂಕದಲ್ಲಿ ದಿನ ದೂಡುತ್ತಿರುವ ಯಲ್ಲಮ್ಮ ಕಾಲೋನಿ ನಿವಾಸಿಗಳು ಮೈಸೂರು: ಸ್ವಚ್ಛ ನಗರ ಹೆಗ್ಗಳಿಕೆಗೆ ಪಾತ್ರವಾದ ಮೈಸೂರಿನ ಹಲವು ಬಡಾವಣೆಗಳಲ್ಲಿ ಸ್ವಚ್ಛ ನಗರಿ ಎಂಬ ಹೆಸರಿಗೆ ಅಪವಾದ ಎಂಬಂತೆ ಚರಂಡಿ, ರಸ್ತೆಗಳು ನಾರುತ್ತಿವೆ. ಇದ್ಯಾವುದೂ ಗೊತ್ತಿಲ್ಲದಂತೆ ಅಧಿಕಾರಿಗಳು, ಪಾಲಿಕೆ ಸದಸ್ಯರು ಮೌನ ವಹಿಸಿದ್ದು, ಇದರಿಂದ ಆ ಪ್ರದೇಶದ ನಾಗರಿಕರು ರೋಗ ರುಜಿನಗಳ ಆತಂಕದಿಂದ ದಿನ ದೂಡುವಂತಾಗಿದೆ. ಮೈಸೂರಿನ ಬನ್ನಿಮಂಟಪದ ಶ್ರೀನಿವಾಸ ಟಾಕೀಸ್ ಹಿಂಭಾಗದಲ್ಲಿರುವ ಬರೀ ಪರಿಶಿಷ್ಟರೇ ವಾಸಿಸುತ್ತಿರುವ ಯಲ್ಲಮ್ಮ ಕಾಲೋನಿಗೆ ಒಮ್ಮೆ ಭೇಟಿ ನೀಡಿದರೆ ಅಲ್ಲಿನ ನಿವಾಸಿಗಳು ಎಂಥಾ…

ಬಾರ್ ಸಿಬ್ಬಂದಿ ಮೇಲೆ ಹಲ್ಲೆ
ಮೈಸೂರು

ಬಾರ್ ಸಿಬ್ಬಂದಿ ಮೇಲೆ ಹಲ್ಲೆ

June 14, 2018

ಮೈಸೂರು: ಹಣಕಾಸಿನ ವಿಚಾರವಾಗಿ ಬಾರ್ ಕ್ಯಾಷಿಯರ್ ಮತ್ತು ಸಿಬ್ಬಂದಿ ಮೇಲೆ ಮೂವರು ಅಪರಿಚಿತ ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿರುವ ಘಟನೆ ಬನ್ನಿಮಂಟಪದ ಬಾಲಾಜಿ ಬಾರ್ ಅಂಡ್ ರೆಸ್ಟೋರೆಂಟ್‍ನಲ್ಲಿ ನಡೆದಿದೆ. ಬಾರ್ ಕ್ಯಾಷಿಯರ್ ವೆಂಕಟೇಶ್ ಹಾಗೂ ರವಿ ಹಲ್ಲೆಗೊಳಗಾದವರು. ಜೂ.10 ರಂದು ರಾತ್ರಿ 10.30ರ ಸಮಯದಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು 1,030 ರೂ. ಬೆಲೆಬಾಳುವ ಡ್ರಿಂಕ್ಸ್ ಖರೀದಿಸಿದ್ದಾರೆ. 800 ರೂ.ಗಳನ್ನು ಕೊಟ್ಟು ಪರಾರಿಯಾಗಲು ಯತ್ನಿಸಿದ್ದಾರೆ. ಇದನ್ನು ಅರಿತ ಬಾರ್ ಸಿಬ್ಬಂದಿ ವೆಂಕಟೇಶ್ ಮತ್ತು ಇತರರು ಡ್ರಿಂಕ್ಸ್…

Translate »