ಮೈಸೂರು, ಜೂ. 20(ಆರ್ಕೆ)- ಹಾಡಹಗಲೇ ಖದೀಮರು, ತಾಯಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಕೊರಳಿನಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾಗಿ ರುವ ಘಟನೆ ಮೈಸೂರಿನ ಜೆ.ಪಿ. ನಗರದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಮೈಸೂರಿನ ಜೆ.ಪಿ. ನಗರ ನಿವಾಸಿ ಸಂಜೀವ ಮೂರ್ತಿ ಅವರ ಪತ್ನಿ ಶ್ರೀಮತಿ ಮಮತಾ(39) ಎಂಬುವರೇ ಚಿನ್ನದ ಸರ ಕಳೆದುಕೊಂಡವರು. ಪಕ್ಕದಲ್ಲಿರುವ ಸಿದ್ದಲಿಂಗೇಶ್ವರ ಬಡಾವಣೆಯ ತಮ್ಮ ತಾಯಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಯಮಹಾ ಕ್ರಕ್ಸ್ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ಮಾಸ್ಕ್ಧಾರಿಗಳು, ಮಧ್ಯಾಹ್ನ 12.45…
ವಾಯುವಿಹಾರಿ ಮಹಿಳೆ ಸರ ಕಿತ್ತುಕೊಂಡು ಪರಾರಿಯಾದ ಖದೀಮ
July 22, 2018ಮೈಸೂರು: ವಾಯುವಿಹಾರಕ್ಕೆ ತೆರಳಿದ್ದ ಮಹಿಳೆಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಬೋಗಾದಿಯ ಬ್ಯಾಂಕರ್ಸ್ ಕಾಲೋನಿಯಲ್ಲಿ ಶುಕ್ರವಾರ ನಡೆದಿದೆ. ಇಲ್ಲಿನ ನಿವಾಸಿ ವಸಂತಕುಮಾರಿ (74) ಸರ ಕಳೆದುಕೊಂಡವರು. ಇವರು ಶುಕ್ರವಾರ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದು, ವಾಪಸ್ ಮನೆಗೆ ಹೋಗಲು ಅಂಗಡಿಯೊಂದರಲ್ಲಿ ಹಾಲನ್ನು ತೆಗೆದು ಕೊಂಡು ಬ್ಯಾಂಕರ್ಸ್ ಕಾಲೋನಿಯ 13ನೇ ಕ್ರಾಸ್ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬೈಕ್ನಲ್ಲಿ ಬಂದ ಖದೀಮ, ವಸಂತ ಕುಮಾರಿ ಅವರ ಕತ್ತಿನಲ್ಲಿದ್ದ 68 ಗ್ರಾಂ ತೂಕದ ಸರವನ್ನು ಕಿತ್ತುಕೊಂಡು, ಅದೇ ರಸ್ತೆಯಲ್ಲಿ ಮುಂದೆ…
ಮಹಿಳೆಯ ಚಿನ್ನದ ಸರ ಕಳ್ಳತನ
July 12, 2018ಕೆ.ಆರ್.ಪೇಟೆ: ಸಿಗರೇಟ್ ಕೊಳ್ಳುವ ನೆಪದಲ್ಲಿ ಅಂಗಡಿಗೆ ಬಂದ ದುಷ್ಕರ್ಮಿಗಳು ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಪಟ್ಟಣದ ಮುತ್ತುರಾಯಸ್ವಾಮಿ ಬಡಾವಣೆ ಯಲ್ಲಿ ಬುಧವಾರ ರಾತ್ರಿ ಸುಮಾರು 8.45ರ ಸಮಯದಲ್ಲಿ ನಡೆದಿದೆ. ಬಡಾವಣೆಯ ಹೇಮಗಿರಿ ರಸ್ತೆ ಯಲ್ಲಿ ಅಂಗಡಿ ನಡೆಸುತ್ತಿದ್ದ ಶಿಕ್ಷಕ ಎಂ.ಎಸ್. ಮಹದೇವಪ್ಪ ಅವರ ಪತ್ನಿ ಜಗದಾಂಬ ಎಂಬುವರು ಚಿನ್ನದ ಸರ ಕಳೆದುಕೊಂಡ ವರಾಗಿದ್ದಾರೆ. ಘಟನೆ ವಿವರ: ದುಷ್ಕರ್ಮಿಗಳಿಬ್ಬರ ಪೈಕಿ ಒಬ್ಬ ಸಿಗರೇಟ್ ಕೊಂಡು ಅಲ್ಲಿಯೇ ಸೇದುತ್ತಾ ಬೈಕ್ ಪಕ್ಕದಲ್ಲಿ ಮಾತಾಡುತ್ತಾ ನಿಂತಿದ್ದರು….
ಮೈಸೂರಲ್ಲಿ ಮತ್ತೆ ಸರ ಕಳವು
July 5, 2018ಮೈಸೂರು: ಬೈಕ್ನಲ್ಲಿ ಬಂದ ಖದೀಮರು ಮಹಿಳೆಯ ಸರ ಕಸಿದು ಪರಾರಿ ಯಾಗಿರುವ ಘಟನೆ ಬೃಂದಾವನ ಬಡಾವಣೆಯ ಗಣಪತಿ ದೇವಸ್ಥಾನದ ಬಳಿ ಬುಧವಾರ ರಾತ್ರಿ ನಡೆದಿದೆ. ಕುಂಬಾರಕೊಪ್ಪಲು ನಿವಾಸಿ ಗೌರಮ್ಮ (60) ಸರ ಕಳೆದುಕೊಂಡ ವರು. ಗೌರಮ್ಮ ಅವರು ಸಹೋದರಿಯೊಂದಿಗೆ ಬೃಂದಾವನ ಬಡಾವಣೆಯಲ್ಲಿನ ಕೆಂಪೇಗೌಡ ಛತ್ರದಲ್ಲಿ ನಡೆಯುತ್ತಿದ್ದ ಮದುವೆಗೆ ಹೋಗಿದ್ದರು. ರಾತ್ರಿ 9 ಗಂಟೆ ವೇಳೆಗೆ ಮನೆಗೆ ಸಹೋದರಿಯೊಂದಿಗೆ ಬೃಂದಾವನ ಬಡಾವಣೆಯ ಗಣಪತಿ ದೇವಸ್ಥಾನದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಕೆಟಿಎಂ ಬೈಕ್ ನಲ್ಲಿ ಬಂದ…
ಸೋಮವಾರಪೇಟೆ ಸುತ್ತಮುತ್ತ ಸರಣಿ ಕಳ್ಳತನ
June 26, 2018ಸೋಮವಾರಪೇಟೆ: ಭಾನುವಾರ ರಾತ್ರಿ ಪಟ್ಟಣ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಸರಣಿ ಕಳ್ಳತನವಾಗಿದ್ದು, ಜನರಲ್ಲಿ ಮತ್ತೊಮ್ಮೆ ಆತಂಕ ಸೃಷ್ಠಿಯಾಗಿದೆ. ಭಾನುವಾರ ಬೆಳಗ್ಗಿನ ಜಾವ 4 ಗಂಟೆಯ ಸಮಯದಲ್ಲಿ ಪಟ್ಟಣಕ್ಕೆ ಸಮೀಪದ ಬಿಟಿಸಿಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶು ಪಾಲರ ಕೊಠಡಿಯ ಬೀಗವನ್ನು ಒಡೆದು ಒಳನುಗ್ಗಿದ ಕಳ್ಳರು ಲಾಕರ್ ಒಡೆಯುವ ಪ್ರಯತ್ನ ಮಾಡಿದ್ದಾರೆ. ಶಬ್ದದಿಂದ ಅನು ಮಾನಗೊಂಡ ವಾಚ್ಮನ್ ಬೊಬ್ಬೆಹೊಡೆದ ಸಂದರ್ಭ, ವಿಚಲಿತ ನಾದ ಕಳ್ಳ, ಡ್ರಾಯರ್ನಲ್ಲಿದ್ದ 250 ರೂ.ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಕಳ್ಳನ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ….