ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು, ಯಶಸ್ವಿ ಜಂಬೂ ಸವಾರಿ ರೂವಾರಿಗಳಾಗಿ, ನಂತರ ಅರ ಮನೆ ಆವರಣದಲ್ಲಿ ರಿಲ್ಯಾಕ್ಸ್ ಮೂಡ್ನಲ್ಲಿದ್ದ ಅರ್ಜುನ ನೇತೃತ್ವದ ಗಜಪಡೆ ಗುರುವಾರ ಮಧ್ಯಾಹ್ನ ಸ್ವಸ್ಥಾನಗಳಿಗೆ ಪ್ರಯಾಣ ಬೆಳೆಸಿತು. ದಸರಾದಲ್ಲಿ ಪಾಲ್ಗೊಳ್ಳಲು ವಿವಿಧ ಶಿಬಿರಗಳಿಂದ ಎರಡು ತಂಡಗಳಲ್ಲಿ ಬಂದಿದ್ದ 13 ಆನೆಗಳಲ್ಲಿ ಮೂರು ಆನೆಗಳಾದ ಅಭಿಮನ್ಯು, ಗೋಪಾಲಸ್ವಾಮಿ ಹಾಗೂ ಜಯಪ್ರಕಾಶನನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಕಾಡಂಚಿನ ಗ್ರಾಮವಾದ ಚೌಡಳ್ಳಿ ಬಳಿ ಇಬ್ಬರನ್ನು ಬಲಿ ಪಡೆದ ಹುಲಿ ಸೆರೆ ಕಾರ್ಯಾ ಚರಣೆಗೆ ಬುಧವಾರವೇ…
ನಾವು ಹೋಗಿ ಬರ್ತೇವೆ, ಬೈ ಬೈ…
October 22, 2018ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಯಶಸ್ವಿಯಾಗಿ ಪಾಲ್ಗೊಂಡು ಕಳೆದ ಎರಡು ದಿನಗಳಿಂದ ರಿಲ್ಯಾಕ್ಸ್ ಮೂಡ್ನಲ್ಲಿದ್ದ ಅರ್ಜುನ ನೇತೃತ್ವದ ಗಜಪಡೆಯ 12 ಆನೆಗಳಲ್ಲಿ 9 ಆನೆಗಳು ಭಾನುವಾರ ಮಧ್ಯಾಹ್ನ ಸ್ವಸ್ಥಾನಗಳಿಗೆ ಜಿಲ್ಲಾಡಳಿತ ನೀಡಿದ ಬೀಳ್ಕೊಡುಗೆ ಸ್ವೀಕರಿಸಿ ಪ್ರಯಾಣ ಬೆಳೆಸಿದವು. ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕೆ ಈ ಬಾರಿ ವಿವಿಧ ಆನೆ ಕ್ಯಾಂಪ್ಗಳಿಂದ ಒಟ್ಟು 12 ಆನೆಗಳನ್ನು ಕರೆತರಲಾಗಿತ್ತು. ಕಳೆದ 45 ದಿನಗಳಿಂದ ಅರಮನೆಯ ಅಂಗಳದಲ್ಲಿ ಬೀಡುಬಿಟ್ಟಿದ್ದ ದಸರಾ ಆನೆಗಳು ಇಂದು ಮಾವುತರು, ಕಾವಾಡಿಗಳ ಕುಟುಂಬದ ಸದಸ್ಯರೊಂದಿಗೆ ತಾವು ವಾಸಿಸುವ ಆನೆ…
ಅರಮನೆ ಆನೆಗಳ ಕಣ್ಣೀರು ಒರೆಸಿದ ಅರ್ಜುನ
October 22, 2018ಮೈಸೂರು: ಸ್ವಸ್ಥಾನಗಳಿಗೆ ದಸರಾ ಆನೆಗಳು ತೆರಳುವ ವೇಳೆ ಅರಮನೆ ಆವರಣದಲ್ಲಿ ಭಾವನಾತ್ಮಕ ಸನ್ನಿವೇಶಗಳು ಕಂಡುಬಂದವು. ಅರಮನೆ ಆವರಣದಿಂದ ಆನೆಗಳು ಲಾರಿ ಏರಿ ಕಾಡಿನತ್ತ ಪಯಣ ಬೆಳೆಸುವುದಕ್ಕೆ ಮುಂದಾಗುತ್ತಿದ್ದಂತೆ ಅಲ್ಲಿದ್ದ ಕೆಲವರಲ್ಲಿ ಕಣ್ಣಾಲಿಗಳು ತೇವಗೊಂಡವು. ಅಂಬಾರಿ ಆನೆ ಅರ್ಜುನ ಲಾರಿ ಏರುವ ಮುನ್ನ ಅರಮನೆಯ ಆನೆಗಳ ಕಣ್ಣೀರು ಒರೆಸಿ ತಾನೂ ಭಾವುಕನಾದ. ಪ್ರತೀ ವರ್ಷದಂತೆ ಈ ಬಾರಿಯೂ ದಸರಾ ಆನೆ ಅರ್ಜುನನ ಮೇಲೆ ಅರಮನೆಯ ಆನೆಗಳು ವ್ಯಾಮೋಹ ಬೆಳೆಸಿಕೊಂಡಿದ್ದವು. ಪ್ರತೀ ದಿನ ತಮ್ಮ ಕಣ್ಣ ಮುಂದೆಯೇ ಇರುತ್ತಿದ್ದ ಅರ್ಜುನನನ್ನು…
ಇಂದು ಸ್ವಸ್ಥಾನಗಳಿಗೆ ಮರಳಲಿರುವ ಜಂಬೂ ಸವಾರಿ ಯಶಸ್ಸಿನ ರೂವಾರಿಗಳು
October 21, 2018ಮೈಸೂರು: ಅಪಾರ ಸಂಖ್ಯೆಯ ಜನಸಾಗರದ ನಡುವೆ ಜಂಬೂಸವಾರಿ ಮೆರವಣಿಗೆಯಲ್ಲಿ ಯಶಸ್ವಿ ಯಾಗಿ ಹೆಜ್ಜೆ ಹಾಕಿದ್ದ ಅರ್ಜುನ ನೇತೃ ತ್ವದ ಗಜಪಡೆ ನಾಳೆ (ಭಾನುವಾರ) ಸ್ವಸ್ಥಾನಗಳಿಗೆ ಮರಳಲಿದೆ. ಜಂಬೂ ಸವಾರಿ ಮಾರನೇ ದಿನವಾದ ಶನಿವಾರ ಇಡೀ ದಿನ ರಿಲ್ಯಾಕ್ಸ್ ಮೂಡ್ನಲ್ಲಿತ್ತು. ದಸರಾ ಮಹೋತ್ಸವದಲ್ಲಿ ಪಾಲ್ಗೊ ಳ್ಳಲು ಸೆ.2ರಂದು ಹುಣಸೂರು ತಾಲೂ ಕಿನ ವೀರನಹೊಸಳ್ಳಿಯಿಂದ ಗಜಪಡೆಯ ನಾಯಕ ಅರ್ಜುನ ನೇತೃತ್ವದಲ್ಲಿ ಆರು ಆನೆ ಮೈಸೂರಿನ ಅಶೋಕಪುರಂ ಅರಣ್ಯ ಭವನಕ್ಕೆ ಬಂದು ಬೀಡು ಬಿಟ್ಟು, ಸೆ.5 ರಂದು ಅರಮನೆಯ ಆವರಣ ಪ್ರವೇಶಿ…