ಕೆಲಸದಲ್ಲಿ ವಿಳಂಬ-ನಿರ್ಲಕ್ಷ್ಯ ತೋರುವ ಇಂಜಿನಿಯರ್ ವಿರುದ್ಧ ಶಿಸ್ತುಕ್ರಮ: ಸಚಿವ ರೇವಣ್ಣ ಎಚ್ಚರಿಕೆ ಹಾಸನ, ಜೂ.18- ಜಿಲ್ಲೆಯಲ್ಲಿ ದೀರ್ಘ ಕಾಲದಿಂದ ಬಾಕಿ ಉಳಿದಿರುವ ಶಾಸಕರ ನಿಧಿ ಯೋಜನೆಗಳ ಕಾಮಗಾರಿಗಳನ್ನು ತಿಂಗಳೊಳಗೆ ಪೂರ್ಣಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪ ಯೋಗಿ ಸಚಿವ ಹೆಚ್.ಡಿ.ರೇವಣ್ಣ ಅಧಿಕಾರಿ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಶಾಸಕರ ನಿಧಿ ಯೋಜನೆ ಗಳ ಅನುಷ್ಠಾನ ಕುರಿತು ಸಭೆ ನಡೆಸಿದ ಅವರು, ಕೆಲಸದಲ್ಲಿ ವಿಳಂಬ ಮತ್ತು ನಿರ್ಲಕ್ಷ್ಯ ತೋರುವ ಇಂಜಿನಿಯರ್ಗಳ ವಿರುದ್ಧ…
ಹಾಸನಕ್ಕಿಂದು ಸಿಎಂ ಹೆಚ್ಡಿಕೆ
June 19, 2019* ಸೆಸ್ಕ್ ಹಾಸನ ವಲಯ, ಮಾಪನ ಪರೀಕ್ಷಾ ವಿಭಾಗ ಉದ್ಘಾಟನೆ * ರುದ್ರಪಟ್ಟಣದಲ್ಲಿ 66/11 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ಚಾಲನೆ ಹಾಸನ, ಜೂ.18- ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜೂ.19ರ ಬುಧವಾರ ಹಾಸನಕ್ಕೆ ಆಗಮಿಸುತ್ತಿದ್ದು, ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಮೊದಲಿಗೆ ಚಾಮುಂಡೇಶ್ವರಿ ವಿದ್ಯುಚ್ಚಕ್ತಿ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಹಾಸನ ವಲಯವನ್ನು ನಗರದಲ್ಲಿ ಉದ್ಘಾಟಿಸಲಿರುವ ಮುಖ್ಯಮಂತ್ರಿಗಳು, ಅದೇ ವೇಳೆ ಸೆಸ್ಕ್ನ ಮಾಪಕ ಪರೀಕ್ಷಾ ವಿಭಾಗವನ್ನೂ ಲೋಕಾರ್ಪಣೆಗೊಳಿಸ ಲಿದ್ದಾರೆ. ಎರಡೂ ಕಾರ್ಯಕ್ರಮಗಳು ಬುಧವಾರ ಬೆಳಿÀಗ್ಗೆ 9.15ಕ್ಕೆ ನಗರದಲ್ಲಿರುವ ಕೆಪಿಟಿಸಿಎಲ್ನ ಪ್ರಸರಣಾ…
ಜನಪದ ಸಂಸ್ಕøತಿ ಉಳಿಸುವ ಹೊಣೆ ಎಲ್ಲರದು
June 19, 2019ಆದಿಚುಂಚನಗಿರಿ ಮಠದಲ್ಲಿ 71ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಗಾಯಕಿ ಅನನ್ಯಾ ಭಟ್ ಹಾಸನ, ಜೂ.18- ಜನಪದವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಖ್ಯಾತ ಗಾಯಕಿ ಹಾಗೂ ನಟಿ ಅನನ್ಯಾ ಭಟ್ ಅಭಿಪ್ರಾಯಪಟ್ಟರು. ನಗರದ ಎಂ.ಜಿ ರಸ್ತೆಯ ಶ್ರೀ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಸೋಮವಾರ ರಾತ್ರಿ ನಡೆದ ‘ಗುರು ತೋರಿದ ದಾರಿ ತಿಂಗಳ ಮಾಮನ ತೇರು’ 71ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಜನಪದ ಗೀತೆ ಮತ್ತು ಜನಪದರ ಜೀವನಶೈಲಿ ಎಂಬ ವಿಷಯದ ಬಗೆಗೆ ವಿಶೇಷ ಉಪ…
ಅರಸೀಕೆರೆ ಆಸ್ಪತ್ರೆ ಅವ್ಯವಸ್ಥೆ: ಡಿಸಿ ವಾಸ್ತವ್ಯಕ್ಕೆ ಒತ್ತಾಯ
June 19, 2019ಅರಸೀಕೆರೆ: ನಗರದಲ್ಲಿನ ಸರ್ಕಾರಿ ಜೆ.ಸಿ. ಆಸ್ಪತ್ರೆ ಮೂಲಸೌಲಭ್ಯಗಳಿಲ್ಲದೇ ಅಕ್ಷರಶಃ ಮೂಲೆ ಗುಂಪಾಗಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸಲು ಜಿಲ್ಲಾಧಿಕಾರಿ ಗಮನ ಹರಿಸಬೇಕಿದೆ. ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳುತ್ತಿರುವ ಜಿಲ್ಲಾಧಿಕಾರಿ ಗಳು, ಈ ಆಸ್ಪತ್ರೆಯಲ್ಲೂ 1 ದಿನ ವಾಸ್ತವ್ಯ ಹೂಡಿದರೆ ನೈಜ ಸಮಸ್ಯೆ ಅವರಿಗೆ ಅರಿವಾಗುತ್ತದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಆಸ್ಪತ್ರೆಯಲ್ಲಿ ಕುಡಿಯುವ ನೀರಿಲ್ಲ, ಸ್ವಚ್ಛತೆ ಇಲ್ಲ, ಶೌಚಾಲಯ ಸರಿ ಇಲ್ಲ, ಜನರೇಟರ್ ದುರಸ್ತಿಯಾಗಿಲ್ಲ. ವಿದ್ಯುತ್ ಇಲ್ಲದಾಗ ವಾರ್ಡ್ಗಳು ಕತ್ತಲೆ ಕೂಪವಾಗು ತ್ತವೆ. ಶಾಸಕ, ಆಸ್ಪತ್ರೆಯ ರಕ್ಷಾ ಸಮಿತಿ ಅಧ್ಯಕ್ಷರೂ ಆಗಿರುವ…
ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಮುಷ್ಕರ
June 18, 2019ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್: ರೋಗಿಗಳ ಪರದಾಟ ಹಾಸನ: ಪಶ್ಚಿಮ ಬಂಗಾಳದ ಎನ್ಆರ್ಎಸ್ ಆಸ್ಪತ್ರೆಯಲ್ಲಿ ವೈದ್ಯನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಅಖಿಲ ಭಾರತ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿರುವ ವೈದ್ಯಕೀಯ ಸೇವೆ ಬಂದ್ಗೆ ಹಾಸನ ಜಿಲ್ಲಾ ಐಎಂಎ ಘಟಕ ಬೆಂಬಲ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿ ಸೋಮವಾರ ಖಾಸಗಿ ಆಸ್ಪತ್ರೆಗಳ ಒಪಿಡಿ ಸೇವೆ ಸ್ಥಗಿತಗೊಂಡು, ಚಿಕಿತ್ಸೆಗಾಗಿ ರೋಗಿಗಳು ಅಲೆದಾಟ ನಡೆಸಿದರು. ನಗರದ ಎಲ್ಲಾ ಖಾಸಗಿ ಆಸ್ಪತ್ರೆಗಳು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ತುರ್ತು…
ಠೇವಣಿ ಹಣ ಮರು ಪಾವತಿಗೆ ಆಗ್ರಹಿಸಿ ಪ್ರತಿಭಟನೆ
June 18, 2019ಬೇಲೂರು: ಕಳೆದ 5 ತಿಂಗಳ ಹಿಂದೆ ಪುರಸಭೆಯಿಂದ ಹರಾಜು ಮಾಡಿದ್ದ ಮೀನು ಮಾರಾಟ ಮಳಿಗೆಗಳ ಬಿಡ್ ದಾರರಿಗೆ ಠೇವಣಿ ಹಣ ವಾಪಸ್ ನೀಡದೆ ವಂಚಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಪಟ್ಟಣದ ಪುರಸಭೆ ಮುಂಭಾಗ ಸೋಮವಾರ ಮೀನು ಮಳಿಗೆಗಳ ಬಿಡ್ ದಾರರು ಪ್ರತಿಭಟನೆ ನಡೆಸಿದರು. ಪುರಸಭೆ ಮಾಜಿ ಸದಸ್ಯ ಎಸ್.ರವಿ ಮಾತನಾಡಿ, ಪುರಸಭೆಯಿಂದ ಪಟ್ಟಣದ ಮಸೀದಿ ಬೀದಿಯ ಬಳಿ ಮೀನು ಮಾರಾಟ ಕ್ಕೆಂದು ನಿರ್ಮಿಸಿದ 6 ಮಳಿಗೆಗಳನ್ನು ನಿಯಮಾನುಸಾರ ವಿವಿಧ ರೀತಿಯಲ್ಲಿ ಬಾಡಿಗೆಗೆ ಹರಾಜು ಕೂಗಿ ಪಡೆದು ಕೊಂಡೆವು….
ಅರಸೀಕೆರೆ ತಾಪಂ ಕೆಡಿಪಿ ತ್ರೈಮಾಸಿಕ ಸಭೆ: ಬರಗಾಲ ನಿರ್ವಹಣೆಗೆ ಸೂಕ್ತ ಕ್ರಮವಹಿಸಿ: ಶಾಸಕ ತಾಕೀತು
June 18, 2019* 112 ಗ್ರಾಮಗಳಲ್ಲಿ ನೀರಿನ ಸಮಸ್ಯೆ * 33 ಗ್ರಾಮಗಳಿಗೆ 92 ಟ್ಯಾಂಕರ್ಗಳಲ್ಲಿ ನೀರು ಪೂರೈಕೆ * ಜಾನುವಾರುಗಳ ಮೇವು ವಿತರಣೆ ಹೆಚ್ಚಿಸಲು ಒತ್ತಾಯ ಅರಸೀಕೆರೆ: ಕ್ಷೇತ್ರದಲ್ಲಿ ಬರಗಾಲ ತಾಂಡವಾಡುತ್ತಿದ್ದು, ಕುಡಿಯುವ ನೀರು ಮತ್ತು ಅಂತರ್ಜಲ ಸಮಸ್ಯೆಯನ್ನು ಸಮರ್ಥವಾಗಿ ಎದುರಿ ಸುವ ಜೊತೆಗೆ ಬರಗಾಲ ನಿರ್ವಹಣೆಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವ ಲಿಂಗೇಗೌಡ ತಾಕೀತು ಮಾಡಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ…
ನಗರಸಭೆ ಕಾರ್ಯಾಚರಣೆ: ರಸ್ತೆ ಬದಿ ಗುಜರಿ ವಸ್ತುಗಳ ತೆರವು
June 18, 2019ಹಾಸನ: ರಸ್ತೆ ಬದಿ ಉದ್ದಲಕ್ಕೂ ಇಡಲಾಗಿದ್ದ ಗುಜರಿ ವಸ್ತುಗಳನ್ನು ನಗರಸಭೆ ಸಿಬ್ಬಂದಿ ಸೋಮವಾರ ತೆರವುಗೊಳಿಸಿದರು. ನಗರದ ಹೊಸಲೈನ್ ರಸ್ತೆ, ಚನ್ನವೀರಪ್ಪ ಕಲ್ಯಾಣ ಮಂಟಪದ ಎದುರು ಹಲವು ವರ್ಷಗಳಿಂದ ಗುಜರಿ ವ್ಯಾಪಾರ ನಡೆಸುತ್ತಿದ್ದು, ಅಂಗಡಿಯವರು ಕಬ್ಬಿಣದ ವಸ್ತುಗಳ ನ್ನೆಲ್ಲಾ ರಸ್ತೆ ಬದಿ ಇಡಲಾಗುತ್ತಿದ್ದರಿಂದ ಪ್ರತಿನಿತ್ಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಹಲವು ಬಾರಿ ನಗರಸಭೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ನಗರಸಭೆ ಆಯುಕ್ತರು ಗುಜರಿ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿದ್ದರು. ಆದರೂ, ಇದಕ್ಕೆ ಮಾಲೀಕರು ಸ್ಪಂದಿಸದ…
ವೃದ್ಧಾಶ್ರಮಕ್ಕೆ ಬಂದ ಶಾಲಾ ಮಕ್ಕಳ ಕಂಡು ಹಿರಿಯರ ಕಣ್ಣಲ್ಲಿ ಮಿಂಚು!
June 17, 2019ಹಾಸನ, ಜೂ.16- ಸದಾ ಶಾಲೆ, ಮನೆ, ಮನೆ ಪಾಠ ಇಲ್ಲವೇ ಮೈದಾನದಲ್ಲೇ ಇರುತ್ತಿದ್ದ ಶಾಲೆಯ ಮಕ್ಕಳು ಭಾನುವಾರ ಹೊಸದೊಂದು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿದ್ದವರಿಗೆ ಅಚ್ಚರಿ ಮೂಡಿಸಿದರು. ಮನೆಯಲ್ಲಿ ಒಬ್ಬರೋ, ಇಬ್ಬರೋ ಅಜ್ಜ- ಅಜ್ಜಿಯಂದಿರನ್ನು ಕಂಡಿದ್ದ ಮಕ್ಕಳಿಗೂ ಅಲ್ಲಿದ್ದ ಹಿರಿಯ ಜೀವಿಗಳ ಗುಂಪು ಕಂಡು ಅಚ್ಚರಿಯಾಯಿತು! ಹಾಸನದ ವಿದ್ಯಾನಗರದಲ್ಲಿರುವ ಕ್ರೈಸ್ಟ್ ಶಾಲೆಯ ವಿದ್ಯಾರ್ಥಿಗಳನ್ನು ಗವೇನಹಳ್ಳಿ ಯಲ್ಲಿರುವ ಕಾಮಧೇನು ವೃದ್ಧಾಶ್ರಮಕ್ಕೆ ಭಾನುವಾರ ಕರೆದೊಯ್ಯಲಾಗಿತ್ತು. ಮಕ್ಕಳಲ್ಲಿ ಸಾಮಾಜಿಕ ಕಳಕಳಿ, ಸೇವಾ ಮನೋ ಭಾವ ಬೆಳೆಸಬೇಕೆಂಬುದೇ ಈ ಭೇಟಿ ಆಯೋಜನೆಯ ಉದ್ದೇಶವಾಗಿತ್ತು….
ವಿಶ್ವ ರಕ್ತದಾನಿಗಳ ದಿನ 111 ಜನರಿಂದ ರಕ್ತದಾನ
June 17, 2019ಸಕಾಲಕ್ಕೆ ರಕ್ತ ದೊರೆಯದೇ ಹಲವರ ಸಾವು: ಡಿಸಿ ಅಕ್ರಂ ಪಾಷ ವಿಷಾದ ಹಾಸನ: ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಶಾಖೆ, ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು ಜತೆಗೂಡಿ ನಗರದಲ್ಲಿನ ಕಸಾಪ ಜಿಲ್ಲಾ ಭವನದಲ್ಲಿ ಶನಿವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ `ವಿಶ್ವ ರಕ್ತದಾನಿಗಳ ದಿನ’ ಆಚರಣೆ, ಬೃಹತ್ ರಕ್ತದಾನ ಶಿಬಿರದಲ್ಲಿ 111 ಮಂದಿ ರಕ್ತದಾನ ಮಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಅಕ್ರಂ ಪಾಷ, ಅಪಘಾತವಾದಾಗ ಮೊದಲು ಬೇಕಾಗುವುದೇ…